Posts

Showing posts from December, 2017

ದಿನಕ್ಕೊಂದು ಕಥೆ. 663

*🌻ದಿನಕ್ಕೊಂದು ಕಥೆ🌻                                ಅಂತರಂಗದ ಅರಿವು ವಿಶೇಷವಾದ ಅರಿವಿನ ಕಣ್ಣನ್ನು* ವಿಶೇಷವಾದ ಅರಿವಿನ ಕಣ್ಣನ್ನು ಉಳ್ಳವನೇ ಕವಿ. ಅರಿವಿನ ಮಹಾಸಾಗರವೇ ಆಗಿರುವ ಆ ಮಹಾದೇವನಿಗೆ ಕಾಣಲಾರದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅವನು ಹಿಂದು-ಇಂದು-ಮುಂದು ಎಲ್ಲದರ ಅರಿವಿರುವ ತ್ರಿಕಾಲ ಜ್ಞಾನಿ. ಈ ಸತ್ಯಸಂಗತಿಯನ್ನು ಅರಿಯದ ಕೆಲವರು ದೇವರ ಗುಡಿಯ ಹೊರಗೆ ಧೂಮಪಾನ ಮಾಡಿ, ಬೀಡಿ ಆರಿಸಿ ಒಳಗೆ ಹೋಗಿ ದೇವರಿಗೆ ಕೈಮುಗಿದು ಹೊರಗೆ ಬಂದು ಮತ್ತೆ ಬೀಡಿ ಹೊತ್ತಿಸುತ್ತಾರೆ! ಶಂಕರಾಚಾರ್ಯರು ಪರಮಜ್ಞಾನಿಗಳು. ಒಂದು ದಿನ ಅವರು ದೇಶ ಸಂಚಾರ ಮಾಡುತ್ತ ಹೊರಟಿದ್ದರು. ಅದು ಊರಿಂದೂರಿಗೆ ನಡೆದು ಹೋಗುವ ಕಾಲ. ದಣಿವಾರಿಸಿಕೊಳ್ಳಲೆಂದು ಒಂದು ಮರದಡಿಯಲ್ಲಿ ಕುಳಿತಿದ್ದರು. ಪಕ್ಕದ ಹೊಲದ ರೈತನು ಊಟಕ್ಕೆ ಕೂಡುತ್ತಿದ್ದನು. ಅದೇ ಮರದಡಿಯಲ್ಲಿ ಕುಳಿತಿದ್ದ ಶಂಕರಾಚಾರ್ಯರನ್ನು ನೋಡಿ ಅನಾಯಾಸವಾಗಿ ದೊರೆತ ಅತಿಥಿಗಳಿಗೆ ಊಟೋಪಚಾರ ಮಾಡಿಸಿ ಬಳಿಕ ತಾವು ಯಾರು? ಎಂದು ಕೇಳಿದ. ಹಸಿದವರಿಗೆ, ನೀರಡಿಸಿದವರಿಗೆ 'ನೀವು ಯಾರು?' ಎಂದು ಕೇಳಬಾರದು. ಇದು ಭಾರತೀಯ ಸಂಸ್ಕೃತಿ; ಅತಿಥಿ ಸತ್ಕಾರ ಮಾಡಿದ ಮೇಲೆಯೇ ರೈತನು 'ತಾವು ಯಾರು?' ಎಂದು ಕೇಳಿದ. ಕೂಡಲೇ ಅವರು ಸಂತಸದಿಂದ 'ನಾನು ಶಂಕರಾಚಾರ್ಯ' ಎಂದು ಹೇಳಿದರು. ಇದನ್ನು ಕೇಳಿದ ರೈತ ಅತ್ಯಾನಂದದಿಂದ 'ನಾನು ಬಹಳ ದಿನಗಳಿಂದ ತಮ್ಮ ದರ್ಶನಕ್ಕಾಗಿ ಹಂಬಲಿಸುತ್ತಿದ್ದೆ.

ದಿನಕ್ಕೊಂದು ಕಥೆ. 662

*🌻ದಿನಕ್ಕೊಂದು ಕಥೆ🌻*                          ತಿರುಗುಬಾಣ ಒಬ್ಬರಿಗೆ ಕೇಡು ಬಯಸಿದರೆ ತಮಗೇ ತಿರುಗುಬಾಣವಾಗುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಕಥೆ. ಒಂದು ಊರಿನಲ್ಲಿ ಒಬ್ಬ ಪಂಡಿತನಿದ್ದ. ಊರಿನ ಜನಗಳಿಗೆ ಯಾವುದೇ ಖಾಯಿಲೆ ಬಂದರೂ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಗುಳಿಗೆ ಮಾಡಿ ಮನೆಯಲ್ಲಿಯೇ ಎಲ್ಲರಿಗೂ ಕೊಟ್ಟು ನುಂಗಿಸುತ್ತಿದ್ದ. ಇವನ ಕೈ ಗುಣವೋ ಎಂಬಂತೆ ಇವನು ನೀಡಿದ ಔಷಧಿಗಳಿಂದ ಖಾಯಿಲೆ ಬಹಳ ಬೇಗ ವಾಸಿಯಾಗುತ್ತಿತ್ತು. ಇದರಿಂದ ಊರಿನಲ್ಲಿ ಬಹಳ ಪ್ರಖ್ಯಾತನಾದ ಪಂಡಿತನಾಗಿದ್ದ. ಯಾವುದೇ ಖಾಯಿಲೆ ಬಂದರೂ ಜನಗಳು ಇವನಲ್ಲಿಗೆ ಬಂದು ಔಷದಿ ಪಡೆದು ಹೋಗುತ್ತಿದ್ದುದ್ದರಿಂದ ಪಂಡಿತನ ಆದಾಯ ದಿನೇ ದಿನೇ ಹೆಚ್ಚುತ್ತಾ ಇತ್ತು. ಇದನ್ನು ಕಂಡು ಮನೋಹರ ಮತ್ತು ಅವನ ಗೆಳೆಯರಿಗೆ ಬಹಳ ಹೊಟ್ಟೆ ಉರಿ ಬಂದಿತ್ತು. ಹೇಗಾದರೂ ಮಾಡಿ ಇವನ ಆದಾಯದಲ್ಲಿ ತಮಗೂ ಸ್ವಲ್ಪ ಹಣ ನೀಡಬೇಕೆಂದು ಪೀಡಿಸುತ್ತಿದ್ದರು. ಇದಕ್ಕೆ ಪಂಡಿತ ಸುತರಾಂ ಒಪ್ಪಿರುವುದಿಲ್ಲ. ಇದರಿಂದ ಕೋಪಗೊಂಡು ಇವನ ಆದಾಯಕ್ಕೆ ಕಡಿವಾಣ ಹಾಕಿ ಇವನನ್ನು ಊರಿಂದಲೇ ಓಡಿಸಬೇಕೆಂದು ಮನಸ್ಸು ಮಾಡಿದ್ದರು. ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದರು. ಒಂದು ದಿನ ಮನೋಹರನ ಸ್ನೇಹಿತರಲ್ಲಿ ಒಬ್ಬನಿಗೆ ಜ್ವರ ಬಂದಿತ್ತು. ಇವರೂ ಪಂಡಿತನ ಬಳಿಗೆ ಹೋಗಿ ಔಷಧಿ ತೆಗೆದುಕೊಳ್ಳಲು ಹೋದರು. ಅಲ್ಲಿಯೇ ಗುಳಿಗೆ ನುಂಗಿಸಿದಾಗ ಇದ್ದಕ್ಕಿದ್ದಂತೆ ಆ ಹುಡುಗ ಬಿದ್ದು ಬಿಟ್ಟ. ಇದರಿಂದ ಅಲ್ಲಿದ್ದ ಕೆಲವರಲ್ಲಿ

ದಿನಕ್ಕೊಂದು ಕಥೆ. 661

*🌻ದಿನಕ್ಕೊಂದು ಕಥೆ🌻                                     ಜ್ಞಾನ ಮನುಷ್ಯನ ಅಮೂಲ್ಯ ಸಿರಿ.* ಜ್ಞಾನವು ಅಮೂಲ್ಯ ಸಿರಿ. ಅದರಿಂದ ಜೀವನದಲ್ಲಿ ಸುಖ, ಶಾಂತಿ. ವಿಕಾಸವಾದ ಸಿದ್ಧಾಂತದ ಪ್ರಕಾರ ಕಾಲ ಕಾಲಕ್ಕೆ ಮಾನವನ ದೇಹವಷ್ಟೇ ವಿಕಾಸವಾಗಲಿಲ್ಲ. ಅದರೊಂದಿಗೆ ಜ್ಞಾನವೂ ವಿಕಾಸವಾಯಿತು.ತನು, ಮನ, ಬುದ್ಧಿ ಇವು ನಮ್ಮಲ್ಲಿರುವ ಜ್ಞಾನಸಾಧನಗಳು. ಅವುಗಳನ್ನು ನಾವು ಲೌಕಿಕ ಸಿರಿ ಸಂಪದದ ಗಳಿಕೆಗಾಗಿ ಬಳಸುತ್ತೇವೆ. ಹಗಲು ರಾತ್ರಿ ಪ್ರಾಪಂಚಿಕ ಸುಖಕ್ಕಾಗಿಯೇ ದುಡಿಯುತ್ತೇವೆ. ಆದರೆ ಮಹಾತ್ಮರು ಸತ್ಯದ ಸಂಶೋಧನೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ. ಅವರ ಪರಿಶ್ರಮದಿಂದ ಪ್ರಪಂಚವೇ ಸಂಪದ್ಭರಿತವಾಯಿತು. ಮೇಡಂ ಕ್ಯೂರಿ ಮಹಾವಿಜ್ಞಾನಿ. ಆದರೆ ಮೈತುಂಬ ಬಟ್ಟೆ, ಹೊಟ್ಟೆ ತುಂಬ ಊಟವೂ ಒಮ್ಮೊಮ್ಮೆ ಇರುತ್ತಿರಲಿಲ್ಲ. ಅಂಥ ಬಡತನದಲ್ಲಿಯೇ ಅವಳು ಅದೆಷ್ಟು ನಿಷ್ಠೆಯಿಂದ ಸತ್ಯದ ಸಂಶೋಧನೆಗೆ ತೊಡಗಿದಳು! ಅದರಿಂದ ಅವರ ಮನೆತನಕ್ಕೆ ಐದು ನೊಬೆಲ್‌ ಪಾರಿತೋಷಕ, ಪುರಸ್ಕಾರಗಳು ದೊರೆತವು. ಅವಳಿಗೆ ಎರಡು, ಗಂಡನಿಗೆ ಒಂದು, ಮಗಳಿಗೆ ಒಂದು, ಅಳಿಯನಿಗೂ ಒಂದು. ಬಹುಶಃ ಪ್ರಪಂಚದಲ್ಲಿಯೇ ಇದೊಂದು ಅಪರೂಪದ ಘಟನೆ. ಒಂದು ದಿನ ಹಿರಿಯ ಪತ್ರಕರ್ತರು ಅವಳನ್ನು ಕಾಣಲು ಬಂದರು. ಮೇರಿ ತನ್ನ ಮನೆಯ ಮುಂದಿನ ಕೈತೋಟದಲ್ಲಿ ಕಳೆ ತೆಗೆಯುತ್ತ ಕುಳಿತಿದ್ದಳು. 'ಮೇಡಂ ಕ್ಯೂರಿ ಎಲ್ಲಿ?' ಎಂದು ಆ ಪತ್ರಕರ್ತರು ಕ್ಯೂರಿಗೆ ಕೇಳಿದರು. 'ಕ್ಯೂರಿ ಮನೆಯ ಒಳಗಿಲ್ಲ. ನೀ

ದಿನಕ್ಕೊಂದು ಕಥೆ. 660

*ಪ್ರಾಮಾಣಿಕತೆ* ಒಂದು ಸಂಶೋಧನಾ ಕೇಂದ್ರದಲ್ಲಿ  ವಿಜ್ಞಾನಿಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.  ಆ ಹುದ್ದೆಗೆ ಸಾವಿರಾರು ಅರ್ಜಿಗಳು ಬಂದದ್ದವು.  ಸಂದರ್ಶಕ್ಕೆ ಕೇವಲ ನೂರು ಅಭ್ಯರ್ಥಿಗಳನ್ನು ಕರೆದಿದ್ದರು.  ಅಂದು ಸಂದರ್ಶನ ನಡೆಸಿಕೊಡಲು ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ ವಿ ರಾಮನ್ ಇದ್ದರು . ಸಂದರ್ಶನದಲ್ಲಿ ಉತ್ತಮವಾದ ಪ್ರಶ್ನೆಗಳನ್ನು ಕೇಳಲಾಯಿತು.  ಸರಿಯಾದ ಉತ್ತರವನ್ನು ನೀಡಲಾದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಮಿಕ್ಕ ಅಭ್ಯರ್ಥಿಗಳಿಗೆ ನಿರಾಶೆ ಎನಿಸಿದರು ಸರ್ ಸಿ ವಿ ಅವರೊಡನೆ ಮಾತನಾಡುವ ಮತ್ತು ಅವರ ಜೊತೆ ಕೂತ ಸಮಾಧಾನ ಇತ್ತು.     ಸಂದರ್ಶನ ಮುಗಿಸಿ ಹೊರ ಬಂದ ಸರ್ ಸಿ ವಿ ಯವರ ಕಣ್ಣಿಗೆ ಒಬ್ಬ ಯುವಕ ತಮಗೆ ಕಾಯುತ್ತಿರುವಂತೆ ಬಾಸವಾಯಿತು.  ನೇರ ನೋಡುವಾಗ ಸಂದರ್ಶನಕ್ಕೆ ಬಂದ ಯುವಕ ಎಂದು ತಕ್ಷಣ ಅರ್ಥವಾಯಿತು. ತಾವೇ ಹತ್ತಿರ ಹೋಗಿ ಆ ಯುವಕನ ಬೆನ್ನು ಸವರುತ್ತ " ಚಿಂತಿಸ ಬೇಡ, ಮುಂದಿನ ಸಾರಿ ಚನ್ನಾಗಿ ತಯಾರಿ ನಡೆಸು.  ಖಂಡಿತವಾಗಿ ಆಯ್ಕೆಯಾಗುತ್ತಿಯ." ಎಂದು ಸಮಾಧಾನ ಮಾಡಿದರು.  ಆದರೆ, ಆ ಯುವಕ " ಸರ್, ನಾನು ಅದಕ್ಕಾಗಿ ನಿಂತಿಲ್ಲ. ನನಗೆ ನನ್ನ ಪ್ರಯಾಣ ಭತ್ಯೆ ಕೊಡುವಾಗ ತಪ್ಪು ಲೆಕ್ಕಾಚಾರ ಹಾಕಿ ಏಳು ರೂಪಾಯಿ ಹೆಚ್ಚಿಗೆ ಕೊಟ್ಟಿದ್ದಾರೆ.  ಇದನ್ನು ಆಫೀಸಿನಲ್ಲಿ ತಿಳಿಸುವಾಗ ಕೌಂಟರ್ ಮುಚ್ಚಲಾಗಿದೆ, ನೀವೇ ಇಟ್ಟುಕೊಳ್ಳಿ  ಎಂದು ಹೇಳಿದರು.  ಆದರೆ,  ನನಗೆ ಈ ಹೆಚ್ಚಿನ ಬೇಡ ಸಾರ್. "

ದಿನಕ್ಕೊಂದು ಕಥೆ. 659

*🌻ದಿನಕ್ಕೊಂದು ಕಥೆ🌻                                     ಆತ್ಮ ನಿಯಂತ್ರಣ ಬಹು ಮುಖ್ಯ.* ಈ ಜಗತ್ತಿನಲ್ಲಿ ಜನರು ತುಂಬಾ ಆಸೆ-ಆಕಾಂಕ್ಷೆಗಳುಳ್ಳವರಾಗಿದ್ದು ಅವನ್ನು ಪೂರೈಸುವಂತೆ ದೇವರನ್ನು ಪ್ರಾರ್ಥಿಸುತ್ತಿರುತ್ತಾರೆ. ಸಾಕಷ್ಟು ಪ್ರಯತ್ನ ಕೂಡ ಮಾಡುತ್ತಿರುತ್ತಾರೆ. ಅಕಸ್ಮಾತ್ತಾಗಿ ತಮ್ಮ ನಿರೀಕ್ಷೆಗಳು ಪೂರೈಸದಿದ್ದರೆ ನಿರಾಶರಾಗುವವರು ಇದ್ದಾರೆ; ನಿರಾಶೆಯು ವೈರಾಗ್ಯ ಮತ್ತು ಆತ್ಮಹತ್ಯೆಯಂಥ ಕೃತ್ಯಗಳಿಗೆ ಕಾರಣವಾಗಬಾರದು. ಆಶಾವಾದಿಗಳಾಗಿ, ಭಗವಂತನನ್ನು ನಂಬಿ ಮರಳಿ ಯತ್ನವ ಮಾಡಿದರೆ, ಯಶಸ್ವಿಯಾಗಲು ಸಾಧ್ಯ ಎಂಬ ಸಂದೇಶ ನೀಡುವ ಒಂದು ಉದ್ಬೋಧಕ ಪ್ರಸಂಗ ಇಲ್ಲಿದೆ. ಮಹಾರಾಷ್ಟ್ರದ ರೋಜನ್‌ ಎಂಬ ನಗರದಲ್ಲಿ ಒಬ್ಬ ಬ್ರಾಹ್ಮಣನಿದ್ದ. ಈತನ ಪತ್ನಿಯು ಆದರ್ಶ ಗೃಹಿಣಿಯಾಗಿದ್ದರೂ ಪ್ರತಿದಿನವೂ ಪತಿ-ಪತ್ನಿಯರ ನಡುವೆ ಜಗಳವಾಗುತ್ತಿತ್ತು. ಸಿಟ್ಟು ಬಂದಾಗ ಬ್ರಾಹ್ಮಣ ತನ್ನ ಪತ್ನಿಯೊಡನೆ ''ನೀನು ನಾನು ಹೇಳಿದ ಹಾಗೆ ಕೇಳದಿದ್ದರೆ ನಾನು ಸಂತ ಶ್ರೀ ಸಂತೋಬಾ ಗುರುಗಳ ಶಿಷ್ಯನಾಗಿ ಸನ್ಯಾಸಿಯಾಗಿ ಬಿಡುತ್ತೇನೆ,'' ಎಂದು ಹೆದರಿಸುತ್ತಿದ್ದ. ಪತ್ನಿ ಗಾಬರಿಯಾಗಿದ್ದಳು. ಆದರೆ ಒಂದು ದಿನ ಆ ಗಂಡನಿಲ್ಲದಿರುವಾಗಲೇ ಆ ಮನೆಗೆ ಸುಪ್ರಸಿದ್ಧ ಸಂತ ಶ್ರೀ ಸಂತೋಬಾ ಗುರುಗಳು ಭಿಕ್ಷೆಗೆಂದು ದಯಮಾಡಿಸಿದರು. ಆಗ ಬ್ರಾಹ್ಮಣ ಪತ್ನಿಯು ''ಸಂತ ಮಹಾರಾಜರೆ, ನನ್ನ ಗಂಡ ಆಗಾಗ ನಾನು ಸಂತರ ಶಿಷ್ಯನಾಗಿ ಸನ್ಯಾಸಿಯಾಗುತ್ತೇನೆಂದು

ದಿನಕ್ಕೊಂದು ಕಥೆ. 658

🌻 *ದಿನಕ್ಕೊಂದು ಕಥೆ*🌻                    *ದೇಶಪ್ರೇಮಿಗಳ ಆದರ್ಶ ಪಥ* ಮಾನವನ ಜೀವನದಲ್ಲಿ ಅನೇಕ ಬಗೆಯ ಅವಕಾಶಗಳು ದೊರೆಯುತ್ತವೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ನಾನಾ ಬಗೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಾಸ್ತ್ರ, ಗಣಿತ, ವಿಜ್ಞಾನ, ಕ್ರೀಡೆ ಇತ್ಯಾದಿ ಪರಿಚಯದೊಂದಿಗೆ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಸೂಕ್ತ ಅವಕಾಶಗಳು ಒದಗಿಬರುತ್ತವೆ. ಸೂಕ್ತ ಸಂದರ್ಭ ಸನ್ನಿವೇಶಗಳಿಂದ ಪ್ರೇರಣೆ, ಸ್ಪೂರ್ತಿ ದೊರೆತರೆ, ಒಬ್ಬ ವ್ಯಕ್ತಿಯನ್ನು ಕಲಾವಿದನೋ, ಕ್ರೀಡಾಪಟುವೋ, ಕವಿಯೋ, ವಿಜ್ಞಾನಿಯೋ, ವಿದ್ವಾಂಸನೋ ಆಗುವಂತೆ ಮಾಡಲು ಸಾಧ್ಯ. ಆದರೆ, ಒಬ್ಬ ವ್ಯಕ್ತಿಗೊಂದು ಉದ್ದೇಶ, ಗುರಿ, ಲಕ್ಷ್ಯವಿದ್ದಾಗ ಅದಕ್ಕೆ ಅನುಗುಣವಾದ ಹಾಗೂ ತನ್ನ ಅಭಿರುಚಿಗೆ ಹೊಂದಿಕೆಯಾದ ಹವ್ಯಾಸವನ್ನೇ ಅವನು ಆಯ್ದುಕೊಳ್ಳುತ್ತಾನೆ ಎಂಬುದಕ್ಕೆ ಖ್ಯಾತ ವಿದ್ವಾಂಸರಾದ ಶ್ರೀಪಾದ ದಾಮೋದರ ಸಾತವೇಲಕರ್ ಅವರ ಉದಾಹರಣೆಯೇ ಜ್ವಲಂತ ಸಾಕ್ಷಿ. ಮಹಾರಾಷ್ಟ್ರದಲ್ಲಿ ವೈದಿಕ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದ ಶ್ರೀಪಾದ ದಾಮೋದರ ಸಾತವೇಲಕರ್ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ವಿಶೇಷವಾದ ಆಸಕ್ತಿ ಉಳ್ಳವರು ಹಾಗೂ ವೇದ ಶಾಸ್ತ್ರ ಪುರಾಣಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಇದರ ಜತೆಗೇ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಕಲಾವಿದರೂ ಆಗಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ಅವರು ನಿಸರ್ಗದ ಸೌಂದರ್ಯವನ್ನು, ವರ್ಣಚಿತ್ರಗಳಲ್ಲಿ

ದಿನಕ್ಕೊಂದು ಕಥೆ. 657

ಬರಗಾಲದಲ್ಲೂ 200 ಹಸು ಸಾಕಿ, ದಿನಕ್ಕೆ 500 ಲೀ. ಹಾಲು ಉತ್ಪಾದಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದುರ್ಗದ ಮಹಿಳೆ ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ. ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬರಗಾಲದಿಂದ ಬೆಳೆಗಳು ಕೈಕೊಟ್ಟಾಗ ಹೈನುಗಾರಿಕೆ ಮೊರೆಹೋದ ರೋಜಾ, ಹಸು ಸಾಕಾಣಿಕೆ ಮೂಲಕ ತಮ್ಮ ತೋಟದ ಮನೆಯ ಪಕ್ಕದ ಶೆಡ್ ಒಂದರಲ್ಲಿ ಸುಮಾರು 200 ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ. ಹಸುಗಳಿಗೆ ಸಮಯಕ್ಕೆ ಸರಿಯಾಗಿ ಒಣ ಹಾಗೂ ಹಸಿರು ಮೇವು, ಬೂಸಾ ಸೇರಿದಂತೆ ಪೌಷ್ಠಿಕ ಆಹಾರವನ್ನ ಕೊಟ್ಟು ತಮ್ಮ ಮಕ್ಕಳಂತೆ ಹಸುಗಳನ್ನ ಆರೋಗ್ಯವಾಗಿ ನೋಡಿಕೊಳ್ಳುತ್ತಿದ್ದಾರೆ. ರೋಜಾ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ 500 ಲೀಟರ್ ಹಾಲು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ ಲಾಭ ಗಳಿಸುತ್ತಿದ್ದಾರೆ. ರೋಜಾ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸುವಿನ ಸಗಣಿಯನ್ನ ಗೊಬ್ಬರವನ್ನಾಗಿ ಬಳಸಿಕೊಂಡು ಹಸಿ ಮೇವನ್ನ ಬೆಳೆದು ಹಸುಗಳಿಗೆ ಬೇಕಾದ ಪೌಷ್ಟಿಕಾಂಶವುಳ್ಳ ಆಹಾರ ನೀಡುತ್ತಿದ್ದ

ದಿನಕ್ಕೊಂದು ಕಥೆ. 656

*🌻ದಿನಕ್ಕೊಂದು ಕಥೆ🌻                         ಮದ್ಯಪಾನ ಪತನಕ್ಕೆ ಕಾರಣ.* ಈ ಪ್ರಪಂಚದಲ್ಲಿ ಅನೇಕ ದುರಭ್ಯಾಸ, ದುಶ್ಚಟಗಳಿಗೆ ಬಲಿ ಬಿದ್ದು ತಮ್ಮ ಜೀವನದಲ್ಲಿ ಉಜ್ವಲ ಭವಿಷ್ಯತ್ತನ್ನೇ ಹಾಳು ಮಾಡಿಕೊಳ್ಳುವ ಜನರಿದ್ದಾರೆ. ಅಂತಹ ದುಶ್ಚಟಗಳಲ್ಲಿ ಮದ್ಯಪಾನವೂ ಒಂದು. ಇದರ ನಿವಾರಣೆಗಾಗಿ ಶ್ರಮಿಸಿದ ಸಂತರೊಬ್ಬರ ನಿದರ್ಶನವೊಂದು ಹೃದಯಸ್ಪರ್ಶಿಯಾಗಿದೆ. ಒಮ್ಮೆ ಸಂತರೊಬ್ಬರು ನೌಕೆಯನ್ನೇರಿ ಗಂಗಾ ನದಿಯನ್ನು ದಾಟುತ್ತಿದ್ದರು. ಆದರೆ ಆ ನೌಕೆಯ ಅಂಬಿಗನು ಕುಡುಕನೆಂದು ತಿಳಿದ ಸಂತರಿಗೆ ಗಾಬರಿಯಾಯಿತು. ಏಕೆಂದರೆ ಆತ ಚೆನ್ನಾಗಿ ದೋಣಿಸಲು ಅಸಮರ್ಥನಾಗಿದ್ದನು. ಸಂತರು ಆ ಅಂಬಿಗನೊಡನೆ ಹೇಳಿದರು- 'ಲೋ ತಮ್ಮ ಕುಡಿದ ಅಮಲಿನಲ್ಲಿ ನೌಕೆ ನಡೆಸಬಾರದು. ಅಮಲಿನಿಂದಾಗಿ ಶರೀರ, ಬುದ್ಧಿಗಳೆರಡೂ ಕೆಡುತ್ತವೆ. ನೀನು ನೌಕೆಯನ್ನು ಮುಳುಗಿಸಿ ಬಿಡುವ ಅಪಾಯವಿದೆ'. ಈ ಮಾತು ಕೇಳಿದ ಅಂಬಿಗ ಸಿಟ್ಟುಗೊಂಡು, ಸಂತರ ಕೈಯನ್ನು ಒತ್ತಿ ಹಿಡಿದು ನುಡಿದ- 'ಬಾಬಾಜೀ, ನಿಮ್ಮ ಉಪದೇಶ ನನಗೆ ಬೇಕಿಲ್ಲ. ಹೆಚ್ಚು ಮಾತಾಡಿದರೆ ನಿಮ್ಮನ್ನೇ ಎತ್ತಿ ನದಿಗೆ ಎಸೆದು ಬಿಡ್ತೇನೆ'. ಆಗ ಆಕಾಶದಿಂದ ಒಂದು ಆಕಾಶವಾಣಿ ಕೇಳಿಸಿತು- 'ಇಲ್ಲಿ ಸಂತರನ್ನು ಅಪಮಾನಿಸಿದ ಅಂಬಿಗನ ದೋಣಿ ಮುಳುಗಲಿದೆ'. ಆಗ ಬೀಸಿದ ಬಿರುಗಾಳಿಗೆ ದೋಣಿ ಅಲ್ಲಾಡತೊಡಗಿತು. ತಕ್ಷ ಣವೇ ಸಂತರು ಭಗವಂತನನ್ನು ಪ್ರಾರ್ಥಿಸಿದರು- 'ಹೇ ಭಗವಾನ್‌, ಈ ಬಡಪಾಯಿ ಮುಗ್ಧನಿದ್ದಾನೆ. ಕುಡಿದ