Posts

Showing posts from July, 2021

ದಿನಕ್ಕೊಂದು ಕಥೆ 1013

*🌻ದಿನಕ್ಕೊಂದು ಕಥೆ🌻* *ಎರಡು ವಜ್ರಗಳು* ರಾಜಸ್ಥಾನದಲ್ಲಿ ವ್ಯಾಪಾರಿ ರಾಜಾಸಿಂಗ್ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ. ಅವನಿಗೆ ಸ್ವಂತ ಉಪಯೋಗಕ್ಕೆ ಒಂದು ಒಂಟೆ ಖರೀದಿಸಬೇಕು ಎನ್ನುವ ಆಸೆಯಿತ್ತು. ಅದೊಂದು ದಿನ ತನ್ನ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಒಂಟೆಗಳ ಜಾತ್ರೆಯ ಸುದ್ದಿ ಅವನ ಕಿವಿಗೆ ಬಿದ್ದಿತು. ಅಲ್ಲಿ ಒಂಟೆಗಳನ್ನು ನೋಡಲು ಮತ್ತು ಖರೀದಿಸಲು ಅವಕಾಶವಿತ್ತು. ತಡಮಾಡದೆ, ರಾಜಾಸಿಂಗ್ ಒಂಟೆಗಳ ಜಾತ್ರೆ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಂಬೆಳಗ್ಗೆ ಹೋದ. ಅಲ್ಲಿ ಹತ್ತಾರು ವ್ಯಾಪಾರಿಗಳು ನೂರಾರು ಒಂಟೆಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಿ ಇಟ್ಟಿದ್ದರು. ಜಾತ್ರೆಯ ಮೂಲೆಯೊಂದರಲ್ಲಿ ಒಂಟೆ ಮಾರುತ್ತಿದ್ದವನ  ಬಳಿಯಿದ್ದ ದೊಡ್ಡದೊಂದು ಒಂಟೆ ರಾಜಾಸಿಂಗ್ ಗಮನ ಸೆಳೆಯಿತು. ಅದನ್ನು ಚೆಂದಗೆ ಅಲಂಕರಿಸಿ ಹಳದಿ ಬಣ್ಣದ ದಪ್ಪ ಬಟ್ಟೆಯನ್ನು ಅದರ ಬೆನ್ನ  ಮೇಲೆ ಹೊದೆಸಿದ್ದರು. ಒಂಟೆ  ನೋಡಿ ಖುಷಿಯಾದ ರಾಜಾಸಿಂಗ್, ಅದನ್ನು ಕೊಳ್ಳಲು ಬಯಸಿ, ಅದರ ಮಾಲಿಕನ ಬಳಿ ಹೋಗಿ ಅದರ ದರ ಕೇಳಿದ. ಮಾಲಿಕ ಹೇಳಿದ ಬೆಲೆ ತುಸು ಹೆಚ್ಚಾಯ್ತು ಎನ್ನಿಸಿ ಅವನೊಂದಿಗೆ ಚೌಕಾಸಿಗಿಳಿದ. ಬಹಳ ಹೊತ್ತಿನವರೆಗೆ ಚೌಕಾಸಿ ನಡೆಯಿತು. ಬಳಿಕ ಒಂದು ಉತ್ತಮ ಬೆಲೆಗೆ ವ್ಯವಹಾರ ಕುದುರಿತು. ರಾಜಾಸಿಂಗ್ ಸಂತೋಷದಿಂದ ಒಂಟೆಯನ್ನು ಖರೀದಿಸಿ ಅದರ ಅಲಂಕಾರದ ಸಮೇತ ಮನೆಗೆ ಕೊಂಡೊಯ್ದ. ಮನೆಗೆ ಬಂದು, ಒಂಟೆಯನ್ನು ಮನೆಯ ಹೊರಗೆ ಕಟ್ಟಿ ಹೆಂಡತಿಯನ್ನು ಕರೆದು ಒಂಟೆ ಖರೀದಿಸಿದ

ದಿನಕ್ಕೊಂದು ಕಥೆ 1012

*🌻ದಿನಕ್ಕೊಂದು ಕಥೆ🌻* ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ... ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು   ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕದ್ರು         ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡದ್ರು... ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು               18 ಜನ ದೋಸಾ, 16 ಜನ ಪರೋಟ, 14 ಜನ ರೊಟ್ಟಿ, 12 ಜನ ಬ್ರೆಡ್ ಬಟರ್, 10 ಜನ ನೂಡಲ್ಸ್, 10 ಜನ ಇಡ್ಲಿಗೆ ವೋಟ್ ಮಾಡಿಬಿಟ್ರು ಈಗ ಯೋಚನೆ ಮಾಡಿ ಏನಾಗಿರಬಹುದೂಂತ?  ಆ ಹಾಸ್ಟೆಲ್ಲಿನ ಕ್ಯಾಂಟಿನ್ ‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ರು ಪಾಠ: ಎಲ್ಲಿಯವರೆಗೆ 80 ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ

ದಿನಕ್ಕೊಂದು ಕಥೆ 1011

ದಿನಕ್ಕೊಂದು ಕಥೆ "ಸುರಭಿ ಸ್ಕೂಲ್ಗೆ ಚಿನ್ನ ತರಬಾರದು ಅಂತ ಗೊತ್ತಿಲ್ವಾ ನಿನಗೆ " "ಸಾರ್ ಅದು ನಿನ್ನೆ ನನ್ನ ಹುಟ್ಟಿದ ಹಬ್ಬ ಇತ್ತು ಅಂತ ಅಮ್ಮ ಸರ ಹಾಕಿದ್ರು ವಾಪಸ್ ಕೊಡೋದು ಮರೆತೆ.. ಸಂಜೆ ಕೊಡೋಣ ಅಂತ ಬ್ಯಾಗ್ ಅಲ್ಲಿ ಇಟ್ಟಿದ್ದೆ ..ಈಗ ನೋಡಿದ್ರೆ ಇಲ್ಲ" "ಎಲ್ಲ ಕಡೆ ನೋಡಿದೆಯಾ,ಡೆಸ್ಕ್ ಬ್ಯಾಗ್ ಎಲ್ಲ" "ಹು ಸಾರ್ ಎಲ್ಲ ಕಡೆ ನೋಡಿದೆ" ಪ್ರಿನ್ಸಿಪಾಲ್ ಚೇಂಬರ್ ಅಲ್ಲಿ ಎಲ್ಲರ ಮುಖದಲ್ಲೂ ಒಂದು ರೀತಿಯ ದುಗುಡ ಗಾಬರಿ... ಸರಿ ನೀನು ಕ್ಲಾಸ್ಗೆ ಹೋಗು ನಾನು ಬರ್ತೀನಿ ಪ್ರಿನ್ಸಿಪಾಲ್ ಹೇಳಿದಾಗ ಕ್ಲಾಸ್ ಟೀಚರ್ ಜೊತೆ ತರಗತಿಗೆ ಬಂದಳು..10 ನಿಮಿಷದಲ್ಲಿ ಬಂದವರೇ "ಸುರಭಿದು ಚಿನ್ನದ ಚೈನ್ ಕಳುವಾಗಿದೆ ಯಾರು ತೊಗೊಂಡಿದಿರಾ ನಿಜ ಹೇಳಿ" ಇಡೀ ತರಗತಿಯಲ್ಲೂ ಪೂರ್ತಿ ನಿಶಬ್ದ... "ಸರಿ ..ನಿಮಗೆಲ್ಲ ಯಾರ ಮೇಲೆ ಆದ್ರೂ ಅನುಮಾನ ಇದೆಯಾ ಇದ್ರೆ ಹೇಳಿ..." ಎಲ್ಲರ ದೃಷ್ಟಿ ಕೊನೆ ಬೆಂಚ್ ಕೊನೆ ಹುಡುಗನ ಕಡೆ ಹೋಯ್ತು ಗಣೇಶ ಇದೆ ವರ್ಷ ಶಾಲೆಗೆ ಸೇರಿದ್ದ ಬಂದು ತಿಂಗಳು ಆಗಿತ್ತು ಪ್ರಾಂಶುಪಾಲರು ಕೋಪದಿಂದ "ಅದ್ಕೆ ಅವತ್ತೇ ನಿಮ್ ತಾಯಿಗೆ ಸೇರಿಸಿಕೊಳ್ಳೋದಿಲ್ಲ ಅಂತ ಹೇಳಿದೆ.. ನೀವೆಲ್ಲ ಸರಕಾರಿ ಶಾಲೆ ಮಕ್ಳು ಹೀಗೆ..ನಿಮಗೆಲ್ಲ ಶಿಸ್ತು ಅನ್ನೋದೇ ಗೊತ್ತಿರೋಲ್ಲ..ಓದು ಇರೋಲ್ಲ... ಅದರ ಜೊತೆ ಈ ಕಳ್ಳತನ ...ಸುಳ್ಳುತನಗಳು ಬೇರೆ" "ಸಾರ್ ಇಲ್ಲ ಸಾರ್ ನಾನು ಏನು ಕದಿ

ದಿನಕ್ಕೊಂದು ಕಥೆ 1010

*🌻ದಿನಕ್ಕೊಂದು ಕಥೆ 🌻* *ಜೋನ್ ಆಫ್ ಆರ್ಕ್* ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ ಮುಖ್ಯಸ್ಥರನ್ನು ಕಂಡು ತನಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಿಳಿಸಿದಳು. ಮೊದಮೊದಲು ಬಾಲಕಿಯ ಮಾತಿಗೆ ಫ್ರಾನ್ಸ್ ಸೈನಿಕರು ನಗುತ್ತಿದ್ದರು. ಆದರೆ, ಪಟ್ಟು ಬಿಡದ ಬಾಲಕಿ ಸೈನಿಕರನ್ನು ಹೂರಿದುಂಬಿಸಿದಳು. ಸೈನಿಕರಿಗೆ ಬಾಲಕಿಯ ಧೈರ್ಯ, ಕೆಚ್ಚಿದೆ ಮತ್ತು ಅವಳಿಗಿದ್ದ ರಾಷ್ಟ್ರಾಭಿಮಾನ ಮೆಚ್ಚುಗೆಯಾಯಿತು ಮತ್ತು ಬ್ರಿಟಿಷರ ದಬ್ಬಾಳಿಕೆಗೆ ರೋಸಿಹೋಗಿದ್ದ ಅವರು ಅವರು ಬಾಲಕಿಯಿಂದ ಸ್ಪೂರ್ತಿ ಪಡೆದವರಂತೆ ದೊರೆಯ ಮಾತನ್ನು ಲೆಕ್ಕಿಸದೆ ಆಂಗ್ಲರ ವಿರುದ್ಧ ದಂಗೆ ಎದ್ದರು. ಫ್ರಾನ್ಸ್ ಕಲಿಗಳ ಕೆಚ್ಚೆದೆಯ ಹೋರಾಟಕ್ಕೆ ಬ್ರಿ

ದಿನಕ್ಕೊಂದು ಕಥೆ 1009

*🌻ದಿನಕ್ಕೊಂದು ಕಥೆ 🌻* *ಜೋನ್ ಆಫ್ ಆರ್ಕ್* ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ ಮುಖ್ಯಸ್ಥರನ್ನು ಕಂಡು ತನಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಿಳಿಸಿದಳು. ಮೊದಮೊದಲು ಬಾಲಕಿಯ ಮಾತಿಗೆ ಫ್ರಾನ್ಸ್ ಸೈನಿಕರು ನಗುತ್ತಿದ್ದರು. ಆದರೆ, ಪಟ್ಟು ಬಿಡದ ಬಾಲಕಿ ಸೈನಿಕರನ್ನು ಹೂರಿದುಂಬಿಸಿದಳು. ಸೈನಿಕರಿಗೆ ಬಾಲಕಿಯ ಧೈರ್ಯ, ಕೆಚ್ಚಿದೆ ಮತ್ತು ಅವಳಿಗಿದ್ದ ರಾಷ್ಟ್ರಾಭಿಮಾನ ಮೆಚ್ಚುಗೆಯಾಯಿತು ಮತ್ತು ಬ್ರಿಟಿಷರ ದಬ್ಬಾಳಿಕೆಗೆ ರೋಸಿಹೋಗಿದ್ದ ಅವರು ಅವರು ಬಾಲಕಿಯಿಂದ ಸ್ಪೂರ್ತಿ ಪಡೆದವರಂತೆ ದೊರೆಯ ಮಾತನ್ನು ಲೆಕ್ಕಿಸದೆ ಆಂಗ್ಲರ ವಿರುದ್ಧ ದಂಗೆ ಎದ್ದರು. ಫ್ರಾನ್ಸ್ ಕಲಿಗಳ ಕೆಚ್ಚೆದೆಯ ಹೋರಾಟಕ್ಕೆ ಬ್ರಿ

ದಿನಕ್ಕೊಂದು ಕಥೆ 1008

*🌻ದಿನಕ್ಕೊಂದು ಕಥೆ🌻* *ಮನಃಶಾಂತಿ* ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು. ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ ಸೇವೆಯನ್ನು ಮಾಡುವುದರಿಂದ ನನಗೆ ರೋಗ ಬಂದರೆ ಏನು ಮಾಡಲಿ?’ ಎಂದು ಕೇಳಿದನು. ಅವನ ಈ ಸಂದೇಹವನ್ನು ಕೇಳಿ ಸ್ವಾಮೀ ವಿವೇಕಾನಂದರು ’ನೀನು ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿಯೂ ತಪ್ಪನ್ನು ಹುಡುಕುತ್ತಿರುವುದರಿಂದ ನಿನಗೆ ಮನಃಶಾಂತಿ ಸಿಗುತ್ತಿಲ್ಲ, ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.’ ಎಂದು ಹೇಳಿದರು. ಆಧಾರ : ಸನಾತನ ನಿರ್ಮಿತ ಗ್ರಂಥ – ಬೋಧಕಥಾ. ಸಂಗ್ರಹ:ವೀರೇಶ್ ಅರಸಿಕೆರೆ.

ದಿನಕ್ಕೊಂದು ಕಥೆ 1007

ದಿನಕ್ಕೊಂದು ಕಥೆ ಸರ್ವೋಚ್ಚ ತ್ಯಾಗ.......... ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ದೇಶದ ರಕ್ಷಣಾ ಸಚಿವಾಲಯಕ್ಕೆ ಒಂದು ಪತ್ರ ಬಂದಿತ್ತು. ಪತ್ರ ಬರೆದವರು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರಾಗಿದ್ದರು.  ಅವರ ಕೋರಿಕೆ ಹೀಗಿತ್ತು.  "ಸಾಧ್ಯವಾದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಹೊಂದಿದ ಸ್ಥಳವನ್ನು ನೋಡಲು ನನ್ನ ಹೆಂಡತಿ ಮತ್ತು ನನಗೆ ಅನುಮತಿ ನೀಡಬಹುದೇ? , ಅವನ ಸಾವಿನ ಮೊದಲ ವಾರ್ಷಿಕ ದಿನ 07/7/2000 ದಂದು ನನ್ನ ಕೋರಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಹಾಗು ಇದು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ ನಾನು ನನ್ನ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದಿತ್ತು...... ಪತ್ರವನ್ನು ಓದಿದ ಇಲಾಖೆ ಅಧಿಕಾರಿ, "ಅವರ ಭೇಟಿಯ ವೆಚ್ಚ ಏನೇ ಇರಲಿ, ನನ್ನ ಸಂಬಳದಿಂದ ಅದನ್ನು ಪಾವತಿಸುತ್ತೇನೆ, ಇಲಾಖೆಗೆ ಇಷ್ಟವಿಲ್ಲದಿದ್ದರೆ ಮತ್ತು ನಾನು ಶಿಕ್ಷಕ ಮತ್ತು ಅವರ ಹೆಂಡತಿಯನ್ನು ಅವರ ಏಕೈಕ ಮಗ ವೀರಮರಣ ಹೊಂದಿದ ಸ್ಥಳಕ್ಕೆ ಕರೆತರುತ್ತೇನೆ ಎಂದುಕೊಂಡು ಅವರನ್ನು ಅಲ್ಲಿಯ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಆದೇಶ ಹೊರಡಿಸುತ್ತಾರೆ. ಮೃತ ವೀರನ ನೆನಪಿನ ದಿನದಂದು ವೃದ್ಧ ದಂಪತಿಗಳನ್ನು ಸರಿಯಾದ ಗೌರವದಿಂದ ಪರ್ವತ ಶ್ರೇಣಿಗೆ ಕರೆತರಲಾಯಿತು.  ಅವರ ಮಗ ವೀರಸ್ವರ್ಗ ಪಡೆದ ಸ್ಥಳಕ್ಕೆ ಕರೆದೊಯ್ದಾಗ ಕರ್ತವ್ಯದಲ್ಲಿದ್ದ ಎಲ್ಲಾ ಸೈನಿಕರೂ ಅವರಿಗೆ ಗೌರವಪೂರ್ವಕವಾಗಿ ನಿಂತು ನಮಸ್ಕರಿಸಿದರು.  ಆದರೆ ಒಬ