Posts

Showing posts from October, 2021

ದಿನಕ್ಕೊಂದು ಕಥೆ 1029

*🌻ದಿನಕ್ಕೊಂದು ಕಥೆ🌻*                                            ಸಾಧಕರಿಗೆ ಜೇಡರ ಹುಳು ಒಂದು ಜೀವಂತ ಪಾಠವಾಗಿದೆ.ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರ ಹುಳು ಒಂದು ಆದರ್ಶ.ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ.ನೆಲಕ್ಕೆ ಉರುಳುತ್ತದೆ.ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ.ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ.                                                           ಒಬ್ಬ ರಾಜ ಯುದ್ದದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ.ಸೋತ ಆತ ನಿರಾಶನಾದ.ಹಾಗೆ ಕುಳಿತ್ತಿದ್ದಾರೆ ಅವನ ಕಣ್ಣಿಗೆ ಒಂದು ಜೇಡರ ಹುಳು ಕಾಣಿಸಿಕೊಂಡಿತು.ಅದನ್ನು ಆತ ಗಮನವಿರಿಸಿ ನೋಡಿದ!                                                        ...

ದಿನಕ್ಕೊಂದು ಕಥೆ 1028

*🌻ದಿನಕ್ಕೊಂದು ಕಥೆ🌻*                                        *ಬುದ್ಧನ ಕಥೆ* 'ಗೌತಮ ಬುದ್ಧ' ವೈಶಾಲಿಯಲ್ಲಿದ್ದಾಗ, 'ಮೌಲಿಂದಪುತ್ತ' ಅಂತ ಒಬ್ಬ  ಬುದ್ದನನ್ನು ನೋಡೋಕೆ ಬಂದ. ಅವನು ಬಹಳ  ಓದಿ ಎಲ್ಲವನ್ನು ತಿಳಿದುಕೊಂಡಿದ್ದ. ವೇದ, ಪುರಾಣ, ಉಪನಿಷತ್ತು, ಇವುಗಳನ್ನೆಲ್ಲಾ ಕರತಲಾಮಲಕ ಎನ್ನುವಂತೆ ಅರೆದು ಕುಡಿದಿದ್ದ. ಯಾವ ರೀತಿ ಸುತ್ತಿಬಳಸಿ ಕೇಳಿದರೂ ಅವನು ಎಲ್ಲವನ್ನೂ ಹೇಳುವಷ್ಟು  ಜ್ಞಾನವಂತನಾಗಿದ್ದ. ಅಂದಿನ ದಿನಗಳಲ್ಲಿ ಹೀಗೆ ವಿಪರೀತ ತಿಳಿದುಕೊಂಡವರು ತಮ್ಮ ಬುದ್ಧಿಮತ್ತೆಯನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು , ಸೋತವರಿಂದ ಜಯ ಪತ್ರವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮೌಲಿಂಗ ಪುತ್ತ ಸಹ ಇದಕ್ಕೆ ಹೊರತಾಗಿ ರದೆ ಈಗಾಗಲೇ ಅನೇಕ ಕಡೆ ತನ್ನ ಪಾಂಡಿತ್ಯವನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಜಯ ಪತ್ರವನ್ನು ಸಾಕಷ್ಟು ಪಡೆದಿದ್ದನು.  ಇನ್ನೂ ಒಂದಷ್ಟು ಕಡೆ ಹೊರಡುವ  ಯೋಚನೆಯಲ್ಲಿದ್ದಾಗ, ಕೆಲವರು ಹೇಳಿದರು. ನೀನು ಅಲ್ಲಿ ಇಲ್ಲಿ ಹಲವು ಕಡೆ ಹೋಗುವುದಕ್ಕಿಂತ ನೇರವಾಗಿ ಬುದ್ಧನ ಬಳಿ ಹೋಗಿ ವಾದಮಾಡಿ ನೀನು ಜಯ ಪತ್ರವನ್ನು ಪಡೆಯಬಹುದು. ಅದಕ್ಕಿಂತ ದೊಡ್ಡ ಜಯಪತ್ರ ಬೇರೆ ಯಾವುದೂ ಇರುವುದಿಲ್ಲ ಎಂದರು. ಇದನ್ನು ತಿಳಿದುಕೊಂಡ 'ಮೌ...

ದಿನಕ್ಕೊಂದು ಕಥೆ 1027

*🌻ದಿನಕ್ಕೊಂದು ಕಥೆ🌻*                                      *ಕರ್ಮ ಮತ್ತು ಕರ್ಮ ಯೋಗದ ಕುರಿತು ಉದಾಹರಣೆಯ ಒಂದು ಕಥೆ.* ರಮಣ ಮಹರ್ಷಿಗಳು  ಒಮ್ಮೆ  ಬೆಟ್ಟ ಹತ್ತಿ ಹೊರಟಿರುವಾಗ, ವಿದೇಶಿ ಯಾತ್ರಿಕರೂಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಹಾಗೆ, ಸ್ವಾಮಿ ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ.  ಇದರ ಅರ್ಥ ಏನು ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟಹತ್ತಿ ಬನ್ನಿ ನಿಮಗೆ ಗೊತ್ತಾಗುತ್ತದೆ ಎಂದರು. ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ  ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ  ಮಾಡದೆ ಒಣಗಿ  ಬಿದ್ದಿರುವ  ಸಣ್ಣ ಪುರಲೆಯಂಥ  ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು  ಎಲ್ಲವನ್ನು  ಒಟ್ಟಿಗೆ  ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು  ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು.  ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್...

ದಿನಕ್ಕೊಂದು ಕಥೆ 1026

*🌻ದಿನಕ್ಕೊಂದು ಕಥೆ🌻*                                       *ಒಂದು ಸ್ಪೂರ್ತಿದಾಯಕ ಕಥೆ* ಹಿಂದೆ  ಬಂಗಾಳ ಪ್ರಾಂತ್ಯದಲ್ಲಿ  ತುಂಬಾ ಬರಗಾಲ ಬಂದಿತು. ಎರಡ್ಮೂರು  ವರ್ಷಗಳಿಂದ ಮಳೆ ಕಡಿಮೆಯಾಗಿ, ಆಹಾರದ ಕೊರತೆಯಾಗಿತ್ತು. ಮತ್ತೆ ಈ ವರ್ಷವೂ ಹಾಗೆ ಆದುದರಿಂದ ಕುಡಿಯುವ ನೀರಿಗೂ ತತ್ವಾರ, ಆಹಾರ ಪದಾರ್ಥಗಳಿಗೂ  ಅದ್ವಾನವಾಗಿ  ಬಡಬಗ್ಗರೀಗಂತು ಒಪ್ಪತ್ತು ಗಂಜಿ ಸಿಗುವುದು ಕಷ್ಟವಾಯಿತು. ದುಡಿಯಲು ಕೆಲಸವಿಲ್ಲ, ಹೊಲಗದ್ದೆಗಳೆಲ್ಲ ಒಣಗಿಹೋಗಿವೆ, ಸ್ವಲ್ಪ ಸ್ಥಿತಿವಂತರು ಹೇಗೋ ಕಾಲ ಹಾಕುತ್ತಿದ್ದಾರೆ.  ಆ ಪ್ರಾಂತ್ಯದ ಒಂದು ಪುಟ್ಟ ಹಳ್ಳಿಯಲ್ಲಿ, ಒಬ್ಬ ತಾಯಿ ಏಳೆಂಟು ವರ್ಷದ  ಮಗ ವಾಸವಾಗಿದ್ದರು. ಮೊದಲೇ ಬಡವರು ಈಗಂತೂ ಕೇಳುವುದೇ ಬೇಡ. ಆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಸಾಕುತ್ತಿದ್ದಳು. ಜೀವನಕ್ಕೆ ತೊಂದರೆ ಇರಲಿಲ್ಲ. ಆದರೆ ಈ ಬರಗಾಲದಿಂದಾಗಿ ಮನೆಯಲ್ಲಿ ಒಂದು ಕಾಳು , ದವಸ ಧಾನ್ಯಗಳು  ಇಲ್ಲದೆ ಎರಡು ದಿನಗಳಾಗಿದೆ . ತಾಯಿಯಂತೂ ನಿತ್ರಾಣಳಾಗಿ ಮಲಗಿದವಳು  ಎದ್ದಿಲ್ಲ. ಪಾಪ ಸಣ್ಣ ಹುಡುಗ,  ಎರಡು ದಿನಗಳಿಂದ ಹೊರಗೆ ಹೋಗಿ ಅವರಿವರನ್ನು ಕೇಳಿದರೂ  ಒಂದು ಪೈಸೆ  ಸಿಕ್ಕಿಲ್ಲ. ಇವತ್ತು ಒಂದು ದಿನ ನೋಡಿ ಬರುತ್ತೇನೆ, ಮುಂದೆ ಭಗವಂತ  ಇ...