Posts

Showing posts from July, 2017

ದಿನಕ್ಕೊಂದು ಕಥೆ. 498

Veeresh Arssikere: *🌻ದಿನಕ್ಕೊಂದು ಕಥೆ🌻                                        ಎಲ್ಲಿದೆ ಸ್ವರ್ಗ? ಎಲ್ಲಿದೆ ನರಕ? ನಿಮಗೆ ಗೊತ್ತೇನು?* ‘ನಿಮಗೊಂದು ಪ್ರಶ್ನೆ! ಸ್ವರ್ಗ-ನರಕಗಳೆಂಬುವುದು ಇವೆಯಾ? ಎಲ್ಲಿವೆ? ಹೇಗಿವೆ?’ಈ ಪ್ರಶ್ನೆಯನ್ನು ನಮ್ಮ ಸ್ವಾಮೀಜಿಯವರಿಗೆ ಕೇಳಿದಾಗ ಅವರು ಜೋರಾಗಿ ನಕ್ಕು ‘ಸ್ವರ್ಗ-ನರಕಗಳ ಬಗ್ಗೆ ಕೇಳಿದ್ದೇನೆ. ಸತ್ತವರು ಮಾತ್ರ ಅಲ್ಲಿಗೆ ಹೋಗುತ್ತಾರಲ್ಲವೇ? ನಾನಿನ್ನೂ ಸತ್ತಿಲ್ಲ. ಅಲ್ಲಿಗೆ ಹೋಗಿಲ್ಲ. ನನಗೆ ಗೊತ್ತಿರುವ ಅನೇಕರು ಸತ್ತಿದ್ದಾರೆ. ಆದರೆ ಅವರು ಯಾರೂ ತಿರುಗಿ ಬಂದಿಲ್ಲ. ವರದಿ ತಂದಿಲ್ಲ. ಆದ್ದರಿಂದಾಗಿ ಸ್ವರ್ಗ-ನರಕಗಳ ಬಗ್ಗೆ ಏನು ಹೇಳಲಿ?’ಎಂದರು. ‘ಅವುಗಳ ಬಗ್ಗೆ ಎಲ್ಲ ದೇಶಗಳವರೂ, ಧರ್ಮಗಳವರೂ ಮಾತನಾಡುತ್ತಾರಲ್ಲ? ಅದರಲ್ಲೂ ನರಕದ ವಿಧ ವಿಧವಾದ ವರ್ಣನೆಗಳನ್ನು ಮಾಡುತ್ತಾರೆ. ಏಳು ಬಗೆಯ ನರಕಗಳಂತೆ. ಒಂದಕ್ಕಿಂತ ಒಂದು ಘೋರವಂತೆ. ಪಾಪ ಮಾಡಿದವರ ಪಾಪಗಳ ಪ್ರಮಾಣಕ್ಕೆ ಅನುಸಾರವಾಗಿ ಬೇರೆ ಬೇರೆ ನರಕಗಳ ಶಿಕ್ಷೆ ಸಿಗುತ್ತದಂತೆ’ಎಂದು ಮತ್ತೆ ಕೇಳಲಾಯಿತು. ಸ್ವಾಮೀಜಿಯವರು ‘ಒಳ್ಳೆಯದನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರೆ ಜನ ನಂಬದಿರಬಹುದು. ಆದರೆ ಕೆಟ್ಟದ್ದು ಮಾಡಿದರೆ ನರಕಕ್ಕೆ ಹೋಗುತ್ತೀರೆಂದರೆ ಅದನ್ನು ಹೆದರಿಕೆಯಿಂದ ನಂಬುತ್ತಾರೆ. ಜನ ಕೆಟ್ಟ ಪರಿಣಾಮಗಳಿಗೆ ಬೆಲೆ ಕೊಡುತ್ತಾರೆಯೇ ಹೊರತು ಒಳ್ಳೆಯ ಪರಿಣಾಮಗಳಿಗೆ ಬೆಲೆ ಕೊಡುವುದಿಲ್ಲ’ಎಂದರು. ಈ ಕುರಿತು ಅವರೇ

ದಿನಕ್ಕೊಂದು ಕಥೆ. 497

Veeresh Arssikere: *🌻ದಿನಕ್ಕೊಂದು ಕಥೆ🌻* ನೀವು ಯಾರನ್ನಾದರೂ, ‘ಬದುಕಿನಲ್ಲಿ ನಿಮ್ಮ ಗುರಿಯೇನು?’ ಎಂದು ಕೇಳಿ ನೋಡಿ. ‘ನಾನು ಯಶಸ್ವಿಯಾಗಬೇಕು’, ತುಂಬಾ ಹಣ ಮಾಡಬೇಕು, ‘ಖುಷಿಯಾಗಿರಬೇಕು’ ಎಂದು ಹೇಳುತ್ತಾರೆ. ಆದರೆ ನಾನು ಹೇಳುವುದಾದರೆ ಅವೆಲ್ಲವೂ ಆಶಯಗಳೇ ಹೊರತು, ನಿರ್ದಿಷ್ಟ ಗುರಿಗಳಲ್ಲ. ಬದುಕಿನಲ್ಲಿ ನಿಮ್ಮ ಗುರಿ SMART ಆಗಿರಬೇಕು. S- Specific. ‘ನಾನು ತೂಕ ಇಳಿಸಿಕೊಳ್ಳಬೇಕು’ ಎಂಬುದು ಆಸೆ ಅಥವಾ ಆಶಯವಷ್ಟೆ. ಆಶಯವೊಂದು ಗುರಿ ಎನಿಸಿಕೊಳ್ಳಬೇಕಾದರೆ ಅದಕ್ಕೊಂದು ನಿರ್ದಿಷ್ಟ ರೂಪ ಸಿಗಬೇಕು. ಉದಾಹರಣೆಗೆ: ನಾನು ಎರಡು ತಿಂಗಳಲ್ಲಿ 3 ಕೆಜಿ ತೂಕ ಕಳೆದುಕೊಳ್ಳಬೇಕು. M- Measurable. ನಿಮ್ಮ ಗುರಿ ಅಳತೆಗೆ ಸಿಗುವಂಥದ್ದಾಗಿಎಬೇಕು. ಅದನ್ನು ಅಳೆಯಲು ಬರದಿದ್ದರೆ ಸಾಧಿಸುವುದೂ ಕಷ್ಟವಾಗುತ್ತದೆ. A- Achievable. ಬದುಕಿನಲ್ಲಿ ನೀವು ಇಟ್ಟುಕೊಳ್ಳುವ ಗುರಿ ನಿಮಗೆ ಸಾಧಿಸಲು ಸಾಧ್ಯವಂಥದ್ದಾಗಿರಬೇಕು. ನಿಮ್ಮ ಸಾಮರ್ಥ್ಯ ಹಾಗೂ ಬಲಹೀನತೆಗಳ ಬಗ್ಗೆ ನಿಮಗೆ ಚೆನ್ನಾಗಿ ಅರಿವಿರಬೇಕು. ಇಲ್ಲದಿದ್ದರೆ ನಿಮ್ಮ ಗುರಿ ಬೇರೆಯವರಿಗೆ ಹುಚ್ಚುತನದಂತೆ ಕಾಣಿಸಬಹುದು ಅಥವಾ ನಿಲುಕದ ಗುರಿಯಿಂದ ನೀವು ನಿರಾಶರಾಗಬೇಕಾಗಬಹುದು. R- Realistic ನಿಮ್ಮ ಗುರಿ ವಾಸ್ತವಕ್ಕೆ ಆದಷ್ಟು ಹತ್ತಿರವಾಗಿರಬೇಕು. ನಾನು ಒಂದೇ ದಿನದಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳುತ್ತೇನೆಂದು ಹೊರಡುವುದನ್ನು ಗುರಿಯೆಂದು ಕರೆಯಲಾಗದು. T- Time bound ನಿಮ್ಮ ಸಾ

ದಿನಕ್ಕೊಂದು ಕಥೆ. 496

*🌻ದಿನಕ್ಕೊಂದು ಕಥೆ🌻*                                                                                                                       ಅಪ್ಪ ಮಗಳು ಹಾಗೆ ಕಾಡಹಾದಿಯಲ್ಲಿ ನಡೆದು ಹೊರಟಿದ್ರು . ಅಲ್ಲೆಲ್ಲೋ ಒಂದು ಮರದ ಕೊಂಬೆ ಮುರಿದು ಬಿದ್ದಿತ್ತು . ಸುಮಾರು ದೊಡ್ಡದಾಗೇ ಇತ್ತು . ಮಗಳು ಅಪ್ಪನನ್ನ ಕೇಳಿದ್ಳು 'ನಾ ಇದನ್ನ ಎತ್ತಿ ಪಕ್ಕಕ್ಕೆ ಸರಿಸಬಹುದೇ ಅಪ್ಪ?" 'ಓ, ನಿನ್ನೆಲ್ಲಾ ಶಕ್ತಿ ಹಾಕಿ ಎತ್ತಿದರೆ ಖಂಡಿತ ಸರಿಸಬಹುದು' ಮಗಳು ಪ್ರಯತ್ನಿಸಿದಳು , ಆಗಲಿಲ್ಲ . ಅಪ್ಪನ ಮುಖ ನೋಡಿದಳು . ಅಪ್ಪ ಮತ್ತದೇ ನಗುಮೊಗದಿಂದ 'ನಿನ್ನೆಲ್ಲಾ ಶಕ್ತಿ ಹಾಕು ಮಗ' ಅಂದ ಮಗಳು ಮತ್ತೆ ಮತ್ತೆ ಯತ್ನಿಸಿದಳು . ಆಗಲೇ ಇಲ್ಲ . ಮುಖ ಸಪ್ಪಗಾಯ್ತು .. ಅಪ್ಪನತ್ತ ನೋಡಿದ್ಳು ! ಅಪ್ಪ ಮತ್ತದೇ ನಗುಮೊಗದಿಂದ 'ನಿನ್ನೆಲ್ಲಾ ಶಕ್ತಿ ಹಾಕು ಮಗ ಅಂದೆ ಅಲ್ವ ಮಗ, ನಾನೂ ನಿನ್ನ ಶಕ್ತಿ ಅನ್ನೋದನ್ನ ಮರೆತೆಯಲ್ಲ ' ಅಂತ ಹೇಳಿ ಅವಳ ಜೊತೆ ಸೇರಿಸಿ ಆ ಕೊಂಬೆಯನ್ನ ಸರಿಸಿದ . ಮಗಳ ಮೊಗದಲ್ಲಿ ನಗು ಮೂಡಿತು ! ಹಿರಿಯರೊಬ್ಬರು ಹೇಳಿದ ಕಥೆ .. ಹಂಚಿಕೊಳ್ಳಬೇಕು ಅನಿಸ್ತು .                                                     *ಕೃಪೆ:e--books 5 ವಾಟ್ಸ್ ಆ್ಯಪ್ ಗ್ರೂಪ್*. ********************************************************************                   

ದಿನಕ್ಕೊಂದು ಕಥೆ. 495

*🌻ದಿನಕ್ಕೊಂದು ಕಥೆ🌻*                         *ಸೈಕಲ್ ಶಾಪ್ ನಲ್ಲಿ ಪಂಚರ್ ಹಾಕುತ್ತಿದ್ದವನು IAS ಆಫೀಸರ್ ಆದ ಸ್ಪೂರ್ತಿದಾಯಕ ಕತೆ!!!*.                               ನಾವು ಯಾವುದೇ ಒಬ್ಬ ಯಶಸ್ವೀ ವ್ಯಕ್ತಿಯನ್ನು ನೋಡಿದಾಗ ಅವರು ತುಂಬಾ ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅನ್ಕೋತೀವಿ ಆದ್ರೆ ಯಶಸ್ವೀ ವ್ಯಕ್ತಿಗಳಲ್ಲ್ಲಿಬಹುತೇಕರು ಅವರ ಜೀವನದಲ್ಲಿ ಪಟ್ಟ ಕಷ್ಟವನ್ನು ಅರ್ಥೈಸಿಕೊಳ್ಳೋದಿಲ್ಲ.ಯಶಸ್ಸನ್ನು ಅನುಭವಿಸಿದ ಹೆಚ್ಚಿನ ಜನರು ಸುಖಕ್ಕಿಂತ ಕಷ್ಟವನ್ನೇ ಹೆಚ್ಚಾಗಿ ಅನುಭವಿಸಿರುತ್ತಾರೆ. ಐಎಎಸ್ ಅಧಿಕಾರಿಯಾದ ವರುಣ್ ಬರಾನ್ವಾಲ್ ಅವರ ಕಥೆ ಇದೇ ರೀತಿಯದ್ದು.ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ಹುಡುಗನ ಸುತ್ತಲಿನ ಕೆಲವು ಜನರ ಔದಾರ್ಯ ಅಂತಿಮವಾಗಿ ಅವರು ಐಎಎಸ್ ಅಧಿಕಾರಿಯಾಗಲು ಕಾರಣವಾಯಿತು.ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಎಂಬ ಸಣ್ಣ ಪಟ್ಟಣದ ಬಾಲಕ ವರುಣ್ ಬರಾನ್ವಾಲ್, ಇವರು ಯಾವಾಗಲೂ ತಾನು ಡಾಕ್ಟರ್ ಆಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದ.ಸೈಕಲ್ ಚಕ್ರಗಳನ್ನು ರಿಪೇರಿ ಮಾಡುವ ಪಂಚರ್ ಅಂಗಡಿಯನ್ನು ನಡೆಸುತ್ತಿದ್ದ ಅವರ ತಂದೆ, ವರುಣ್ ಮತ್ತು ಅವರ ಸಹೋದರಿಗೆ ಉತ್ತಮ ಜೀವನ ನೀಡಲು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು.ಆದರೆ 2006 ರ ಮಾರ್ಚ್ ನಲ್ಲಿ ವರುಣ್ ನ 10 ನೇ ತರಗತಿ ಪರೀಕ್ಷೆಯ ಕೇವಲ ನಾಲ್ಕು ದಿನಗಳ ನಂತರ, ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು.

ದಿನಕ್ಕೊಂದು ಕಥೆ. 494

*🌻ದಿನಕ್ಕೊಂದು ಕಥೆ🌻                                       *ಜಾಣ ಸುಕನ್ಯಾ* ರಾಜ್ಯವೊಂದರಲ್ಲಿ ಮಹೇಶ್‌ಚಂದ್ರನೆಂಬ ರಾಜನಿದ್ದ. ಅವನಿಗೆ ಸುರೇಶ್ ಚಂದ್ರನೆಂಬ ಮಗನಿದ್ದ. ರಾಜಕುಮಾರ ಪ್ರಾಪ್ತ ವಯಸ್ಕನಾಗಲು, ಅವನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಮಹಾರಾಜ ನಿರ್ಧರಿಸಿದ. ಅವನ ಪಟ್ಟಾಭಿಷೇಕದ ಸಂಭ್ರಮದಲ್ಲಿ ಇಡೀ ರಾಜ್ಯವೇ ಮದುಮಗಳಂತೆ ಅಲಂಕೃತಗೊಂಡಿತ್ತು. ಆದರೆ, ಅಲಂಕಾರದ ಮಧ್ಯೆ ಕಪ್ಪು ಚುಕ್ಕೆಯಂತೆ, ಪಟ್ಟಾಭಿಷೇಕದ ಸಮಯದಲ್ಲಿ, ಮಹಾರಾಣಿಯು ಒಡವೆಗಳನ್ನಿರಿಸಿದ ಸಂದೂಕ ಕಳುವಾಯಿತು. ಬೇಸರಗೊಂಡ ಮಹಾರಾಜ, ಮಹಾರಾಣಿಯ ಸೇವೆಗೆ ನಿರತರಾದ ಅಂತಃಪುರದ ಪರಿಚಾರಿಕೆಯರನ್ನೆಲ್ಲಾ ಕರೆದು ವಿಚಾರಿಸಿದ. ಪಟ್ಟಾಭಿಷೇಕದ ಸಮಯದಲ್ಲಿ, ಮಹಾರಾಣಿಯ ಅಂತಃಪುರದೊಳಗೆ ಬಂಧುಗಳಲ್ಲದೆ ಬೇರೆ ಯಾರಿಗೂ ಪ್ರವೇಶವಿರಲಿಲ್ಲವೆಂದು ಅವರು ತಿಳಿಸಿದರು.  ಕೋಪಗೊಂಡ ಮಹಾರಾಜ, ಮಹಾರಾಣಿಯ ಮಹಲನ್ನು ಕಾಯುತ್ತಿದ್ದ ಪಹರೆಯವರನ್ನು ಕರೆದು, ರಕ್ಷಣೆಗಾಗಿ ನೇಮಕಗೊಂಡ ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ನಿಮ್ಮ ಬೇಜವಾಬ್ದಾರಿಯಿಂದಲೇ ಮಹಾರಾಣಿಯ ಒಡವೆಗಳು ಕಳುವಾಗಿವೆ. ಒಂದು ವಾರದಲ್ಲಿ ಕಳ್ಳನನ್ನು ಹುಡುಕಿದರೆ ಸರಿ ಇಲ್ಲದಿದ್ದರೆ, ನಿಮಗೆ ಜೈಲು ಶಿಕ್ಷೆ ಖಂಡಿತ. ಎಂದು ಗುಡುಗಿದ. ರಾಜಾಜ್ಞೆಯಿಂದ ಪಹರೆಯವರೆಲ್ಲಾ ಭಯಭೀತಗೊಂಡರು. ಮಹಾರಾಣಿಯ ಒಡವೆಗಳನ್ನು ಕಳ್ಳತನ ಮಾಡಿದವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಡಂಗುರ ಸಾರಲು ಮಹಾರಾಜನು, ತನ

ದಿನಕ್ಕೊಂದು ಕಥೆ. 493

  ದಿನಕ್ಕೊಂದುಕಥೆ                                                 ತೋಳದ ಅತಿಯಾಸೆ ಕಾಡಿನಲ್ಲಿದ್ದ ತೋಳ ಹಸಿವಿನಿಂದ ಕಂಗಾಲಾಗಿತ್ತು. ಹಲವು ದಿನಗಳಿಂದ ಅದಕ್ಕೆ ಸರಿಯಾಗಿ ಆಹಾರ ಸಿಕ್ಕಿರಲಿಲ್ಲ. ಅದಕ್ಕೇ ಹಳ್ಳಿಯ ಕಡೆಗೆ ಹೆಜ್ಜೆ ಹಾಕಿತು. ಕಾಡಿನ ಅಂಚಿನಲ್ಲಿದ್ದ ರೈತನ ಮನೆಯ ಮುಂದೆ ಹೊಂಚು ಹಾಕತೊಡಗಿತು. ರೈತ ಇದನ್ನು ಗಮನಿಸಿ, "ಏನಪ್ಪಾ ಮಾರಾಯ? ಬೆಳಗ್ಗೆನೇ ಬಂದು ಮನೆ ಮುಂದೆ ನಿಂತಿದ್ದೀಯಾ' ಅಂದನು. ಅದಕ್ಕೆ ತೋಳವು, "ಮೂರು- ನಾಲ್ಕು ದಿನಗಳಿಂದ ಆಹಾರ ಸಿಕ್ಕಿಲ್ಲ, ಹಸಿವಿನಿಂದ ಕಂಗಾಲಾಗಿದ್ದೇನೆ.' ಎಂದಿತು. ರೈತನು ಸ್ವಲ್ಪ ಹೊತ್ತು ಯೋಚಿಸಿ, ತನಗೆಂದು ಮಾಡಿಕೊಂಡಿದ್ದ ಮಾಂಸಾಹಾರದಲ್ಲಿ ಸ್ವಲ್ಪ ಪಾಲನ್ನು ಕೊಟ್ಟನು. ಗಬಗಬನೆ ತಿಂದ ತೋಳ "ಇನ್ನೂ ಬೇಕೆಂದಿತು.'. ರೈತ ಒಳಕ್ಕೆ ಹೋಗಿ ಇನ್ನೂ ಸ್ವಲ್ಪ ಕೊಟ್ಟನು. ತೋಳಕ್ಕೆ ಎಷ್ಟು ತಿಂದರೂ ತೃಪ್ತಿಯೇ ಆಗುತ್ತಿರಲಿಲ್ಲ. ಕೊನೆಗೆ ಹಾಲು, ಸೊಪ್ಪು, ತರಕಾರಿ, ಹಣ್ಣು, ಹಂಪಲು, ಮುದ್ದೆ, ಸಾರು ಅದನ್ನೂ ಬಿಡಲಿಲ್ಲ. ರೈತನಿಗೇ ಆ ದಿನ ಊಟ ಇಲ್ಲದಾಯಿತು. ರೈತ ತನ್ನ ಬಗ್ಗೆ ಯೋಚಿಸದೆ, ತೋಳದ ಹಸಿವು ನೀಗಿತಲ್ಲ ಎಂದು ಸಂತಸಪಟ್ಟನು.. ಅದೇ ದಿನ ರಾತ್ರಿ ರೈತ ನೀರು ಕುಡಿದು ಮಲಗಿದ್ದಾಗ ತೋಳ ಕಳ್ಳ ಹೆಜ್ಜೆಯನ್ನಿಡುತ್ತಾ ಮನೆಯಂಗಳಕ್ಕೆ ಬಂದಿತು. ತೋಳದ ಮನಸ್ಸಿನಲ್ಲಿ ದುರಾಸೆ ಮನೆ ಮಾಡಿತ್ತು. ರೈತನ ಸಾಕುಪ್ರಾಣಿಗಳ ಮೇಲೆ ತೋಳದ ಕಣ್ಣು ಬಿದ್ದಿತ್ತು. ಇನ

ದಿನಕ್ಕೊಂದು ಕಥೆ. 492

*🌻ದಿನಕ್ಕೊಂದು ಕಥೆ🌻                                        250 ಜನರನ್ನು ಕಾಪಾಡಿದ ಹಾಲು ವ್ಯಾಪಾರಿ..!* ಬೆಳಿಗ್ಗೆ ಕೋಳಿ ಕೂಗುತ್ತಲೇ ಏಳುವುದು… ಮನೆ ಮನೆಗೆ ತೆರಳಿ ಹಾಲು ಶೇಖರಿಸುವುದು. ಆ ಹಾಲನ್ನು ಮಾರುವುದರಿಂದ ಬರುವ ಹಣವೇ ಆತನ ಜೀವನಾಧಾರ. ಆದರೆ, ಆತನೀಗ 250 ಜನರಿಗೆ ಪುನರ್ಜನ್ಮ ನೀಡಿದ ದೇವರು. ಅ ಎಲ್ಲಾ 250 ಮಂದಿಯು ತಮ್ಮ ಜೀವಮಾನವಿಡೀ ಅತನನ್ನು ನೆನೆಯಲೇಬೆಕು. ಅವರು ಅನುಭವಿಸುತ್ತಿರುವ ಪ್ರತಿ ಕ್ಷಣವೂ ಈತನು ನೀಡಿರುವಂತದ್ದೇ. ಹಾಲು ವ್ಯಾಪಾರಿ 250 ಜನರಿಗೆ ದೇವರು ಹೇಗಾದ ಎಂದು ಭಾವಿಸುತ್ತಿರಾ.? ಬನ್ನಿ ಈ ಘಟನೆ ನಡೆದ ಪಂಜಾಬ್ ರಾಜ್ಯಕ್ಕೆ ಹೋಗೋಣ… ಕಳೆದ ವರ್ಷ ಪಂಜಾಬ್ ಪೊಲೀಸ್ ಹಾಗೂ ಉಗ್ರವಾದಿಗಳ ನಡುವೆ ನಡೆದ ಎನ್ ಕೌಂಟರ್ ನಿಮಗೆ ನೆನಪಿದೆಯಲ್ಲವೇ…? ಆ ಎನ್ ಕೌಂಟರ್ ನಲ್ಲಿ ನಮ್ಮ ಪೊಲೀಸರು, ತಮ್ಮ ಪ್ರಾಣಗಳನ್ನೂ ಲೆಕ್ಕಿಸದೆ, ಉಗ್ರವಾದಿಗಳನ್ನು ಸದೆ ಬಡಿದ ವಿಷಯ ನೆನಪಿದೆಯಲ್ಲವೇ..? ಆದರೆ, ಅದೇ ದಿನ ಉಗ್ರವಾದಿಗಳು…ರೈಲ್ವೇ ಟ್ರ್ಯಾಕ್ ಮೇಲೆ ಅಳವಡಿಸಿದ್ದ ಸ್ಪೋಟಕಗಳನ್ನು, ಅವು ಸಿಡಿಯುವ ಮೊದಲೇ ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಆ ಸ್ಪೊಟಕಗಳನ್ನು ಮೊದಲಿಗೆ ಗುರುತಿಸಿದ್ದು ‘ಸತ್ಪಾಲ್ ‘ಎಂಬ ಹಾಲು ವ್ಯಾಪಾರಿ. ಅಂದು ಆತ ತೆಗೆದುಕೊಂಡ ನಿರ್ಣಯದಿಂದ 250 ಜನ ಸಜೀವವಾಗಿ ಉಳಿದರು. ಹಾಲು ಮಾರುವವ ಎಂದಿನಂತೆ ಅಂದೂ ಸಹ ಹಾಲನ್ನು ಸಂಗ್ರಹಿಸಲು ರೈಲ್ವೇ ಬ್ರಿಡ್ಜ್ ಗೆ ಆ ಕಡೆಯಿರುವ ಮನೆಗೆ ಹೋಗಲು ರೈಲ್ವೇ ಟ್ರ್