Posts

Showing posts from June, 2020

ದಿನಕ್ಕೊಂದು ಕಥೆ 981

ದಿನಕ್ಕೊಂದು ಕಥೆ  ಬೆರಗಿನ ಬೆಳಕು |  ಭಯದ ದಾರಿ ಹಿಂದೆ ಕಾಶ್ಯಪ ಸಮ್ಯಕ್ ಸಂಬುದ್ಧರ ಸಮಯದಲ್ಲಿ ವಾರಾಣಸಿಯನ್ನು ಉಸೀನರ ಎಂಬ ರಾಜ ಆಳುತ್ತಿದ್ದ. ಅವನು ತುಂಬ ಅಶಕ್ತ. ರಾಜ್ಯದಲ್ಲಿ ಧರ್ಮವನ್ನು ಕಡೆಗಣಿಸಲಾಗಿತ್ತು. ಬುದ್ಧ ತನ್ನ ಉಪದೇಶದಿಂದ ಜನರನ್ನು ಬಂಧನದಿಂದ ಬಿಡುಗಡೆಗೊಳಿಸಿ ನಿರ್ವಾಣ ಹೊಂದಿದ ಮೇಲೆ ಬಹಳ ಕಾಲದ ನಂತರ ಬುದ್ಧನ ಮಾತುಗಳು ಜನರಿಂದ ಮರೆಯಾಗತೊಡಗಿದವು. ಭಿಕ್ಷುಗಳು ಅನುಚಿತವಾದ ಮಾರ್ಗಗಳಿಂದ ಬದುಕತೊಡಗಿದರು, ಭಿಕ್ಷುಣಿಯರ ಸಂಗ ಮಾಡಲಾರಂಭಿಸಿದರು. ಅವರ ಸಂಸಾರಗಳು ನಡೆದವು. ಉಪಾಸಕರು ತಮ್ಮ ಉಪಾಸನೆಗಳನ್ನು ಮರೆತರು, ಬ್ರಾಹ್ಮಣರು ಬ್ರಾಹ್ಮಣ ಧರ್ಮವನ್ನು ಬಿಟ್ಟರು. ಎಲ್ಲರೂ ಬದುಕುವುದಕ್ಕಾಗಿ ಬುದ್ಧ ಪ್ರತಿಪಾದಿಸಿದ ಮೌಲ್ಯಗಳನ್ನು ಮರೆತು ಅನಾಚಾರಿಗಳಾದರು. ಆಗ ಸತ್ತವರೆಲ್ಲ ನರಕಕ್ಕೆ ಹೋದರು. ಹಿಂದೆ ಕಾಶ್ಯಪ ಸಮ್ಯಕ್ ಸಂಬುದ್ಧರ ಸಮಯದಲ್ಲಿ ವಾರಾಣಸಿಯನ್ನು ಉಸೀನರ ಎಂಬ ರಾಜ ಆಳುತ್ತಿದ್ದ. ಅವನು ತುಂಬ ಅಶಕ್ತ. ರಾಜ್ಯದಲ್ಲಿ ಧರ್ಮವನ್ನು ಕಡೆಗಣಿಸಲಾಗಿತ್ತು. ಬುದ್ಧ ತನ್ನ ಉಪದೇಶದಿಂದ ಜನರನ್ನು ಬಂಧನದಿಂದ ಬಿಡುಗಡೆಗೊಳಿಸಿ ನಿರ್ವಾಣ ಹೊಂದಿದ ಮೇಲೆ ಬಹಳ ಕಾಲದ ನಂತರ ಬುದ್ಧನ ಮಾತುಗಳು ಜನರಿಂದ ಮರೆಯಾಗತೊಡಗಿದವು. ಭಿಕ್ಷುಗಳು ಅನುಚಿತವಾದ ಮಾರ್ಗಗಳಿಂದ ಬದುಕತೊಡಗಿದರು, ಭಿಕ್ಷುಣಿಯರ ಸಂಗ ಮಾಡಲಾರಂಭಿಸಿದರು. ಅವರ ಸಂಸಾರಗಳು ನಡೆದವು. ಉಪಾಸಕರು ತಮ್ಮ ಉಪಾಸನೆಗಳನ್ನು ಮರೆತರು, ಬ್ರಾಹ್ಮಣರು ಬ್ರಾಹ್ಮಣ ಧರ್ಮವನ್ನು ಬಿಟ್ಟರು. ಎಲ್ಲ