Posts

Showing posts from December, 2024

ದಿನಕ್ಕೊಂದು ಕಥೆ 1128

*🌻ದಿನಕ್ಕೊಂದು ಕಥೆ🌻* *" ಅಳುಕು"*  ಸಾಯಂಕಾಲ , ಸಂಜಯ್ ಕಚೇರಿ ಕೆಲಸ ಮುಗಿಸಿ  ಮನೆಗೆ ಬಂದು ಗೇಟು ತೆರೆದು ಒಳಗೆ ಬರುತ್ತಿದ್ದಂತೆ, ವರಾಂಡದಲ್ಲಿ ಆರಾಮ ಕುರ್ಚಿ ಮೇಲೆ ಕುಳಿತಿದ್ದ ಆತನ ಎಪ್ಪತ್ತೆಂಟು ವರ್ಷದ ವಯೋವೃದ್ಧ ತಂದೆ ಗೋವಿಂದ ರಾಯರು ಆತನ ಕೈಯಲ್ಲಿ ಕಚೇರಿ ಬ್ಯಾಗ್ ಬಿಟ್ಟು ಮತ್ತಿನ್ಧೆನೂ  ಇಲ್ಲದಿರುವುದನ್ನು ಆಸೆ ಕಣ್ಣಿನಿಂದ ಒಮ್ಮೆ ಗಮನಿಸಿ -"ಏನೂ ತಂದಿಲ್ವೇನೋ..? ಹಿಂದೂ"ಎಂದು ಕೇಳಿದಾಗ ಆತ " ಇಲ್ಲಾ ಅಪ್ಪಾಜಿ" ಎನ್ನುತ್ತ ತನ್ನ ರೂಮಿಗೆ ಹೋಗುತ್ತಾನೆ.ಆತನ ತಂದೆ ಮೆಲ್ಲಗಿನ ಸ್ವರದಲ್ಲಿ  "ಹೋಗಲಿ ಬಿಡು" ಎನ್ನುವುದನ್ನು  ಕೇಳಿಸಿಕೊಂಡವ ತನ್ನಷ್ಟಕ್ಕೆ ತಾನು " ಛೇ.. ಎಂಥಾ ಕೆಲಸ ಮಾಡ್ದೆ" ಎಂದು ಅಂದು ಕೊಂಡು ಫ್ರೆಶ್ ಅಪ್ ಆಗಿ ಬಂದವ ಪತ್ನಿ ಕೊಟ್ಟ ಕಾಫೀ ಕುಡಿದು , ಕಚೇರಿಗೆ ಸಂಬಂಧಿಸಿದ ಯಾವುದೋ ಫೈಲ್ ತೆಗೆದುಕೊಂಡು ಬಂದು ವೆರಾಂಡಾ ದಲ್ಲಿ  ಆತನ ತಂದೆ ಕುಳಿತ ಕುರ್ಚಿ ಪಕ್ಕ ಇದ್ದ ಮತ್ತೊಂದು ಕುರ್ಚಿ ಮೇಲೆ ಕುಳಿತು,  ಕೈಯಲ್ಲಿ ಇದ್ದ ಫೈಲ್ ನೋಡುವ ಮೊದಲು ಅಪ್ಪನ ಮುಖ ಗಮನಿಸುತ್ತಾನೆ.ತನ್ನ ತಾಯಿ ತೀರಿ ಹೋದ ನಂತರ ಮೊದಲಿಗಿಂತ ಅವರು ದೈಹಿಕವಾಗಿ ಮಾನಸಿಕವಾಗಿ ಅಶಕ್ತ ರಾಗಿರುತ್ತಾರೆ . ಅವರನ್ನು ನೋಡುತ್ತಿದ್ದಂತೆ ಸಂಜಯ್ ನಿಗೆ ತನ್ನ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ.... ಬಾಲ್ಯದಲ್ಲಿ ನಿತ್ಯವೂ ಆತನ ತಂದೆ ಸಂಜೆ ಕಚೇರಿಯಿಂದ ಮನೆಗೆ ಬರುವಾಗ  ಮಕ್ಕಳು ಇಷ್ಟ ...

ದಿನಕ್ಕೊಂದು ಕಥೆ 1127

*🌻ದಿನಕ್ಕೊಂದು ಕಥೆ🌻* *ಬಾಲೆಯ ಕಾಲಿನಲ್ಲಿ ಚಪ್ಪಲಿಗಳು ಇರಲಿಲ್ಲವೆಂದು ಅವರಿಗೆ  ಜ್ಞಾಪಕಕ್ಕೆ ಬರುತ್ತಿತ್ತು !!!* 200 ವರ್ಷಗಳ ಹಿಂದೆ ಮಧುರೈ  ಬ್ರಿಟೀಷರ ಪ್ರಮುಖ ಕೇಂದ್ರವಾಗಿತ್ತು.ರೋಸ್ ಪೀಟರ್ ಎನ್ನುವವರು ಕಲೆಕ್ಟರ್ ಆಗಿ ನೇಮಕಗೊಂಡು ಅಲ್ಲಿಗೆ ಬಂದರು. ಕ್ರಿಶ್ಚಿಯನ್ ಆಗಿದ್ದ ಅವರು ಮೀನಾಕ್ಷಿ ದೇವಾಲಯದ ಹತ್ತಿರದ ಬಂಗಲೆಯಲ್ಲಿ ವಾಸವಿದ್ದರು.ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ  ಮೀನಾಕ್ಷಿಯ ದೇವಾಲಯ. ಅಲ್ಲಿಂದ ಅರ್ಧಕಿಲೋಮೀಟರ್ ದೂರದಲ್ಲಿ ಅವರ ಕಛೇರಿ. ಕಛೇರಿಗೂ ಮನೆಗೂ ಮಧ್ಯದಲ್ಲಿ ದೇವಾಲಯ. ಅವರೇನು ಮೀನಾಕ್ಷಿಯ ಭಕ್ತರಲ್ಲ. ಎಲ್ಲ ಧರ್ಮಗಳನ್ನೂ ಸಮನಾಗಿ  ಕಾಣುತ್ತಿದ್ದವರು.ಕಛೇರಿಗೆ ಕುದುರೆಯ ಮೇಲೆ ಹೋಗುತ್ತಿದ್ದ ಅವರು ದೇವಾಲಯದ ಹತ್ತಿರ ಬರುತ್ತಿದ್ದಂತೆ ಕುದುರೆಯಿಂದ ಕೆಳಗಿಳಿದು,ಹ್ಯಾಟ್ ಮತ್ತು ಶೂಸ್‌ನ್ನು ಕೈಯಲ್ಲಿ ಹಿಡಿದುಕೊಂಡು ನಡೆದು ಹೋಗುತ್ತಿದ್ದರು. ಕೆಲವಾರು  ವರ್ಷಗಳು  ಹೀಗೆ ನಡೆಯಿತು. ಒಮ್ಮೆ ನಾಲ್ಕು ದಿನಗಳಿಂದ ಮಧುರೈನಲ್ಲಿ ಎಡಬಿಡದೆ ವಿಪರೀತ ಮಳೆ ಸುರಿಯಿತು. ಪರಿಣಾಮವಾಗಿ ಇಡೀ ನಗರವೇ ನೀರಿನಿಂದ ತುಂಬಿ ಹೋಯಿತು. ಸಂಜೆಯ ಸಮಯ ಜೋರಾದ ಮಳೆ ಬರುತ್ತಿದ್ದಾಗ, ಪೀಟರ್ ಅವರು ಕಾಫಿ ಕುಡಿಯುತ್ತಾ  ಕಾದಂಬರಿಯೊಂದನ್ನು ಓದುತ್ತಿದ್ದರು. ಬಾಗಿಲು ತೆರೆದ ಶಬ್ದವಾಯಿತು!!. ಯಾರಿರಬಹುದೆಂದು ನೋಡಲು ಹೊರಗೆ ಬಂದರು. ಬಾಗಿಲು ಸ್ವಲ್ಪ ತೆರೆದಿತ್ತು . ಎಂಟುವರ್ಷದ ಮುದ್ದು ಮುಖದ ಹು...

ದಿನಕ್ಕೊಂದು ಕಥೆ 1126

*🌻ದಿನಕ್ಕೊಂದು ಕಥೆ🌻* *ಸಾವು ಬದುಕಿನ ನಡುವೆ* ಇದೊಂದು, ಪ್ರವಾಸಿಯೊಬ್ಬರು ಬರೆದ ಕಥೆ. ಒಂದು ಕುಟುಂಬದವರು  ರಜಾ ಕಳೆಯಲೆಂದು ಗೋವಾಕ್ಕೆ ಹೋಗಿದ್ದರು. ಒಂದು ದಿನ ಮುಂಜಾನೆ ಅಲ್ಲಿಯ  ಸಮುದ್ರ ತೀರಕ್ಕೆ  ಪರಿವಾರದವರೆಲ್ಲರೂ ಹೋದರು. ಸಮುದ್ರ ದಂಡೆಯ ಮೇಲೆ ಕುಳಿತು ಅದರ ಅಲೆಗಳ ಸುಂದರ ದೃಶ್ಯವನ್ನು ನೋಡುತ್ತಾ ಕುಳಿತಿದ್ದಾಗ ಮನೆಯ ಯಜಮಾನ, ಸಮುದ್ರದಲ್ಲಿ ನೀರಿಗಿಳಿದ.ಕೆಲವರಿಗೆ ನೀರನ್ನು  ಕಂಡಾಗ  ಇನ್ನೆಲ್ಲಿಲ್ಲದ  ಉತ್ಸಾಹ ಬಂದುಬಿಡುತ್ತದೆ.ಹಾಗೇ ಇವನಿಗೂ ಆಯಿತು.ನಿಧಾನವಾಗಿ   ನೀರಿನಿಂದ ಮುಂದೆ  ಮುಂದೆ ಸಾಗುತ್ತಾ ಎದೆ ಮಟ್ಟಕ್ಕೆ ನೀರು ಬರುವವರೆಗೂ ನಡೆದ. ದಡದ ಮೇಲಿದ್ದ ಅವರ ಕುಟುಂಬದವರು ಅವನನ್ನೇ ನೋಡುತ್ತಿದ್ದರು.        ಅವರೆಲ್ಲರೂ ನೋಡು ನೋಡುತ್ತಿರುವಂತೆ ದೊಡ್ಡ ಅಲೆಯೊಂದು ಬಂದು ಇವನನ್ನು ಒಳಗೆ ಎಳೆದುಕೊಂಡು ಬಿಟ್ಟಿತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ  ದೊಡ್ಡ ನೀರಿನ ಅಲೆ ಅವನನ್ನು  ಬಹಳ ದೂರಕ್ಕೆ ಎಳೆದುಕೊಂಡು ಹೋಗುತ್ತಿತ್ತು. ಈ ವ್ಯಕ್ತಿ ಕೆಳಗೆ ನೆಲವೇನಾದರೂ ಸಿಗುತ್ತದೆಯೇ ಎಂದು ನೋಡುತ್ತಿದ್ದಾಗ, ಅವನು ವಿಪರೀತದ ಆಳಕ್ಕೆ ಬಂದಿದ್ದರ ಅರಿವಾಯಿತು. ತೀರದಲ್ಲಿದ್ದ ಜನ ಅವನಿಗೆ ಚಿಕ್ಕ ಚಿಕ್ಕ ಬೊಂಬೆಗಳ ಹಾಗೆ ಕಾಣುತ್ತಿದ್ದರು. ಆತ ತನ್ನ ಶಕ್ತಿಯನೆಲ್ಲಾ ಬಿಟ್ಟು, ಜೋರಾಗಿ ಕಿರುಚಿದರೂ ಯಾವ ಪ್ರಯೋಜನವಾಗಲಿಲ್ಲ. ಹೀಗೆ ಇನ...