Posts

Showing posts from November, 2019

ದಿನಕ್ಕೊಂದು ಕಥೆ 951

ದಿನಕ್ಕೊಂದು ಕಥೆ ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು! ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದಲ್ಲೂ ಸಹ

ದಿನಕ್ಕೊಂದು ಕಥೆ 950

ದಿನಕ್ಕೊಂದು ಕಥೆ ಲೇಖಕರು:ಡಾ.ಗವಿಸ್ವಾಮಿ. ಗಂಗಮ್ಮ ತಾಯಿ ಮೂರು ಅವಕಾಶಗಳನ್ನು ಕೊಡುತ್ತಾಳಂತೆ. ಮುಳುಗುತ್ತಿರುವವನನ್ನು ಬದುಕಿಕೋ ಹೋಗೆಂದು ಮೂರು ಸಲ ಮೇಲಕ್ಕೆ ಚಿಮ್ಮಿಸಿ ತೇಲಿಸುತ್ತಾಳಂತೆ. ಆದರೆ ಮುಳುಗಲೆಂದೇ ಹಾರಿದವನಿಗೆ ಎಷ್ಟು ಅವಕಾಶ ಕೊಟ್ಟರೇನು ಬಂತು? ಒಬ್ಬ ಆಗ ತಾನೇ ಧುಮುಕಿ , ಗಂಗೆಯ ಒಡಲಾಳಕ್ಕೆ ಇಳಿದು ಹೋಗುತ್ತಿದ್ದ . ಆತನನ್ನು ಕಂಡು ಮರುಗಿದ ಗಂಗೆಗೆ ಅವನೊಂದಿಗೆ ಮೂರು ಮಾತನ್ನಾದರೂ ಆಡಿ ಬೀಳ್ಕೊಡುವ ಬಯಕೆಯಾಯಿತು. "ಹುಟ್ಟುಬಟ್ಟೆಯಲ್ಲಿ ಜಿಗಿಯುತ್ತಿದ್ದ ವಯಸ್ಸಿನಿಂದಲೂ ನಿನ್ನನ್ನು ನೋಡುತ್ತಿದ್ದೇನೆ. ನೀನು ಮುಳುಗುವ ಆಸಾಮಿಯಲ್ಲ. ಏನಾಯಿತು ಹೇಳು?" "ನಿಜ ತಾಯಿ, ಬದುಕಿನುದ್ದಕ್ಕೂ ಘೋರ ಸುಳಿಗಳನ್ನು ಹಾದು ಬಂದಿದ್ದೇನೆ ..ಅಪ್ಪನ ಮೊಣಕಾಲು ಹಿಡಿದು ತಿರುಗುತ್ತಿದ್ದ ವಯಸ್ಸಿನಲ್ಲಿ ಪ್ಲೇಗು ಮಾರಿ ಅವನನ್ನು ಹೊತ್ತೊಯ್ದಾದಾಗಲೂ ನಾನು ಮುಳುಗಲಿಲ್ಲ.ಅವರಿವರ ಮನೆಯ ಕಸ ಹೊತ್ತು ಸುರಿದೆ,ಜೀತ ಮಾಡಿದೆ.ಹೆತ್ತವಳನ್ನು ಕಾಪಾಡಿಕೊಂಡೆ..ಎದೆ ಮಟ್ಟಕ್ಕೆ  ಬೆಳೆದ ಮಗ  ಕಾಡಾನೆಯ ಕಾಲಿಗೆ ತುತ್ತಾದಾಗಲೂ ನಾನು ಮುಳುಗಲಿಲ್ಲ..ಕೆಂಡದ ಉಂಡೆಗಳನ್ನು ಎದೆ ಗೂಡಿನಲ್ಲಿ  ಬಚ್ಚಿಟ್ಟುಕೊಂಡು ಮರುದಿನವೇ ಆರಂಭಕ್ಕೆ ಕಟ್ಟಿದೆ..ಬರಗಾಲ ಬಂದು ಬಾಯಿ ತೆರೆದುಕೊಂಡಿದ್ದ ಭೂಮ್ತಾಯಿಯೊಡಲಲ್ಲಿ ನನ್ನೆರಡು ಎತ್ತುಗಳನ್ನು ಹುಗಿದು ಮುಚ್ಚಿದ ದಿನದಂದೂ ನಾನು ಮುಳುಗಲಿಲ್ಲ.. ಇಂದು ಮಾತಿಗೆ ಅಂಜಿ, ಮಾನಕ್ಕೆ ಅಂಜಿ ಮುಳುಗುತ್ತಿದ್ದೇನೆ ತಾಯಿ

ದಿನಕ್ಕೊಂದು ಕಥೆ 949

*🌻ದಿನಕ್ಕೊಂದು ಕಥೆ🌻* ಅಂದು ಉದ್ಯಮಿ ಅಶೋಕ್‌ ಖಾಡೆ, ಮಂದಿರದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂಪಾಯಿ ಚೆಕ್‌ ಕೊಟ್ಟು, ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದರು: ""ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. "ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ' ಎಂದು ಬೋರ್ಡ್‌ ಹಾಕುವಿರಾ?'' ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ನನ್ನ ಮಗ ವಿಶಾಲ್‌, ಈಚೆಗೆ Dalit Millionaires ಎಂಬ ಇಂಗ್ಲಿಷ್‌ ಪುಸ್ತಕ ತಂದು ಇದನ್ನು ಓದಲೇಬೇಕು ಎಂದು ನನಗೆ ಆಜ್ಞೆಯನ್ನೇ ಮಾಡಿದ. ಬಡತನ, ಜಾತಿ ಕೀಳರಿಮೆ, ಉಳ್ಳವರ ದರ್ಪ, ಅಧಿಕಾರಿಗಳ ಕಿರುಕುಳ ಎಲ್ಲವನ್ನೂ ಧೈರ್ಯವಾಗಿ ಗೆದ್ದು ಮುಂದೆ ಬಂದ 15 ಯುವ ಉದ್ಯಮಿಗಳ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ. ಈ ಕೃತಿಯ ಪ್ರತಿಯೊಂದು ಲೇಖನ ಹೊಸ ಜಗತ್ತನ್ನು ತೆರೆದಿಡುತ್ತದೆ. ಇನ್ಫೋಸಿಸ್‌ನ ನಂದನ್‌ ನಿಲೇಕಣಿ ಈ ಪುಸ್ತಕ ಮೆಚ್ಚಿ ಒಂದು ಟಿಪ್ಪಣಿ ಕೂಡ ಬರೆದಿದ್ದಾರೆ ಎಂದು ವಿಶಾಲ್‌ ವಿವರಿಸಿದ. ಅವನ ಮಾತು ಕೇಳಿ ತುಂಬ ಸಂತೋಷವಾಯಿತು. ಎಲ್ಲ ಒತ್ತಡಗಳನ್ನು ಪಕ್ಕಕ್ಕೆ ಸರಿಸಿ ಬಹಳ ಆಸಕ್ತಿಯಿಂದ ಓದಿದೆ. ಮಹಾರಾಷ್ಟ್ರದ ಪತ್ರಿಕಾ ರಂಗ-ಟಿವಿ ಮಾಧ್ಯಮದ ಪ್ರಮುಖ ಮಿಲಿಂದ್‌ ಖಾಂಡೇಕರ್‌ ಈ ಕೃತಿ

ದಿನಕ್ಕೊಂದು ಕಥೆ 948

*🌻ದಿನಕ್ಕೊಂದು ಕಥೆ🌻* ಕೃಪೆ:Umeshchar kb ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ. ಕೊನೆಗೆ ಇಬ್ಬರ ರಾಜರ ರಥಸಾರಥಿಯರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿ ರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು. ಮೊದಲನೆಯ ರಾಜನ ಸಾರಥಿಯು, ಹೇಳುವನು. ನಮ್ಮ ಮಹಾರಾಜರು ಪ್ರತಿದಿನವೂ  ಕನಿಷ್ಟ ಒಂದು ನೂರು ಜನ ಹಸಿವೆಯಿಂದ ಬಳಲುವ ಅಭಾಗ್ಯರಿಗೆ ಭೋಜನ ಏರ್ಪಡಿಸಿದ ನಂತರವೇ ತಾವು ಭೋಜನ ಮಾಡುತ್ತಾರೆ. ತೊಡಲು ಬಟ್ಟೆ ಇಲ್ಲದ ನಿರ್ಗತಿಕರು ಕನಿಷ್ಠ ಐದುನೂರು ಜನರಿಗೆ ಬಟ್ಟೆ ಹಂಚುತ್ತಾರೆ. ರಾಜ್ಯದಲ್ಲಿ ಅನೇಕ ಅನಾಥಾಲಯಗಳನ್ನು ಮತ್ತು ವೃದ್ಧಾಶ್ರಮ ಗಳನ್ನು ಕಟ್ಟಿಸಿರುತ್ತಾರೆ. ಬಡಬಗ್ಗರಿಗೆ,ರಿಯಾಯಿತಿ ದರದಲ್ಲಿ ಧಾನ್ಯಗಳು ಸಿಗುವ ಏರ್ಪಾಟು ಮಾಡಿದ್ದಾರೆ. ಇವೇ ಮುಂತಾದ ಅನೇಕ  ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಷ್ಟು ಹೇಳಿದ ನಂತರ ಎರಡನೇ ರಾಜನ ಸಾರಥಿಯು, ತಲೆ ಬಗ್ಗಿಸಿ,ಕಣ್ಣಲ್ಲಿ ನೀರಿಡುತ್ತಾ ತನ್ನ ರಥವನ್ನು ಹಿಂತೆಗೆಯಲು ಅನುವಾದನು. ಅದನ್ನು ನ