Posts

Showing posts from January, 2022

ದಿನಕ್ಕೊಂದು ಕಥೆ 1036

*🌻ದಿನಕ್ಕೊಂದು ಕಥೆ🌻* *ನಂಬಿಕೆಯೇ ದೇವರು* ಭಕ್ತರಿಗೆ  ದೇವರ ಮೇಲೆ ಇದ್ದ ನಂಬಿಕೆ ಪ್ರಾಮಾಣಿಕವಾಗಿದ್ದರೆ, ಭಕ್ತರ ಬೇಡಿಕೆ ನೆರವೇರಿಸಲು  ಹೇಗೆ ಬೇಕೋ ಹಾಗೆ ಭಗವಂತ ಒಲಿಯುತ್ತಾನೆ. ಎಲ್ಲರಿಗೂ ತಿಳಿದಿರುವ ಹಾಗೆ  ಕೃಷ್ಣನಂತೂ, ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ  ಭಕ್ತರಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾನೆ  ಮತ್ತು  ನಾನಾ ರೂಪಗಳಲ್ಲಿ ಬಂದು ಸಲಹುತ್ತಾನೆ.  ಕೃಷ್ಣನ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು. ಹಿಂದೆ ಒಬ್ಬ ರಾಜನಿದ್ದ. ಕೃಷ್ಣನ ಪರಮ ಭಕ್ತ. ರಾಜ್ಯದಲ್ಲಿ ದೊಡ್ಡದಾದ ಕೃಷ್ಣನ ದೇವಾಲಯವನ್ನು  ನಿರ್ಮಿಸುತ್ತಾನೆ.  ಸುಂದರವಾದ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆಗಾಗಿ  ಅರ್ಚಕರನ್ನು  ನೇಮಿಸುತ್ತಾನೆ.  ರಾಜನು ನಿತ್ಯವೂ ಸುಂದರವಾದ  ಹೂಮಾಲೆ ತಂದು ಕೃಷ್ಣನಿಗೆ ಅರ್ಪಿಸುತ್ತಿದ್ದ.  ಅರ್ಚಕರು ಹೂ ಮಾಲೆಯನ್ನು  ಕೃಷ್ಣನಿಗೆ ಹಾಕಿ ಪೂಜಿಸಿ ಮಂಗಳಾರತಿ ಮಾಡಿ ರಾಜನಿಗೆ ಮಂಗಳಾರತಿ ಕೊಟ್ಟು, ಪ್ರಸಾದ ಕೊಡುವಾಗ  ಭಗವಂತನ  ಅನುಗ್ರಹ ಎಂದು ಆಶೀರ್ವದಿಸಿ  ಅದೇ  ಹೂ ಮಾಲೆಯನ್ನು  ಪ್ರತಿದಿನವೂ ರಾಜನಿಗೆ  ಹಾಕುತ್ತಿದ್ದರು.  ರಾಜನು  ನೇಮಕ ಮಾಡಿದ  ಅರ್ಚಕರು  ಶ್ರದ್ಧಾ, ಭಕ್ತಿಯಿಂದ ಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಗವಂತನ ಪೂಜೆ ಮಾಡುವ ಕೈಂಕರ್ಯ  ಸಿಕ್ಕಿ...