Posts

Showing posts from October, 2019

ದಿನಕ್ಕೊಂದು ಕಥೆ 947

*🌻ದಿನಕ್ಕೊಂದು ಕಥೆ🌻* *ಏಕಾಂಗಿಯಾಗಿ 300 ಚೀನಿ ಸೈನಿಕರನ್ನು ಹೊಡೆದುರುಳಿಸಿದ್ದ ಜಸ್ವಂತ್‍ಸಿಂಗ್ ಯಶೋಗಾತೆಗೆ ಸ್ವತಃ ಚೀನೀಯರೇ ತಲೆಬಾಗಿದ್ದರು! ಈ ಯೋಧನ ಸಾಹಸಕ್ಕೊಂದು ಸೆಲ್ಯೂಟ್…* ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕತೆಯನ್ನು ಕೇಳುತ್ತಲೇ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ. ನಾವು ಇಲ್ಲಿ ಐಷಾರಾಮಿ ಜೀವನ ನಡೆಸುತ್ತಾ ನಮಗಿಷ್ಟ ಬಂದಂತೆ ಜೀವನ ನಡೆಸುತ್ತಿದ್ದೇವೆ. ಆದರೆ ನಮ್ಮ ದೇಶ ಕಾಯುವ ಯೋಧರು.. ಕುಟುಂಬ, ನಿದ್ದೆ, ಊಟ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಎಷ್ಟೇ ಚಳಿ ಇರಲಿ, ಮಳೆ ಇರಲಿ ದೇಶದ ರಕ್ಷಣೆಯ ವಿಚಾರ ಬಂದಾಗ ಗಡಿ ಬಿಟ್ಟು ಒಂದಿಂಚೂ ಕಾಲು ಹಿಂದೆ ಸರಿಸಲ್ಲ. ದೇಶ ಮೊದಲು ಎಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶ ಕಾಯುತ್ತಿರುತ್ತಾರೆ. ಇದು ನಮ್ಮ ಯೋಧರ ಕತೆ.. ಅಂತಹ ಪುಣ್ಯದ ಕೆಲಸ ಮಾಡೋಕೆ ನಿಜವಾಗಿಯೂ ಅಂತಹ ಮಹಾನ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಇಂತಹ ವೀರರಲ್ಲೊಬ್ಬರಾದ ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಯ ನುರಾನಂಗ್ ಎಂಬಲ್ಲಿ ಸುಮಾರು 300 ಚೀನಿ ಸೈನಿಕರನ್ನು ಹೊಡೆದುರಿಳಿಸಿದ ಜಸ್ವಂತ್ ಸಿಂಗ್ ರಾವತ್ ರನ್ನು ನಾವು ನೆನೆಪಿಸಲೇ ಬೇಕು. ಹೌದು ಅಂದು 1962 ಯುದ್ದದ ಕೊನೆಯ ಸಂದರ್ಭ ಆಗಿತ್ತು. ಚೀನಿ ಸೈನಿಕರು ಭಾರತೀಯ ಸೈನಿಕರ ಎದುರು ಪ್ರಬಲವಾಗಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ನೆಹರೂವಿನ ದುರಾಡಳಿತದಿಂದಾಗಿ ಸೈನಿಕರಿಗೆ ಬೇಕಾದ ಸವಲತ್ತುಗಳನ್ನು ಕೂಡ

ದಿನಕ್ಕೊಂದು ಕಥೆ 946

*🌻ದಿನಕ್ಕೊಂದು ಕಥೆ🌻* *ಮಾದರಿ ಅಧ್ಯಾಪಿಕೆ* ..💧 ................................ ನಾಪಿ ಪೆರಡಾಲ✍ ***************** *ಆಕಸ್ಮಿಕವಾಗಿ* ಸುಶೀಲಾ ಟೀಚರನ್ನು ಒಂದು ಬಟ್ಟೆ ಅಂಗಡಿ ಯಲ್ಲಿ ಭೇಟಿಯಾದೆ. ಹಲವಾರು ವರುಷಗಳ ನಂತರದ ಭೇಟಿಯಾಗಿತ್ತು ಅದು. ಟೀಚರಿಗೆ ನನ್ನ ಪರಿಚಯ ಸಿಕ್ಕಲು ಸಾದ್ಯತೆ ಕಡಿಮೆಯಾಗಿತ್ತು. ಪ್ರಾಯ ಸಾಧಾರಣ 80, 82 ಆಗಿರಬಹುದು. ಸಣ್ಣದಾಗಿ ಬಾಗಿದ ಬೆನ್ನು... ತಲೆಗೂದಲು ಹಣ್ಣಾಗಿದ್ದರೂ ಕೂದಲಿನ ಉದ್ದ ಕಡಿಮೆಯಾಗಿರಲಿಲ್ಲ. ಕನ್ನಡಕ ಧರಿಸಿದ್ದರೂ ಮುಖದ ವರ್ಚಸ್ಸು  ಮಾಸಿರಲಿಲ್ಲ. ಟೀಚರ್ ಕಾಣದಂತೆ ತಪ್ಪಿಸಿ ಕೊಂಡು ಹೋಗಬೇಕೆಂದುಕೊಂಡಿದ್ದೆ . ಟೀಚರ್ ಎಲ್ಲಿಯಾದರೂ ಆ ಹಳೆಯ ವಾಚು ಕಳ್ಳತನದ ಬಗ್ಗೆ ನೆನಪಿಸಿಕೊಂಡರೆ..... ಛೇ!! ನಾಚಿಕೆಯ ವಿಷಯ. ನನ್ನ ಜೊತೆಗೆ ಹೆಂಡತಿಯೂ ಇದ್ದಾಳೆ. ಅವಳೆಲ್ಲಿಯಾದರೂ ನನ್ನ ಪೂರ್ವ ಚರಿತ್ರೆ ತಿಳಿದರೆ.... ಟೀಚರನ್ನು ಕಾಣದಂತೆ ತಪ್ಪಿಸಿಕೊಳ್ಳುವುದೇ ಬುದ್ಧಿ. ಆದರೂ, ಸುಶೀಲಾ ಟೀಚರ್ ( ಚಿಟ್ಟೆ) ಅಂದು ಆ ವಿಷಯ ವನ್ನು ಆ ರೀತಿಯಲ್ಲಿ ಮುಗಿಸಿದರಿಂದಲ್ಲವೆ ನಾನು ದೊಡ್ಡ ಅವಮಾನದಿಂದ ಪಾರಾದದ್ದು.... ಇಲ್ಲದಿದ್ದರೆ .... ನೆನಪಿಸಿಕೊಳ್ಳಲೇ ಸಾದ್ಯವಿಲ್ಲ. ಗೋಪಾಲ ( ಕನ್ನಡಿ)ಮಾಶ್ ಸತ್ಯನಾರಾಯಣ ( ಗಡಿಬಿಡಿ)ಮಾಶ್ ,  ಸವಿತಾ(ಈಚ) ಟೀಚರ್ , ಇವರ್ಯಾರಾದರು ಆಗಿದ್ದರೆ ನಾನು ಅಂದೇ ಆತ್ಮಹತ್ಯೆ ಮಾಡಬೇಕಾಗಿ ಬರುತ್ತಿತ್ತು. ಸುಶೀಲಾ ಟೀಚರನ್ನು ಕಡೆಗಣಿಸಿ ಮುಂದೆ ಹೋಗಲು ಮನಸ

ದಿನಕ್ಕೊಂದು ಕಥೆ 945

*🌻ದಿನಕ್ಕೊಂದು ಕಥೆ🌻* *ಅವಮಾನದಿಂದಲೇ ಸನ್ಮಾನ ಅಂಥ ದೊಡ್ಡವರು ಸುಮ್ಮನೆ ಹೇಳಿಲ್ಲ!! ಅದಕ್ಕೆ ಬೆಸ್ಟ್ ಉದಾಹರಣೆ ಇದೆ* ಅವಮಾನದಿಂದಲೇ ಸನ್ಮಾನ ಅಂಥ ದೊಡ್ಡವರು ಸುಮ್ಮನೆ ಹೇಳಿಲ್ಲ!! ಅದಕ್ಕೆ ಬೆಸ್ಟ್ ಉದಾಹರಣೆ ಇದೆ ಸ್ನೇಹಿತರೇ ನಾವು ಈಗ ಬೇರೆಯವರು ಮಾಡಿದ ಅವಮಾನವನ್ನು ಹೇಗೆ ನಾವು ಯಶಸ್ಸಿನ ದಾರಿಯನ್ನಾಗಿ ಮಾಡಿಕೊಳ್ಳಬೇಕು ಎಂಬುದಕ್ಕೆ ಲ್ಯಾಂಬರ್ಗಿನಿ ಕಾರು ನಮಗೊಂದು ಉತ್ತಮ ಉದಾಹರಣೆಯಾಗಿದೆ ಲ್ಯಾಂಬರ್ಗಿನಿ ಕಾರು ನಮಗೆ ಒಂದು ಉತ್ತಮ ಉದಾಹರಣೆ ಹೇಗಾಗಿದೆ ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಆಟೋ ಮೊಬೈಲ್ ಲೋಕದಲ್ಲಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಲ್ಯಾಂಬೋರ್ಗಿನಿ ಕಾರಿನ ಇತಿಹಾಸವನ್ನು ನೀವು ತಿಳಿದುಕೊಂಡರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ ಹಾಗಾದರೆ ಈ ಇತಿಹಾಸವನ್ನು ನಿಮಗೂ ಕೂಡ ತಿಳಿಸಿಕೊಡುತ್ತೇವೆ ಈ ಮುಂದಿನ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಿ. ಪ್ರಪಂಚದಲ್ಲಿಯೇ ಅತಿ ಬೇಡಿಕೆಯಲ್ಲಿರುವ ಕಾರಾಗಿರುವ ಲ್ಯಾಂಬರ್ಗಿನಿ ಇದನ್ನು ಶ್ರೀಮಂತರು ಕೂಡ ತೆಗೆದುಕೊಳ್ಳುವುದಕ್ಕೆ ಒಂದು ಕ್ಷಣ ಯೋಚಿಸುತ್ತಾರೆ ,ಇನ್ನು ಇದರ ಫ್ಯೂಚರ್ಸ್ ಗಳನ್ನು ಕಂಡು ಅಚ್ಚರಿಗೊಳ್ಳುವ ಜನರು ಕೂಡ ಹೆಚ್ಚಾಗಿರುತ್ತಾರೆ ಇದರಲ್ಲಿ ಅಚ್ಚರಿಗೂ ಮತ್ತೆ ಯಶಸ್ಸಿನ ದಾರಿಗೆ ಹೇಗೆ ಸಂಬಂಧ ಎಂಬುದಕ್ಕೆ ಇದರ ಇತಿಹಾಸವನ್ನು ತಿಳಿದುಕೊಳ್ಳೋಣ. ಲ್ಯಾಂಬೋರ್ಗಿನಿ ಈ ಕಾರಿನ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ನಾವು ಸಾವಿರದ ಒಂಬ

ದಿನಕ್ಕೊಂದು ಕಥೆ 944

*🌻ದಿನಕ್ಕೊಂದು ಕಥೆ🌻* *ತಾಜಾ ಹಣ್ಣುಗಳನ್ನು  ತೆಗೆದುಕೊಳ್ಳಲೆಂದು ಹೊರಟಾಗ ತುಂಬಾ ಜನಸಂದಣಿ ಇರುವ ದಾರಿಯಲ್ಲಿ ಒಂದು ಅಂಗಡಿ ಕಾಣಿಸಿತು.  ಅಂಗಡಿಯಲ್ಲಿ ತರತರಹದ ಹಣ್ಣುಗಳು ಇದ್ದವು. ಆದರೆ ಅಂಗಡಿಯ ಯಜಮಾನ ಮಾತ್ರ ಎಲ್ಲೂ ಕಾಣಲಿಲ್ಲ.  ಹಣ್ಣುಗಳ ಬೆಲೆಯನ್ನು ಕಾಗದದ ಮೇಲೆ ಬರೆದು ಇಟ್ಟಿದ್ದಾರೆ. ಅಂಗಡಿಯ ಮಧ್ಯದಲ್ಲಿ ಒಂದು ಕಾಗದದ ಚೀಟಿ ನೇತಾಡುತ್ತಿತ್ತು.  ಅದು ನನ್ನನ್ನು ಆಕರ್ಷಿಸಿತು. ಕುತೂಹಲದಿಂದ ಅದರಲ್ಲಿ ಬರೆದಿರುವುದನ್ನು ಓದಿದೆ. *"ನನ್ನ  ತಾಯಿಯವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಸೇವೆ ಮಾಡಲು ನಾನು ಸದಾ ಅವರ ಬಳಿ ಇರಬೇಕಾಗಿದೆ. ಆದ್ದರಿಂದ ನೀವುಗಳು ನಿಮಗೆ ಬೇಕಾದ ಹಣ್ಣುಗಳನ್ನು ಪಡೆದು ಅದಕ್ಕೆ ಸರಿಯಾದ ದರವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಹಾಕಿ."* *ಎಂದು ಬರೆದಿತ್ತು .* *ನನಗೆ ಆಶ್ಚರ್ಯವಾಯ್ತು. ಈ ಕಾಲದಲ್ಲೂ ಇಂತಹ ಅಮಾಯಕರು ಇರುತ್ತಾರೆಯೇ ?* *ಯಾರಾದರೂ ಅವನ ಗಲ್ಲಾಪೆಟ್ಟಿಗೆಯನ್ನು ದೋಚಿದರೆ ಅವನ ಪರಿಸ್ಥಿತಿ ಏನು?  ಅವನ  ಅಮಾಯಕತ್ವ ಕಂಡು ನಗು ಸುಳಿಯಿತು.* *ಏನಾದರೂ ಆಗಲಿ ಇವನಿಗೆ ಈ ತರಹ ಮಾಡಬಾರದೆಂದು ತಿಳಿ ಹೇಳಬೇಕೆಂದು ನಿರ್ಣಯಿಸಿದೆ. ಸಾಯಂಕಾಲ ಅಂಗಡಿಗೆ ಬಂದು ಹಣವನ್ನು ತೆಗೆದುಕೊಳ್ಳಲು ಬರುತ್ತಾನಲ್ಲ ಆಗ ಅವನಿಗೆ ತಿಳಿ ಹೇಳಬೇಕೆಂದು  ಸಾಯಂಕಾಲ ಪುನ: ಅವನ ಅಂಗಡಿಯ ಬಳಿ ಹೋದೆ. ಅಂಗಡಿಯ ಮಾಲೀಕ ಹಣವನ್ನು ತೆಗೆದುಕೊಂಡು ಅಂಗಡಿಯನ್ನು ಮುಚ್ಚಲು ಮುಂದಾಗುತ್ತಿದ್ದಾನೆ. ನನ್ನನ್ನು ನಾನು ಪರಿಚಯಿಸಿಕೊ