Posts

Showing posts from May, 2018

ದಿನಕ್ಕೊಂದು ಕಥೆ 815

*🌻ದಿನಕ್ಕೊಂದು ಕಥೆ🌻                         ಬದಲಾವಣೆ ಒಪ್ಪಿಕೊಳ್ಳೋಣ* ಒಬ್ಬ ಯುವರಾಜ ಕಾಡಿಗೆ ಬೇಟೆಯಾಡಲು ಹೋದ. ಹುಲಿಯೊಂದನ್ನು ಬೆನ್ನಟ್ಟಿ ಬಹುದೂರ ಕಾಡಿನೊಳಗೆ ಸಾಗಿದ. ಹುಲಿ ಅವನ ಕೈಗೆ ಸಿಗದೆ ಮರೆಯಾಗಿ ಹೋಯಿತು. ಬಾಯಾರಿಕೆ, ದಣಿವಿನಿಂದ ಬಳಲಿದ ಅವನು ವಿಶ್ರಾಂತಿ ಬಯಸಿ ಮುಂದುವರಿದು ಹೋದಾಗ ಅಲ್ಲೊಂದು ಋಷಿಯ ಕುಟೀರ ಕಾಣಿಸಿತು. ಕುಟೀರದ ಸಮೀಪಕ್ಕೆ ಹೋದಾಗ ಅಲ್ಲಿದ್ದ ಋಷಿಯ ಪುತ್ರಿ ತನ್ನ ರಾಜ್ಯದ ಯುವರಾಜ ಬಂದಿದ್ದನ್ನು ಕಂಡು ಸಂತಸದಿಂದ ಸ್ವಾಗತಿಸಿದಳು. ರಾಜ ಅವಳ ಅಪ್ರತಿಮ ಸೌಂದರ್ಯ ಕಂಡು ಅವಳನ್ನು ಮದುವೆಯಾಗಲು ಬಯಸಿದ. ಋಷಿಯನ್ನು ಕುರಿತು ‘ಪೂಜ್ಯರೆ, ನೀವು ಸಂತೋಷದಿಂದ ಒಪ್ಪುವುದಾದರೆ ನಿಮ್ಮ ಮಗಳನ್ನು ಮದುವೆಯಾಗಲು ಬಯಸಿರುವೆ’ ಎಂದ. ‘ನನ್ನ ಮಗಳನ್ನು ಒಂದು ಮಾತು ಕೇಳಿ’ ಎಂದರು ಋಷಿಗಳು. ಯುವರಾಜ ಋಷಿಪುತ್ರಿಯನ್ನು ಉದ್ದೇಶಿಸಿ, ‘ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ, ಜೀವನದ ಕೊನೆಯವರೆಗೂ ಗೌರವ, ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ನನ್ನನ್ನು ಮದುವೆಯಾಗಲು ಒಪ್ಪಿಗೆ ಇದೆಯೇ?’ ಎಂದ. ಅವಳು- ‘ಸರಿ, ನನಗೆ 1 ತಿಂಗಳ ಕಾಲಾವಕಾಶ ಕೊಡಿ, ಬಳಿಕ ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದಳು. ಯುವರಾಜ ಅದಕ್ಕೆ ಒಪ್ಪಿಗೆ ಸೂಚಿಸಿ, ಋಷಿಗಳಿಗೆ ಮತ್ತೊಮ್ಮೆ ವಂದಿಸಿ ರಾಜಧಾನಿಗೆ ಮರಳಿದ. ಋಷಿಪುತ್ರಿ ಅಂದಿನಿಂದಲೇ ಉಪವಾಸ ಪ್ರಾರಂಭಿಸಿದಳು. ಅವಳ ಆರೋಗ್ಯ ದಿನದಿನಕ್ಕೆ ಕ್ಷೀಣಿಸತೊಡಗಿತು. ತಿಂಗಳು ಸಮೀಪಿಸಿದ

ದಿನಕ್ಕೊಂದು ಕಥೆ 814

*🌻ದಿನಕ್ಕೊಂದು ಕಥೆ🌻                         ಕುದುರೆಗಿಲ್ಲ ಬೆಲೆ! ಕುದುರೆಯ ಚಿತ್ರಕಲೆಗೆ ಮಾತ್ರ ಬೆಲೆ?* ಕುದುರೆ ಯಾವುದು, ಅದರ ಚಿತ್ರಕಲೆ ಎಂದರೇನು, ಅವಕ್ಕೇಕೆ ಬೆಲೆ ಕಟ್ಟಬೇಕು ಎನ್ನುವ ಜಟಿಲ ಪ್ರಶ್ನೆಗಳಿಗೆ ಸರಳ ಉತ್ತರ ಕೊಡುವ ಕುತೂಹಲಕಾರೀ ಪ್ರಸಂಗವೊಂದು ಇಲ್ಲಿದೆ. ಮೆಕ್ಸಿಕೋ ದೇಶದ ಹಳ್ಳಿಯೊಂದರಲ್ಲಿ ಒಬ್ಬ ಕುದುರೆಗಾಡಿ ಬಾಡಿಗೆಗೆ ಕೊಟ್ಟು ಬದುಕು ಸಾಗಿಸುತ್ತಿದ್ದ ಒಬ್ಬರಿದ್ದರು. ಅವರ ಬಳಿ ಒಳ್ಳೆಯ ಮೈಕಟ್ಟಿನ, ಗಟ್ಟಿಮುಟ್ಟಾದ, ಮುದ್ದಾದ ಕುದುರೆಯೊಂದಿತ್ತು. ಒಮ್ಮೆ ಅಲ್ಲಿಗೆ ಬಂದ ವರ್ಣಚಿತ್ರ ಒಬ್ಬರಿಗೆ ಆ ಕುದುರೆ ಬಹು ಮೆಚ್ಚುಗೆಯಾಯಿತು. ಅವರು ಕುದುರೆಗಾಡಿಯಾತನಿಗೆ ಐದು ಡಾಲರ್ ಹಣವನ್ನು ಕೊಟ್ಟು ಕುದುರೆಯನ್ನು ಬಾಡಿಗೆಗೆ ಪಡೆದರು. ದಿನವಿಡೀ ಕುಳಿತು ಕುದುರೆಯ ನಾಲ್ಕು ವರ್ಣಚಿತ್ರಗಳನ್ನು ಬಿಡಿಸಿದರು. ಗಾಡಿಯಪ್ಪನವರಿಗೆ ಆಶ್ಚರ್ಯ! ಕುದುರೆಗಾಡಿ ಬಾಡಿಗೆಗೆ ಕೊಟ್ಟರೆ ದಿನಕ್ಕೆರಡು ಡಾಲರ್ ಸಿಕ್ಕುತ್ತಿತ್ತು. ಆದರೆ ಅದರ ವರ್ಣಚಿತ್ರ ಬಿಡಿಸಿದವ ಐದು ಡಾಲರ್ ಕೊಟ್ಟರಲ್ಲ ಎಂಬ ಆಶ್ಚರ್ಯ! ಐದು ಡಾಲರ್ ಜೇಬಿಗಿಳಿಸಿ ಸುಮ್ಮನಾದರು. ಕೆಲವು ತಿಂಗಳುಗಳ ನಂತರ ಕುದುರೆಗಾಡಿಯವರು ನಗರಕ್ಕೆ ಹೋದರು. ಅವರು ನಗರಕ್ಕೆ ಅಪರೂಪ. ಹಾಗಾಗಿ ಕುತೂಹಲದಿಂದ ಅತ್ತಿತ್ತ ನೋಡುತ್ತಿದ್ದರು. ಅಲ್ಲೊಂದು ಕಟ್ಟಡವೊಂದರ ಮುಂದೆ ಜನ ಸಾಲಾಗಿ ನಿಂತಿದ್ದರು. ಹಣ ಕೊಟ್ಟು ಒಳಗಡೆ ಹೋಗುತ್ತಿದ್ದರು. ಕುದುರೆಗಾಡಿಯವರು ಅಲ್ಲೇನು ನಡೆಯುತ್ತಿದೆ? ಎಂದು ಕ

ದಿನಕ್ಕೊಂದು ಕಥೆ 813

*🌻ದಿನಕ್ಕೊಂದು ಕಥೆ🌻                                      ಇತರರ ನಂಬಿಕೆ ಬಗ್ಗೆ ತೀರ್ಪು ಕೊಡುವ ಮುನ್ನ.* ಕುತೂಹಲಕಾರಿಯಾದ ಘಟನೆಯೊಂದು ಇಲ್ಲಿದೆ. ನಂಬಿಕೆಗಳ ಬಗ್ಗೆ ಇರುವ ಈ ಘಟನೆಯು ಚಿಂತನಾರ್ಹವೂ ಆಗಿದೆ! ದೊಡ್ಡ ಸಾಹೇಬರೊಬ್ಬರು ಪ್ರತಿದಿನ ಮೈಸೂರಿನಿಂದ ಮಂಡ್ಯಕ್ಕೆ ರೈಲಿನಲ್ಲಿ ಬಂದು ಹೋಗುತ್ತಿದ್ದರು. ಫಸ್ಟ್-ಕ್ಲಾಸ್ ಭೋಗಿಯಲ್ಲಿ ಹೆಚ್ಚೇನೂ ಜನಸಂದಣಿ ಇರುತ್ತಿರಲಿಲ್ಲ. ಹಾಗಾಗಿ ಸಾಹೇಬರು ಆರಾಮವಾಗಿ ಕುಳಿತು, ಸಿಗರೇಟು ಸೇದುತ್ತಾ, ದಿನಪತ್ರಿಕೆಯನ್ನು ಓದುತ್ತಾ, ಪ್ರಯಾಣ ಮಾಡುತ್ತಿದ್ದರು. ಇವರಿದ್ದ ಭೋಗಿಯನ್ನೇ ಹತ್ತಿದ ಹೊಸಬರೊಬ್ಬರು ನಾನೂ ಪ್ರತಿದಿನ ರೈಲಿನಲ್ಲೇ ಪ್ರಯಾಣ ಮಾಡುತ್ತೇನೆ. ಇಂದು ಸಾಮಾನ್ಯ ಭೋಗಿಯಲ್ಲಿ ಬಹಳ ಜನ ಇರುವುದರಿಂದ ಫಸ್ಟ್ ಕ್ಲಾಸ್ ಭೋಗಿಗೆ ಬಂದಿದ್ದೇನೆ. ನನ್ನ ಬಳಿ ಟಿಕೇಟಿದೆ ಎಂದು ಸಮಜಾಯಿಷಿ ನೀಡಿದರು. ಸಾಹೇಬರು ಅವರತ್ತ ನೋಡಿದಂತೆ ಮಾಡಿದರು. ಮತ್ತೆ ತಮ್ಮ ಸಿಗರೇಟಿನತ್ತ ಗಮನ ಹರಿಸಿದರು. ರೈಲು ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯ ಸೇತುವೆ ಮೇಲೆ ಹೋಗುತ್ತಿತ್ತು. ಹೊಸಬರು ಜೇಬಿನಿಂದ ನಾಣ್ಯವೊಂದನ್ನು ತೆಗೆದು ನದಿಗೆಸೆದು ಕೈಮುಗಿದರು. ಸಾಹೇಬರು ಮೌಢ್ಯ ನಿಮ್ಮದು? ನದಿಗೆ ನಾಣ್ಯವನ್ನು ಎಸೆದು ಕೈಮುಗಿಯುತ್ತೀರಲ್ಲ? ಎಂದರು. ಹೊಸಬರು ತಾಯ್ತಂದೆಯರಿಂದ ಬಂದ ಸಂಪ್ರದಾಯ. ನದಿಯು ದೇವರ ಅವತಾರವೆಂಬ ನಂಬಿಕೆ. ಹತ್ತು ವರ್ಷಗಳಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಸೇತುವೆ ಬಂದಾಗ ತಪ್ಪದೇ

ದಿನಕ್ಕೊಂದು ಕಥೆ 812

*🌻ದಿನಕ್ಕೊಂದು ಕಥೆ🌻*                  *ತಪ್ಪಾದಲ್ಲಿ ತಿದ್ದಿಕೊಳ್ಳೋಣ.* ಮಾಲೀಕನೊಬ್ಬ ತನ್ನ ಕೆಲಸಗಾರನಿಗೆ ಹಣವನ್ನೂ ಮಣ್ಣಿನ ಹೂಜಿಯನ್ನೂ ಕೊಟ್ಟು, ಮಾರುಕಟ್ಟೆಗೆ ತೆರಳಿ ಅದರಲ್ಲಿ ಮದ್ಯವನ್ನು ತುಂಬಿಸಿಕೊಂಡು ಬರುವಂತೆ ಸೂಚಿಸಿದ. ಅದರಂತೆಯೇ ಆತ ಮದ್ಯದೊಂದಿಗೆ ಮನೆಯತ್ತ ಮರಳುತ್ತಿದ್ದಾಗ, ದಾರಿಯಲ್ಲಿ ಆಕಸ್ಮಿಕವಾಗಿ ಕಲ್ಲಿಗೆ ತಾಗಿ ಮಣ್ಣಿನಹೂಜಿ ಒಡೆದುಹೋಯಿತು, ಮದ್ಯವೆಲ್ಲ ದಾರಿಯಲ್ಲೇ ಚೆಲ್ಲಿ ಹೂಜಿಯ ಹಿಡಿ ಮಾತ್ರ ಕೆಲಸಗಾರನ ಕೈಯಲ್ಲಿ ಉಳಿಯಿತು. ಅದೇ ಸ್ಥಿತಿಯಲ್ಲಿ ಆತ ಮನೆಗೆ ಬಂದಾಗ, ‘ಇದೇನು, ಹೂಜಿಯಲ್ಲಿ ಮದ್ಯ ತರಲು ಹೇಳಿದ್ದೆ; ಆದರೆ ಮದ್ಯವೂ ಇಲ್ಲ, ಹೂಜಿಯೂ ಇಲ್ಲ. ಹಿಡಿಯನ್ನು ಮಾತ್ರ ಹಿಡಿದುಕೊಂಡು ಬಂದಿರುವೆಯಲ್ಲ?’ ಎಂದು ಮಾಲೀಕ ಪ್ರಶ್ನಿಸಿದ. ಅದಕ್ಕೆ ಕೆಲಸಗಾರ, ‘ಕ್ಷಮಿಸಿ ಯಜಮಾನರೇ, ನೀವು ಹೇಳಿದಂತೆ ನಾನು ಮಾರುಕಟ್ಟೆಯಿಂದ ಮದ್ಯವನ್ನು ಖರೀದಿಸಿ ತರುತ್ತಿದ್ದೆ; ಆದರೆ ದಾರಿಯಲ್ಲಿ ದೇವರ ವಿಗ್ರಹವೊಂದು ಹೂಜಿಯನ್ನು ಕಸಿದುಕೊಂಡಿತು’ ಎಂದ. ಗೊಂದಲಗೊಂಡ ಮಾಲೀಕನಿಗೆ ಇವನ ಅಸಂಬದ್ಧ ಪ್ರಲಾಪ ಅರ್ಥವಾಗದೆ, ‘ದೇವರ ವಿಗ್ರಹ ಹೂಜಿಯನ್ನು ಕಸಿದುಕೊಂಡರೆ, ಹಿಡಿಯನ್ನು ಮಾತ್ರವೇ ತಂದಿದ್ದೇಕೆ?’ ಎಂದು ಮರುಪ್ರಶ್ನಿಸಿದಾಗ, ‘ನಾನು ಹೇಳುತ್ತಿರುವುದು ಸತ್ಯ ಎಂಬುದನ್ನು ನಿಮಗೆ ಮನವರಿಕೆ ಮಾಡಿಸಲೆಂದು…’ ಎಂದು ಉತ್ತರಿಸಿದ ಕೆಲಸಗಾರ! ತಪ್ಪುಗಳನ್ನು ಒಪ್ಪಿಕೊಳ್ಳುವುದು ಕೂಡ ಬುದ್ಧಿವಂತಿಕೆಯೇ ಆಗಿದೆ. ಅದು ನಮಗೆ ಆ ಕ್ಷಣ

ದಿನಕ್ಕೊಂದು ಕಥೆ 811

ದಿನಕ್ಕೊಂದು ಕಥೆ                                                                 ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ. ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು  ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು. ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು. ಕಥೆಯ ನೀತ

ದಿನಕ್ಕೊಂದು ಕಥೆ 810

*🌻ದಿನಕ್ಕೊಂದು ಕಥೆ🌻                                      ಪ್ರಯತ್ನದ ಧ್ಯೇಯ ಅದೃಷ್ಟದ ಒಲವು* ಹಾವಾಡಿಗನೊಬ್ಬ ವಿಷಪೂರಿತ ಹಾವನ್ನು ಕಷ್ಟಪಟ್ಟು ಹಿಡಿದು ಬಿದಿರುಬುಟ್ಟಿಗೆ ಹಾಕಿ ಮನೆಯ ಮೂಲೆಯಲ್ಲಿಟ್ಟ. ಅದರ ವಿಷದ ಮದ ಇಳಿಸಲು ವಾರಗಟ್ಟಲೆ ಆಹಾರವನ್ನೇ ಕೊಡದೆ ಹಾಗೇ ಬಿಟ್ಟಿದ್ದ. ಹೀಗೆ ಆಹಾರವಿಲ್ಲದೆ, ಬಿಡುಗಡೆಯೂ ಇಲ್ಲದೆ ಬದುಕುವಾಸೆ ಬಿಟ್ಟು ಸತ್ತಂತೆ ಮುದ್ದೆಯಾಗಿ ಬಿದ್ದಿತ್ತು ಹಾವು. ಒಂದು ರಾತ್ರಿ ಇಲಿಯೊಂದು ಆಹಾರಕ್ಕೆಂದು ಹಾವಾಡಿಗನ ಮನೆ ಪ್ರವೇಶಿಸಿತು. ಎಷ್ಟು ಹುಡುಕಿದರೂ ಆಹಾರ ಸಿಗದೆ, ಇನ್ನೇನು ಹೊರಡಬೇಕೆಂದಿದ್ದಾಗ ಹಾವನ್ನಿರಿಸಲಾಗಿದ್ದ ಬುಟ್ಟಿ ಕಾಣಿಸಿತು. ಇದರಲ್ಲಿ ಧಾನ್ಯವೇ ಇರಬೇಕು ಎಂದು ಭಾವಿಸಿ ಕನ್ನ ಕೊರೆದು ಒಳಹೊಕ್ಕರೆ ಆಗಿದ್ದೇನು? ಆಹಾರ ಹುಡುಕಿ ಹೋದ ಇಲಿಯೇ, ಆ ಬುಟ್ಟಿಯಲ್ಲಿದ್ದ ಹಾವಿಗೆ ಆಹಾರವಾಯಿತು. ಅಷ್ಟೇ ಅಲ್ಲ, ಹೊಟ್ಟೆ ತುಂಬಿಸಿಕೊಂಡ ಹಾವು ಆ ಇಲಿ ಕೊರೆದಿದ್ದ ಕಿಂಡಿಯಿಂದಲೇ ತೂರಿ ಕೊಂಡು ಪಲಾಯನ ಮಾಡಿತು. ಹಾವಿನ ಉಳಿಗಾಲಕ್ಕೂ, ಇಲಿಯ ಜೀವನಾಶಕ್ಕೂ ಒಂದೇ ಸಂದರ್ಭ ಸಾಕ್ಷಿಯಾಗಿ ಹೋಯಿತು. ಹಾವಿಗೊದಗಿದ ಅದೃಷ್ಟ ಅಥವಾ ಇಲಿಗೊದಗಿದ ದುರದೃಷ್ಟದಂಥ ಸಂದರ್ಭ ಬದುಕಿನಲ್ಲಿ ಯಾರಿಗೆ ಬೇಕಾದರೂ ಒದಗಬಹುದು. ಜೀವನದಲ್ಲಿ ಅದೃಷ್ಟದ ಪಾತ್ರ ಬಹಳವಿದೆ; ಹಾಗಂತ ಅದನ್ನೇ ನಂಬಿ ಕೂರುವಂತಿಲ್ಲ. ಹಾಗೆ ನಿರೀಕ್ಷೆಯಿಟ್ಟುಕೊಂಡಲ್ಲಿ ಮುಂದೊಂದು ದಿನ ಪರಿತಪಿಸಬೇಕಾದೀತು. ಕೆಲವೊಮ್ಮೆ ಹೆಚ್ಚು ಪ್ರಯತ್ನ-ಪರಿಶ

ದಿನಕ್ಕೊಂದು ಕಥೆ 809

ಓರ್ವ ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು.. ದರ್ಶನ ಚೆನ್ನಾಗಿ ಆಯಿತಾ ಮಗಳೇ, ಎಂದು ತಂದೆ ಪ್ರಶ್ನಿಸಿದರು…. ಮಗಳು: ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ.. ಕೋಪದಿಂದ ನುಡಿದಳು… ತಂದೆ: ಏನು ನಡೆಯಿತು ಮಗಳೇ.. ಮಗಳು: ದೇವಸ್ಥಾನದಲ್ಲಿ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನ ಇಲ್ಲ. ಎಲ್ಲರೂ ಅವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು, ಫೋಟೋಗಳನ್ನು ತೆಗೆಯುವುದು, ಭಕ್ತಿಗೆ ಸಂಬಂಧಿಸಿದ್ದು ಅಲ್ಲವೆ ಬೇರೆ ಸಂಗತಿಗಳನ್ನು ಚರ್ಚಿಸುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಭಜನೆಗಳ ಬಳಿ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲಿಲ್ಲ. ತಂದೆ: (ಸ್ವಲ್ಪ ಹೊತ್ತು ಮೌನವಾಗಿದ್ದು) ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ… ನೆರವೇರಿಸುತ್ತೀಯಾ..? ಮಗಳು: ಖಂಡಿತ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು… ತಂದೆ: ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗು ದೇವಸ್ಥಾನಕ್ಕೆ.. ಮೂರೇ ಮೂರು ಪ್ರದಕ್ಷಿಣೆ ಮಾಡಿ ಬರಬೇಕು.. ಆದರೆ ಸಣ್ಣ ಸೂಚನೆ…ನಿನ್ನ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರು ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ……. ಮಗಳು: ಹಾಗೆಯೇ ಆಗಲಿ. ಖಂಡಿತ ತರುತ್ತೇನೆ ನಿಮಗಾಗಿ ಎಂದು.. ಒಂದು ಗ್ಲಾಸ್ ತುಂಬ ನೀರು ತೆಗೆದುಕೊಂಡು ಹೊರಟಳು.. ಮೂರು ಗಂಟೆಗಳ ಬಳಿಕ ಮನೆಗೆ ಗ್ಲಾಸ್ ನೀರ