Posts

Showing posts from August, 2019

ದಿನಕ್ಕೊಂದು ಕಥೆ 932

*🌻ದಿನಕ್ಕೊಂದು ಕಥೆ🌻* ಒಬ್ಬ ಆಭರಣ ವ್ಯಾಪಾರಿಯ ನಿಧನದ  ನಂತರ ಅವನ ವಿಧವೆ ಹೆಂಡತಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಳು ಮತ್ತು ಅವಳ ಸಂಸಾರವನ್ನು ನಡೆಸಲು ಹಣದ ಅಗತ್ಯವಿತ್ತು. ಅವಳು ತನ್ನ ಮಗನನ್ನು ಅವಳ ಭಾಮೈದನ ಆಭರಣದ ಅಂಗಡಿಗೆ ಕಳುಹಿಸಿ, ಅವಳ ನೀಲಮಣಿ ಹಾರವನ್ನು ತೆಗೆದುಕೊಂಡು ಹಾರಕ್ಕೆ ಬದಲಾಗಿ ಹಣವನ್ನು ಪಡೆದುಕೊಂಡು ಬರಲು  ಕಳುಹಿಸಿದಳು. ಹುಡುಗನ ಚಿಕ್ಕಪ್ಪ ಹಾರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, “ಮಗನೇ, ಈಗ ಮಾರುಕಟ್ಟೆ ಉತ್ತಮವಾಗಿಲ್ಲ. ಈ ಹಾರಕ್ಕೆ  ಉತ್ತಮ ಬೆಲೆ ಬಂದಾಗ  ಅದನ್ನು  ಮಾರಾಟ ಮಾಡಬಹುದು ಎಂದು ನಿನ್ನ ತಾಯಿಗೆ ತಿಳಿಸು ಎಂದು ಹೇಳಿ ಅವನಿಗೆ  ಸ್ವಲ್ಪ ಹಣವನ್ನು ಕೊಟ್ಟು ತನ್ನ ಅಂಗಡಿಯಲ್ಲಿ   ಕೆಲಸ ಮಾಡಿ ವ್ಯಾಪಾರವನ್ನು ಕಲಿಯುವಂತೆ  ಅವನನ್ನು ಒತ್ತಾಯಿಸಿದನು. ಹೀಗಾಗಿ, ಹುಡುಗ ತನ್ನ ಚಿಕ್ಕಪ್ಪನ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು ಮತ್ತು ಆಭರಣಗಳು ಮತ್ತು ಅಮೂಲ್ಯವಾದ ಕಲ್ಲುಗಳನ್ನು ಪರೀಕ್ಷಿಸುವ ಕಲೆಯನ್ನು ಕಲಿತನು. ಒಂದು ವರ್ಷದ ನಂತರ ಅವನು ಆಭರಣಗಳನ್ನು ಪರೀಕ್ಷಿಸುವಲ್ಲಿ ನಿಜವಾಗಿಯೂ ಉತ್ತಮನಾದನು. ಮತ್ತು ಶೀಘ್ರದಲ್ಲೇ ದೂರದ ಸ್ಥಳಗಳ ಜನರು ತಮ್ಮ ಆಭರಣಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೌಲ್ಯವನ್ನು ತಿಳಿದುಕೊಳ್ಳಲು ಅವನನ್ನು ಸಂಪರ್ಕಿಸಿಸಲು ಪ್ರಾರಂಭಿಸಿದರು. ಒಂದು ದಿನ ಅವನ ಚಿಕ್ಕಪ್ಪ ಅವನಿಗೆ, “ಮಗನೇ, ನಿನ್ನ ತಾಯಿಯ ಬಳಿಗೆ ಹೋಗಿ ಈಗ ಮಾರುಕಟ್ಟೆ ಉತ್ತಮವಾಗಿದೆ ಎಂದು ಹೇಳಿ ಮತ್ತು ಅವಳು

ದಿನಕ್ಕೊಂದು ಕಥೆ 931

*🌻ದಿನಕ್ಕೊಂದು ಕಥೆ🌻* *ಮರಣದಂಡನೆಗೆ ಒಳಗಾದ ಕುದುರೆಗೆ ಕರುಣೆ ತೋರಿದ ಮಕ್ಕಳು!* ಶಾಲಾ ಮಕ್ಕಳು ಕರುಣೆ ತೋರಿಸಿ ಕುದುರೆಯೊಂದರ ಪ್ರಾಣ ಉಳಿಸಿದ ಕುತೂಹಲಕಾರೀ ಘಟನೆಯೊಂದು ಇಲ್ಲಿದೆ. ಲಖನೌದ ಸೇನೆಯ ಕುದುರೆಯೊಂದಕ್ಕೆ ತುಂಬ ವಯಸ್ಸಾಗಿತ್ತು. ಅದು ನಿಷ್ಪ್ರಯೋಜಕವಾಗಿತ್ತು. ಸೇನೆಯ ನಿಯಮದಂತೆ ಮುದಿ ಕುದುರೆಯನ್ನು ಗುಂಡಿಕ್ಕಿ ಕೊಲ್ಲುವ ನಿರ್ಧಾರವಾಗಿತ್ತು. ಈ ಸುದ್ದಿ ಲಖನೌದ ದಿನಪತ್ರಿಕೆಯಲ್ಲಿ ಪ್ರಕಟವಾದಾಗ, ಸುಮನ್ ಎಂಬ ಎಂಟನೆಯ ತರಗತಿ ಶಾಲಾ ಬಾಲಕಿಗೆ ಅಯ್ಯೋ ಎನಿಸಿತು. ಆಕೆ ಶಾಲೆಯ ಬಳಿಯೇ ಇದ್ದ ಸೇನೆಯ ಕಚೇರಿಗೆ ಹೋದಳು. ಧೈರ್ಯದಿಂದ ಅಧಿಕಾರಿಗಳನ್ನು ಭೇಟಿಯಾದಳು. ಕುದುರೆಯನ್ನು ಕೊಲ್ಲಬೇಡಿರೆಂದು ಬೇಡಿದಳು. ಆದರೆ ಅವರು ಸೇನಾ ನಿಯಮಗಳನ್ನು ಉಲ್ಲೇಖಿಸಿ ಕೈಚೆಲ್ಲಿದರು. ಆಕೆ ಖಿನ್ನವದನಳಾಗಿ ಶಾಲೆಗೆ ಹೋದಳು. ತನ್ನ ಗೆಳತಿಯೊಂದಿಗೆ ಚರ್ಚಿಸಿದಳು. ನಾವೆಲ್ಲ ನಮ್ಮ ಪಾಕೆಟ್ ಮನಿಯನ್ನು ಒಟ್ಟುಗೂಡಿಸಿ ಕುದುರೆಯನ್ನು ಸೇನೆಯಿಂದ ಬಿಡಿಸಿಕೊಂಡು ಬಂದು ಅದನ್ನು ಸಾಕೋಣ ಎಂದು ಒಪ್ಪಿಸಿದಳು. ಸಂಜೆ ಎಲ್ಲರೂ ಭೇಟಿಯಾಗಿ ಕುದುರೆಯನ್ನು ಕೊಲ್ಲುವುದು ಬೇಡ. ನಮಗೆ ಕೊಟ್ಟರೆ ನಾವದನ್ನು ಸಾಕಿಕೊಳ್ಳುತ್ತೇವೆ ಎಂದು ಬೇಡಿದರು, ಕಾಡಿದರು. ಕುದುರೆಯನ್ನು ಪಡೆದರು. ನಡೆಸಿಕೊಂಡು ತಂದರು. ಕಾಲೋನಿಯಲ್ಲಿದ್ದ ಸಾರ್ವಜನಿಕ ಪಾರ್ಕಿನಲ್ಲಿ ಕುದುರೆಯನ್ನು ಕಟ್ಟಿಹಾಕಿದರು. ಬಾಲಕ–ಬಾಲಕಿಯರೆಲ್ಲ ಉತ್ಸಾಹದಿಂದ ಬರುತ್ತಿದ್ದರು. ಕುದುರೆಗೆ ಹುಲ್ಲು, ಹುರುಳಿ ತಿನ್ನ

ದಿನಕ್ಕೊಂದು ಕಥೆ 930

*🌻ದಿನಕ್ಕೊಂದು ಕಥೆ🌻* *ಬ್ರಿಟಿಷರನ್ನು ಕಂಗೆಡಿಸಿದ ಇನ್ನೊಬ್ಬ ವೀರ ಅಭಿಮನ್ಯು* ಆಜಾದ್ ಎಚ್.ಎಸ್.ಆರ್.ಎ. ಸಂಘಟನೆಯ ಪ್ರಧಾನ ದಂಡನಾಯಕನಾಗಿದ್ದಾಗ ಅನೇಕ ಯುವಕರನ್ನು ಸಂಸ್ಥೆಯತ್ತ ಆಕರ್ಷಿಸಿದ್ದ. ಹಲವು ಕಡೆ ಕಾರ್ಯಾಚರಣೆಗಳನ್ನು ನಡೆಸಿ ಹಣ ಸಂಗ್ರಹಿಸಿದ ಆಜಾದ್ ಕೆಲವು ಕೇಂದ್ರಗಳನ್ನೂ ತೆರೆದು ಅವುಗಳಿಗೆ ಒಬ್ಬೊಬ್ಬ ಪ್ರಮುಖನನ್ನು ನೇಮಿಸಿ ಜವಾಬ್ದಾರಿ ವಹಿಸಿದ್ದ. ಭಾರತದ ಸ್ವಾತಂತ್ರ್ಯದ ಸಲುವಾಗಿ ಸರ್ವಸ್ವವನ್ನೂ ಮುಡಿಪಿಟ್ಟು ಹೋರಾಡುತ್ತಿದ್ದ ಯುವ ಕ್ರಾಂತಿರತ್ನಗಳು ಒಂದು ಕಡೆಯಾದರೆ, ಮನೆಮುರುಕರು ಸ್ವಾರ್ಥಪಿಪಾಸೆಯಿಂದಾಗಿ ಕ್ರಾಂತಿ ಸಂಘಟನೆಗೆ ಕುಠಾರಾಘಾತ ಉಂಟು ಮಾಡಿದ್ದು ಇನ್ನೊಂದು ಕಡೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಭಗವತಿ ಚರಣ್, ದುರ್ಗಾಭಾಭಿ ಮುಂತಾದ ನೂರಾರು ಕ್ರಾಂತಿಕಾರಿಗಳು ತಮ್ಮ ಬೆವರು, ನೆತ್ತರುಗಳಿಂದ ಕ್ರಾಂತಿಸೌಧವನ್ನು ನಿರ್ವಿುಸಿದ್ದರೆ ಒಳಗೊಳಗೆ ಸುರಂಗ ಕೊರೆದು ಅದನ್ನು ಕೆಡವಿದ ದ್ರೋಹಿಗಳು ಕೆಲವರು. ಅಂಥವರ ಪೈಕಿ ಯಶ್​ಪಾಲ್, ವೀರಭದ್ರ ತಿವಾರಿ, ಫಣೀಂದ್ರ ಘೊಷ್ ಮುಂತಾದವರ ಜತೆ ಕಪ್ಪುಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದವನು ಕೈಲಾಸಪತಿ. ಅವನು ಸಂಸ್ಥೆಗೆ ದಾಖಲಾದಾಗ ಅಂಥ ದೌರ್ಬಲ್ಯಗಳಿಲ್ಲದ ಉತ್ತಮ ವ್ಯಕ್ತಿಯಾಗಿದ್ದ. ಆದರೆ ಬರಬರುತ್ತ ಭ್ರಷ್ಟ ಕ್ರಾಂತಿಕಾರಿಗಳ ಪ್ರಭಾವದಿಂದ ದಾರಿತಪ್ಪಿದ ಅವನಿಂದ ಕೆಲವರು ಕ್ರಾಂತಿಕಾರಿಗಳು ವಿನಾಕಾರಣ ಮೃತ್ಯುವನ್ನಪ್ಪಿ ಹುತಾತ್ಮರಾಗಬೇಕಾಗಿಬಂತು. ಸಾಲಿಗ್ರಾಮ ಶುಕ್ಲ

ದಿನಕ್ಕೊಂದು ಕಥೆ 929

*🌻ದಿನಕ್ಕೊಂದು ಕಥೆ🌻* ಹೆಂಡತಿ ಹೇಳಿದಳು - ರೀ ಇವತ್ತು ಪದೆ ಪದೆ ಬಟ್ಟೆ ಬದಲಿಸ ಬೇಡಿ.... ಯಜಮಾನ - ಯಾಕೆ ? ಹೆಂಡತಿ- ನಮ್ಮ ಮನೆ ಕೆಲಸದವಳು 3 ದಿನ ರಜೆಗೆ ಹೋಗುತ್ತಾಳೆ. ಯಜಮಾನ - ಯಾಕೆ ? ಹೆಂಡತಿ - ನಾವು ಅವಳಿಗೆ ಗಣಪತಿ ಹಬ್ಬಕ್ಕೆ ರಜೆ ಕೊಟ್ಟಿಲ್ಲ ನಮ್ಮ ಮನೆ ಕೆಲಸ ಹೆಚ್ಚಿದೆ ಎಂದು ಆದರಿಂದ ಅವಳು ಅವಳ ಮಗಳ ಮನೆಗೆ ಹೋಗಿಲ್ಲ ಈಗ ಹೋಗಿ ಮಮ್ಮಗಳನ್ನು ನೋಡಿ ಬರುತ್ತೇನೆ.... ನೆನಪಾಗುತ್ತಿದೆ ಎನ್ನುತ್ತಿದ್ದಳು ಅದಕ್ಕೆ ಹೋಗಿ ಬಾ ಎಂದೇ. ಯಜಮಾನ - ಹು.... ಕಣೆ ಸರಿ ಜಾಸ್ತಿ ಬಟ್ಟೆ ಬಳಸುವುದಿಲ್ಲ. ಹೆಂಡತಿ - ರೀ...... ಮತ್ತೆ ನಾನು ಅವಳಿಗೆ ಗಣಪತಿ ಹಬ್ಬದ ಬೋನಸ್ ಆಗಿ 500 ಕೊಡಲಾ? ಯಜಮಾನ - ಈಗ ದೀಪಾವಳಿ ಬರ್ತಾ ಇದೆಯಲ್ಲಾ ಆವಾಗ ಕೊಡೋಣ. ಹೆಂಡತಿ - ಇಲ್ಲ ರೀ, ಪಾಪ ಅವಳು ಕಡೂ ಬಡವಳು ಮಗಳ ಮನೆಗೆ ತನ್ನ ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಕಣ್ರೀ, ಈಗಿನ ದುಭಾರಿ ದುನಿಯಾದಲ್ಲಿ ಪಾಪ ಅವಳ ಸಂಬಳದಲ್ಲಿ ಏನು ಖರೀದಿ ಮಾಡಲು ಸಾಧ್ಯ? ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಪಾಪ ಕಣ್ರೀ. ಯಜಮಾನ - ನೀನು ಅವಶ್ಯಕತೆಗಿಂದ ಹೆಚ್ಚು ಜನರ ಪಾಪ ನೋಡ್ತಿಯ. ಹೆಂಡತಿ - ರೀ...... ಚಿಂತಿಸಬೇಡಿ ನಾನು ಇವತ್ತು ಪಿಜ್ಜಾ ತಿನ್ನುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಬಿಡುತ್ತೇನೆ...ಸುಮ್ನೆ ಯಾಕೆ ಆ ಎಂಟು ರೊಟ್ಟಿಯ ತುಂಡಿನ ಹಿಂದೆ 500 ರೂಪಾಯಿ ಹಾಕುವುದು ಅಲ್ವಾ ? ಯಜಮಾನ - ವಾರೇ ವ್ಹಾ.... ನಮ್ಮ ಬಾಯಿಂದ ಪಿಜ್ಜಾ ಕಸಿದು ಕೆಲಸದವಳಾಕ