Posts

Showing posts from January, 2018

ದಿನಕ್ಕೊಂದು ಕಥೆ. 694

   ದಿನಕ್ಕೊಂದು ಕಥೆ                                                               *ನಿರ್ಮಲ ಟೀಚರ್ ನ ನಿರ್ಮಲ ಮನಸ್ಸು* ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ ಮೆಟ್ಟಿಲುಗಳನ್ನುಮಾಡಿಸಿಕೊಟ್ಟರು. ನಮ್ಮೂರ ಉದ್ಯಮಿ ಹಾಗು ಹಾಗು ರಾಜಕಾರಣಿಯೊಬ್ಬರು ಊರ ದೇವತೆಯ ದೇಗುಲದ ಬಾಗಿಲುಗಳಿಗೆ 50 ಲಕ್ಷ ರೂ. ಮೌಲ್ಯದ ಬೆಳ್ಳಿಯ ಹೊದಿಕೆ ಸಮರ್ಪಿಸಿದರು.       ಮೇಲಿನ ಮೂರೂ ಘಟನೆಗಳನ್ನು ನಾನು ವರದಿ ಮಾಡಿದ್ದೆ. ಹೀಗೆ ಈ ಸುದ್ದಿಗಳನ್ನು ಬರೆಯುವಾಗ ದೇಣಿಗೆ ನೀಡಿದವರ ಕುರಿತು “ಎಂಥ ದಾನಿಗಳಪ್ಪ” ಎಂಬ ಅಭಿಮಾನದ ಭಾವನೆ ಮೂಡಿತಾದರೂ ಮತ್ತೊಂದು ಕಡೆ ಮನಸ್ಸು ಹೇಳುತ್ತಿತ್ತು “ಇವರುಗಳಿಗೆ ಇದು ಯಾವ ಲೆಕ್ಕ” ಎಂದು. ಆದರೂ ಉಳ್ಳವರು ಎಲ್ಲರೂ ಇಷ್ಟೊಂದು ದೇಣಿಗೆ ನೀಡುವರೇ ಎಂಬ ಪ್ರಶ್ನೆ ಮೂಡಿ ಮೇಲಿನವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು.       ಇದೊಂದು ಘಟನೆ ನನಗೆ ಮೇಲಿನ ಮೂರೂ ಘಟನೆಗಳನ್ನು ಮರೆಯುವಂತೆ ಮಾಡಿತ್ತು. ಮೇಲ್ಕಾಣಿಸಿದ ದಾನಿಗಳಿಗಿಂತ ಈ 1 ಸಾವಿರ ರೂ. ಬಹುಮಾನ ನೀಡಿದ್ದ ಹೈಸ್ಕೂಲ್‍ನ ಮೇಡಂ ತುಂಬಾ ದೊಡ್ಡವರು ಎನ್ನಿಸಿದರು. ಅವರ ಸ್ವಾಭಿಮಾನ, ಮಾತಿಗೆ ತಪ್ಪದ ನಡತೆ ಹಾಗೂ ತಮ್ಮ ವಿದ್ಯಾರ್ಥಿಗಳ ಮೇಲೆ ಅವರು ಇಟ್ಟಿದ್ದ

ದಿನಕ್ಕೊಂದು ಕಥೆ. 693

*🌻ದಿನಕ್ಕೊಂದು ಕಥೆ🌻                                           ಸ್ನೇಹದ ಬೆಸುಗೆ* 'ಎಂದೆಂದೂ ನಿನ್ನನು ಅಗಲಿ ಬದುಕಿರಲಾರೆ' ಇಂತಹ ವಾಕ್ಯವನ್ನು ಕೇಳಿದವರು ಅಯ್ಯೋ ಇದು ಸಿನಿಮಾ ಕಥೆ. ಅದೇನಿದ್ದರೂ ಎರಡು ಗಂಟೆಗಳ ಮನರಂಜನೆಗೆ ಬಂದು ಹೋಗುವ ಹಾಡು ಅಷ್ಟೇ ಎಂದು ಸುಮ್ಮನಾಗುತ್ತೇವೆ. ನಮ್ಮ ಬದುಕಿನಲ್ಲಿ ಇಂತಹ ಒಂದು ಧ್ಯೇಯಕ್ಕೆ ಬದ್ಧರಾಗೋಣ ಎಂದುಕೊಳ್ಳುವುದಕ್ಕೆ ನಮ್ಮ ಮನಸ್ಸು ಒಪ್ಪುವುದೇ ಇಲ್ಲ. ಪ್ರೀತಿ, ಪ್ರೇಮದ ಸಂಬಂಧಗಳು ಸೃಷ್ಟಿಯಾದಾಗ ಇಂತಹ ಮಾತುಗಳಿಗೆ ಕೊರತೆ ಇರುವುದಿಲ್ಲ. 'ನೀನಿಲ್ಲದೇ ನಾನಿಲ್ಲ. ನೀನಿಲ್ಲದೇ ಬದುಕೇ ಇಲ್ಲ ಎಂಬಂತಹ ಉದ್ಘೋಷಗಳ ಸಾಲೇ ಇರುತ್ತದೆ. ಬದುಕಿನ ಪಯಣ ಆರಂಭವಾಯಿತೆಂದರೆ ಜತೆಗೂಡಿ ಬಾಳುತ್ತೇವೆಂದು ಪ್ರತಿಜ್ಞೆ ಮಾಡಿದವರು ಸಂಬಂಧವೇ ಇಲ್ಲದಂತೆ ಬದುಕುತ್ತಾರೆ. ಸಮಾಜ ಮತ್ತು ಸುತ್ತಲಿನವರು ಏನಂದು ಕೊಳ್ಳುತ್ತಾರೋ? ಎಂಬ ತೊಳಲಾಟದಲ್ಲಿ ಸಂಸಾರ ಸಾಗಿಸುತ್ತಾರೆ. ಮತ್ತೆ ಕೆಲವರು ನಮಗೋಸ್ಕರವಂತೂ ಅಲ್ಲ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲಾದರೂ ನಾವು ಜತೆಗೆ ಬಾಳಬೇಕು ಎಂದು ಕೊಳ್ಳುತ್ತಾರೆ. ವೇಗದ ಯುಗದಲ್ಲಿ ಇಂತಹ ಕುಟುಂಬಗಳೇ ಹೆಚ್ಚು. ಹೊರ ಜಗತ್ತಿಗೆ ಸುಖಿ ಸಂಸಾರಿಗಳಂತೆ ಕಂಡರೂ ದಾಂಪತ್ಯದಲ್ಲಿ ವಿರಸವೇ ತುಂಬಿರುತ್ತದೆ. ಅದಕ್ಕೆ ಕಾರಣ ಇಂತದ್ದೇ ಆಗಬೇಕಿಲ್ಲ. ಆಸೆಗಳೇ ತುಂಬಿದ ಬದುಕಿನಲ್ಲಿ ಒಂದು ಕೊರತೆ ಎನಿಸಿದರೇ ಜೀವನದಲ್ಲಿ ಬಿರುಕು ಆರಂಭವಾಯಿತೆಂದೇ ಅರ್ಥ. ಹೀಗಿದ್ದೂ ಸಮಾಜಕ್ಕೆ

ದಿನಕ್ಕೊಂದು ಕಥೆ. 692

ದಿನಕ್ಕೊಂದು ಕಥೆ                                                            ಶಿಕ್ಷಕರ_ಸಂತೃಪ್ತಿ ಒಬ್ಬ_ಶಿಕ್ಷಕರನ್ನು_ವಿಧ್ಯಾರ್ಥಿ_ಕೇಳಿದನು ‌.‌. ಸರ್ ನೀವು ಕಲಿಸುತ್ತಿರುವ ವಿದ್ಯೆಯಿಂದ ನಾವು ಬಹಳ ಉನ್ನತ ಸ್ಥಾನಕ್ಕೆ ಸೇರಿಕೊಂಡಾಗ , ನಿಮಗೆ ಅಸೂಯೆ ಅಗುವುದಿಲ್ಲವೆ , ಏಕೆಂದರೆ ನೀವೂ ಸೇರಿಕೊಳ್ಳದ ಸ್ಥಾನಕ್ಕೆ ನಾವು ಸೇರಿಕೊಂಡಿದ್ದೆವೆ.. ನೀವು ಮಾತ್ರ ಇದೇ ತರಹ ಜೀವನ ಪರ್ಯಂತ ಇರುತ್ತೀರ.. ಇದರಿಂದ ನಿಮಗೆ ನೋವು ಆಗುವುದಿಲ್ಲವೇ.. ? ಎಂದು ಕೇಳಿದನು.. ವಿಧ್ಯಾರ್ಥಿ ಕೇಳಿದ ಪ್ರಶ್ನೆಗೆ ಶಿಕ್ಷಕರು ಸ್ವಲ್ಪ #ತರ್ಕಬದ್ಧವಾಗಿ ಹೇಳಿದರು.. #ಐವತ್ತು_ಅಂತಸ್ತುಗಳ ಕಟ್ಟಡವನ್ನು ಯಾರು ಕಟ್ಟುತ್ತಾರೆ.. ಐವತ್ತು ಅಡಿಗಳ ಮನುಷ್ಯ  ಅಲ್ಲ ತಾನೇ. ಅರು ಅಡಿಗಳ ಒಳಗಡೆ ಇರುವ ಮನುಷ್ಯ ಐವತ್ತು ಅಂತಸ್ತಿನ ಕಟ್ಟಡವನ್ನು ಕಟ್ಟುತ್ತಾನೆ. ಐವತ್ತು ಅಂತಸ್ತುಗಳ ಕಟ್ಟಡವನ್ನು ಕಟ್ಟಲು ಐವತ್ತು ಅಡಿ ಮನುಷ್ಯ ಬೇಕೆಂದರೆ ಹೇಗೆ ? #ಎಷ್ಟೋ ಜನರಿಗೆ ನೆರಳು ಕೊಡುವ #ಮರ ತನಗೆ ನೆರಳು ಇಲ್ಲ ಅಂದರೆ ಈ ಸೃಷ್ಟಿಯಲ್ಲಿ ಇರುವ ಪ್ರಕೃತಿಗೆ ಅರ್ಥವಿಲ್ಲ.. ತನ್ನ ನೆರಳು ಬಗ್ಗೆ ಯೋಚನೆ ಮಾಡದೆ ಇದ್ದರೆ ತಾನೆ ಹತ್ತಾರು ಜನರಿಗೆ ನೆರಳು ಕೊಡಲು ಸಾಧ್ಯ... ತನ್ನ ನೆರಳಿನಲ್ಲಿ ಎಷ್ಟೋ ಜನ ಉನ್ನತಿ ಹೊಂದಿದರು.. ಅವರ ಉನ್ನತಿಯೇ ತನ್ನ ಸಾಧನೆ ಎಂದು ಸಂತೃಪ್ತಿ ಹೊಂದಿದರೆ ಅದಕ್ಕಿಂತ ಮಿಗಿಲಾದ ಅನಂದ ಮತ್ತೊಂದಿಲ್ಲ... ಅದನ್ನೇ ನಾನು ಅನುಭವಿಸುತ್

ದಿನಕ್ಕೊಂದು ಕಥೆ. 691

*🕉ಮಾಯೆಯ ಜಿಂಕೆ🕉* ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ. ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ ಮಾತಿಗೆ ತಲೆದೂಗಿ ಆ ಜಿಂಕೆ ಅಟ್ಟಿಸಿಕೊಂಡು ಹೊರಟ. ಭಗವಂತನೂ ಒಂದು ಕ್ಷಣ ಮೈಮರೆತ. ಕೊಲವೊಮ್ಮೆ ಮೈ ಮರೆತದ್ದೂ ಲಾಭವಾಗುತ್ತದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಘಟನೆಯ ನಂತರ ರಾಮ ಶೋಕ ಸಾಗರದಲ್ಲಿ ತಿಂಗಳುಗಟ್ಟಲೆ ಮುಳುಗಿದ್ದನೆಂಬುದು ಬೇರೆ ಮಾತು. ಆದರೆ ಅನಂತರ ಸೀತೆಯನ್ನು ಮರಳಿ ಪಡೆಯಲೋಸುಗ ರಾಮ ಲಂಕೆಗೆ ದಾಂಗುಡಿ ಇಟ್ಟು ರಾವಣನ ಸಂಹಾರ ಮಾಡಿದ! ಹೀಗೆ ರಾಮನ ಮೈಮರೆವು ಶ್ರೇಷ್ಠ ಕಾರ್ಯವೊಂದಕ್ಕೆ ನಾಂದಿಯಾಗಿದ್ದು ಏಕೆ ಗೊತ್ತೆ? ರಾಮ ಸದಾ ಸಚ್ಚಿಂತನೆಯಲ್ಲಿದ್ದ. ಒಂದು ಕ್ಷಣವೂ ಪರಮ ಪುರುಷನ ಸಖ್ಯ ತೊರೆದು ಅವನಿರಲಿಲ್ಲ. ಹೀಗಾಗಿ ಅವನ ಎಚ್ಚರಿಕೆ ತಪ್ಪುವ ಕ್ರಿಯೆಯೂ ಪರಬ್ರಹ್ಮನ ಲೀಲೆಯಾಯ್ತು! ಹೀಗಾಗಿಯೇ ಶ್ರೀ ಕೃಷ್ಣ ಗೀತೆಯಲ್ಲಿ ವಿಶ್ವರೂಪ ದರ್ಶನ ನೀಡಿದ ನಂತರ ಒಂದು ಮಾತು ಹೇಳುತ

ದಿನಕ್ಕೊಂದು ಕಥೆ. 690

*🌻ದಿನಕ್ಕೊಂದು ಕಥೆ🌻*                                                *ಗೂಳಿಗೆ ತಕ್ಕ ಶಾಸ್ತ್ರಿ* ಒಂದು ಊರಿನಲ್ಲಿ ಗೂಳಿಯೊಂದು ಬೇಕಾಬಿಟ್ಟಿ ಅಡ್ಡಾಡುತ್ತಿತ್ತು. ಅದನ್ನು ಸಾಕಿದ ಒಡೆಯನಿಗೆ ತಿವಿದು ನಾಡಿನಿಂದ ಕಾಡಿಗೆ ಸೇರಿಕೊಂಡಿತ್ತು. ಅದನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸೊಕ್ಕಿನಿಂದ ಮೆರೆಯುವ ಗೂಳಿ ಹಗಲು ರಾತ್ರಿಯೆನ್ನದೇ ರೈತರ ಹೊಲಗಳಿಗೆ ನುಗ್ಗಿ ಫ‌ಸಲನ್ನು ತಿನ್ನುತ್ತಿತ್ತು. ಜನರಿಗೆ ಗೂಳಿ ದೊಡ್ಡ ತಲೆನೋವಾಗಿತ್ತು. ಒಂದು ದಿನ ರೈತ ರಾಮಣ್ಣ ಹೊಲದಲ್ಲಿ ಉಳುತ್ತಿರುವಾಗ ಆಕಸ್ಮಿಕವಾಗಿ ಹಸಿವಿನಿಂದ ತತ್ತರಿಸಿದ ಹುಲಿಯೊಂದು ಎತ್ತಿನ ಮೇಲೆ ದಾಳಿ ಮಾಡಿತ್ತು. ಆಗ ಭಯಭೀತನಾದ ರಾಮಣ್ಣ, "ಅಯ್ನಾ ಹುಲಿರಾಯ, ನನ್ನ ಎತ್ತನ್ನು ತಿನ್ನಬೇಡ ಎಂದನು. "ಹಾಗಾದರೆ ನಿನ್ನನ್ನೇ ತಿನ್ನಲೇ?' ಎಂದು ರಾಮಣ್ಣ ಮೇಲೆರಗಿತು. "ತಡೆ ಹುಲಿರಾಯ. ನಿನ್ನ ಹೊಟ್ಟೆ ತುಂಬುವ ಉಪಾಯ ನನ್ನಲ್ಲಿದೆ' ಎಂದ ರಾಮಣ್ಣ. "ಏನದು ಬೇಗ ಬೊಗಳು' ಎಂದಿತು ಹುಲಿ. "ಇಲ್ಲಿಯೇ ದಾರಿಯಂಚಿಗೆ ದಷ್ಟಪುಷ್ಟವಾದ ಗೂಳಿ ಇದೆ. ಅದನ್ನು ತಿನ್ನು. ಆದರೆ ಅದು ನಿನ್ನನ್ನು ಕಂಡಕೂಡಲೇ ಓಡಿಹೋಗುತ್ತೆ. ಹಾಗಾಗಿ ನೀನು ಒಂದು ಹುಲ್ಲಿನ ಹೊರೆಯನ್ನು ಹೊತ್ತಕೊಂಡು ಹೋಗು. ಆ ಹುಲ್ಲನ್ನು ತಿನ್ನಲು ಗೂಳಿ ಬಂದೇ ಬರುತ್ತೆ. ಆಗ ಗೂಳಿ ಮೇಲೆ ದಾಳಿ ಮಾಡು. ನಿನಗೆ ಹೊಟ್ಟೆತುಂಬ ಆಹಾರ ಸಿಗುತ್ತೆ' ಎಂದನು. ರಾಮ

ದಿನಕ್ಕೊಂದು ಕಥೆ. 689

*🌻ದಿನಕ್ಕೊಂದು ಕಥೆ🌻*                                                                                  ಒಮ್ಮೆ ಬಿಲ್ ಗೇಟ್ಸ್ ನತ್ರ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ...." ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ - ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು.... ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್ ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡಾ ಅಂದು ಬಿಟ್ಟೆ.. ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ.. ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ , ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ.... ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು. ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ. ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. ನಾನು ಆತನಿಂದ ಪೇಪರನ್ನ

ದಿನಕ್ಕೊಂದು ಕಥೆ. 688

*🌻ದಿನಕ್ಕೊಂದು ಕಥೆ🌻                   ಹೊಸ ತಲೆಮಾರಿನ ಮಕ್ಕಳು.* ಇದು ಒಂದು ಭರವಸೆ, ಒಂದು ನಿರೀಕ್ಷೆ, ಒಂದು ಮಹತ್ವಾಕಾಂಕ್ಷೆ ಕೋಮಾಸ್ಥಿತಿಯಲ್ಲಿ ಮಲಗಿದ ದಾರುಣ ಕತೆ. ಕತೆ ಅಂದರೆ ಕತೆ ಅಲ್ಲ, ಇದು ವಾಸ್ತವ. ನಮ್ಮ ಕಣ್ಣೆದುರಿನ ಒಂದು ಕುಟುಂಬದ ಯಾತನಾಮಯ ಚಿತ್ರ. ಇದರಲ್ಲಿ ಅಪ್ಪ, ಅಮ್ಮ, ಮಗ, ಒಂದು ರೈಲು, ಮೊಬೈಲ್‌ ಇವಿಷ್ಟು ಪಾತ್ರಗಳಿವೆ. ಅಪ್ಪ, ಅಮ್ಮ ಇಬ್ಬರು ವೈದ್ಯರು. ಅಪ್ಪ ವೈಯಕ್ತಿಕ ವಾಗಿ ನಮ್ಮನ್ನು, ಗುರುಪೀಠ ಎರಡನ್ನೂ ಬಲ್ಲವರು. ತುಂಬಾ ಯಶಸ್ವಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಅವರಿಗೊಬ್ಬ ನೇ ಮಗ. ಬಹುತೇಕ ಮಕ್ಕಳಂತೆ ಸೆಲ್ಫಿ ಕ್ರೇಜು, ಅದರ ಟ್ರೆಂಡ್‌ ಪ್ರಭಾವಕ್ಕೊಳಗಾಗಿದ್ದ ಆ ಹುಡುಗ ಒಂದು ದಿನ ರೈಲ್ವೆ ಟ್ರ್ಯಾಕ್‌ ಪಕ್ಕ ನಿಂತು ಹಿಂಬದಿಯಿಂದ ರೈಲು ಬರುತ್ತಿರುವ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ. ವೇಗವಾಗಿ ಬಂದ ರೈಲು ಈತನನ್ನೂ ತಾಕಿಕೊಂಡೇ ಹೋಯಿತು. ಕ್ಷಣಾರ್ಧದಲ್ಲಿ ಆ ಹುಡುಗನ ದೇಹ ಮುಗುಚಿ ಬಿತ್ತು. ಸದ್ಯ ಜೀವ ಹಿಡಿದುಕೊಂಡಿದ್ದ ಆತನನ್ನು ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಆ ಹುಡುಗ ಈಗ ಕೋಮಾದಲ್ಲಿದ್ದಾನೆ. ಇದೆಲ್ಲ ಎಂಟೊಂಬತ್ತು ತಿಂಗಳಾಗಿದೆ. ಸದಾ ಮಲಗಿದ ಸ್ಥಿತಿಯಲ್ಲೇ ಇರುವ ಮಗನ ಯೋಗಕ್ಷೇಮವನ್ನು ತಾಯಿ ನೋಡಿ ಕೊಳ್ಳುತ್ತಿದ್ದಾರೆ. ತಂದೆ, ತಾಯಿ ಇಬ್ಬರ ವಾಸ್ತವ್ಯ ಬಹುತೇಕ ಆಸ್ಪತ್ರೆಯಲ್ಲೇ ಎನ್ನುವಂತಾಗಿದೆ. ಅಪ್ಪ ಸರಕಾರಿ ವೈದ್ಯರ ಸ್ಥಾನಕ್ಕೆ ರಾಜೀನಾಮೆ ನೀಡಿ,

ದಿನಕ್ಕೊಂದು ಕಥೆ. 687

ದಿನಕ್ಕೊಂದು ಕಥೆ.                                                        ಮಿನಿಯ ಪುಸ್ತಕಪ್ರೀತಿ ಗುಬ್ಬಚ್ಚಿ ಸತೀಶ್‌ ಭಾನುವಾರದ ಒಂದು ದಿನ ಮಿನಿ ಅಪ್ಪ ಅಮ್ಮನ ಜೊತೆ ಬೆಂಗಳೂರಿಗೆ ಹೊರಟಳು. ಬಹಳ ತುಂಟಿಯಾದ ಅವಳು ಬಸ್ಸಿನಲ್ಲಿ ಹೋಗುವಾಗ ಅಪ್ಪ ಅಮ್ಮ ಎಷ್ಟೇ ಹೇಳಿದರೂ ತನ್ನ ತುಂಟತನವನ್ನು ಮುಂದುವರಿಸಿದ್ದಳು. ತನ್ನ ಆಟದಲ್ಲಿ ಅಮ್ಮನ ಕನ್ನಡಕಕ್ಕೆ ಕೈ ತಾಗಿಸಿ ಅದನ್ನು ಕೆಳಕ್ಕೆ ಬೀಳಿಸಿದಳು. ಬಿದ್ದ ರಭಸಕ್ಕೆ ಕನ್ನಡಕ ಒಡೆದು ಹೋಯಿತು. ಅಮ್ಮನಿಗೆ ಸಿಟ್ಟು ಬಂದು ಮಿನಿಗೆ ಒಂದು ಏಟನ್ನು ಹೊಡೆದರು. ಮಿನಿ ಮುನಿಸಿಕೊಂಡು ಕುಳಿತಳು. ಮಿನಿಯ ಅಪ್ಪ ಹೊಸ ಕನ್ನಡಕವನ್ನು ಬೆಂಗಳೂರಿನಲ್ಲಿ ಕೊಡಿಸುವುದಾಗಿ ತಮ್ಮ ಶ್ರೀಮತಿಯನ್ನು ಸಮಾಧಾನಿಸಿದರು. ಬೆಂಗಳೂರಿನ ಮೆಜಿಸ್ಟಿಕ್‌ನಲ್ಲಿ ಇಳಿದ ಕೂಡಲೇ ಮಿನಿಯ ಅಪ್ಪ ಕನ್ನಡಕದ ಅಂಗಡಿಯನ್ನು ಹುಡುಕಲು ಶುರುಮಾಡಿದರು. ಗಾಂಧಿಧಿನಗರದ ಆರಂಭದಲ್ಲೇ ಒಂದು ಕನ್ನಡಕದ ಅಂಗಡಿ ಕಂಡಿತು. ಅಲ್ಲಿಗೆ ಮೂವರೂ ಹೊಸ ಕನ್ನಡಕವನ್ನು ಖರೀದಿಸಲು ಹೋದರು. ಅಲ್ಲಿ ಹಳೆಯ ಕನ್ನಡಕವನ್ನು ಮತ್ತು ಅಮ್ಮನ ಕಣ್ಣುಗಳನ್ನು ಪರೀಕ್ಷಿಸಿ ಒಂದು ಗಂಟೆಯಲ್ಲಿ ಹೊಸ ಕನ್ನಡಕವನ್ನು ಸಿದ್ಧಮಾಡಿಕೊಡುವುದಾಗಿ ಹೇಳಿ ಅಲ್ಲಿರುವ ಯಾವುದಾದರೂ ಕನ್ನಡಕದ ಫ್ರೇಮನ್ನು ಆಯ್ಕೆ ಮಾಡಲು ಹೇಳಿದರು. ಆಗ ಮಿನಿ ಹಲವು ಫ್ರೇಂಗಳನ್ನು ತೋರಿಸಿ ಇದು ಚೆನ್ನಾಗಿದೆ, ಇದು ಚೆನ್ನಾಗಿದೆ ಎಂದು ಹೇಳುತ್ತಿದ್ದಳು. ಮಿನಿಯ ಅಮ್ಮನ ಸಿಟ್ಟು ಇನ್ನೂ ತಣ್ಣಗ