Posts

Showing posts from December, 2019

ದಿನಕ್ಕೊಂದು ಕಥೆ 954

ದಿನಕ್ಕೊಂದು ಕಥೆ ಇರಾಕ್‌ ದೇಶದ ಕತೆ: ಬುದ್ಧಿ ಕಲಿತ ಸೋಮಾರಿ ಒಂದು ಪಟ್ಟಣದಲ್ಲಿ ಮಹಮೂದ್‌ ಎಂಬ ವ್ಯಾಪಾರಿಯಿದ್ದ. ಅವನು ಮನೆಮನೆಗಳಿಗೆ ಹೋಗಿ ಮೂಲೆಯಲ್ಲಿ ಎಸೆದ ಹಳೆಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದ. ಅದು ನಿರುಪಯೋಗಿ ವಸ್ತುವೆಂಬ ಭಾವನೆಯಿಂದ ಅವನು ಎಷ್ಟು ಕಡಿಮೆ ಬೆಲೆ ಕೊಟ್ಟರೂ ಅಷ್ಟನ್ನೇ ಜನ ಸ್ವೀಕರಿಸಿ ಅವನಿಗೆ ವಸ್ತುವನ್ನು ಒಪ್ಪಿಸಿಬಿಡುತ್ತಿದ್ದರು. ಬುದ್ಧಿವಂತನಾದ ಮಹಮೂದ್‌ ಈ ವಸ್ತುವನ್ನು ಥಳಥಳ ಹೊಳೆಯುವ ಹಾಗೆ ಮಾಡಿ ರಾಜ ಮಹಾರಾಜರು, ಧನಿಕರಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಅದೊಂದು ಅಮೂಲ್ಯ ವಸ್ತುವೆಂದು ಅವರು ಕೈತುಂಬ ಚಿನ್ನದ ನಾಣ್ಯಗಳನ್ನೇ ಬೆಲೆಯಾಗಿ ಕೊಟ್ಟು ಕೊಳ್ಳುತ್ತಿದ್ದರು. ಹೀಗೆ ಬಂದ ಹಣದಿಂದ ವ್ಯಾಪಾರಿ ಆಗರ್ಭ ಶ್ರೀಮಂತನಾದ. ವ್ಯಾಪಾರಿಗೆ ಸಲೀಂ ಎಂಬ ಒಬ್ಬನೇ ಮಗನಿದ್ದ. ತನ್ನ ಮಗ ಮುಂದೆ ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿ ಸಂಪತ್ತನ್ನು ವೃದ್ಧಿಪಡಿಸುತ್ತಾನೆಂದು ವ್ಯಾಪಾರಿ ಭಾವಿಸಿದ್ದ. ಆದರೆ ಅವನಿಗೆ ಯಾವುದೇ ಕೆಲಸದಲ್ಲಿಯೂ ಆಸಕ್ತಿಯಿರಲಿಲ್ಲ. ಹೊಟ್ಟೆ ತುಂಬ ಊಟ ಮಾಡುವುದು, ಕೆಲಸ ಮಾಡದೆ ಅಲೆಯುವ ಗೆಳೆಯರ ಜೊತೆಗೆ ವಿಹಾರಕ್ಕೆ ಹೋಗುವುದು, ಹೊತ್ತೇರುವವರೆಗೂ ಮಲಗುವುದು ಇದರಲ್ಲಿಯೇ ಆಯುಷ್ಯ ಕಳೆಯುತ್ತಿದ್ದ. ಇದನ್ನು ಕಂಡು ವ್ಯಾಪಾರಿಗೆ ಬೇಸರವಾಗುತ್ತಿತ್ತು. ವೃತ್ತಿಯನ್ನು ಕಡೆಗಣಿಸಬಾರದೆಂದು ಹಲವು ರೀತಿಯಿಂದ ಮಗನಿಗೆ ಬುದ್ಧಿ ಹೇಳಿದ. ಆದರೂ ಅವನು ದಾರಿಗೆ ಬರಲಿಲ್ಲ. ಒಂದು ದಿನ ವ್

ದಿನಕ್ಕೊಂದು ಕಥೆ 953

ದಿನಕ್ಕೊಂದು ಕಥೆ. ‘ಚಪ್ಪಲಿ ಹಾಕಿ ಭಾರತದ ನೆಲ ಮೆಟ್ಟಲ್ಲ’ ಎಂದು ಬಂದ ಇಸ್ರೇಲಿ ಪ್ರಜೆಗೆ ‘ಏಂಜಲ್’ ಆದ ಬೆಂಗ್ಳೂರು ಕಾಪ್ ಅಹ್ಮದ್. ಬೆಂಗಳೂರು: ತನ್ನಿಚ್ಛೆಗೆ ತಕ್ಕಂತೆ ಬೆಳೆದ ಗಡ್ಡ, ಮೀಸೆ, ದಟ್ಟ ತಲೆಯ ಕೂದಲು, ಕೈ ಕಾಲುಗಳಲ್ಲಿ ಚಿತ್ರ ವಿಚಿತ್ರ ದಾರಗಳು, ಕೇವಲ ಬರ್ಮುಡಾ ಚಡ್ಡಿ ಹಾಕಿ ಮೇಲೆ ಯಾವ ಶರ್ಟನ್ನೂ ಹಾಕದೆ ಬರಿ ಮೈಯಲ್ಲಿ, ಬರಿಗಾಲಲ್ಲಿ ಚಿಂತಾಕ್ರಾಂತನಾಗಿ ಒಂದೆರಡು ಬ್ಯಾಗ್​ಗಳು ಹಾಗೂ ಆಫ್ರಿಕಾ ದೇಶದ ವಾದ್ಯ ಜಂಬೆಯನ್ನು ತನ್ನ ಪಕ್ಕದಲ್ಲಿಟ್ಟುಕೊಂಡು, ತಿಳಿಯದ ಭಾಷೆಯಲ್ಲಿ ವಟಗುಡುತ್ತ, ಸುಮಾರು 25 ವಯಸ್ಸಿನ ಯುವಕ ನಿಮ್ಮ ಮುಂದೆ ಬಂದು ಕುಳಿತರೆ ನೀವೇನು ಮಾಡುತ್ತೀರಿ? ಒಂದೋ ಅರೆ ಹುಚ್ಚ ಎಂದುಕೊಂಡು ಉದಾಸೀನ ಮಾಡ್ತೀರಿ.. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಿ ಸುಮ್ಮನಾಗ್ತೀರಿ. ಆದ್ರೆ, ಅದೇ ಪೊಲೀಸ್​ ಸ್ಟೇಷನ್​ಗೆ ಇಂಥ ವ್ಯಕ್ತಿ ಬಂದರೆ..? ಹೌದು. ಇಂಥ ಸನ್ನಿವೇಶವೊಂದು ನಗರದ ಕಬ್ಬನ್ ಪಾರ್ಕ್​ ಪೊಲೀಸರಿಗೆ ಎದುರಾಗಿತ್ತು. ಆದ್ರೆ, ಆ ವ್ಯಕ್ತಿ ಬಗ್ಗೆ ಉದಾಸೀನ ಮಾಡದೇ ಇಲ್ಲಿನ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಇಡೀ ಇಸ್ರೇಲ್​ ಭೇಷ್ ಅಂತಿದ್ದರೆ, ಭಾರತದ ಗರಿಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮೆರೆಯಲು ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದು ಏನಂದ್ರೆ, ಕಳೆದ ನವೆಂಬರ್​ 24ರ ಭಾನುವಾರ ಭಾರತದ ಬಗ್ಗೆ ಅತೀವ ಅಭಿಮಾನ ಹೊಂದಿರೋ ‘ಯೀಡೋ’ ಅನ್ನೋ ಹೆಸರಿನ ಇಸ್ರೇಲ್​ ದೇಶದ ಪ್ರಗತಿ ಪರ ರೈತ ಬೆಂಗಳೂರಿಗೆ ಬಂದಿದ್ದರು. ನಮ್ಮ ದೇ

ದಿನಕ್ಕೊಂದು ಕಥೆ 952

ದಿನಕ್ಕೊಂದು ಕಥೆ ಹಾಲಿನಿಂದ_ಬೆಳಕಾಗುವ_ಪರಿ..!  ಇದೇನಿದು ಹಾಲಿನಿಂದ ಬೆಳಕೇ?  ಸಂಸ್ಕೃತದಲ್ಲಿ ಒಂದು ಕಥೆ ಇದೆ..  ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ.. ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು ಆಕಳು.. ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ... ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ.. ಆಗ ದೇವರು ನಕ್ಕು.  ' ಎಲೈ .. ಹಾಲೇ ಇಲ್ಲಿ ಕೇಳು.. ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು..  ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ.. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ.. ಮೊಸರಾಗಿ ಕಡೆದರೆ.. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ.. ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ... ಬೆಣ್ಣೆಯನ್ನು  ಹದವಾಗಿ ಕಾಯಿಸಿ.. ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ.. ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ.   ಈಗ ಹೇಳು ಒಂದು ದಿನ   ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ..  ಅಥವಾ ಕ್ಷಣ ಕ್ಷಣವೂ.. ಅನುದಿನವೂ .. ದಿನ ದಿನವೂ..  ಬೆಳೆದು.. ರೂಪಾಂತರ ಪಡೆದು ..  ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ... ದೇವರ ಮಾತಿಗೆ.. ಹ