Posts

Showing posts from January, 2017

ದಿನಕ್ಕೊಂದು ಕಥೆ 301

*🌻ದಿನಕ್ಕೊಂದು ಕಥೆ🌻*                                                                       ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಹೃದಯದ ಭಾವನೆಗಳನ್ನು ಇನ್ನೊಬ್ಬ ವ್ಯಕ್ತಿಗೆ ತಲುಪಿಸಲು ಭಾಷೆಯನ್ನು ಬಳಸುತ್ತಾನೆ. ಒಂದೊಂದು ದೇಶದಲ್ಲಿ ಜನರು ಒಂದೊಂದು ಭಾಷೆಯನ್ನು ಬಳಸುತ್ತಾರೆ. ಕೆಲವು ಜನರು ತಮ್ಮ ದೇಶದ ಭಾಷೆಯನ್ನು ಮಾತ್ರ ಭಾಷೆ ಎನ್ನುತ್ತಾರೆ. ಕೆಲವು ಜನರು ತಮ್ಮ ಮಾತೃ ಭಾಷೆಯನ್ನಲ್ಲದೆ ನೆರೆಯ ಪ್ರಾಂತ್ಯದ ಹಾಗೂ ನೆರೆಯ ರಾಜ್ಯ ಮತ್ತು ರಾಷ್ಟ್ರಗಳ ಭಾಷೆಗಳನ್ನು ಕುರಿತು ಬಹುಭಾಷಾ ವಿದ್ವಾಂಸರು ಎನಿಸುತ್ತಾರೆ. ಇಂತಹ ವಿದ್ವಾಂಸರ ಮಾತೃ ಭಾಷೆಯನ್ನು ಗುರುತಿಸುವ ಬಗ್ಗೆ ಸ್ವಾರಸ್ಯಕರ ಪ್ರಸಂಗವೊಂದು ಹೀಗಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಗೋಪಾಲ ಭಾಂಡರೆಂಬ ಸುಪ್ರಸಿದ್ಧ ವಿದ್ವಾಂಸರ ಪ್ರಸಂಗಗಳು ಬಹು ಪ್ರಚಲಿತವಾಗಿವೆ. ಅವರು ತಮ್ಮ ಬುದ್ಧಿವಂತಿಕೆಯ ಬಲದಿಂದ ಅಲ್ಲಿಯ ರಾಜನಾದ ಕೃಷ್ಣಚಂದ್ರನ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂದು ಮನ್ನಣೆ ಗಳಿಸಿದ್ದರಲ್ಲದೆ ರಾಜನಿಗೆ ಇಲ್ಲವೇ ಪ್ರಜೆಗಳಿಗೆ ಯಾವುದೇ ಸಮಸ್ಯೆ ಎದುರಾದಾಗ ಬಹು ಜಾಣ್ಮೆಯಿಂದ ನಿವಾರಿಸುತ್ತಿದ್ದರು. ಒಮ್ಮೆ ರಾಜಾ ಕೃಷ್ಣಚಂದ್ರನ ಆಸ್ಥಾನಕ್ಕೆ ಬಹು ಭಾಷಾಕೋವಿದರಾದ ವಿದ್ವಾಂಸರೊಬ್ಬರ ಆಗಮನವಾಯಿತು. ಅನೇಕ ಭಾಷೆಗಳನ್ನು ಧಾರಾಕಾರವಾಗಿ ಬಳಸುತ್ತಿದ್ದ ಆ ಘನ ವಿದ್ವಾಂಸರ ಮಾತೃ ಭಾಷೆ ಯಾವುದೆಂದು ಯಾರಿಗೂ ತಿಳಿಸಿರಲಿಲ್ಲ. ಆ ಮಾತೃ ಭಾಷೆಯನ್ನು ಕಂ

ದಿನಕ್ಕೊಂದು ಕಥೆ 300

*🌻ದಿನಕ್ಕೊಂದು ಕಥೆ🌻                                                    *ಹುಮ್ಮಸ್ಸು ಇದ್ದರೆ ಯಶಸ್ಸು! ಉತ್ಸಾಹ ಇದ್ದರೆ ಪ್ರೋತ್ಸಾಹ!* ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹುಮ್ಮಸ್ಸಿದ್ದವರಿಗೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗುತ್ತದೆ! ಸಾಧನೆಯ ಹಾದಿಯಲ್ಲಿ ಉತ್ಸಾಹದಿಂದ ಸಾಗುವವರಿಗೆ ಪ್ರೋತ್ಸಾಹವೂ ಸಿಗುತ್ತದೆ! ಇವೆರಡೂ ಸತ್ಯಗಳನ್ನು ತೋರಿಸುವ ಘಟನೆಯೊಂದು ಇಲ್ಲಿದೆ. ಪೂಜ್ಯ ಭಗವಾನ್ ಮಹಾವೀರರು ತಮ್ಮ ಒಬ್ಬ ಸಂಗಡಿಗ ಗೋಶಾಲಕ ಎಂಬುವವರೊಡನೆ ಯಾವುದೋ ಊರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ದಾರಿ ಪಕ್ಕದಲ್ಲಿ ಬೆಳೆಯುತ್ತಿದ್ದ ಪುಟ್ಟ ಗಿಡವನ್ನು ಗಮನಿಸಿದ ಗೋಶಾಲಕರು ‘ಸ್ವಾಮಿ, ಈ ಪುಟ್ಟ ಗಿಡವನ್ನು ನೋಡಿದಿರಾ? ಇದು ಮುಂದೇನಾಗುತ್ತದೆ?’ ಎಂದು ಕೇಳಿದರು. ಭಗವಾನರು ಆ ಗಿಡದ ಬಳಿ ಹೋದರು. ಅದನ್ನೊಮ್ಮೆ ದಿಟ್ಟಿಸಿ ನೋಡಿದರು. ಅದನ್ನು ಪ್ರೀತಿಯಿಂದ ಸವರಿದರು.  ಆನಂತರ ‘ಇದು ಮುಂದೊಂದು ದಿನ ದೊಡ್ಡ ಮರವಾಗುತ್ತದೆ. ಹೂವು ಹಣ್ಣುಗಳನ್ನು ಬಿಡುತ್ತದೆ. ದಾರಿಹೋಕರಿಗೆ ಆಶ್ರಯವಾಗುತ್ತದೆ. ನೂರಾರು ವರ್ಷ ಬದುಕುತ್ತದೆ’ ಎಂದರು. ಗೋಶಾಲಕರು ‘ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ?’ ಎಂದು ಕೇಳಿದರು. ಭಗವಾನರು ನಸುನಗುತ್ತಾ ‘ನಾನು ಪ್ರೀತಿಯಿಂದ ಅದರ ಮೈಸವರಿದೆ. ಅದನ್ನು ಮಾತನಾಡಿಸಿದೆ. ಆಗ ಅದರ ಆಕಾಂಕ್ಷೆಯನ್ನೂ, ಹುಮ್ಮಸ್ಸನ್ನೂ ಅರ್ಥ ಮಾಡಿಕೊಂಡೆ’ ಎಂದರು. ಆಗ ಗೋಶಾಲಕರು ಗಟ್ಟಿಯಾಗಿ ನಕ್ಕರು. ನೇರವಾಗಿ ಗಿಡದ ಬಳಿ

ದಿನಕ್ಕೊಂದು ಕಥೆ 299

*🌻ದಿನಕ್ಕೊಂದು ಕಥೆ🌻                                                                                                              *ಮೃತ್ಯುವೆಂಬುದು ಇಲ್ಲ!*                                                                ಓಶೋ ಇಂದು ಬೆಳಿಗ್ಗೆ ಯಾರೋ ಒಬ್ಬರು ನನ್ನಲ್ಲಿ ಕೇಳುತ್ತಿದ್ದರು. ಮೃತ್ಯು ಎಂದರೇನು? ಅವರಿಗೆ ನಾನು ಹೇಳಿದೆ. ಯಾರಿಗೆ ಜೀವನ ತಿಳಿದಿರುವುದಿಲ್ಲವೋ ಅವರಿಗೆ ಮಾತ್ರವೇ ಮೃತ್ಯು ಕಾಣಿಸುವುದು. ಯಾರಿಗೆ ಜೀವನ ತಿಳಿದಿರುವುದೋ ಅವರಿಗೆ ಮೃತ್ಯುವೆಂಬುದೇ ಇರುವುದಿಲ್ಲ. ಆದ್ದರಿಂದ ಮೃತ್ಯುವನ್ನು ತಿಳಿಯುವ ಉಪಾಯವಿದೆ. ಯಾವಾಗ ನೀವು ಮೃತ್ಯುವನ್ನು ಅರಿಯುವಿರೋ ಆಗ ನಿಮಗೆ ತಿಳಿಯುವುದು ಮೃತ್ಯುವೆಂಬುದು ಇಲ್ಲ ಎಂದು. ಆದರೆ ಮೃತ್ಯುವಿನಿಂದ ಓಡಿಹೋಗುವ ಯಾವುದೇ ಉಪಾಯ ಇಲ್ಲ. ಏಕೆಂದರೆ ಹೀಗೆ ಓಡಿಹೋಗುವವನು ಮೃತ್ಯುವಿನ ಇರುವಿಕೆಯನ್ನು ಒಪ್ಪಿಕೊಂಡಿರುವವನಾಗಿರಬೇಕು ಹಾಗೂ ಆ ಮೃತ್ಯು ಆತನ ಹಿಂದೆ ಓಡಿ ಬರುತ್ತಲೇ ಇರುವುದು. ಒಂದು ಸಣ್ಣ ಕಥೆಯೊಂದಿಗೆ ಕೊನೆಯ ಮಾತುಗಳನ್ನು ಹೇಳ ಬಯಸುತ್ತೇನೆ. ಒಬ್ಬ ರಾಜನ ಕುರಿತು ಒಂದು ಕಾಲ್ಪನಿಕ ಕಥೆ ಪ್ರಚಲಿತದಲ್ಲಿದೆ. ಒಂದು ಬೆಳಗಿನ ಜಾವ ಆತ ಕೆಟ್ಟ ಕನಸು ಕಂಡ. ಕನಸಿನಲ್ಲಿ ಮೃತ್ಯು ಅವನ ಹಿಂದೆಯೇ ನಿಂತಿತ್ತು. ಆತ ಉದ್ಯಾನವನದ ಒಂದು ಮರದ ಸಮೀಪದಲ್ಲಿ ನಿಂತಿದ್ದ. ಮೃತ್ಯು ಆತನ ಹಿಂದೆ ನಿಂತಿತ್ತು. ಆತ ನೀನು ಯಾರು? ಎಂದು ಕೇಳಿದಾಗ ಅದು ನಾನು ಮೃತ್ಯ

ದಿನಕ್ಕೊಂದು ಕಥೆ 298

*🌻ದಿನಕ್ಕೊಂದು ಕಥೆ🌻                                                                                       *ಯಾರಿಗೆ ಗೊತ್ತು ಆಕೆಗದು ಜೀವನದ ಕೊನೆಯ ಡ್ರೈವ್ ಇರಬಹುದು!* ಇದು ಟ್ಯಾಕ್ಸಿ ಡ್ರೈವರ್‌ನೊಬ್ಬ ತನ್ನ ಡೈರಿಯಲ್ಲಿ ಬರೆದುಕೊಂಡ ಘಟನೆ. ಅವತ್ತು ಆಗಲೇ ಸಂಜೆಗತ್ತಲು ಕವಿದಿತ್ತು. ಬೆಳಗ್ಗೆಯಿಂದ ಡ್ರೈವ್ ಮಾಡಿ, ಬೇರೆ ಬೇರೆ ರೀತಿಯ ಜನರೊಂದಿಗೆ ವ್ಯವಹರಿಸಿ ದೇಹಕ್ಕೆ, ಮನಸ್ಸಿಗೆ ದಣಿವಾಗಿತ್ತು. ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಯಾರೋ ಫೋನ್ ಮಾಡಿ ಬರ ಹೇಳಿದರು. ‘ಇಲ್ಲ ಬೇರೆ ಟ್ಯಾಕ್ಸಿಗೆ ಹೇಳಿ. ಇವತ್ತಿನ ಟ್ರಿಪ್ ಮುಗಿದಿದೆ’ ಎಂದು ಹೇಳಬೇಕೆನಿಸಿದರೂ ಯಾಕೋ ಹೇಳಲಿಲ್ಲ. ಅವರು ಹೇಳಿದ ಅಡ್ರೆಸ್‌ಗೆ ಹೋದೆ. ಅದೊಂದು ಹಳೆಯ ಮನೆ. ಅಲ್ಲಿ ಜನವಾಸವಿದೆ ಎಂದು ಹೇಳಿದರೆ ನಂಬುವುದೇ ಕಷ್ಟ. ನಾನು ಕಾರ್ ನಿಲ್ಲಿಸಿ ಒಂದೆರಡು ಬಾರಿ ಹಾರ್ನ್ ಮಾಡಿದೆ. ಯಾರೂ ಬಾಗಿಲು ತೆರೆಯಲಿಲ್ಲ. ಇದು ತಪ್ಪು ಅಡ್ರೆಸ್ ಇರಬಹುದೇ, ವಾಪಸ್ ಹೋಗಿಬಿಡೋಣವೇ ಅನಿಸಿತು. ಏನಾದರಾಗಲಿ ನೋಡೋಣ ಎಂದು ಕಾರಿನಿಂದಿಳಿದು ಮನೆ ಬಾಗಿಲು ತಟ್ಟಿದೆ. ಒಳಗಿನಿಂದ ಯಾರೋ ಕ್ಷೀಣ ದನಿಯಲ್ಲಿ ‘ಒಂದು ನಿಮಿಷ’ ಎಂದರು. ಒಳಗಿನಿಂದ ಅಸ್ಪಷ್ಟವಾಗಿ ಸದ್ದು ಕೇಳಿ ಬರುತ್ತಿತ್ತು. ಕೆಲ ಕ್ಷಣಗಳ ಮೌನದ ನಂತರ 90-95 ವರ್ಷದ ಮುದುಕಿಯೊಬ್ಬರು ನಿಧಾನವಾಗಿ ಬಾಗಿಲು ತೆರೆದರು. ಆಕೆಯ ಪಕ್ಕದಲ್ಲಿ ಸಾಧಾರಣ ಗಾತ್ರದ ಸೂಟ್‌ಕೇಸ್ ಒಂದಿತ್ತು. ಮನೆಯೊಳಗಿದ್ದ ಎಲ್ಲ ಫ

ದಿನಕ್ಕೊಂದು ಕಥೆ 297

*🌻ದಿನಕ್ಕೊಂದು ಕಥೆ*🌻 ಹಣ್ಣು ಹಣ್ಣು ಮುದುಕನೊಬ್ಬ ಮಗ-ಸೊಸೆ, ನಾಲ್ಕು ವರ್ಷದ ಮೊಮ್ಮಗನೊಂದಿಗೆ ವಾಸವಾಗಿದ್ದ. ಹೆಂಡತಿ ತೀರಿಹೋಗಿ ವರ್ಷಗಳೇ ಕಳೆದು ಹೋಗಿದ್ದವು. ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಮಡದಿ ತೀರಿದ ಮೇಲೆ ಈ ಮುದುಕಪ್ಪ ಯಾರಿಗೂ ಬೇಡದವನಾಗಿದ್ದ. ವಯೋಸಹಜವಾಗಿ ಆತನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ, ನಡೆಯಲು ಆಗುತ್ತಿರಲಿಲ್ಲ, ಊಟ ಮಾಡುವಾಗ ಕೈ ನಡುಗುತ್ತಿತ್ತು.  ಪ್ರತಿ ರಾತ್ರಿ ನಾಲ್ಕೂ ಜನರು ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೆ ನಡುಗುವ ಕೈಗಳ ಅಜ್ಜ ಊಟ ಮಾಡುವಾಗ ಆಹಾರ ಕೆಳಗೆ ಬೀಳುತ್ತಿತ್ತು, ಗಾಜಿನ ಲೋಟ ಬಿದ್ದು ಒಡೆದು ಹೋಗುತ್ತಿತ್ತು, ಊಟದ ಮೇಜು ಪ್ರತಿದಿನವೂ ಆತನಿಂದ ಗಲೀಜಾಗುತ್ತಿತ್ತು. ಸೊರ ಸೊರ ಶಬ್ದ ಮಾಡುತ್ತಾ ಊಟ ಮಾಡುವ ಅವನಿಂದ ಮಗ-ಸೊಸೆಗೆ ಕಿರಿಕಿರಿಯಾಗುತ್ತಿತ್ತು. ಅತಿಥಿಗಳು ಮನೆಗೆ ಬಂದರೆ ಮುದುಕನನ್ನು ವಿಚಿತ್ರವಾಗಿ ನೋಡುತ್ತಿದ್ದರು. ‘ಅಪ್ಪನಿಗೆ ವಯಸ್ಸಾಗಿದೆ. ಎಷ್ಟೊಂದು ಗಲೀಜಾಗಿ ಊಟ ಮಾಡುತ್ತಾರೆ. ನನಗಂತೂ ಸಾಕಾಗಿ ಹೋಗಿದೆ’ ಎಂದು ಒಂದು ದಿನ ಮಗ ಹೆಂಡತಿಗೆ ಹೇಳಿದ.‘ಅಯ್ಯೋ ದಿನವೂ ಹಾಲು ಚೆಲ್ಲಿಕೊಳ್ಳುತ್ತಾರೆ, ಅವರಿಂದ ಒಡೆದು ಹೋದ ಗಾಜಿನ ಪಾತ್ರೆಗಳಿಗೆ ಲೆಕ್ಕವೇ ಇಲ್ಲ’ ಎಂದಳು ಹೆಂಡತಿ. ಅಂದಿನಿಂದ ಅಡುಗೆ ಮನೆಯ ಮೂಲೆಯಲ್ಲಿ ಮುದುಕನಿಗೆ ಪ್ರತ್ಯೇಕವಾಗಿ ಊಟದ ಟೇಬಲ್ ಹಾಕಿಕೊಡಲಾಯಿತು. ಗಾಜಿನ ಪಾತ್ರೆ ಬಿದ್ದರೆ ಒಡೆಯುತ್ತದೆ, ಸ್ಟೀಲ್ ಪಾತ್ರೆ ಬಿದ್ದರೆ ಶಬ್ದವಾಗಿ ರಗಳೆಯಾಗುತ್ತದೆ ಎ

ದಿನಕ್ಕೊಂದು ಕಥೆ 296

*🌻ದಿನಕ್ಕೊಂದು ಕಥೆ🌻                                                                            ಮೇಡಂ! ಹೊಟ್ಟೆ ಹಸಿಯುತ್ತಿದೆ, ಆದರೆ ನಾನು ಭಿಕ್ಷುಕನಲ್ಲ!* ವಿಚಿತ್ರವೆನಿಸಬಹುದಾದ ಈ ಮಾತುಗಳು ಕುತೂಹಲಕರವಲ್ಲವೇ? ಬನ್ನಿ, ಅದರ ಹಿಂದೆ ಇರುವ ಹೃದಯ– ಸ್ಪರ್ಶಿಯಾದ, ನಿಜಜೀವನದ ಪ್ರಸಂಗವನ್ನು ನೋಡೋಣ. ಕೆನಡಾದಲ್ಲಿ ಮಾರ್ಕ್ ರೈಟ್ ಎಂಬ ಆರೇಳು ವರ್ಷದ ಬಾಲಕನಿದ್ದ. ಆರ್ಥಿಕವಾಗಿ ಏನೇನೂ ಅನುಕೂಲವಿಲ್ಲದ ಕುಟುಂಬದಿಂದ ಬಂದವನು. ಆದರೆ ಆತನ ತಾಯಿ ಆತ್ಮವಿಶ್ವಾಸದಲ್ಲಿ ಮತ್ತು ಸ್ವಪ್ರಯತ್ನದಲ್ಲಿ ನಂಬಿಕೆಯುಳ್ಳವರು. ಆರೇಳು ವರ್ಷದ ಮಾರ್ಕ್‌ನಿಗೆ ತಾನೂ ಒಂದಷ್ಟು ಸಂಪಾದಿಸಿ ತಾಯಿಗೆ ಸಹಾಯ ಮಾಡಬೇಕೆನ್ನುವ ಆಸೆ!  ಒಮ್ಮೆ ಆತ ಆ ಊರಿನಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನವೊಂದನ್ನು ನೋಡಲು ಹೋದ. ಅಲ್ಲಿ ವಿವಿಧ ಬಗೆಯ ಬಣ್ಣದ ಚಿತ್ರಗಳ ಪ್ರದರ್ಶನವಿತ್ತು. ಆ ಚಿತ್ರಗಳನ್ನು ನೋಡಿ ಮಾಕ್ ನಿರ್ಗೆ ಸ್ಫೂರ್ತಿ ಬಂತು. ತಾನೂ ಚಿತ್ರಗಳನ್ನು ರಚಿಸಬೇಕೆನಿಸಿತು. ಮನೆಗೆ ಬಂದ ನಂತರ ತಾಯಿಯನ್ನು ಕಾಡಿ-ಬೇಡಿ ಒಂದಷ್ಟು ದುಡ್ಡು ಪಡೆದು ಬಿಳಿ ಹಾಳೆಗಳನ್ನೂ, ವಿವಿಧ ಬಣ್ಣಗಳನ್ನೂ, ಬ್ರಶ್ಶನ್ನೂ ತಂದ. ಒಂದಷ್ಟು ಚಿತ್ರಗಳನ್ನು ಬರೆದ. ತಾಯಿಗೆ ತೋರಿಸಿದ. ತಾಯಿ ಅವನ್ನೆಲ್ಲ ನೋಡಿ ‘ಮಗು, ನಿನ್ನಲ್ಲಿ ಪ್ರತಿಭೆ ಇದೆ. ಪ್ರಾಮಾಣಿಕ ಪ್ರಯತ್ನವೂ ಇದೆ. ಆದರೆ ಯಾವ್ಯಾವುದೋ ದೊಡ್ಡ ವಿಷಯಗಳನ್ನು ತೆಗೆದುಕೊಂಡು ಚಿತ್ರಗಳನ್ನು ಬಿಡಿಸುವ ಬದಲು, ನೀನು ನೋಡ