Posts

Showing posts from August, 2018

ದಿನಕ್ಕೊಂದು ಕಥೆ 867

*🌻ದಿನಕ್ಕೊಂದು ಕಥೆ🌻                                              ಪ್ರಧಾನಿಯ ಪದವಿ ಪರಮಾತ್ಮನೇ ಕೊಟ್ಟದ್ದು!* ಮೇಲಿನ ಮಾತುಗಳು ಆಶ್ಚರ್ಯ ಹುಟ್ಟಿಸುತ್ತವಲ್ಲವೇ? ಹೌದು, ಈ ಮಾತುಗಳನ್ನು ಹೇಳಿದವರು ಪುರಾತನ ಜರ್ಮನಿ ದೇಶದಲ್ಲಿನ ಪ್ರಷ್ಯಾ ರಾಜ್ಯದ ಪ್ರಧಾನಿಯೇ ! ಬಹಳ ಹಿಂದೆ ಪ್ರಷ್ಯಾದ ರಾಜಧಾನಿಯಲ್ಲಿ ಬಹುತೇಕ ಬಡವರ ಮಕ್ಕಳೇ ಮಾಡುತ್ತಿದ್ದ ಶಾಲೆಯೊಂದಿತ್ತು. ಒಮ್ಮೆ ಮಹಾರಾಜರು ನಗರ ಸಂಚಾರ ಶಾಲೆಯೊಳಕ್ಕೆ ಬಂದರಂತೆ. ಮಹಾರಾಜರನ್ನು ನೋಡಿ ಉಪಾಧ್ಯಾಯರು, ಮಕ್ಕಳು ಎದ್ದು ನಿಂತು ಗೌರವ ಸಲ್ಲಿಸಿದರು. ಕುಶಲೋಪರಿಯ ಮಾತನ್ನಾಡುತ್ತಾ ಮಹಾರಾಜರು ಉಪಾಧ್ಯಾಯರನ್ನು ಇಂದು ಯಾವ ಪಾಠ ಮಾಡುತ್ತಿದ್ದೀರಿ? ಎಂದು ಕೇಳಿದರು. ಉಪಾಧ್ಯಾಯರು ವಿನಯಪೂರ್ವಕವಾಗಿ ಮಹಾಸ್ವಾಮಿ! ಭೂಗೋಳದ ಪಾಠ ಮಾಡುತ್ತಿದ್ದೇನೆ ಎನ್ನುತ್ತಾ ಮೇಜಿನಮೇಲಿದ್ದ ಭೂಗೋಳವನ್ನು ತೋರಿಸಿದರು. ಮಹಾರಾಜರು ಭೂಗೋಳದ ಬಗ್ಗೆ ಮಕ್ಕಳಿಗೆ ನಾನೇನಾದರೂ ಪ್ರಶ್ನೆ ಕೇಳಲೇ? ಎಂದರು. ಉಪಾಧ್ಯಾಯರಿಗೆ ಒಳಗೊಳಗೇ ಹೆದರಿಕೆಯಿದ್ದರೂ, ಆಗಬಹುದೆಂದರು. ಮಹಾರಾಜರು ಬಾಲಕನೊಬ್ಬನನ್ನು ಮುಂದಕ್ಕೆ ಕರೆದರು. ಅಷ್ಟೇನೂ ಒಳ್ಳೆಯ ಧರಿಸಿರದ ಆ ಬಾಲಕ ಧೈರ್ಯವಾಗಿ ಮುಂದೆ ಬಂದ. ಮುಗುಳ್ನಗುತ್ತಾ ಮಹಾರಾಜರನ್ನು ದಿಟ್ಟಿಸಿ ನೋಡಿದ. ಮಹಾರಾಜರು : ನಾನು ಯಾರು ಗೊತ್ತೇನು? ಬಾಲಕ : ತಾವು ಪ್ರಷ್ಯಾ ರಾಜ್ಯದ ಮಹಾರಾಜರು. ಮ : ಪ್ರಷ್ಯಾ ರಾಜ್ಯವೆಲ್ಲಿದೆ? ಬಾ: ಪ್ರಷ್ಯಾ ರಾಜ್ಯ ಜರ್ಮನಿ ದೇಶದಲ್ಲಿದೆ! ಮ :

ದಿನಕ್ಕೊಂದು ಕಥೆ 866

*🌻ದಿನಕ್ಕೊಂದು ಕಥೆ🌻                                                    ಹಾಡುಗರು ನೀವು! ಕೇಳುಗರು ನಾವು! ದೇವರ ದಯೆ ಎಲ್ಲಿಂದ?* ಇಲ್ಲಿ ಎರಡು ಕುತೂಹಲಕಾರಿ ಘಟನೆಗಳು ಇವೆ. ಎರಡೂ ದೇವರ ದಯೆಯ ಬಗೆಗೇ ಇವೆ! ನಮ್ಮ ಸ್ವಾಮೀಜಿಯವರು ಉತ್ತಮ ಉಪನ್ಯಾಸಕರು ಮತ್ತು ಹಾಡುಗಾರರು. ಸಭೆಯಲ್ಲಿ ನೂರು ಜನರಿರಲಿ ಅಥವಾ ಸಾವಿರ ಜನರಿರಲಿ, ಅವರು ಸಭಿಕರತ್ತ ನೋಡುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಕಣ್ಮುಚ್ಚಿಕೊಂಡು ತನ್ಮಯರಾಗಿ ಸಭಿಕರೂ ಅಷ್ಷೇ ತನ್ಮಯರಾಗಿ ಕೇಳುತ್ತಿದ್ದರು. ಕಾರ್ಯಕ್ರಮದ ನಂತರ, ಸಭಿಕರು ಸ್ವಾಮೀಜಿಯವರ ಗಾಯನ ಅದ್ಭುತವಾಗಿತ್ತೆಂದು ಅಭಿನಂದಿಸಿದರೆ, ಅವರು ನಗುನಗುತ್ತಲೇ ನನ್ನದೇನಿದೆ? ಹಾಡುವ ಪ್ರಯತ್ನ ಮಾತ್ರ ನನ್ನದು! ಅದು ನಿಮಗೆ ಅದ್ಭುತವೆನಿಸಿದ್ದರೆ, ಅದೆಲ್ಲಾ ದೇವರ ದಯೆ! ಎಂದುಬಿಡುತ್ತಿದ್ದರು. ಒಮ್ಮೆ ಸ್ವಾಮೀಜಿಯವರು ಉಪನ್ಯಾಸ ಕಾರ್ಯಕ್ರಮದ ನಂತರ ಭಕ್ತರ ಮೆಚ್ಚುಗೆಗೆ ಯಾವಾಗಲೂ ಕೊಡುತ್ತಿದ್ದ ‘ಎಲ್ಲ ದೇವರ ದಯೆ’ ಎಂಬ ಉತ್ತರವನ್ನೇ ಕೊಟ್ಟಾಗ, ಆ ಭಕ್ತರೊಬ್ಬರು, ‘ಸ್ವಾಮೀಜಿ! ಹಾಡುಗರು ನೀವು! ಕೇಳುಗರು ನಾವು! ಇದರಲ್ಲಿ ದೇವರ ಎಲ್ಲಿಂದ ಬಂತು?’ ಎಂದು ಕೇಳಿದರು. ಸ್ವಾಮೀಜಿಯವರು ನಸುನಗುತ್ತಾ ನಾನು ಹಾಡಲು ಪ್ರಯತ್ನಿಸಬಹುದು. ಆದರೆ ನನಗೇ ಗೊತ್ತಿಲ್ಲದ ಕಾರಣಕ್ಕಾಗಿ ನನ್ನ ಗಂಟಲು ಕೆಡಬಹುದು. ಧ್ವನಿವರ್ಧಕ ಸರಿಯಾಗಿ ಕೆಲಸ ಮಾಡದಿರಬಹುದು. ಸಭೆಗೆ ಬರಲು ಕೇಳುಗರಿಗೆ ಸಾಧ್ಯವಾಗದಿರಬಹುದು. ಬಂದವರದ್ದೂ ಮನಸ್ಥಿತಿ ಸ

ದಿನಕ್ಕೊಂದು ಕಥೆ 865

*🌻ದಿನಕ್ಕೊಂದು ಕಥೆ🌻* *ಅಸ್ವಸ್ಥರು ಯಾರು? ರೋಗಿಯೋ? ವೈದ್ಯರೋ?* ಇದೆಂತಹ ಪ್ರಶ್ನೆ?  ಅಸ್ವಸ್ಥರಾಗಿರುತ್ತಾರೆಯೇ ಹೊರತು, ವೈದ್ಯರು ಅಸ್ವಸ್ಥರು ಯಾಕಾಗುತ್ತಾರೆ ಎನ್ನುವರು ಓದಬೇಕಾದ ಅರ್ಥಪೂರ್ಣ ಘಟನೆಯೊಂದು ಇಲ್ಲಿದೆ. ಗುಜರಾತಿನ ವ್ಯಾಪಾರಿಯೊಬ್ಬರು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವ್ಯಾಪಾರ ಮಾಡುತ್ತಿದ್ದರು. ಒಮ್ಮೆ ಮಾರುಕಟ್ಟೆಯಲ್ಲಿ ತೀವ್ರ  ಏರುಪೇರಾಗಿ ವ್ಯಾಪಾರಿಯು ಅಪಾರವಾದ ನಷ್ಟಕ್ಕೊಳಗಾದರು. ವ್ಯಾಪಾರಿಯು ಖಿನ್ನತೆಗೊಳಗಾದರಂತೆ. ಪ್ರತಿನಿತ್ಯ ಬರುತ್ತಿದ್ದ ನಷ್ಟದ ಕೆಟ್ಟಸುದ್ದಿಗಳನ್ನು ಕೇಳಿಕೇಳಿ ಅವರ ಆತ್ಮವಿಶ್ವಾಸ ಕುಸಿದುಬಿತ್ತು. ಅವರು ದಿವಾಳಿಯಾಗಿರಲಿಲ್ಲ. ಆದರೆ ದಿಗ್ಭ್ರಾಂತರಾಗಿದ್ದರು. ಈಗ ಅವರಲ್ಲಿ ಇನ್ನೂ ಇದ್ದ ನಗದು ಬಂಡವಾಳವನ್ನೇನು ಮಾಡಬೇಕು? ಇರುವ ಶೇರುಗಳನ್ನು ಮಾರುವುದೋ,  ಹೆಚ್ಚಾಗುವವರೆಗೆ ಕಾಯುವುದೋ ಎಂಬ ತೀರ್ಮಾನಗಳನ್ನು ತೆಗೆದುಕೊಳ್ಳುವುದೂ ಅವರಿಗೆ ಸಾಧ್ಯವಾುತ್ತಿರಲಿಲ್ಲ. ಸುಮ್ಮನೆ ಮಂಕು ಬಡಿದವರಂತೆ ಕುಳಿತಿರುತ್ತಿದ್ದರು. ಅವರ ಕೆಲಸಗಾರರು ಏನು ಮಾಡಬೇಕೆಂದು ಕೇಳಿದರೆ, ಏನೂ ಹೇಳದೆ ಸುಮ್ಮನೆ ಕುಳಿತುಬಿಡುತ್ತಿದ್ದರು. ಕೆಲವರು ಅಲ್ಲಿ ಶೇರು ಮಾರುಕಟ್ಟೆ ಕುಸಿದಿದೆ, ಇಲ್ಲಿ ಇವರ ಮನೋಸ್ಥೈರ್ಯ ಕುಸಿದಿದೆ, ಅಲ್ಲೂ ಡಿಪ್ರೆಷನ್, ಇಲ್ಲೂ ಡಿಪ್ರೆಷನ್ ಎನ್ನುತ್ತಿದ್ದರು. ಹೀಗಾಗಿ ವ್ಯವಹಾರದಲ್ಲಿ ಅನಿಶ್ಚಿತತೆ ತಲೆದೋರಿತು. ಎಲ್ಲವೂ ಸ್ಥಗಿತಗೊಂಡಿತ್ತು. ಆಗ ಅವರ ಕುಟುಂಬದವರು ಅವರನ್ನು ಮಾನಸಿಕ

ದಿನಕ್ಕೊಂದು ಕಥೆ 864

*🌻ದಿನಕ್ಕೊಂದು ಕಥೆ🌻                                          ಹೊರಗೆಲ್ಲ ಕುಡುಕರು!  ಒಬ್ಬ ಸಾಧಕರು!* ಕೆಲವು ತಾಯ್ತಂದೆಯರು ನಮ್ಮ ಹುಡುಗ ಒಳ್ಳೆಯವನು. ಆದರೆ ಅವರ ಸುತ್ತಲ ವಾತಾವರಣ ಒಳ್ಳೆಯದಿರಲಿಲ್ಲ. ಹಾಗಾಗಿ ಅವನು ಕೆಟ್ಟುಹೋದ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಸುತ್ತಲೂ ಕೆಟ್ಟದು ಎನ್ನಬಹುದಾದ ವಾತಾವರಣ ಇದ್ದರೂ ಸಾಧನೆಯನ್ನು ಕೈಬಿಡದ ಮಹನೀಯರ ಬಗೆಗಿನ ಎರಡು ಪುಟ್ಟ ಘಟನೆಗಳು ಇಲ್ಲಿವೆ. *ಮೊದಲನೆಯ ಘಟನೆ:* ಅದೊಂದು ಹೆಂಡದಂಗಡಿ. ಅಂಗಡಿಯ ತುಂಬೆಲ್ಲ ಗ್ರಾಹಕರು. ಕುಡಿಯುವವರು ಕುಡಿಯುತ್ತಿದ್ದರು. ತಿನ್ನುವವರು ತಿನ್ನುತ್ತಿದ್ದರು.  ಹರಟೆ ಹೊಡೆಯುವವರು ಹರಟೆ ಹೊಡೆಯುತ್ತಿದ್ದರು. ಅವರಿಗೆ ಆಹಾರ-ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ ಕೆಲಸಗಾರರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಭರಭರ ಓಡಾಡುತ್ತ ಕೆಲಸ ಮಾಡುತ್ತಿದ್ದರು. ಅಂಗಡಿಯ ತುಂಬೆಲ್ಲ ಗದ್ದಲವೋ ಗದ್ದಲ. ಮೂಲೆಯಲ್ಲಿ ಒಂದು ಕುರ್ಚಿ-ಮೇಜಿತ್ತು. ಅಲ್ಲೊಬ್ಬ ಕ್ಯಾಷಿಯರ್ ಕುಳಿತಿದ್ದರು. ಹತ್ತು ಹದಿನೈದು ನಿಮಿಷಕ್ಕೊಮ್ಮೆ ಕೆಲಸಗಾರರು ತಂದು ಕೊಡುತ್ತಿದ್ದ ಬಿಲ್ಲಿಗೆ ಸರಿಯಾಗಿ ಲೆಕ್ಕ ಮಾಡಿ ಹಣ ತೆಗೆದುಕೊಳ್ಳುತ್ತಿದ್ದರು. ಉಳಿದ ಚಿಲ್ಲರೆ ಅವರಿಗೆ ವಾಪಸ್ಸು ಕೊಡುತ್ತಿದ್ದರು. ಮತ್ತೆ ಮುಂದಿನ ಬಿಲ್ ಬರುವವರೆಗೆ ತಮ್ಮ ಪಾಡಿಗೆ ತಾವು  ಆದರೆ ಸುಮ್ಮನೆ ಕುಳಿತಿರುತ್ತಿರಲಿಲ್ಲ. ಅವರ ಕೈಯ್ಯಲ್ಲಿ ‘ವಿಶ್ವವಿಜೇತ ಸ್ವಾಮಿ ವಿವೇಕಾನಂದ’ ಪುಸ್ತಕವಿತ್ತು. ಅದನ್ನೋದು

ದಿನಕ್ಕೊಂದು ಕಥೆ 863

*🌻ದಿನಕ್ಕೊಂದು ಕಥೆ🌻                                                 ಇರುವ ಕೆಲಸವ ಮಾಡು ಕಿರಿದೆನದೆ ಮನಸಿಟ್ಟು!* ನಮಗೆ ಈಗಿರುವ ಕೆಲಸಕ್ಕಿಂತ ದೊಡ್ಡ ಕೆಲಸವಿದ್ದರೆ, ಇನ್ನೂ ಏನೇನೋ ಸಾಧಿಸಿಬಿಡುತ್ತಿದ್ದೆವು ಅಂತ ಆಗಾಗ ಅನಿಸುತ್ತದಲ್ಲವೇ? ಆದರೆ ಕೈಯಲ್ಲಿದ್ದ ಕಡಲೇಕಾಯಿ ಬೀಜವನ್ನು ಉಪಯೋಗಿಸಿ ಹಿರಿಯ ಸಾಧನೆ ಮಾಡಿದ ಗಣ್ಯರೊಬ್ಬರ ಬದುಕಿನ ಕುತೂಹಲಕಾರಿ ಕತೆ ಇಲ್ಲಿದೆ. ಮನೆಯಲ್ಲಿ, ಗುಲಾಮಗಿರಿಯಲ್ಲಿ ನರಳುತ್ತಿದ್ದ ಕುಟುಂಬದಲ್ಲಿ, ಹುಟ್ಟಿ ಬೆಳೆದರೂ ಸ್ವಪ್ರಯತ್ನದಿಂದ ಮೇಲಕ್ಕೆ ಬಂದು ವಿಜ್ಞಾನಿ, ಸಂಶೋಧಕ, ಸಸ್ಯಶಾಸ್ತ್ರಜ್ಞ ಎಂಬಿತ್ಯಾದಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಡಾ.ಜಾರ್ಜ್ ವಾಷಿಂಗ್ಟನ್ ಕಾವರ್ರ. ಅವರು ವಿಶೇಷ ಬಗೆಯ ವಿಜ್ಞಾನಿ ಮತ್ತು ಸಂಶೋಧಕ ಏಕೆಂದರೆ ಅವರು ಕಡಲೇಕಾಯಿ ಬೀಜವನ್ನುಪಯೋಗಿಸಿ ಮುನ್ನೂರಕ್ಕು ಹೆಚ್ಚು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿದರು. ಅವುಗಳಲ್ಲಿ ನೂರೈದು ತಿನ್ನುವ ಪದಾರ್ಥಗಳು! ಅವರು ಕಡಲೇಕಾಯಿ ಬೀಜದಿಂದ ಇನ್ನೂರಕ್ಕೂ ಹೆಚ್ಚು ಸೌಂದರ್ಯ ಪ್ರಸಾದನ ವಸ್ತುಗಳು, ಪೇಯಿಂಟುಗಳು, ಡೈಗಳು, ವಸ್ತುಗಳು, ನೈಟ್ರೋಗ್ಲಿಸ ಮುಂತಾದವುಗಳನ್ನು ತಯಾರು ಮಾಡುವ ವಿಧಾನಗಳನ್ನು ಕಂಡುಹಿಡಿದರು. ಸಿಹಿಗೆಣಸನ್ನು ಉಪಯೋಗಿಸಿ ನೂರಾರು ಬಗೆಯ ಉತ್ಪನ್ನಗಳನ್ನು ಕಂಡುಹಿಡಿದರು. ವ್ಯವಸಾಯ ಕ್ಷೇತ್ರದಲ್ಲಿನ ಸಂಶೋಧನೆಯಿಂದ ಅಲ್ಲಿನ ರೈತರಿಗೆ ಲಾಭ ತರುವ ವಿವಿಧ ಬೆಳೆಗಳನ್ನು ಪರಿಚಯಿಸಿದರು. ಇವುಗಳಿಂದಾಗಿ ಅವರು

ದಿನಕ್ಕೊಂದು ಕಥೆ 862

*🌻ದಿನಕ್ಕೊಂದು ಕಥೆ🌻* *ನಿಮ್ಮ ಅದೃಷ್ಟದ ಸಂಖ್ಯೆಯನ್ನು ಕಂಡುಕೊಳ್ಳಿ!* ಅದೃಷ್ಟದ ಸಂಖ್ಯೆಗಳನ್ನು ನಂಬುವವರು ನೀವಾದರೆ, ಸಂಖ್ಯೆಗಳ ಬಗ್ಗೆಯೇ ಇರುವ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡಬಹುದು. ಹತ್ತು ವರ್ಷಗಳ ಹಿಂದೆ ಅಂದರೆ 2008ರಲ್ಲಿ ಒಂದು ದಿನ ರಷ್ಯಾ ದೇಶದಲ್ಲಿ ವಿವಾಹ ದಾಖಲಾತಿ ಕಛೇರಿಗಳಲ್ಲಿ ಇಲ್ಲದಷ್ಟು ಕೆಲಸವಿತ್ತಂತೆ. ಅಂದು ಸಾವಿರಾರು ಜನ ಯುವಕ-ಯುವತಿಯರು ವಿವಾಹವಾದರಂತೆ. ಅಂದಿನ ವಿಶೇಷವೇನು ಗೊತ್ತೇ? ಅಂದು 8ನೆಯ ತಾರೀಖು, ಆಗಸ್ಟ್ ತಿಂಗಳು, 2008ನೆಯ ಇಸವಿ. ಅದನ್ನು ಸಂಖ್ಯಾರೂಪದಲ್ಲಿ ಬರೆಯುವಾಗ ಅದು ‘08-08-08’ ಎಂದಾಗುತ್ತದೆ! ಅಲ್ಲಿನ ಜನಗಳಿಗೆ ‘8’ ಅದೃಷ್ಟವನ್ನು ತರುವ ಸಂಖ್ಯೆಯೆಂಬ ನಂಬಿಕೆ. ಅಂದು ’8’ ಸಂಖ್ಯೆ ಮೂರು ಬಾರಿ ಬರುವುದರಿಂದ, ಅಂದು ಮದುವೆಯಾದವರ ಅದೃಷ್ಟ ಮೂರರಷ್ಟು ಹೆಚ್ಚಾಗುತ್ತದೆಂಬ ನಂಬಿಕೆ! ಹಾಗಾಗಿ ವಿವಾಹ ದಾಖಲಾತಿ ಕಛೇರಿಗಳಲ್ಲಿ ಯುವಕ-ಯುವತಿಯರು ಸರತಿಯ ನಿಂತು, ಗಂಟೆಗಟ್ಟಲೆ ಕಾದು, ತಮ್ಮ ವಿವಾಹವನ್ನು ದಾಖಲು ಮಾಡಿಸಿಕೊಂಡರಂತೆ! ಇದಕ್ಕಿಂತಲೂ ಹೆಚ್ಚು ಆಶ್ಚರ್ಯದ ವಿಷಯವೆಂದರೆ ಸಂಪ್ರದಾಯಿಕವಾದ ರೀತಿಯಲ್ಲಿ ಹಿಂದೆಂದೋ ಮದುವೆಯಾಗಿ, ಎಷ್ಟೋ ವರ್ಷಗಳಿಂದ ಜೊತೆಜೊತೆಯಲಿ ಸಂಸಾರ ಮಾಡಿ, ಹಲವಾರು ಮಕ್ಕಳ ತಾಯಿ ತಂದೆಯರಾಗಿದ್ದ ಗಂಡಹೆಂಡತಿಯರೂ ಕೂಡ ಅಂದು ತಮ್ಮ ಮದುವೆಯನ್ನು ಮರುದಾಖಲು ಮಾಡಿಸಿಕೊಂಡರಂತೆ. ಅವರಿಗೂ ‘08-08-08’ ಅದೃಷ್ಟವನ್ನು ತರುತ್ತದೆಂಬ ನಂಬಿಕೆ. ಇಷ್ಟು ವರ್ಷ ದೊರೆಯದಿದ್ದ