Posts

Showing posts from October, 2018

ದಿನಕ್ಕೊಂದು ಕಥೆ 893

*🌻ದಿನಕ್ಕೊಂದು ಕಥೆ🌻* *ಮಹಾರಾಜರು ತಿನ್ನುತ್ತಿದ್ದುದು ಮೃಷ್ಟಾನ್ನವೋ? ತಂಗಳನ್ನವೋ?* ಮಹಾರಾಜರು ಏಕೆ ತಂಗಳನ್ನ ತಿನ್ನುತ್ತಿದ್ದರು ಎಂಬುದನ್ನು ಅರಿಯಲು ಇಲ್ಲಿರುವ ನಿಜಜೀವನದ ಪ್ರಸಂಗವನ್ನು ಓದಬೇಕು. ಇಲ್ಲೊಂದು ಪ್ರೇಮ್ ಕಹಾನಿ ಇದೆ. ಆತ ಮಾಜಿ ಮಹಾರಾಜರ ಒಬ್ಬನೇ ಮಗ. ಆಗರ್ಭ ಶ್ರೀಮಂತ. ಆಕೆ ಬಡವರ ಮನೆಯ ಹೆಣ್ಣುಮಗಳು. ಅಪರೂಪದ ರೂಪವತಿ ಮತ್ತು ಒಳ್ಳೆಯ ವಿದ್ಯಾರ್ಥಿನಿ. ಕಾಲೇಜಿನಲ್ಲಿ  ಕಂಡಾಕ್ಷಣವೇ ರಾಜಕುಮಾರ ಮರುಳಾದ. ಪ್ರೀತಿಸಿದ. ಮದುವೆಯ ಪ್ರಸ್ತಾಪವನ್ನೂ ಮಾಡಿದ. ಆದರೆ ಎರಡೂ ಕಡೆಯಿಂದ ವಿರೋಧಗಳು ಬಂದವು. ಆದರೆ ರಾಜಕುಮಾರ ಪಟ್ಟು ಹಿಡಿದದ್ದರಿಂದ ಮದುವೆ ನಡೆದೇ ಹೋಯಿತು. ಮದುವೆಗೆ ಮುಂಚೆ ಹುಡುಗಿಯ ತಂದೆ ‘ನಮ್ಮ ಮಗಳು ಬೆಳೆದು ಬಂದ ವಾತಾವರಣವೇ ಬೇರೆ. ಈಗ ಮಹಾರಾಜರ ಮನೆಗೆ ಸೇರಿದ ಮೇಲೆ ಆಕೆಯಿಂದ ಏನಾದರೂ ತಪ್ಪಾದರೆ, ಮಹಾರಾಜರು ಸಿಟ್ಟಿನಲ್ಲಿ ಏನೂ ಕ್ರಮ ತೆಗೆದುಕೊಳ್ಳಬಾರದು. ಆಕೆಯ ವಿವರಣೆ ಕೇಳಿ ನಂತರ ಕ್ರಮ ತೆಗೆದುಕೊಳ್ಳಬೇಕು’ ಎಂಬ  ಹಾಕಿದ್ದರಂತೆ. ಹುಡುಗಿ ಬುದ್ಧಿವಂತೆಯಾದದ್ದರಿಂದ ಆಕೆ ಮಾವನ ಮನೆಯಲ್ಲಿ ಚೆನ್ನಾಗಿ ಹೊಂದಿಕೊಂಡಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಒಂದು ದಿನ ಮಹಾರಾಜರು ಊಟಕ್ಕೆ ಕುಳಿತಿದ್ದಾಗ ಸೊಸೆಯೇ ಬಡಿಸುತ್ತಿದ್ದಳು. ಬೇಸಿಗೆಯ ಮಧ್ಯಾಹ್ನ. ಬಿಸಿಬಿಸಿ ಮೃಷ್ಟಾನ್ನ ಭೋಜನ. ಮಹಾರಾಜರು ‘ಉಫ್ ಉಫ್’ ಎನ್ನುತ್ತ ಊಟವನ್ನು ಸವಿಯುತ್ತಿದ್ದರು. ಆಗ ಒಬ್ಬ ಭಿಕ್ಷುಕ ಅರಮನೆಯ ಮುಂದೆ ನಿಂತು ಗಟ್ಟಿಯಾಗಿ

ದಿನಕ್ಕೊಂದು ಕಥೆ 892

*🌻ದಿನಕ್ಕೊಂದು ಕಥೆ🌻* *ಸಾಧ್ಯವೆಂದರೆ ಸಾಧ್ಯ! ಅಸಾಧ್ಯವೆಂದರೆ ಅಸಾಧ್ಯ!* ನವೆಂಬರ್ ಒಂದರಂದು ನಮಗೆಲ್ಲ ರಾಜ್ಯೋತ್ಸವದ ಸಂಭ್ರಮ. ಏಕೆಂದರೆ ಅಂದು ‘ಉದಯವಾಯಿತು ನಮ್ಮ ಚೆಲುವ ಕನ್ನಡನಾಡು’. ಬಹು ದೂರದ ಅಮೆರಿಕದಲ್ಲಿನ ಮಿಚಿಗನ್ ರಾಜ್ಯದ ಜನರಿಗೂ ಅಂದು ಸಂಭ್ರಮ. ಆದರೆ ಕಾರಣ ಮಾತ್ರ ಬೇರೆ! ಅವರ ರಾಜ್ಯದ ಎರಡು ಪ್ರಮುಖ ನಗರಗಳಾದ ‘ಮೆಕಿನಾ ಸಿಟಿ’ ಮತ್ತು ‘ಸೇಂಟ್ ಇಗ್ನೇಸ್’ಗಳನ್ನು ಜೋಡಿಸುವ  ಮೈಲಿ ಉದ್ದದ ತೂಗುಸೇತುವೆ 1957ರ ನವೆಂಬರ್ ಒಂದರಂದು ಜನರ ಉಪಯೋಗಕ್ಕೆ ಸಂಭ್ರಮ ಸಡಗರಗಳಿಂದ ತೆರೆಯಲ್ಪಟ್ಟಿತ್ತು! ಸಂಭ್ರಮಕ್ಕೆ ಕಾರಣ ನೋಡೋಣ! ಎರಡು ನಗರಗಳ ಮಧ್ಯೆ ಒಂದು ಆಳವಾದ, ಐದು ಮೈಲಿ ಅಗಲದ ಸರೋವರವಿದೆ. ಜನಗಳ, ವಾಹನಗಳ ಮತ್ತು ಸಾಮಾನು ಸರಂಜಾಮುಗಳ ಸಾಗಣೆ ಫೆರಿಗಳ (ದೊಡ್ಡ ಗಾತ್ರದ ದೋಣಿಗಳು) ಮೂಲಕವೇ ನಡೆಯಬೇಕಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಚಳಿಗಾಲದಲ್ಲಿ ಸರೋವರದ ನೀರು ಮಂಜುಗಟ್ಟಿದಾಗ ಸಂಪರ್ಕ ಕಡಿದೇ ಹೋಗುತ್ತಿತ್ತು. ಸೇತುವೆಯೊಂದರ ನಿರ್ಮಾಣ ಸಮಸ್ಯೆಗೆ  ಎಲ್ಲರೂ ಹೇಳುತ್ತಿದ್ದರು. ನಿರ್ಮಾಣದ ಬಗ್ಗೆ ಹಲವಾರು ದಶಕಗಳ ಕಾಲ ಚರ್ಚಿಸಲಾಯಿತು. ಅನೇಕ ಸಮಿತಿಗಳ ನೇಮಕವಾಯಿತು. ಆದರೆ ಎಲ್ಲರೂ ಸಮಸ್ಯೆಗಳ ಪಟ್ಟಿಯನ್ನೇ ಮಾಡಿ ಸೇತುವೆ ನಿರ್ಮಾಣ ಅಸಾಧ್ಯವೆಂದೇ ತೋರಿಸುತ್ತಿದ್ದರು. ಎಂಬತ್ತು ವರ್ಷಗಳಾದರೂ ಸೇತುವೆ ನಿರ್ಮಾಣವಾಗಲಿಲ್ಲ. ಕೊನೆಗೆ 1953ರಲ್ಲಿ ಡೇವಿಡ್ ಸ್ಟೇನ್ ಮ್ಯಾನ್ ಎಂಬ ಎಂಜಿನಿಯರನ್ನು ನೇಮಕ ಮಾಡಲಾಯಿತು.

ದಿನಕ್ಕೊಂದು ಕಥೆ 891

*🌻ದಿನಕ್ಕೊಂದು ಕಥೆ🌻* *ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುವುದು ಏಕೆ?* ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ. ಭಗವಾನ್ ರಮಣ ಮಹರ್ಷಿಗಳು ನಡೆದ ಪ್ರಸಂಗ. ಅವರ ಭಕ್ತರೊಬ್ಬರ ಬದುಕಿನಲ್ಲಿ ಮೇಲಿಂದ ಮೇಲೆ ಏನೇನೋ ಸಮಸ್ಯೆಗಳು ಎದುರಾಗುತ್ತಿದ್ದವು. ಸಾಕಪ್ಪಾ ಸಾಕು ಎನಿಸುವಂತೆ ಆಗುತ್ತಿತ್ತು. ಆಗ ಅವರು ಭಗವಾನರ ಬಳಿ ಬಂದು ತಮ್ಮ ಗೋಳನ್ನು ಹೇಳಿಕೊಂಡರು. ದೇವರಿಗೆ ತಮ್ಮ ಮೇಲೇನೋ ಕೋಪ ಬಂದಿರಬೇಕು. ಅವನು ನನಗಾಗಿ ಕಷ್ಟಗಳ ಸೃಷ್ಟಿ ಮಾಡಿ ಕಳುಹಿಸುತ್ತಿದ್ದಾನೆಂದು ಗೋಳಾಡಿದರು. ಕಷ್ಟಗಳ ಪರಿಹಾರಕ್ಕಾಗಿ ಮಾರ್ಗದರ್ಶನ ಮಾಡಬೇಕೆಂದು ಬೇಡಿಕೊಂಡರು. ಆ ಭಕ್ತರ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ಭಗವಾನರು ನಸುನಕ್ಕು ಅದಿರಲಿ! ನಿಮ್ಮ ಊರಿನಲ್ಲಿ ಮಡಿವಾಳರು ಹೇಗೆ ಶುಭ್ರಗೊಳಿಸುತ್ತಾರೆ? ಎಂದು ಕೇಳಿದರು. ಭಕ್ತರು ನಮ್ಮೂರಿನಲ್ಲಿ ಮಡಿವಾಳರು ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುತ್ತಾರೆ ಎಂದು ಹೇಳಿದರು. ಆಗ ಭಗವಾನರು ಮಡಿವಾಳರು ಬಟ್ಟೆಗಳನ್ನು ಬಂಡೆಯ ಮೇಲೆ ಎತ್ತೆತ್ತಿ ಬಡಿಯುತ್ತಿರುವುದು ಬಟ್ಟೆಗಳ ಮೇಲಿನ ಸಿಟ್ಟಿನಿಂದಲ್ಲ! ಹಾಗೆ ಎತ್ತೆತ್ತಿ ಬಡಿಯುವುದರಿಂದ ಬಟ್ಟೆಗಳು ಶುಭ್ರವಾಗುತ್ತವೆ. ಹಾಗೆಯೇ ನಿಮಗೆ ಕಷ್ಟಗಳು ಬಂದಿರುವುದು ದೇವರ ಸಿಟ್ಟಿನಿಂದಲ್ಲ. ಅವು ಬಹುಶಃ ನಿಮ್ಮನ್ನು ಗಟ್ಟಿಗೊಳಿಸಲು ಬಂದಿರಬೇಕು ಎಂದು ಸಮಾಧಾನ ಮಾಡಿದರಂತೆ. ಅದಾದ ನಂತರ ಕೆಲವೇ ದಿನಗಳಲ್ಲಿ ಆ ಒಳ್ಳೆಯ ಅವಕಾಶಗಳು ಬಂದೊದಗಿದವಂತೆ. ನಮ್ಮ ಚಿಂತನೆ

ದಿನಕ್ಕೊಂದು ಕಥೆ 890

*🌻ದಿನಕ್ಕೊಂದು ಕಥೆ🌻                                 ಬಡತನದಲ್ಲಿ ಬೆಳೆದ ವಿಜಯ ಸಂಕೇಶ್ವರ್ ಯಶಸ್ವಿ ಉದ್ಯಮಿಯಾಗಿದ್ದು ಹೇಗೆ ಗೊತ್ತಾ..?* ವಿಜಯ ಸಂಕೇಶ್ವರ್… ಇವತ್ತು ಈ ಹೆಸರು ಕೇಳದೇ ಇರೋರು ಯಾರೂ ಇಲ್ಲ..! ಯಶಸ್ವಿ ಉದ್ಯಮಿ. ಸಾರಿಗೆ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಸಾಧನೆಯ ಶಿಖರವನ್ನೇರೋ ಮಹಾನ್ ಸಾಧಕರು. ಇವತ್ತು ಇವರಿಗೆ ಕೀರ್ತಿ, ಹೆಸರು, ಹಣ, ಅನೇಕ ಜನರ ಪ್ರೀತಿ ಸಿಕ್ಕಿದೆ. ಇಷ್ಟೆಲ್ಲಾ ಸಂಪಾದಿಸೋಕೆ ಸಂಕೇಶ್ವರ್ ತುಂಬಾನೇ ಕಷ್ಟಪಟ್ಟಿದ್ದಾರೆ. ಹುಟ್ಟಿನಿಂದಲೇ ಕಷ್ಟದೊಂದಿಗೆ ಬೆಳೆದವರು. ಗದಗದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಇವರು ಇವತ್ತು ನಾಡಿನ ಹೆಸರಾಂತ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ತಾರೆ..! ಇವರ ತಂದೆ ಪುಸ್ತಕ ಪ್ರಕಾಶನ, ಮುದ್ರಣಾಲಯ ಆರಂಭಿಸಿದ್ರು. ಸಂಕೇಶ್ವರ್ 10ನೇ ತರಗತಿಯಲ್ಲಿರುವಾಗ, ಅಂದರೆ ತನ್ನ 15 ವರ್ಷದಲ್ಲಿ ಮುದ್ರಣಾಲಯದ ಜವಬ್ದಾರಿಯನ್ನು ಹೊತ್ತುಕೊಳ್ತಾರೆ. ಸಾಲ ಮಾಡಿ ಹೊಸ ಮುದ್ರಣ ಯಂತ್ರಗಳನ್ನು ಅಳವಡಿಸಿದ್ರು. 10ನೇ ತರಗತಿ ಮುಗಿದ ಬಳಿಕ ಕಾಲೇಜಿಗೆ ಹೋಗಬೇಕೆಂದು ವಿಜಯ ಸಂಕೇಶ್ವರ್ ಅವರ ಆಸೆ. ಆದರೆ, ಮುದ್ರಣಾಲಯಕ್ಕಾಗಿ ಸಾಲ ಮಾಡಿದ್ದೀಯ.. ಕಾಲೇಜಿಗೆ ಹೋದ್ರೆ ಇದನ್ನು ನೋಡಿಕೊಳ್ಳೋದು ಯಾರು? ಎಂಬುದು ಅವರ ತಂದೆಯ ಪ್ರಶ್ನೆಯಾಗಿತ್ತು..! ಎರಡನ್ನೂ ನಿಭಾಯಿಸುತ್ತೇನೆ, ಮುದ್ರಣಾಲಯಕ್ಕೆ ಮೊದಲ ಆಧ್ಯತೆ ನೀಡ್ತೀನಿ ಅಂತ ಕಾಲೇಜು ಮೆಟ್ಟಿಲೇರಿದ್ರು..! ಇವರ ಶಿಕ್ಷಣ ಕುಂಠುತ್ತ

ದಿನಕ್ಕೊಂದು ಕಥೆ 889

*🌻ದಿನಕ್ಕೊಂದು ಕಥೆ🌻* *ಬಂಗಾರವನ್ನು ಕಾಣುವವರಿಗೆ ಭಗವಂತ ಕಾಣುವುದಿಲ್ಲ !* ಬಂಗಾರದ ಮತ್ತು ಭಗವಂತನ ಕಾಣುವಿಕೆಯ ಬಗೆಗಿನ ಈ ಕತೆಯನ್ನು ಹೇಳಿದವರು ನಮ್ಮ ಸ್ವಾಮಿಅವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಬಹಳ ಹಿಂದೆ ಮಹಾರಾಷ್ಟ್ರದಲ್ಲಿ ರಮ್ಜಾ ಎಂಬ ಶ್ರೀಮಂತ ರೈತರಿದ್ದರಂತೆ. ಕುರಿಸಾಕಣೆ ಅವರ ವೃತ್ತಿ. ಅವರಿಗೆ ಖಂಡೋಬಾ ದೇವರಲ್ಲಿ ಅನನ್ಯ ಭಕ್ತಿ. ಖಂಡೋಬಾ ದೇವಸ್ಥಾನ ಪುಣೆಯ ಬಳಿಯಿರುವ ಜೇಬೂರಿಯಲ್ಲಿದೆ. ಒಕ್ಕಲುತನ ಮಾಡುವವರು, ಕುರುಬರು, ಬೇಡರು, ಯೋಧರು ಖಂಡೋಬಾ ದೇವರನ್ನು ‘ಖಂಡೇರಾವ್’, ‘ಖಂಡೇರಾಯ’, ‘ಮಲ್ಹಾರಿ’, ‘ಮಾರ್ತಾಂಡ’ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ. ಬಹಳ ನಂಬುತ್ತಾರೆ. ಮುಸಲ್ಮಾನರು ಈ ದೇವರನ್ನು ಮಲ್ಲೂ ಖಾನ್ ಅಥವಾ ಅಜ್ಮಲ್ ಖಾನ್ ಎಂಬ ಕರೆದರೆ, ಕನ್ನಡಿಗರು ’ಮೈಲಾರಲಿಂಗ’ ನೆಂದು ಪೂಜಿಸುತ್ತಾರೆ. ಸಾಮಾನ್ಯವಾಗಿ ಎತ್ತನ್ನೋ, ಕುದುರೆಯನ್ನೋ ವಾಹನವಾಗಿ ಹೊಂದಿರುವ ಖಂಡೋಬಾ ದೇವರು ಕೈಯಲ್ಲಿ ಖಟ್ವಾಂಗಿಯನ್ನು ಆಯುಧವಾಗಿ ಹಿಡಿದಿರುತ್ತಾರೆ. ಶ್ರೀಮಂತರಾದ ರಮ್ಜಾ ಅವರು ಖಂಡೋಬಾ ದೇವರ ಚಿನ್ನದ ಪ್ರತಿಮೆಯನ್ನು ಮಾಡಿಸಿಟ್ಟುಕೊಂಡಿದ್ದರು. ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಒಮ್ಮೆ ಇದ್ದಕ್ಕಿದ್ದಂತೆ ಸಾಂಕ್ರಾಮಿಕ ಪೀಡೆಗೆ ತುತ್ತಾಗಿ ರಮ್ಜಾರವರ ಸಾವಿರಾರು ಕುರಿಗಳು ಸಾವನ್ನಪ್ಪಿದವು. ದಿನಬೆಳಗಾಗುವುದರಲ್ಲಿ ರಮ್ಜಾ ಬರಿಗೈಯವರಾಗಿಬಿಟ್ಟರು. ಸಿರಿತನ ಮಾಯವಾಗಿತ್ತು. ಬಡತನ ಬಂದೆರಗಿತ್ತು. ಆದರೆ ಅವರು ದಿಕ್ಕೆಡಲಿಲ್ಲ. ಆತ್ಮಹ

ದಿನಕ್ಕೊಂದು ಕಥೆ 888

*🌻ದಿನಕ್ಕೊಂದು ಕಥೆ🌻*                                                                ಹಲ್ಲಿಯ ಮೊಟ್ಟೆಗಳನ್ನು ಹೆಚ್ಚಿನವರು ನೋಡಿರಬಹುದಲ್ವೇ ? ಹಲ್ಲಿಯು ಮೊಟ್ಟೆ ಇಟ್ಟ ದಿನ ಆ ಮೊಟ್ಟೆಯನ್ನು ಒಡೆದರೆ ಸ್ವಲ್ಪ ನೀರಿನಂತಹ ದ್ರಾವಕ ಮಾತ್ರ ಇರುವುದು ನಮಗೆ ಕಾಣಬಹುದು... ಭರ್ತಿ ಹನ್ನೊಂದು ದಿನದಲ್ಲಿ ಆ ದ್ರಾವಕವು ಹಲ್ಲಿಯಾಗಿ ಬದಲಾಗುತ್ತದೆ...! ಎಷ್ಟೊಂದು ಬಯೋಕೆಮಿಕಲ್ ಬದಲಾವಣೆ ಆ ಮೊಟ್ಟೆಯೊಳಗೆ ನಡೆಯುವುದು...!! ಒಂದು ಕೋಳಿ ಮೊಟ್ಟೆ ಇಟ್ಟ ನಂತರ ಇಪ್ಪತ್ತೊಂದನೆಯ ದಿನ ಕೊಕ್ಕು, ರೆಕ್ಕೆ, ಪುಕ್ಕ, ಮಾಂಸ, ಉಗುರುಗಳು ಎಲ್ಲವೂ ಇರುವ ಕೋಳಿ ಮರಿಯು ಹೊರಗೆ ಬರುತ್ತದೆ... ಸ್ವಲ್ಪ ಯೋಚಿಸಿ ನೋಡಿ ಸ್ನೇಹಿತರೆ - ಒಂದು ಒಡೆದು ಮರಿ ಹೊರಬರಲು ತಯಾರಾದ ಕೋಳಿ ಮೊಟ್ಟೆ ಮತ್ತು ಒಂದು ಬಾತುಕೋಳಿಯ ಮೊಟ್ಟೆಯನ್ನು ಒಂದು ಕೆರೆಯ ದಡದಲ್ಲಿ ನೀರಿನ ಹತ್ತಿರ ಇಡಿ. ನಂತರ ದೂರದಿಂದ ಗಮನಿಸುತ್ತಾ ಇರಿ. ಎರಡೂ ಮೊಟ್ಟೆಗಳಿಂದ ಮರಿಗಳು ಹೊರಗೆ ಬರುವುದನ್ನು ಕಾಣುವಿರಿ... ಕೋಳಿ ಮರಿಯು ನೀರನ್ನು ನೋಡಿದ ತಕ್ಷಣ ಭಯದಿಂದ ಹಿಂದೆ ಸರಿಯುತ್ತದೆ... ಆದರೆ ಬಾತುಕೋಳಿಯ ಮರಿಯು ನೀರಿನಲ್ಲಿ ಇಳಿದು ಈಜಾಡುತ್ತಾ ಆಟವಾಡುವುದನ್ನು ಕಾಣುತ್ತೀರಿ.... ಎರಡೂ ಮರಿಗಳು ಮೊಟ್ಟೆಯ ಒಳಗಿಂದಲೇ ಬಂದಿರೋದು ತಾನೇ? ಬಾತುಕೋಳಿಯ ಮರಿಗೆ ಈಜಾಡಲು ಕಲಿಸಿದ್ದು ಯಾರು? ಕೋಳಿ ಮರಿಗೆ ಭಯ ಹುಟ್ಟಿಸಿದವರು ಯಾರು? ಆ ಮರಿಗಳ ಮೆದುಳಿನಲ್ಲಿ ಬರೆದಿಟ್ಟಿದೆ... ಆ ಜ್ಞಾನವ