Posts

Showing posts from February, 2024

ದಿನಕ್ಕೊಂದು ಕಥೆ 1101

*🌻ದಿನಕ್ಕೊಂದು ಕಥೆ🌻*    *ಆಕಸ್ಮಿಕ* "ಅಮ್ಮಾ, ನಿಂದೆಲ್ಲಾ ಸಾಮಾನು ಪ್ಯಾಕ್ ಆಯ್ತಾ? ಲಗೂ ನಡಿ, ಮತ್ತ ಗಾಡಿ ತಪ್ಪಿದ್ರ ಸಮಸ್ಯೆ ಆಗ್ತದ" ಮಗ ರಾಜುನ ಧ್ವನಿ ಕೇಳಿ ಚೀಲದೊಂದಿಗೆ ಹೊರ ಬಂದ ಅಂಬುಜಮ್ಮ, " ನಾ ತಯಾರಾಗಿ ಭಾಳ ಹೊತ್ತಾತು. ನೀನೇ ಲಗೂ ಬರಲಿಲ್ಲ ನೋಡು". ಅಮ್ಮನ ಮಾತು ಕೇಳಿದ ಮಗ ,"ಆತು ನಡಿ ನಡಿ, ಆಟೋ ತಂದೀನಿ, ಹೋಗೂಣಂತ" ಅಂದ. ರಾಜು ತನ್ನ ಮತ್ತ ತನ್ನಮ್ಮನ ಚೀಲವನ್ನು ಹೊರಗಿಟ್ಟು ಮನೆ ಬಾಗಿಲು ಹಾಕಿ ಕೀಲಿ ಹಾಕಿ ಅಮ್ಮನ ಜೊತೆ ಆಟೋ ಹತ್ತಿದ. ಇನ್ನೂ ಐದು ನಿಮಿಷ ಇರುವಾಗಲೇ ರೈಲು ನಿಲ್ದಾಣಕ್ಕೆ ಬಂದ ಅಮ್ಮ ಮಗ ಅಲ್ಲೇ ಒಂದು ಜಾಗ ಹಿಡಿದು ಗಾಡಿಯ ಹಾದಿ ಕಾಯುತ್ತಾ ಕೂತರು. ಬೆವರು ಒರೆಸುತ್ತ ಅಂಬುಜಮ್ಮ ಮಗನ ಕಡೆ ಹೆಮ್ಮೆಯಿಂದ ನೋಡಿದರು. ತನ್ನ ಎಷ್ಟೋ ದಿನಗಳ ಕನಸು ನನಸು ಮಾಡಲು ಮಗ ತನ್ನನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ನಾನು ಎಷ್ಟು ಪುಣ್ಯವಂತಳು ಎಂದುಕೊಂಡು ಇಂಥಾ ಮುತ್ತಿನಂಥಾ ಮಗನನ್ನು ಕೊಟ್ಟ ದೇವರಿಗೆ ಮನದಲ್ಲೇ ಕೈ ಮುಗಿದರು. ಅಮ್ಮ ಮಗ ಇಬ್ಬರೂ ಪವಿತ್ರವಾದ ಕಾಶಿ ಕ್ಷೇತ್ರಕ್ಕೆ ಬಂದಿಳಿದರು. ಮೊದಲು ಛತ್ರಕ್ಕೆ ಹೋಗಿ ಕೈ ಕಾಲು ತೊಳೆದು ಗಂಗಾಸ್ನಾನಕ್ಕಾಗಿ ನದಿಗೆ ಬಂದರು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬಂದರು. ಕಾಶಿಯಲ್ಲಿ ಇಳಿದಾಗಿನಿಂದ ತಾಯಿ ಮಗನ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಮಗನ ವಿಚಾರ ಲಹರಿಯೇ ಬೇರೆಯಾಗಿತ್ತು

ದಿನಕ್ಕೊಂದು ಕಥೆ 1110

*🌻ದಿನಕ್ಕೊಂದು ಕಥೆ🌻* *" ಸಹಾಯ"*   ನಿರ್ಮಲಾ , ಚಪಾತಿ ಹಿಟ್ಟು ಕಲೆಸಿ ಸಣ್ಣ ಪುಟ್ಟ ಕೆಲಸ ಪೂರೈಸಿದವಳು ಚಪಾತಿ ಮಾಡಲು ಗ್ಯಾಸ್ ಒಲೆ ಮೇಲೆ ತವಾ ಇಡಲು ಮುಂದಾದಾಗ, ಬಾಗಿಲಿನ ಬೆಲ್ ಶಬ್ದ ಆಗುತ್ತದೆ. ಗ್ಯಾಸ್ ಆಫ್ ಮಾಡಿ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದು ಬಾಗಿಲು ತೆರೆದು ನೋಡಿದಾಗ ಮೆಟ್ಟಿಲಿನ ಕೆಳಗೆ ಸುಮಾರು ಐವತ್ತು ವರ್ಷ ವಯಸ್ಸಿನ ನೋಡಲು ಹಳ್ಳಿಯವನಂತಿದ್ದ ವ್ಯಕ್ತಿ ತನ್ನ ಹದಿನಾರು ವರ್ಷ ದ ಮಗಳೊಂದಿಗೆ ನಿಂತಿರುತ್ತಾನೆ. ನಿರ್ಮಲಾ ಅವನನ್ನು ಭಿಕ್ಷುಕ ಎಂದು ತಿಳಿದವಳು " ಚಿಲ್ಲರೆ ಹಣ ಈಗ ಇಲ್ಲ ಮುಂದೆ ಹೋಗಪ್ಪಾ" ಎಂದಾಗ ಆತ ವ್ಯಕ್ತಿ " ಮೇಡಂ.. ನನಗೆ ಚಿಲ್ಲರೆ ಹಣ ಬೇಡಾ ಐವತ್ತು ಸಾವಿರ ರೂಪಾಯಿ ಬೇಕಾಗಿವೆ" ಎನ್ನುತ್ತಾನೆ.ಆಶ್ಚರ್ಯ ಮತ್ತು ವಿಚಿತ್ರ ದೃಷ್ಟಿಯಿಂದ ಆತನನ್ನು ನೋಡುತ್ತ -" ಎಲ್ಲಿಯವನಪ್ಪಾ ನೀನು.. ಏನು ಕೇಳ್ತಿದ್ದಿ ಅಂತ ಅದಾರೂ ಗೊತ್ತಾ? ಎಂದು ಪ್ರಶ್ನಿಸಿದಾಗ ಆತ ವಿನೀತನಾಗಿ " ಮೇಡಂ.. ನಾನು ಹುಬ್ಬಳ್ಳಿಯ ಹತ್ತಿರ ಇರುವ ಒಂದು ಹಳ್ಳಿಯಲ್ಲಿ ಇರುವವ. ನನಗೆ ನೀವು ಯಾರೆಂದು ಗೊತ್ತಿಲ್ಲ, ಏಕೆಂದರೆ ನಾನು ಇದೇ ಮೊದಲನೇ ಬಾರಿ ಮೈಸೂರಿಗೆ ಬರ್ತಾ ಇದ್ದೇನೆ " ಎನ್ನುತ್ತಾನೆ. ಮುಂದುವರೆದ ನಿರ್ಮಲಾ" ಇಷ್ಟೊಂದು ಹಣ..! ನನ್ನ ಬಳಿ ಇಲ್ಲಾ.. ಮುಂದೆ ಎಲ್ಲಾದರೂ ಹೋಗಿ ಪ್ರಯತ್ನ ಮಾಡು " ಎನ್ನುತ್ತಾಳೆ. ಅಷ್ಟಕ್ಕೇ ಸುಮ್ಮನಿರದ ಆ ವ್ಯಕ್ತಿ -" ಮೇಡಂ.

ದಿನಕ್ಕೊಂದು ಕಥೆ 1099

*🌻ದಿನಕ್ಕೊಂದು ಕಥೆ🌻*     *ಮೌನದ ಶಕ್ತಿ* ಒಬ್ಬ ರೈತ, ತನ್ನ ಮನೆಯ ಉಗ್ರಾಣವನ್ನು ಶುಚಿಗೊಳಿಸಿ, ದವಸ ಧಾನ್ಯ, ಬೇಳೆ ಕಾಳು ಸಾಮಾನು- ಸರಂಜಾಮುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ ಮಾಡುತ್ತಿದ್ದನು. ಶುಚಿ ಗೊಳಿಸುವಾಗ ಅದು ಹೇಗೋ ಅವನ ಕೈಯಲ್ಲಿದ್ದ ವಾಚು ಬಿದ್ದು ಹೋಯಿತು. ರೈತ ಚಿಕ್ಕವನಿರುವಾಗ ಅವನ ತಂದೆ ಪ್ರೀತಿಯಿಂದ ತೆಗೆದು ಕೊಟ್ಟ ವಾಚು. ರೈತನಿಗೆ ಅದರ ಮೇಲೆ ಬಹಳ ಅಭಿಮಾನ. ಕೆಲಸ ಬಿಟ್ಟು ಹುಡುಕ ತೊಡಗಿದ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಅವನಿಗೆ ಕೆಲಸ ಮಾಡಿದ ಆಯಾಸ, ವಾಚು ಕಳೆದು ಹೋದ ಬೇಸರ ಆಗಿತ್ತು. ಕೆಲಸ ಮುಂದುವರಿಸಲಾಗದೆ ಉಗ್ರಾಣ ಬಿಟ್ಟು ಹೊರಗೆ ಬರುತ್ತಾನೆ. ಮನೆಯ ಮುಂದಿನ ಅಂಗಳದಲ್ಲಿ ನಾಲ್ಕಾರು ಮಕ್ಕಳು ಸೇರಿಕೊಂಡು ಬುಗುರಿ ಆಡುತ್ತಿದ್ದರು. ಯೋಚಿಸಿದ ರೈತ, ಆ ಮಕ್ಕಳನ್ನು ಕರೆದು, ನೋಡಿ ಮಕ್ಕಳೇ ಉಗ್ರಾಣದಲ್ಲಿ ಕೆಲಸ ಮಾಡುವಾಗ ನನ್ನ ಕೈ ಗಡಿಯಾರ ಬಿದ್ದು ಕಳೆದು ಹೋಗಿದೆ. ನಾನು ಹುಡುಕಿದೆ ಸಿಗಲಿಲ್ಲ. ನೀವೆಲ್ಲ ಸೇರಿ ಹುಡುಕಿಕೊಟ್ಟರೆ ನಿಮಗೆ ಒಳ್ಳೆಯ ಬಹುಮಾನ ಕೊಡುವೆ ಎಂದನು. ಮಕ್ಕಳು ಬಹುಮಾನದಾಸೆಗೆ ಉಗ್ರಾಣದೊಳಗೆ ಹೋಗಿ ಎಲ್ಲಾ ಕಡೆ ಜಾಲಾಡಿ ಹುಡುಕಿದವು. ಯಾರಿಗೂ ವಾಚು ಸಿಗಲಿಲ್ಲ. ಮಕ್ಕಳಿಗೂ ಆಯಾಸವಾಗಿತ್ತು. ಸಂಜೆಯಾಗುತ್ತಿತ್ತು. ಮಕ್ಕಳು ಮನೆಗೆ ಹೊರಟವು. ಇನ್ನು ತನ್ನ ವಾಚು ಸಿಗುವುದಿಲ್ಲ ಎಂದು ರೈತ ಉಗ್ರಾಣದ ಬಾಗಿಲು ಹಾಕಲು ಹೊರಟಿದ್ದನು.‌ ಅಲ್ಲೇ ನಿಂತಿದ್ದ ಒಬ್ಬ ಬಾಲಕ, ಅಣ್ಣ ನನಗೆ ಇನ್ನೊಮ್ಮೆ ಗ

ದಿನಕ್ಕೊಂದು ಕಥೆ 1098

*🌻ದಿನಕ್ಕೊಂದು ಕಥೆ🌻* *ಕಲಿತ  ಯಾವುದೇ ವಿದ್ಯೆಯೂ ಎಂದೂ ಅಪ್ರಯೋಜಕ ವಲ್ಲಾ.*  ತರುಣನೊಬ್ಬ ಅಧ್ಯಾಪಕ ವೃತ್ತಿಗೆ ಹೊಸದಾಗಿ ಸೇರಿದ್ದ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವ ಪಾಠದ ಜೊತೆಗೆ ಬೇರೆ ಏನನ್ನಾದರೂ ಕಲಿಸಬೇಕೆನ್ನುವ ಹಂಬಲ ಅವನಿಗೆ. ಅವನ ಜೊತೆಯಲ್ಲಿರುವ ಅಧ್ಯಾಪಕರಿಗೆ, ತಮಗೆ ಕೊಟ್ಟ ಕೆಲಸ  ತಾವು ಮಾಡಿಕೊಂಡು ಹೋದರೆ ಸಾಕು , ಪಠ್ಯಪುಸ್ತಕದಲ್ಲಿ, ಇಲ್ಲದೇ ಇರುವುದನ್ನೆಲ್ಲ ಏಕೆ ಅಂಟಿಸಿಕೊಳ್ಳಬೇಕು ಎನ್ನುವ ಮನೋಭಾವ ಅವರದ್ದು.‌ಅವರು ಕೊಡುವ ಸಂಬಳಕ್ಕೆ  ಎಷ್ಟು ಮಾಡಬೇಕೊ ಅಷ್ಟು ಮಾಡಿದರೆ ಸಾಕು  , ಇಲ್ಲದೆ ಇರುವುದನ್ನು ಏಕೆ ಅಂಟಿಸಿಕೊಳ್ಳುತ್ತಿಯಾ ಎಂದು ಯುವ ಅಧ್ಯಾಪಕನಿಗೆ ಎಲ್ಲರೂ  ಬುದ್ಧಿ ಹೇಳುತ್ತಿದ್ದರು.     ಆದರೂ ,ಈ ಹೊಸ ಅಧ್ಯಾಪಕ, ಪಠ್ಯ ಪುಸ್ತಕದಲ್ಲಿರುವ ಪಾಠದ‌ ಜೊತೆಗೆ  ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕ ಹಾಗೆ ಏನನ್ನಾದರೂ ಹೇಳಿಕೊಟ್ಟು ಅವರ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸುತ್ತಿದ್ದ. ನಿಧಾನವಾಗಿ ಈ ಅಧ್ಯಾಪಕ ,ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚಿನವನಾದ. ಪಠ್ಯಪುಸ್ತಕದಲ್ಲಿರುವ ಬೇಸರ ಬರುವಂತ ಸಂಗತಿಗಳಿಗಿಂತ, ತಮ್ಮೊಳಗಿರುವ ಉತ್ಸಾಹಕ್ಕೆ ನೀರೆರೆಯುವ ಮೇಷ್ಟ್ರು, ಅವರಿಗೆ ಬಹಳ ಪ್ರಿಯವಾಗಿ ಕಾಣತೊಡಗಿದರು.ಎಲ್ಲಾ ಮಕ್ಕಳ ಬಾಯಲ್ಲೂ ಯವ‌ ಅಧ್ಯಾಪಕರ ಹೆಸರೇ.    ಈ ಅಧ್ಯಾಪಕರು ಗಿಡಮರಗಳನ್ನು ತೋರಿಸಿ, ‌ಅವುಗಳ  ಉಪಯೋಗದ‌ ಬಗ್ಗೆ ವಿವರಣೆ ‌ನೀಡಿ , ಪಶು ಪಕ್ಷಿಗಳನ್ನು ತೋರಿಸಿ,ಅವುಗಳ‌ ಚಲನ‌ವಲನ

ದಿನಕ್ಕೊಂದು ಕಥೆ 1097

*🌻ದಿನಕ್ಕೊಂದು ಕಥೆ🌻* *ಭಗವಂತನೇ ಕೊಟ್ಟ ಪಾಲು. ಸುಖ-ದುಃಖವೇಕೆ ?* ಅಯ್ಯಂಗಾರ್  ಬೇಕರಿಯಲ್ಲಿ , ನಾಲ್ಕಾರು ವರ್ಷಗಳಿಂದ ‘ಸುಬ್ಬು’ ಎಂಬ ಹುಡುಗ ಕೆಲಸ ಮಾಡುತ್ತಿದ್ದ. ನಂಬಿ ಕಸ್ತನಾಗಿದ್ದ. ಮಾಲೀಕರು ಕೊಡುವ ರಜೆಯ ಹೊರತು ತನಗಾಗಿ ಒಂದು ದಿನವೂ  ರಜಾ ತಗೊಂಡಿಲ್ಲ. ಒಳ್ಳೆಯ ನಿಯತ್ತಿನ ಹುಡುಗ (ಯುವಕ), ಮಾತು ಕಡಿಮೆ, ಅಚ್ಚುಕಟ್ಟಾದ  ಕೆಲಸ. ಅದೊಂದು ದಿನ ಇದ್ದಕ್ಕಿದ್ದಂತೆ, ಹೇಳದೆ ಕೇಳದೆ ರಜಾ ಹಾಕಿ ಅಂಗಡಿ ಕೆಲಸಕ್ಕೆ ಬರಲಿಲ್ಲ. ಅಯ್ಯಂಗಾರ್ ಯೋಚಿಸಿದರು ಈ ಹುಡುಗ ಒಂದು ದಿನವೂ ರಜೆ ಹಾಕಿಲ್ಲ ಯಾರಾದರೂ ಜಾಸ್ತಿ ಸಂಬಳ ಕೊಡುತ್ತೇವೆ ಎಂದು ಸೆಳೆದುಕೊಂಡರೋ ಏನೋ, ಅಥವಾ ಸಂಬಳ ಜಾಸ್ತಿ ಮಾಡಿಲ್ಲವೆಂಬ ಕೋಪವೋ ? ತರ್ಕಿಸಲಾಗದೆ, ಏನೇ ಆಗಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಇಷ್ಟು ಒಳ್ಳೆಯವರು ನಮಗೆ ಸಿಗುವುದಿಲ್ಲ. ನಾನೇ ಅವನಿಗೆ ಸಂಬಳ ಹೆಚ್ಚಿಸಿ ನಾಳೆ ಬಂದಾಗ ಹೇಳುತ್ತೇನೆ. ಆಗ ಅವನು  ಖುಷಿಯಾಗಿ ಹೇಳದೆ ಕೇಳದೆ ರಜಾ ತಗೊಳುವುದಿಲ್ಲ ಎಂದುಕೊಂಡರು.  ಎಂದಿನಂತೆ ಮರುದಿನ ಸುಬ್ಬು ಕೆಲಸಕ್ಕೆ ಬಂದ, ಮಾಲೀಕರು ಕರೆದು ನೋಡು ನಿನ್ನ ಸಂಬಳ ಹೆಚ್ಚಿಗೆ ಮಾಡಿದ್ದೇನೆ ಎಂದರು.  ಅವನು ಯಾವ  ಪ್ರತಿಕ್ರಿಯೆ ನೀಡದೆ ಸುಮ್ಮನೆ ನಕ್ಕು, ತಲೆ ಅಲ್ಲಾಡಿಸಿ ತನ್ನ ಕೆಲಸದಲ್ಲಿ ತೊಡಗಿಕೊಂಡ. ಈ ಹುಡುಗ ಕೃತಜ್ಞತೆಯನ್ನು ಹೇಳಲಿಲ್ಲ ಎಂದು ಅಯ್ಯಂಗಾರ್ ಅಂದುಕೊಂಡರು.ನಾಲ್ಕರು ತಿಂಗಳ ಕಳೆಯಿತು. ಹಿಂದಿನಂತೆಯೇ ಆತ ಹೇಳದೆ ಕೇಳದೆ, ಮತ್ತೊಂದು ರಜಾ ಹಾಕಿದ. ಈ ಸಲ

ದಿನಕ್ಕೊಂದು ಕಥೆ 1096

*🌻ದಿನಕ್ಕೊಂದು ಕಥೆ🌻*    *ಜೀವನ್ಮುಖಿ* ಒಂದು ಪಟ್ಟಣದಲ್ಲಿ,  ಬೇರೆ, ಬೇರೆ  ಹುದ್ದೆಯಲ್ಲಿದ್ದು ನಿವೃತ್ತರಾದ, ಹಿರಿಯರೆಲ್ಲಾ ಸೇರಿಕೊಂಡು ಒಂದು ಸಂಘವನ್ನು ಮಾಡಿಕೊಂಡಿದ್ದರು. ಇವರ ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಪಾಡಿಗೆ ಅವರವರ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಹಾಗಾಗಿ ಈ ಹಿರಿಯರಿಗೆಲ್ಲಾ ತಮ್ಮ ಮಕ್ಕಳ ಜವಾಬ್ದಾರಿ ಅಷ್ಟಾಗಿ ಇರಲಿಲ್ಲ. ಇವರುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದ್ದುದರಿಂದ , ಸುಮ್ಮನೆ ಏನೂ ಕೆಲಸವಿಲ್ಲದೆ ಕೂರುವುದರ ಬದಲು , ಸಮಾಜಕ್ಕೆ ಏನಾದರೂ ಸಹಾಯ ಮಾಡಿ  ,ತಾವೂ ಕೂಡ ಚಟುವಟಿಕೆಯಿಂದ ಇರಬಹುದು ಎಂದುಕೊಂಡು, ಇವರೆಲ್ಲ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದರು.    ಸಂಘಕ್ಕೆ ಒಂದು ಸ್ಥಳವನ್ನು ಗೊತ್ತು ಮಾಡಿಕೊಂಡಿದ್ದರು. ಪ್ರತಿದಿನ ಸಾಯಂಕಾಲ ಎಲ್ಲರೂ ಅಲ್ಲಿ ಸೇರಿ ಏನಾದರೂ ಚಿಂತನೆ ಮಾಡುತ್ತಿದ್ದರು. ಶಿಕ್ಷಕರಾಗಿ ನಿವೃತ್ತರಾದವರು, ಹತ್ತಿರದ ಕೊಳಗೇರಿಯಲ್ಲಿರುವ ಮಕ್ಕಳಿಗೆ ಆಗಾಗ ಪಾಠ ಹೇಳಿ ಕೊಡುವರು. ಇನ್ನೂ ಕೆಲವರು ಮನೆ,ಮನೆಗಳಿಗೆ ಹೋಗಿ, ನೈರ್ಮಲ್ಯದ ಬಗ್ಗೆ, ಮಾತನಾಡುತ್ತಾ  ಮನೆ ಮುಂದೆ ಕೊಳಕು ಹಾಕದಿರುವಂತೆ, ತಿಳುವಳಿಕೆ ನೀಡುತ್ತಿದ್ದರು. ಮತ್ತೆ ಕೆಲವರು ಯಾರಿಗಾದರೂ ಕಾಯಿದೆ,‌ ಕಾನೂನಿನ ವಿಷಯದಲ್ಲಿ, ಭೂ ವಿಚಾರದಲ್ಲಿ ಏನಾದರೂ ಮಾಹಿತಿ ಬೇಕಿದ್ದರೆ ಉಚಿತವಾಗಿ ಸಲಹೆ ನೀಡುತ್ತಿದ್ದರು. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಮಾಡಿಸಿ ಅವರನ್ನು ಸ್ವಾವಲಂಬಿಯಾಗುವಂತೆ ಮಾಡುತ್ತಿದ್ದರು. ಹೀಗೆ ಸಮಾಜದಲ್ಲಿ ಯಾವ

ದಿನಕ್ಕೊಂದು ಕಥೆ 1095

*🌻ದಿನಕ್ಕೊಂದು ಕಥೆ🌻*    *ಕೈ ತುತ್ತು* ಹಿಂದಿನ ವರ್ಷ ಗಂಡನು ತೀರಿಹೋದಾಗ, ನೆರೆಯವರು, ನೆಂಟರಿಷ್ಟರು ಯಾರೂ ಅಷ್ಟಾಗಿ ಸಹಾಯ ಮಾಡದೆ, ವಯಸ್ಸಾದ ತಾವೊಬ್ಬರೇ ಒದ್ದಾಡಿದ್ದು, ಮನದಲ್ಲಿ ಇನ್ನೂ ಅಚ್ಚಳಿಯದೆ ಹಾಗೇ ಉಳಿದಿತ್ತು. ಬೇರೆ ದೇಶದಲ್ಲಿದ್ದ ಸ್ವಂತ ಮಕ್ಕಳು ಕೂಡ, ಅಂತ್ಯಕ್ರಿಯೆಗೆ ಅಂತ ಅಲ್ಲಿಂದಲೇ ದುಡ್ಡು ಕಳಿಸಿ ಕೈತೊಳೆದುಕೊಂಡಿದ್ದರು. ಅದರಿಂದಲೇ ನಾಳೆ ಮಾಡಬೇಕಾದ ವರ್ಷದ ತಿಥಿಗೆ, ಅವರ್ಯಾರನ್ನು ಕರೆಯದೆ, ಶಾಲೆಯ ಒಂದಷ್ಟು ಮಕ್ಕಳಿಗೆ ಸರಳವಾಗಿ ಊಟ ಹಾಕುವುದಂತ ನಿರ್ಧರಿಸಿ, ಒಂದೈದು ಬುದ್ದಿವಂತ ಮಕ್ಕಳನ್ನು ಕಳಿಸಿಕೊಡಲು ಮೇಷ್ಟ್ರಿಗೆ ಹೇಳಿದ್ದರು. ಅವರ ಆರ್ಥಿಕ ಪರಿಸ್ಥಿತಿಯೂ ಈ ನಿರ್ಧಾರಕ್ಕೆ ಕಾರಣವಾಗಿತ್ತು.  ಬೆಳಗ್ಗೆಯೇ ಎದ್ದು ಯಜಮಾನರ ಫೋಟೋಗೆ ಪೂಜೆ ಮಾಡಿ, ಏಳೆಂಟು ಜನರಿಗೆ ಆಗುವಷ್ಟು ಅಡಿಗೆ ಮಾಡಿಟ್ಟು, ಮಕ್ಕಳಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಒಂದರ ಹೊತ್ತಿಗೆ, ".......ಊಟದ ಆಟ ಮುಗಿದಿತ್ತು" ಅಂತ ಹಾಡು ಹೇಳುತ್ತಾ, ಸಾಲಾಗಿ ಹದಿನೈದು-ಇಪ್ಪತ್ತು ಮಕ್ಕಳ ಗುಂಪೇ ಮನೆಗೆ ಬಂದಿದ್ದು ಕಂಡು ಅವರು ದಂಗಾಗಿ ಹೋದರು.  "ಹೇಗಪ್ಪಾ!! ಇಷ್ಟು ಮಕ್ಕಳಿಗೆ ಊಟ ಹಾಕೋದು, ಮೇಷ್ಟ್ರಿಗೆ ನಾನು ಹೇಳಿದ್ದು ಐದು ಜನ ಮಾತ್ರ, ಅವರೇನಾದರೋ ತಪ್ಪು ತಿಳಿದರೇ!!" ಅಂತ ಪೇಚಾಡುತ್ತಿರುವಾಗಲೇ ಮೇಷ್ಟು ಬಂದಿದ್ದು ಕಂಡಿತು. ಆಕೆಯ ಮುಖದ ಮೇಲೆ ಎದ್ದು ಕಾಣುತ್ತಿದ್ದ ಅವರ ಗೊಂದಲ ಅರ್ಥೈಸಿಕೊಂಡ ಮೇಷ್ಟ್ರು "ಅಮ್ಮಾ!

ದಿನಕ್ಕೊಂದು ಕಥೆ 1094

*🌻ದಿನಕ್ಕೊಂದು ಕಥೆ🌻* ಅದೊಂದು ಶಾಲೆ. ತುಸು ದೂರದಲ್ಲಿ ಒಂದು ಮನೆ. ಆ ಮನೆಯಲ್ಲಿ ಒಬ್ಬ ಮುದುಕ ವಾಸಿಸುತ್ತಿದ್ದಾನೆ. ಶಾಲೆಯಲ್ಲಿ ಮಕ್ಕಳು ವಸ್ತು ಪ್ರದರ್ಶನ ಏರ್ಪಡಿಸಿದ್ದಾರೆ. ಜನರು  ಪ್ರದರ್ಶನ ನೋಡಿ ಹೋಗುತ್ತಿದ್ದಾರೆ. ಹುಡುಗನೊಬ್ಬ ಟಾರ್ಚ್ ಸೆಲ್ಲಿಗೆ ಮತ್ತು ಬಲ್ಬಿಗೆ ಒಂದು ತಂತಿಯನ್ನು ಜೋಡಿಸಿದ್ದಾನೆ. ಜನರಿಗೆ ತಿಳಿಸುತ್ತಾನೆ, ನೋಡಿ ಸೆಲ್ಲನಿಂದ ಕರೆಂಟ್ ಹರಿದು ಬಲ್ಬ್ ಉರಿಯುತ್ತಿದೆ ಎಂದು. ಜನರು ಹುಡುಗನ ಜಾಣ್ಮೆಗೆ ತಲೆದೂಗುತ್ತಾರೆ. ಶಾಲೆಯ ಬಳಿಯಲ್ಲಿರುವ ಮುದುಕ ಪ್ರದರ್ಶನ ನೋಡಲು ಬರುತ್ತಾನೆ. ಹುಡುಗ ಅವನಿಗೂ ಕರೆಂಟ್ ಬಗ್ಗೆ ಹೇಳುತ್ತಾನೆ. ಮುದುಕ ಕೇಳುತ್ತಾನೆ ಮಗುವೇ ನೀನು ಕರೆಂಟ್ ನೋಡಿದ್ದೀಯಾ ಎಂದು? ಹುಡುಗನಿಗೆ ಗೊತ್ತಿಲ್ಲ. ಮುದುಕ ಹೊರಟು ಹೋಗುತ್ತಾನೆ. ಹುಡುಗ ಶಿಕ್ಷಕರ ಬಳಿ ಬಂದು ನಡೆದುದನ್ನು ಹೇಳುತ್ತಾನೆ. ಶಿಕ್ಷಕರಿಗೂ ಉತ್ತರ ಗೊತ್ತಿಲ್ಲ. ಇಬ್ಬರೂ ಪ್ರಿನ್ಸಿಪಾಲರ ಬಳಿ ವಿಷಯವನ್ನು ತಿಳಿಸುತ್ತಾರೆ. ಪ್ರಿನ್ಸಿಪಾಲರಿಗೂ ಉತ್ತರ ಗೊತ್ತಿಲ್ಲ. ಮೂವರೂ ಮುದುಕನ ಬಳಿ ಬರುತ್ತಾರೆ. ಪ್ರಿನ್ಸಿಪಾಲರು ಮುದುಕನಿಗೆ ನೀನು ಕರೆಂಟ್ ನೋಡಿದ್ದೀಯಾ ಎಂದು ಕೇಳುತ್ತಾರೆ. ಮುದುಕ ಇಲ್ಲ ಎನ್ನುತ್ತಾನೆ. ಹಾಗಾದರೆ ನಮ್ಮ ಹುಡುಗನಿಗೆ ಯಾಕೆ ನಿನಗೇ ಗೊತ್ತಿಲ್ಲದ ಪ್ರಶ್ನೆಯನ್ನ ಕೇಳಿದೆ ಎಂದು ಕೋಪಿಸುತ್ತಾರೆ. ಮುದುಕ ಹೇಳುತ್ತಾನೆ. ಕರೆಂಟ್ ಅನ್ನು ಯಾರೂ ನೋಡಲು ಸಾಧ್ಯವಿಲ್ಲ. ಉಪಯೋಗಿಸಬಹುದು. ಈ ಉತ್ತರವನ್ನು ನಾನು ಹುಡುಗನಿಂದ ನಿರೀ

ದಿನಕ್ಕೊಂದು ಕಥೆ 1093

*🌻ದಿನಕ್ಕೊಂದು ಕಥೆ🌻* *ಬೇರೆಯವರ ಬಗ್ಗೆ  ಹಬ್ಬಿಸುವ ಗಾಳಿಸುದ್ದಿಗಳು.* ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ. ಯಾವಾಗಲೂ ಇದೇ ಅವನ ಕೆಲಸ.    ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ  ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು  ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು . ವಿಚಾರಣೆಯೆಲ್ಲಾ ನೆಡೆದು,ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.     ಅವಮಾನಿತನಾದ ‌ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ.      ನ್ಯಾಯಾಲಯದಲ್ಲಿ  ಈ  ವ್ಯಕ್ತಿ, ನಾನು ಸುಮ್ಮನೆ ಅವನು ‌ಇದ್ರೂ ಇರಬಹುದು ‌ಎಂದು‌‌ ಅನುಮಾನದಿಂದ ಹೇಳಿದ್ದು, ಅದರಿಂದ ಈಗ  ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ. ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ  ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ  ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ

ದಿನಕ್ಕೊಂದು ಕಥೆ 1092

*🌻ದಿನಕ್ಕೊಂದು ಕಥೆ🌻* *ಇರುವೆ ಕಲಿಸಿದ ಪಾಠ* ಅವರು ಹೆಸರಾಂತ ಕಾಲೇಜಿನ ಬುದ್ಧಿವಂತ ಪ್ರೊಫೆಸರ್, ಅವರಿಗೆ ಬಿಡಿಸಲಾಗದ ಒಂದು ಸಮಸ್ಯೆ ಎದುರಾಯಿತು. ಚೆನ್ನಾಗಿ ಓದುತ್ತಿದ್ದ ಅವರ ಮಗ, ವಿದ್ಯಾಭ್ಯಾಸ ದ ಮುಖ್ಯ ಹಂತಕ್ಕೆ ಬಂದಾಗ, ದಾಟದೆ ಅಲ್ಲಿ ಫೇಲ್ ಆಗಿಬಿಟ್ಟ. ಇದರಿಂದ ಆ ಹುಡುಗ ಬೇಸರಗೊಂಡು ಓದುವುದನ್ನು ನಿಲ್ಲಿಸುತ್ತಾನೆ. ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಆತ ಏನನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಉತ್ಸಾಹ, ಧೈರ್ಯ ಕಳೆದುಕೊಂಡು, ಓದನ್ನು ನಿಲ್ಲಿಸಿ ಏನು ಮಾಡದೆ ಕೂತುಬಿಟ್ಟ. ಬೆಳೆಯುವ ವಯಸ್ಸು ಬೆಳೆದು ಯುವಕನಾಗುತ್ತಿದ್ದಾನೆ. ಎಲ್ಲಿ ಭವಿಷ್ಯವನ್ನೇ ಹಾಳು ಮಾಡಿ ಕೊಳ್ಳುವನೋ ಎಂದು ತಂದೆಗೆ ಭಯವಾಗಿ, ಕೊನೆಗೆ ಒಬ್ಬ ಗುರುಗಳ ಬಳಿ ಮಗನನ್ನು ಕರೆದುಕೊಂಡು ಬಂದು ತಮ್ಮ ಸಮಸ್ಯೆಯನ್ನು ಹೇಳಿ ಕೊಂಡರು. ಗುರುಗಳು ಆ ಬಾಲಕನನ್ನು ಏಳು ದಿನ ತಮ್ಮ ಬಳಿಗೆ ಕಳಿಸುವಂತೆ  ಹೇಳಿದರು. ಅದೇ ರೀತಿ ಮರುದಿನ ಹುಡುಗ ಗುರುಗಳ ಬಳಿ ಬಂದನು. ಗುರುಗಳು ಆತನಿಗೆ ದೂರದ ಬೆಟ್ಟದ ಮೇಲಿರುವ ಒಂದು ದೇವಸ್ಥಾನವನ್ನು ತೋರಿಸಿ, ನೋಡು ಮಗು ಈ ದೇವಸ್ಥಾನದ ಸುತ್ತಮುತ್ತ  ಒಂದು ಗಿಡ ಮರ ಹೂ ಬಳ್ಳಿಗಳು ಚಿಗುರುವುದಿಲ್ಲ. ಏಕೆಂದರೆ ಅಲ್ಲಿ ಲೆಕ್ಕವಿಲ್ಲದಷ್ಟು ಇರುವೆ ಗೂಡುಗಳಿವೆ. ಇದರಿಂದ ಗಿಡ ಮರಗಳು ಬೆಳೆಯುವುದಿಲ್ಲ.  ನೀನು ಅಲ್ಲಿರುವ ಇರುವೆ ಗೂಡುಗಳನ್ನು ನಾಶ ಮಾಡಬೇಕು. ಆದರೆ, ಒಂದೇ ಒಂದು ಇರುವೆಯ ಜೀವಕ್ಕೆ ಹಾನಿಯಾಗಬಾರದು ಎಂದರು. ಗುರುಗಳು ಹೇಳಿದಂತೆ ಆತ ಗು