Posts

ದಿನಕ್ಕೊಂದು ಕಥೆ 1052

*🌞ದಿನಕ್ಕೊಂದು ಕಥೆ🌞* ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.  ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..  ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...  ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್...

ದಿನಕ್ಕೊಂದು ಕಥೆ 1051

*🌞ದಿನಕ್ಕೊಂದು ಕಥೆ🌞* *ಅವಕಾಶ ಸಿಕ್ಕಾಗ ಸಹಾಯ ಮಾಡಬೇಕು.* ಇದೊಂದು ನೈಜ ಘಟನೆ ಉತ್ತರ  ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ  ತುಂಬಾ ಸಹಾಯ ಮಾಡುತ್ತಿದ್ದರು.  ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ  ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ  ನಂಬರನ್ನು  ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ , ಬಸ್ಟಾಂಡ್ ಗಳಲ್ಲಿ ಹೀಗೆ  ಎಲ್ಲಾ ಕಡೆಗಳಲ್ಲಿ  ಅಂಟಿಸಿದ್ದರು. ಯಾಕೆಂದರೆ  ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್  ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ  ಕಾರ್ಯವಾಗಿತ್ತು. ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು....

ದಿನಕ್ಕೊಂದು ಕಥೆ 1050

*🌞ದಿನಕ್ಕೊಂದು ಕಥೆ🌞* *ಜಗದ್ರಕ್ಷಕ ಶ್ರೀಕೃಷ್ಣ*    ಮಹಾಭಾರತವೆಂಬ ಬಹುದೊಡ್ಡ ಗ್ರಂಥವನ್ನು ಬರೆದ ವೇದವ್ಯಾಸರು,  ದೊಡ್ಡ ದೊಡ್ಡ ಘಟನೆಗಳ, ಸಂದರ್ಭಗಳಲ್ಲಿ ನಡೆದ ಲೆಕ್ಕಕ್ಕಿಲ್ಲ ಎನ್ನುವಂಥ ಸಣ್ಣಸಣ್ಣ ಘಟನೆಗಳನ್ನು ದಾಖಲಿಸಿದ್ದಾರೆ, ಅಂಥ ಘಟನೆಗಳು ಅನನ್ಯವಾದದ್ದು, ಅದ್ಭುತವಾದದ್ದು. ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ದಾಯಾದಿಗಳು ಪಾಂಡವರು ಕೌರವರು ಯುದ್ಧಕ್ಕೆ ನಿಂತಿದ್ದಾರೆ.ಇನ್ನೇನು ಯುದ್ಧ ಆರಂಭವಾಗಬೇಕು. ಕೃಷ್ಣ ಅರ್ಜುನನಿಗೆ  ಗೀತೋಪದೇಶ   ಮಾಡಿದ್ದಾಗಿದೆ. ಯುದ್ಧ ಆರಂಭವಾಗುವ ಮೊದಲು ಶಂಖ, ಜಾಗಂಟೆ, ನಗಾರಿ ಡೋಲು, ಕುದುರೆಗಳ  ಹೇಷಾವರ, ಆನೆಗಳಿಗೆ  ಘೀಳಿಟ್ಟವು. ಸೈನಿಕರ ಕೂಗಾಟ, ಯುದ್ಧ ಭೂಮಿ ಆಗಲೇ ರಣರಂಗವಾಗಿ, ಇಡೀ ಜಗತ್ತನ್ನೇ ತುಂಬಿದಂತಾಗಿತ್ತು. ಈ ಸಮಯದಲ್ಲಿ  ಕೃಷ್ಣಾ ನನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸು ನಾನು ಒಮ್ಮೆ ಎಲ್ಲರನ್ನೂ ನೋಡಬೇಕು ಎಂದು ಹೇಳಿದ ಅರ್ಜುನನಿಗಾಗಿ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಿದ.  ಹೀಗೆ ಕೃಷ್ಣ ರಥ ನಿಲ್ಲಿಸಿದ ಸಮಯದಲ್ಲಿ ಎಲ್ಲೆಲ್ಲೂ ಧೂಳು, ಗಲಾಟೆ, ಕೂಗು,ಘೋಷಣೆ, ಈ ಬಾರಿ  ಗದ್ದಲದಲ್ಲಿ  ಒಂದು  ಟಿಟ್ಟಿಬ ಎಂಬ ಪುಟ್ಟಹಕ್ಕಿ  ಆಕಾಶದಲ್ಲಿ ಹಾರುತ್ತಾ,  ಅಯ್ಯಯ್ಯೋ ಈ ಗಲಾಟೆ ಏನು ಇದು, ಪ್ರಪಂಚದ ಕಥೆಯೇ ಮುಗಿದು ಹೋಗುತ್ತಾ, ಈ ಗಲಾಟೆ  ನಿಲ್ಲುವಂತೆ ಕಾಣುತ್ತಿಲ್ಲ...

ದಿನಕ್ಕೊಂದು ಕಥೆ 1049

*🌞ದಿನಕ್ಕೊಂದು ಕಥೆ🌞*               ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.         ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ,ಮಹಾಸ್ವಾಮಿ ,ಒಂದು ಹಕ್ಕಿ ,ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ  ಹಾರಾಡುತ್ತದೆ ,ಆದರೆ ಇನ್ನೊಂದು ಏನು ಮಾಡಿದರೂ  ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ, ನಾನು  ಅದು  ಹಾರಲು ನನ್ನ ಬುದ್ದಿ ಯನ್ನೆಲ್ಲಾ   ಉಪಯೋಗಿಸಿದ್ದೇನೆ,ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.      ಏನೋ ಅನಾರೋಗ್ಯ ಇರಬೇಕೆಂದು,ಭಾವಿಸಿದ ರಾಜ ,ವೈಧ್ಯರು,ಚಿಕಿತ್ಸಕರನ್ನು ಕರೆಸಿ ,ಔಷಧೋಪಚಾರ ಮಾಡಿಸಿದ,ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ. ರಾಜನಿಗೆ ತುಂಬಾ ಬೇಸರವಾಯ್ತ.     ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ  ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ  ರೈತಾಪಿ  ವ್ಯಕ್ತಿ ಯನ್ನು  ಕರೆತಂದು ಇದರ  ವಿಷಯವನ್ನು ತಿಳಿಸಿದ.        ಮರುದಿನ ಅಂತಃಪುರದ ಕಿಟಕಿಯಿಂದ  ನೋಡಿದಾಗ  ಈ ಗಿಡುಗ ,ಗರ...

ದಿನಕ್ಕೊಂದು ಕಥೆ 1048

🌻  *ದಿನಕ್ಕೊಂದು ಕಥೆ* 🌻  🪷🪴    *ಹಗಲು ಕನಸಿನ ಅಪಾಯ.* 🪷🪴 ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಹೆಸರು ರಮೇಶ್. ಗಟ್ಟಿಮುಟ್ಟಾದ ದೇಹವಿದ್ದರೂ ದುಡಿಯುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ತಾಯಿ ದುಡಿದು ತಂದುದನ್ನೇ ಹೊಟ್ಟೆ ತುಂಬ ಊಟ ಮಾಡಿ ಹಗಲಲ್ಲೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದ. ನಿದ್ರೆಯಿಂದ ಎದ್ದ ಮೇಲೆ ತಾಯಿಯೊಂದಿಗೆ, 'ಅಮ್ಮ, ನಾನೊಂದು ಕನಸು ಕಂಡೆ. ಅದರಲ್ಲಿ ರಾಜಕುಮಾರಿ ನನ್ನ ಕೈ ಹಿಡಿದುಕೊಂಡಿದ್ದಳು" ಎನ್ನುತ್ತಿದ್ದ. ಇನ್ನೊಂದು ದಿನ ತಾನು ದೊಡ್ಡ ಅರಮನೆ ಕಟ್ಟಿಸಿದಂತೆ ಕನಸು ಕಂಡೆನೆಂದು ಹೇಳುತ್ತಿದ್ದ. ದಿನವೂ ಅವನ ಕನಸಿನ ಕಥೆ ಕೇಳಿ ಬೇಸತ್ತು ತಾಯಿ, ಮಗನೇ, ಕನಸಿನಲ್ಲಿ ಬರುವ ಸಿರಿವಂತಿಕೆ ಎಚ್ಚರವಾದಾಗ ಇರುವುದಿಲ್ಲ. ಹಗಲು ನಿದ್ರೆ ಮಾಡಿದರೆ ಇಂತಹ ಕನಸು ಬೀಳುವುದು ಸಹಜ. ಹಗಲು ದೇಹ ಶ್ರಮದಿಂದ ಸಂಪಾದಿಸಿ ಸಿರಿವಂತನಾಗಿ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳಬೇಕು ಎಂದು ಹೇಳಿದಳು. "ಸರಿ, ನಾಳೆಯಿಂದಲೇ ಕನಸು ಕಾಣುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ನಿಜವಾಗಿಯೂ ಶ್ರೀಮಂತನಾಗಿ ಸುಖವಾಗಿರುತ್ತೇನೆ" ಎಂದು ಹೇಳಿದ ಮರುದಿನ ರಮೇಶ್ ಕೆಲಸ ಹುಡುಕಿಕೊಂಡು ಹೊರಟ. ಒಬ್ಬ ರೈತ, "ನನ್ನಲ್ಲಿ ಐವತ್ತು ತೆಂಗಿನ ಮರಗಳಿವೆ. ಎಲ್ಲ ಮರಗಳನ್ನೇರಿ ತೆಂಗಿನಕಾಯಿ ತೆಗೆದುಕೊಟ್ಟರೆ ಮರಕ್ಕೊಂದು ಕಾಯಿಯಂತೆ ಐವತ್ತು ತೆಂಗಿನಕಾಯಿ ಕೂಲಿ ಕೊಡುತ್ತೇನೆ" ಎಂದು ಹೇಳಿದೆ. ಅವನು ಒಪ್ಪಿಕೊಂಡು ಕೆಲವು ...

ದಿನಕ್ಕೊಂದು ಕಥೆ 1047

*🌞ದಿನಕ್ಕೊಂದು ಕಥೆ 🌞* ಕಾಲೇಜು ಪ್ರಿನ್ಸ್ ಪಾಲರ ಮನೆಗೆ ತೆಂಗಿನ ಮರಕ್ಕೆ ಹತ್ತಲು ಸುಬ್ಬಣ್ಣ ಹೋಗಿದ್ದ. ಮನೆಯ ಜಗಲಿಯಲ್ಲಿ ಪ್ರಿನ್ಸಿಪಾಲರು ಸೋಫಾದಲ್ಲಿ ಕುಳಿತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಸುಬ್ಬಣ್ಣ ಕೇಳಿದ "ಧನಿ ನಿಮಗೆ ಕಾಲೇಜಿನಲ್ಲಿ ಸಂಬಳ ಎಷ್ಟು ಸಿಗುತ್ತದೆ". ಅದಕ್ಕೆ ಅವರು ಹೇಳಿದರು "ಒಂದು ಒಂದೂವರೆ ಲಕ್ಷದಷ್ಟು". ಆಗ ಸುಬ್ಬಣ್ಣ ಹೇಳಿದ "ಅದು ಸ್ವಲ್ಪ ಜಾಸ್ತಿ ಆಯಿತು ಅಲ್ವಾ" ಅದಕ್ಕೆ ಪ್ರಿನ್ಸಿಪಾಲ್ ಹೇಳಿದರು "ಶಾಲೆಗೆ ಹೋಗೋ ಸಮಯದಲ್ಲಿ ಹಲಸಿನ ಮರ ಮಾವಿನ ಮರ ಏರಿ ಆಟ ಆಡದೆ ಶಾಲೆಗೆ ಹೋಗಬೇಕಿತ್ತು ಈಗ ಅಸೂಯೆ ಪಟ್ಟು ಪ್ರಯೋಜನ ಇಲ್ಲ "ಎಂದು ನಕ್ಕುಬಿಟ್ಟರು. ನಂತರ ಸುಬ್ಬಣ್ಣ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಎಲ್ಲಾ ತೆಗೆದು. ಪ್ರಿನ್ಸಿಪಾಲರ ಹತ್ತಿರ ಕೂಲಿಗಾಗಿ ಕೈ ಚಾಚಿದ ಆಗ ಪ್ರಿನ್ಸಿಪಾಲರು ಅವನ ಕೈಗೆ 100 ರೂಪಾಯಿ ನೋಟೊಂದನ್ನು ಕೈಗೆ ಕೊಟ್ಟರು. ಆಗ ಸುಬ್ಬಣ್ಣ ಹೇಳಿದ "ನನ್ನ ಕೂಲಿ ನೂರು ರೂಪಾಯಿ ಅಲ್ಲ 500 ರೂಪಾಯಿ "ಎಂದ. ಅದಕ್ಕೆ ಪ್ರಿನ್ಸಿಪಾಲರು "ಅದು ಜಾಸ್ತಿಯಾಯಿತು ಅಲ್ವ" ಎಂದರು. ಸುಬ್ಬಣ್ಣ ಅದಕ್ಕೆ ಉತ್ತರಿಸಿದ "ಚಿಕ್ಕ ವಯಸ್ಸಿನಲ್ಲಿ ಕಾಗದ, ಪೆನ್ನು, ಶಾಲೆ ಕಾಲೇಜು ಅಂತ ತಿರುಗಾಡುವಾಗ ಆಲೋಚಿಸಬೇಕಿತ್ತು. ತೆಂಗಿನ ಮರ ಹತ್ತಲು ಕೂಡ ಕಲಿಯಬೇಕು ಎಂದ".... ಪ್ರಿನ್ಸಿಪಾಲರು ಒಮ್ಮೆಗೆ ದಂಗಾಗಿ ಸುಬ್ಬಣ್ಣನಿಗೆ 500 ...

ದಿನಕ್ಕೊಂದು ಕಥೆ 1046

*🌻 ದಿನಕ್ಕೊಂದು ಕಥೆ 🌻* *ವಿದುರನು ಶಸ್ತ್ರಸಂನ್ಯಾಸ.*  ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಒಂದು ವರ್ಷ  ಅಜ್ಞಾತವಾಸವನ್ನು ಮುಗಿಸಿ ಬಂದರು. ಷರತ್ತಿನಂತೆ ಅವರ ಪಾಲಿನ ಅರ್ಧರಾಜ್ಯವನ್ನು ಕೌರವರು ಕೊಡಬೇಕು. ಆದರೆ ದುರ್ಯೋಧನ ಕೊಡುವುದಿಲ್ಲ .ಸಂಧಾನ ಮಾಡಿಕೊಳ್ಳಬೇಕು.  ಪಾಂಡವರು ಕೃಷ್ಣನ ಜೊತೆ ಕುಳಿತು ಮಾತುಕತೆ ನಡೆಸಿ ಅದರಂತೆ ಕೃಷ್ಣನೇ ಇದರ ರಾಯಭಾರಿಯಾಗಿ ಹೋಗಿ ಸಂಧಾನ ನಡೆಸಬೇಕು ಎಂದು ತೀರ್ಮಾನಿಸಿದರು.  ಒಂದು ಶುಭ ದಿನ ಕೃಷ್ಣನು ಸೂರ್ಯೋದಯಕ್ಕೂ ಮುನ್ನವೇ ಸ್ನಾನ , ಸಂಧ್ಯಾವಂದನೆ, ಪ್ರಾತರ್ವಿಧಿಗಳನ್ನು ಮುಗಿಸಿ ಸಾರಥಿಯೋಡನೆ ರಥದಲ್ಲಿ ಕುಳಿತು ಪಾಂಡವರಿಂದ ಬೀಳ್ಕೊಂಡು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಒಂದಷ್ಟು ದೂರ ಬಂದ ಮೇಲೆ ಸಣ್ಣ ಸಣ್ಣ ಸಂಸ್ಥಾನದ ರಾಜರುಗಳೆಲ್ಲ ಬಂದು ಕೃಷ್ಣನನ್ನು ಸ್ವಾಗತಿಸಿ ಅತಿಥಿ ಸತ್ಕಾರಕ್ಕಾಗಿ ಆಹ್ವಾನಿಸುತ್ತಾರೆ.ಕೃಷ್ಣನು ಮುಗುಳ್ನಗೆಯಿಂದಲೇ ಸತ್ಕಾರ ಗಳನ್ನು ಇನ್ನೂಮ್ಮೆ ಸ್ವೀಕರಿಸುತ್ತೇನೆ ಎಂದು ಹೇಳಿ  ಅವರಿಂದ ಬೀಳ್ಕೊಂಡು ಹಸ್ತಿನಾಪುರದ ದ್ವಾರದ ಸಮೀಪ ಬಂದಿದ್ದಾನೆ.  ಕೃಷ್ಣನನ್ನು ಸ್ವಾಗತಿಸಲು ಅರಮನೆಯ ಪ್ರಮುಖರಾದ ಭೀಷ್ಮ ,ದ್ರೋಣ, ವಿದುರ ,ಕೃಪಾಚಾರ್ಯರು ನಿಂತಿದ್ದರೆ ,ಕೃಷ್ಣನನ್ನು ನೋಡಲು ಹಸ್ತಿನಾಪುರದ ಜನಸ್ತೋಮವೇ ಕಾತರಿಸಿ ಕಾಯುತ್ತಿದೆ. ಕುದುರೆಯ ಖರಪುಟದ ಸದ್ದು ಕೇಳಿಸಿತು. ರಥದಲ್ಲಿ ವಿರಾಜಮಾನನಾಗಿ ಕುಳಿತಿದ್ದ ಕೃಷ್ಣನನ್ನು ಕಣ್ತುಂಬಿಕೊಳ್ಳ...

ದಿನಕ್ಕೊಂದು ಕಥೆ 1045

*🌻ದಿನಕ್ಕೊಂದು ಕಥೆ🌻* *ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು.* ಪ್ರಾಚೀನ ಕಾಲದಲ್ಲಿ ನಡೆದ ಕಥೆ ,  ಒಂದು  ಮರದಲ್ಲಿ  ಪುಟ್ಟ ಪಕ್ಷಿ  ಗೂಡಿನಲ್ಲಿ ತನ್ನ ಎರಡು  ಮರಿಗಳೊಂದಿಗೆ ವಾಸವಾಗಿತ್ತು. ಪುಟ್ಟ ಪಕ್ಷಿ ದಿನವೂ  ಹೊರಗೆ ಹೋಗಿ ತನಗೂ ಹಾಗೂ ಮರಿಗಳಿಗೆ  ಆಹಾರ ತಂದು  ಕೊಕ್ಕಿನಿಂದ ಮರಿಗಳಿಗೆ  ತಿನ್ನಿಸಿ,  ಆಟವಾಡಿ  ದಿನ ಕಳೆಯುತ್ತಾ  ಸಂತೋಷವಾಗಿದ್ದವು.  ಹೀಗೆ ಒಂದು ದಿನ ತಾಯಿ ಪಕ್ಷಿಯು ಆಹಾರ ತರುವಾಗ  ಆಕಾಶವೆಲ್ಲಾ ಮೋಡ  ಕವಿತಿರುವುದನ್ನು  ನೋಡಿ  ಲಘು ಬಗೆ ಯಿಂದ ಗೂಡಿಗೆ ಬಂದು ಸೇರಿತು. ಅದು ಅಂದು ಕೊಂಡಂತೆ ಮಳೆ ಬಂದಿತು. ಎರಡು  ದಿನಗಳಾದರೂ ಮಳೆ ಕಡಿಮೆಯಾಗಲಿಲ್ಲ. ಜೋರಾಗಿಯೇ  ಸುರಿಯುತ್ತಿತ್ತು. ಹೀಗಾಗಿ ತಾಯಿ ಪಕ್ಷಿ ಹೊರಗೆ ಹೋಗಿ  ತನ್ನ  ಮರಿಗಳಿಗೆ ಆಹಾರ ತರಲು ಸಾಧ್ಯವಾಗಲಿಲ್ಲ. ಮರಿಗಳು ತಾಯಿ ಮುಂದೆ ತಮ್ಮ ಕೊಕ್ಕನ್ನು  ಕಳೆದು ಆಹಾರ ಕೇಳುತ್ತಿದ್ದವು. ಮರಿಗಳು ಹಸಿವಿಗಾಗಿ   ಒದ್ದಾಡುವುದನ್ನು ತಾಯಿ ಪಕ್ಷಿಗೆ ನೋಡಲಾಗಲಿಲ್ಲ. ಮಳೆ ಕಡಿಮೆಯಾದ ಹೊರತು ಆಹಾರ ತರಲು ಅದರ ಕೈಯಲ್ಲಿ ಸಾಧ್ಯವಿರಲಿಲ್ಲ.  ಆಗ ಅದು ಕೃಷ್ಣನನ್ನು ಪ್ರಾರ್ಥಿಸುತ್ತಾ,  ಹೀಗೆ ಹೇಳಿತು. ಹೇ ಪ್ರಭು ನೀನು ಗೋಕುಲ ಪರ್ವತವನ್ನೆ  ಎತ್ತಿ  ಗೋಪಾಲಕರ  ಜೀವವನ್ನು ರಕ್ಷ...

ದಿನಕ್ಕೊಂದು ಕಥೆ 1044

*🌻ದಿನಕ್ಕೊಂದು ಕಥೆ🌻* *ಜಿಮ್ ಕಾರ್ಬೆಟ್* ಜಿಮ್ ಕಾರ್ಬೆಟ್  ಬೇಟೆಗಾರನಾಗಿದ್ದವರು  ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು  ರೋಚಕ ವ್ಯಕ್ತಿತ್ವ.   ಇಂದು ಅವರ ಸಂಸ್ಮರಣೆ ದಿನ. ಎಡ್ವರ್ಡ್ ಜೇಮ್ಸ್ ಜಿಮ್  ಕಾರ್ಬೆಟ್ 1875ರ ಜುಲೈ 25ರಂದು ಭಾರತದ ನೈನಿತಾಲ್‍ನಲ್ಲಿ ಜನಿಸಿದರು.   ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ 13 ಮಕ್ಕಳ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದರು.  ತಂದೆ ವಿಲಿಯಮ್ ಕ್ರಿಸ್ಟಾಫರ್ ಕಾರ್ಬೆಟ್. ತಾಯಿ ಮೇರಿ ಜೇನ್ ಕಾರ್ಬೆಟ್.  1862ರಲ್ಲಿ ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ಇಲ್ಲಿಗೆ ವರ್ಗಾವಣೆಗೊಂಡರು. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ.  ತಂದೆಯ ಪೋಸ್ಟ್ ಮಾಸ್ಟರ್ ಕೆಲಸ ಅವರ ಹಿರಿಯಣ್ಣ ಟಾಮ್ ಕಾರ್ಬೆಟ್ ಅವರಿಗೆ ದೊರಕಿತು.   ಕಾರ್ಬೆಟ್ ಅವರ ಕುಟುಂಬ ಚಳಿಗಾಲದ ಸಮಯದಲ್ಲಿ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿ ನೆಲೆಗೊಳ್ಳುತ್ತಿತ್ತು.  ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಕುರಿತಾದ ಆಕರ್ಷಣೆಗೊಳಗಾದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದರು....

ದಿನಕ್ಕೊಂದು ಕಥೆ 1043

*🌻ದಿನಕ್ಕೊಂದು ಕಥೆ🌻* *ನಮಸ್ಕಾರದ ಪ್ರಾಮುಖ್ಯತೆ*        ಮಹಾಭಾರತದ ಯುದ್ಧ ನಡೆಯುತ್ತಿತ್ತು -      ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ  ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .        *"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*         ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -     ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -   ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ - ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -   ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು       ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ -    *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!    *"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ  ಕರೆತಂದಿದ್ದಾರಾ"?* ಆಗ ದ್ರೌಪದಿ ಹೀಗೆ ಹೇಳ...

ದಿನಕ್ಕೊಂದು ಕಥೆ 1042

*🌻 ದಿನಕ್ಕೊಂದು ಕಥೆ*🌻                                                *ಬದುಕಿನ ರೀತಿ*  ಒಂದು ಹೆಮ್ಮರ ಇತ್ತು.  ಒಂದು ಸಸಿ, ಗಾಳಿ ಹೊಡೆತಕ್ಕೆ ಏಳುತ್ತ ಬೀಳುತ್ತ ,ಬೆಳೆಯುತ್ತಿತ್ತು. ಒಬ್ಬ ಸಂತನು ಅಲ್ಲಿಗೆ ಬಂದ. ಎಳೆಯ ಸಸಿಯ ಕಷ್ಟವನ್ನು ಕಂಡು ಮನ ಕರಗಿತು. ಅದಕ್ಕೊಂದು ಕೋಲಿನ ಆಶ್ರಯ ಕೊಡಲು ಹೋದ. ಸಸಿ ಹೇಳಿತು “ಸಂತನೇ”, ಈ ಕೋಲಿನ ಆಶ್ರಯ ನನಗೆ ದಯವಿಟ್ಟು ಕೊಡಬೇಡಿ !” ಸಂತ ಕೇಳಿದ – “ಅದೇಕೆ ಬೇಡ ? ಈ ಕೋಲು ಮಳೆ-ಗಾಳಿಯಿಂದ ನಿನ್ನನ್ನು ರಕ್ಷಿಸುತ್ತದೆ.”   ಸಸಿ ಹೇಳಿತು – “ಎಲ್ಲದಕ್ಕೂ ಆಶ್ರಯವನ್ನು ಬಯಸುವವರು ಮನುಷ್ಯರೇ ವಿನಾ ನಾವಲ್ಲ. ಎಲೆ ಉದುರಬೇಕು. ಅವೆಲ್ಲವನ್ನೂ ಎದುರಿಸಿ ನಾವು ಗಟ್ಟಿಗೊಳ್ಳಬೇಕು. ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಅದು ನಮ್ಮ ಬದುಕಿನ ರೀತಿ!!” ಸಸಿಯ ಮಾತನ್ನು ಕೇಳಿ ಸಂತರಿಗೆ ಸಾನಂದಾಶ್ಚರ್ಯವಾಯಿತು.  ಸಂಗ್ರಹ: ವೀರೇಶ್ ಅರಸಿಕೆರೆ. ************************************* *🌻 ದಿನಕ್ಕೊಂದು ಕಥೆ 🌻* *ಸಾಮಾನ್ಯನೊಬ್ಬ ಅಸಾಮಾನ್ಯನಾಗಿದ್ದು !* ಕೃಪೆ: ವಿಶ್ವೇಶ್ವರ ಭಟ್ I ಸಂಪಾದಕರು  ವಿಶ್ವವಾಣಿ . ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ...

ದಿನಕ್ಕೊಂದು ಕಥೆ 1041

ದಿನಕ್ಕೊಂದು ಕಥೆ *ಹೆಣ ಭಾರವಾದ 🐑ಕುರಿಮರಿ*  ಒಂದೂರಿನಲ್ಲಿ ಒಬ್ಬ ಸತೀಶ ಅಂತ ಹುಡುಗ ಇದ್ದ.ಓ!ಆ ಹುಡುಗ ಯಾರು ಅಂತೀರಾ?ನಾನೇ ಕಣ್ರೀ. ನಮ್ಮ ಊರಲ್ಲಿ ಊರಿಂದ ಹೊರಗೆ ಒಂದು ಹಳ್ಳ ಇತ್ತು.ಹಳ್ಳಕ್ಕೆ ದೊಡ್ಡ ಸೇತುವೆ ಇತ್ತು.ಆ ಸೇತುವೆಯತ್ರ ಮಧ್ಯರಾತ್ರೀಲಿ ದೆವ್ವಗಳು ಓಡಾಡ್ತವೆ ಅಂತ ಊರವರೆಲ್ಲ ಮಾತಾಡ್ತಿದ್ರು. ನನಗೆ ಯಾವಾಗಲೂ ಇಂಥ ಕುತೂಹಲಕಾರಿ ಸಂಗತಿಗಳನ್ನು ಭೇದಿಸುವುದು ಅಂದ್ರೆ ಬಹಳ ಇಷ್ಟ. ಒಂದಿನ ನಾನು ಮಧ್ಯರಾತ್ರೀಲಿ ಹೋಗ್ಬೇಕು ಅಂತ ಅನ್ನುಸ್ತು. ಅಲ್ಲೇನಿದೆ?ನೋಡೇ ಬಿಡಬೇಕು ಅಂತ ಒಂದು ದಿನ ಏಕಾಏಕಿ ನಿರ್ಧಾರ ಮಾಡಿ ಒಬ್ಬನೇ ಹೊರಟೇ ಬಿಟ್ಟೆ.ಮಧ್ಯರಾತ್ರಿ ಹನ್ನೆರಡು ಗಂಟೆ ಆಗಿದೆ.ನಿಧಾನವಾಗಿ ಹೊರಟೆ. ಯಾವ ಕಡೆ ನೋಡಿದರೂ ಕತ್ತಲು ಕತ್ತಲು.ಯಾಕೆಂದ್ರೆ ಅವತ್ತು ಅಮವಾಸೆ ಕಣ್ರೀ.ಒಂದು ಸಣ್ಣ ಇಲಿ ಹೋದ್ರು ಭಯ ಆಗ್ತಿತ್ತು.ಒಂದು ಸಣ್ಣ ಎಲೆ ಗಾಳಿಗೆ ಅಲುಗಾಡಿದರೆ ಸರಸರ ಸರಸರ ಅಂತಿತ್ತು.ಎಂದುಾ ಹೆದರದ ನಾನು ಅವತ್ತು ಒಂದು ಸಣ್ಣ ಎಲೆಗೆ ಹೆದರಲೇಬೇಕಾಯ್ತು. ಯಾಕೇಂದ್ರೆ ಯಾವ ಕಡೆ ನೋಡಿದರೂ ಕತ್ತಲೆ.ಮಧ್ಯರಾತ್ರೀಲಿ ಆಗೊಂದು ಈಗೊಂದು ಗೂಬೆ ಕೂಗೋದು ಬಿಟ್ರೆ ನೀರವ ಮೌನ. ಯಾರೂ ಇಲ್ಲ ನೀವೇ ಊಹೆ ಮಾಡ್ಕೊಳ್ರಿ.ಹೇಗಾಗಿರಬೇಕು? ಧೈರ್ಯವಾಗಿ ನಿಧಾನವಾಗಿ ನಡಕೊಂಡು ನಡಕೊಂಡು ಹೋದೆ. ಅಂತೂ ಇಂತೂ ಆ ಸೇತುವೆಯ ಹತ್ರ ತಲುಪಿದೆ.ನೋಡ್ತಿನಿ ಒಂದು ಸಣ್ಣ ಕುರಿಮರಿ ಆ ಕತ್ತಲ ಸರಿರಾತ್ರೀಲಿ ಮೇಯ್ತಾ ಇದೆ. ಅಯ್ಯೋ!ಪಾಪ ಯಾರೋ  ಕುರಿಮರಿಯನ್ನು ಬಿಟ್ಟು...

ದಿನಕ್ಕೊಂದು ಕಥೆ 1040

*🌻 ದಿನಕ್ಕೊಂದು ಕಥೆ🌻* ನೂರು ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಧಾಮ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಮಾಡಬಹುದು ಅಂತಾ ವಾರ್ಡನ್ ಹೇಳಿದರು. ಉಪ್ಪಿಟ್ಟಿನವರು ಆಗಲೂ “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತಾ ಹಠಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತಾ ರಚ್ಚೆ ಹಿಡಿದರು. ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. ಇಪ್ಪತ್ತುಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಕುಸುಗುಟ್ಟಿದರು. ಉಳಿದ 80 ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮರುದಿನ ಮತದಾನ. ಉಪ್ಪಿಟ್ಟುಪ್ರಿಯ ಇಪ್ಪತ್ತು ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ ಎಂಬತ್ತು ಜನರ ಮತಗಳು ಹೀಗಿದ್ದವು: ಮಸಾಲೆ ದೋಸೆ - 18 ಜನ ಆಲೂ ಪರಾಠ - 16 ಜನ ಪೂರಿ ಸಾಗು - 14 ಜನ ಮ್ಯಾಗಿ - 12 ಜನ ಇಡ್ಲಿ ಸಾಂಬಾರ್ - 10 ಜನ ಟೋಸ್ಟ್ ಆಮ್ಲೆಟ್ - 10 ಜನ ಬಹುಮತ ಉ...

ದಿನಕ್ಕೊಂದು ಕಥೆ 1039

ದಿನಕ್ಕೊಂದು ಕಥೆ 🙏🏼🙏🏼ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ  🙏🏼🙏🏼 ಶನಿ ಮಹಾರಾಜನ ಮಹಿಮೆ  ಎಲ್ಲರಿಗೂ ಗೊತ್ತಿದೆ,  ಶನಿಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೆ  ಬಿಟ್ಟಿಲ್ಲ. ಅಂದಮೇಲೆ  ಮನುಷ್ಯನನ್ನು ಬಿಟ್ಟಾನೆಯೇ, ಇಂತಹ ಶನಿದೇವನಿಗೆ, ದೇವಾನು ದೇವತೆಗಳು  ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ  ಗಣಪತಿ ಪೂಜೆ ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ ಜನ ಹೋಗುವುದನ್ನು ನೋಡಿರುತ್ತೇವೆ, ಹಾಗೆಯೇ  ಪ್ರಥಮ ಪೂಜಕ,  ಆದಿ ದೈವ, ವಿಘ್ನನಿವಾರಕ, ವಿದ್ಯಾಗಣಪತಿ, ಹೀಗೆ ನಾನಾ ಹೆಸರುಗಳಿಂದ ಕರೆಯುವ  ಗಣೇಶನನ್ನು ಪೂಜಿಸಿದರೆ ಶನಿ ದೋಷ  ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಒಂದು ಕಥೆಯಿದೆ.  ಒಂದು ದಿನ ಗಣೇಶ  ನಿಧಾನವಾಗಿ ವಾಯು ವಿಹಾರ  ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ  ಬರುತ್ತಿದ್ದ . ಗಿಡ್ಡ ಬುಡ್ಡಕ್ಕೆ ,ಮುದ್ದು ಮುದ್ದಾಗಿರುವ   ಗಣೇಶನನ್ನ ನೋಡಿ  ಶನಿಗೆ ಕೀಟಲೆ ಮಾಡಬೇಕೆನಿಸಿತು.  ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗೆ ಹೊರಟ, ಗಣೇಶ ತನ್ನ ಕಡೆಗೆ  ಶನಿ ಬರುವುದನ್ನು ನೋಡಿದ, ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು....

ದಿನಕ್ಕೊಂದು ಕಥೆ 1038

ದಿನಕ್ಕೊಂದು ಕಥೆ ಬಿಡಿ ಅತ್ತೆ ಇಲ್ಲೇ ಚೆನ್ನಾಗಿದೆ ಶಿವಪುರ ಎಂಬ ಊರಿನಲ್ಲಿ ಪಾರ್ವತಮ್ಮ ಎಂಬ ವಿಧವೆ ಇದ್ದಳು. ಅವಳಿಗೆ ಒಬ್ಬನೇ ಮಗ ರಮೇಶ, ರಮೇಶನಿಗೆ ತಾಯಿಯ ಮಾತು ವೇದವಾಕ್ಯ ಜೊತೆಗೆ ಸ್ವಲ್ಪ ಪೆದ್ದು ಕೂಡ. ಆತನು ಪ್ರಾಪ್ತವಯಸ್ಸಿಗೆ ಬಂದಾಗ ಪಾರ್ವತಮ್ಮ ಮಗನಿಗೆ ಮದುವೆ ಮಾಡಲು ಯೋಚಿಸುತ್ತಾಳೆ. ಆದರೆ ಅವಳ ಸಂಬಂಧಿಕರಾರು ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಹಾಗೂ ಹೀಗೂ ಪಕ್ಕದ ಊರಿನಲ್ಲಿ ಒಂದು ಹೊಸ ಸಂಬಂಧ ನೋಡಿ ಮಗನಿಗೆ ಮದುವೆ ಮಾಡುತ್ತಾಳೆ. ಮದುವೆ ಆದ ಸ್ವಲ್ಪ ದಿನದ ಮೇಲೆ ಮಗ ಅತ್ತೆ ಮನೆಗೆ ಮೊದಲನೆ ಸಾರಿ ಹೋಗಬೇಕಾಗುತ್ತೆ. ಅವನು ಸ್ವಲ್ಪ ದಡ್ಡ ಮತ್ತು ಮುಂಗೋಪಿಯಾದ್ದರಿಂದ ತಾಯಿ ಮಗನಿಗೆ ನೋಡು ರಮೇಶ ನೀನು ಮೊದಲನೆ ಸಾರಿ ಅತ್ತೆ ಮನೆಗೆ ಹೋಗುತ್ತಿರುವುದು. ಅಲ್ಲಿಗೆ ಹೋದ ಮೇಲೆ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಎಂದು ಹೇಳಬೇಡ. ಅದು ಏನೇ ಆಗಲಿ ಹೇಗೇ ಇರಲಿ ಮೊದಲನೆ ಸಾರಿ ಯಾದ್ದರಿಂದ ತಾಳ್ಮೆಯಿಂದ ಚೆನ್ನಾಗಿದೆ ಎಂದು ಹೇಳು. ಯಾವುದಕ್ಕೂ ಕೋಪಿಸಿಕೊಳ್ಳಬೇಡ ಎಂದು ಬುದ್ಧಿ ಹೇಳಿ ಕಳುಹಿಸಿಕೊಡುತ್ತಾಳೆ. ಮಗ ಸಂಜೆ ಹೊತ್ತಿಗೆ ಅತ್ತೆಯ ಮನೆಗೆ ಹೋಗುತ್ತಾನೆ. ಮಬ್ಬು ಕತ್ತಲು. ಅತ್ತೆಯ ಮನೆಯಲ್ಲಿ ಕೈಕಾಲು ತೊಳೆಯಲು ಮನೆಯ ಹೊರಗಡೆ ಜಾಗ ಇರುತ್ತೆ. ಅದರ ಪಕ್ಕದಲ್ಲೇ ಬಚ್ಚಲು ನೀರು ತುಂಬಲು ಒಂದು ಗುಂಡಿಯನ್ನು ಮಾಡಿರುತ್ತಾರೆ, ಅಳಿಯನಿಗೆ ಕೈ ಕಾಲು ತೊಳೆಯಲು ಅತ್ತೆ ಕೂಗುತ್ತಾಳೆ. ಅಳಿಯ ಬಂದು ಕೈ ಕಾಲು ತೊಳೆಯಲು ಕಲ್ಲಿನ ಮೇಲೆ ನಿಲ್ಲುತ...

ದಿನಕ್ಕೊಂದು ಕಥೆ 1037

ಒಬ್ಬ ಹುಡುಗನಿದ್ದ. ಶಾಲೆಗೆ ಹೋಗುವ ವಿಷಯದಲ್ಲಿ ತುಂಬಾ ಸೋಮಾರಿ. ಶಾಲೆಯ ಶಿಕ್ಷಕರ ಪ್ರಕಾರ useless fellow. ಮನೆಯಲ್ಲಿ ಮಲಗುವುದು, ಊಟ ಮಾಡುವುದು, ಊರು ಸುತ್ತುವುದು ಇದೇ ಅವನ ಕೆಲಸ. ಊರು ಸುತ್ತಲು ಹೋದಾಗ ಜೀರುಂಡೆಗಳನ್ನು ಹಿಡಿಯುವುದು, ವಿವಿಧ ರೀತಿಯ ಕಲ್ಲುಗಳು, ಮೂಳೆಗಳನ್ನು ಸಂಗ್ರಹಿಸುವುದು ಅವುಗಳನ್ನು ವರ್ಗೀಕರಿಸುವುದು ಇವನ ಹವ್ಯಾಸ. ಹಾಳು ಹುಡುಗನಿಂದಾಗಿ ಮನೆಯೊಂದು ಮ್ಯೂಸಿಯಂ ಆಗಿ ಬಿಟ್ಟಿತ್ತು. ಅಮ್ಮನಿಗೆ ಎತ್ತಿ ಹೊರಗೆಸೆದು ಮನೆಯನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಅಪ್ಪನಿಗೆ ಮಗನನ್ನು ವೈದ್ಯನಾಗಿಸಬೇಕೆಂಬ ಬಯಕೆ. ಅಂತೂ ಇಂತೂ ಮಗನಿಗೊಂದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡೇ ಬಿಟ್ಟ. ಮಗನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಬೇಕೆಂದಾಗ ಕಾಲೇಜಿಗೆ ಹೋಗುವುದು ಬೇಜಾರಾದಾಗ ಅದೇ ಕಲ್ಲು, ಮೂಳೆ, ಜೀರುಂಡೆಗಳು. ಹಾಗೂ ಹೀಗೂ ಒಂದೂವರೆ ವರ್ಷ ಮಣ್ಣು ಹೊತ್ತು ಕಾಲೇಜು ಬಿಟ್ಟ. ಅಮ್ಮ ಅಪ್ಪ ಇಬ್ಬರೂ ನಿರಾಶರಾದರು. ಅದೇ ಸಮಯದಲ್ಲಿ ಲಂಡನ್ ನ ಸೌತ್ಹಾಂಪ್ಟನ್ ನಿಂದ ಎಚ್ ಎಂ ಎಸ್ ಬೀಗಲ್ ಎಂಬ ಹಡಗೊಂದು ಪ್ರಪಂಚ ಪರ್ಯಟನೆಗೆ ಹೊರಡಲಿದೆ ಎಂಬ ಪ್ರಕಟಣೆ ಹೊರಬಿತ್ತು. ಈತ ಹೆಸರು ನೋಂದಾಯಿಸಿದ. ಆ ಹಡಗಿನಲ್ಲಿ ಪ್ರಕೃತಿ ತಜ್ಞನಾಗಿ ಆಯ್ಕೆಯಾದ ಅಪ್ಪ ಅಮ್ಮನಿಗೂ ಅದೇ ಬೇಕಿತ್ತು ಹೋಯಿತು ಮಾರಿ ಎಂದು ನಿಟ್ಟುಸಿರು ಬಿಟ್ಟರು. ಹಡಗು ದಶಂಬರ 27 1831 ರಂದು ಬಂದರನ್ನು ಬಿಟ್ಟಿತು. ಅದರೊಂದಿಗೆ 22 ರ ಯುವಕ ಕೂಡಾ. ಸುತ್ತಲೂ ಘೋರ ಕಡಲು. ತಲೆ ಸು...

ದಿನಕ್ಕೊಂದು ಕಥೆ 1036

*🌻ದಿನಕ್ಕೊಂದು ಕಥೆ🌻* *ನಂಬಿಕೆಯೇ ದೇವರು* ಭಕ್ತರಿಗೆ  ದೇವರ ಮೇಲೆ ಇದ್ದ ನಂಬಿಕೆ ಪ್ರಾಮಾಣಿಕವಾಗಿದ್ದರೆ, ಭಕ್ತರ ಬೇಡಿಕೆ ನೆರವೇರಿಸಲು  ಹೇಗೆ ಬೇಕೋ ಹಾಗೆ ಭಗವಂತ ಒಲಿಯುತ್ತಾನೆ. ಎಲ್ಲರಿಗೂ ತಿಳಿದಿರುವ ಹಾಗೆ  ಕೃಷ್ಣನಂತೂ, ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ  ಭಕ್ತರಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾನೆ  ಮತ್ತು  ನಾನಾ ರೂಪಗಳಲ್ಲಿ ಬಂದು ಸಲಹುತ್ತಾನೆ.  ಕೃಷ್ಣನ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು. ಹಿಂದೆ ಒಬ್ಬ ರಾಜನಿದ್ದ. ಕೃಷ್ಣನ ಪರಮ ಭಕ್ತ. ರಾಜ್ಯದಲ್ಲಿ ದೊಡ್ಡದಾದ ಕೃಷ್ಣನ ದೇವಾಲಯವನ್ನು  ನಿರ್ಮಿಸುತ್ತಾನೆ.  ಸುಂದರವಾದ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆಗಾಗಿ  ಅರ್ಚಕರನ್ನು  ನೇಮಿಸುತ್ತಾನೆ.  ರಾಜನು ನಿತ್ಯವೂ ಸುಂದರವಾದ  ಹೂಮಾಲೆ ತಂದು ಕೃಷ್ಣನಿಗೆ ಅರ್ಪಿಸುತ್ತಿದ್ದ.  ಅರ್ಚಕರು ಹೂ ಮಾಲೆಯನ್ನು  ಕೃಷ್ಣನಿಗೆ ಹಾಕಿ ಪೂಜಿಸಿ ಮಂಗಳಾರತಿ ಮಾಡಿ ರಾಜನಿಗೆ ಮಂಗಳಾರತಿ ಕೊಟ್ಟು, ಪ್ರಸಾದ ಕೊಡುವಾಗ  ಭಗವಂತನ  ಅನುಗ್ರಹ ಎಂದು ಆಶೀರ್ವದಿಸಿ  ಅದೇ  ಹೂ ಮಾಲೆಯನ್ನು  ಪ್ರತಿದಿನವೂ ರಾಜನಿಗೆ  ಹಾಕುತ್ತಿದ್ದರು.  ರಾಜನು  ನೇಮಕ ಮಾಡಿದ  ಅರ್ಚಕರು  ಶ್ರದ್ಧಾ, ಭಕ್ತಿಯಿಂದ ಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಗವಂತನ ಪೂಜೆ ಮಾಡುವ ಕೈಂಕರ್ಯ  ಸಿಕ್ಕಿ...

ದಿನಕ್ಕೊಂದು ಕಥೆ 1035

*🌻ದಿನಕ್ಕೊಂದು ಕಥೆ🌻* *ವಿದ್ಯಾ ದದಾತಿ ವಿನಯಂ* ಚಂದ್ರಗುಪ್ತ ನೆಂಬ ರಾಜನು ವಿದ್ಯಾಕಾಶಿಯನ್ನು ಆಳುತ್ತಿದ್ದನು. ಚತುರನು, ವಿದ್ಯಾವಂತನು, ಬುದ್ಧಿವಂತನು, ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ರಾಜನಿಗೆ ಅಧ್ಯಾತ್ಮದತ್ತ ಒಲವು ಮೂಡಿತು. ಆಧ್ಯಾತ್ಮವನ್ನು ಕಲಿತು ತಿಳಿದುಕೊಳ್ಳಬೇಕೆಂಬ ಹಂಬಲದಿಂದ, ಆತನು ತನ್ನ ಮಂತ್ರಿಯನ್ನು ಕರೆದು ಮಹಾಮಂತ್ರಿಗಳೆ ನಾನು ಆಧ್ಯಾತ್ಮವನ್ನು ಕಲಿತುಕೊಳ್ಳಬೇಕು ನಮ್ಮ ರಾಜ್ಯದಲ್ಲಿರುವ ಎಲ್ಲಾ ಗುರುಕುಲಗಳನ್ನು ವಿಚಾರಿಸಿ, ಶ್ರೇಷ್ಠವಾದ ಆಧ್ಯಾತ್ಮ ಅನುಭವವಿರುವ ಗುರುವನ್ನು ಗುರುತಿಸಿ, ಪ್ರತಿದಿನ ಅರಮನೆಗೆ ಬಂದು ನನಗೆ ಆಧ್ಯಾತ್ಮ ಕಲಿಸಿಕೊಡುವಂತೆ ತಿಳಿಸಿ ಎಂದನು .  ಸ್ವಲ್ಪ ದೂರದ ಕಾಡಿನಲ್ಲಿ 'ಸುಗುಣಾನಂದ' ಎಂಬ ಅನುಭವಿ ಆಧ್ಯಾತ್ಮ ಗುರುಗಳು ವಾಸಿಸುತ್ತಿದ್ದಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅರಮನೆಗೆ ಬರಲು ಒಪ್ಪುವರೇ ಎಂಬ ಅನುಮಾನ ನನಗೆ ಇದೆ ಎಂದು ಮಂತ್ರಿಯು ಹೇಳಿದನು. ಅದಕ್ಕೆ ರಾಜನು ಮಂತ್ರಿಗಳೆ, ನೀವು ರಥವನ್ನು ತೆಗೆದುಕೊಂಡು ಹೋಗಿ ಗೌರವಾದರದಿಂದ ಮಾತನಾಡಿಸಿ ಅವರನ್ನು ಹೇಗಾದರೂ ಮಾಡಿ ಅರಮನೆಗೆ ಕರೆತನ್ನಿ ಎಂದನು.  ರಾಜನ ಮಾತಿನಂತೆ ಮಂತ್ರಿ ರಥದಲ್ಲಿ ಹೊರಟು ಗುರುಗಳ ಆಶ್ರಮಕ್ಕೆ ಬಂದನು. ಗುರುಗಳನ್ನು ಕಂಡು ವಿನಯದಿಂದ ನಮಸ್ಕರಿಸಿ, ಸ್ವಾಮಿ ನಾನು ಅರಮನೆಯಿಂದ ಬಂದಿದ್ದೇನೆ. ನಮ್ಮ ರಾಜರ...

ದಿನಕ್ಕೊಂದು ಕಥೆ 1034

*🌻ದಿನಕ್ಕೊಂದು ಕಥೆ🌻* *ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು!* ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದ...

ದಿನಕ್ಕೊಂದು ಕಥೆ 1033

*🌻ದಿನಕ್ಕೊಂದು ಕಥೆ🌻* *ಬಡತನ ಸತ್ತು ಹೋದಾಗ* ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು. ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು . ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ...