Posts

Showing posts from October, 2016

ದಿನಕ್ಕೊಂದು ಕಥೆ. 196

💐💐 ದಿನಕ್ಕೊಂದು  ಕಥೆ💐💐           😌ಮುಚ್ಚಿಟ್ಟ ತಪ್ಪು😌 ಕಿಟ್ಟಣ್ಣ ಮತ್ತು ಅವನ ತಂಗಿ ಪುಟ್ಟಕ್ಕ ಇಬ್ಬರೂ ರಜೆಗೆಂದು ಅಜ್ಜಿಯ ಮನೆಗೆ ಹೋಗಿದ್ದರು. ಅಜ್ಜಿಯ ಮನೆ ಇದ್ದದ್ದು ಒಂದು.  ಹಳ್ಳಿಯಲ್ಲಿ. ಆ ಮನೆಯೊ ಭಾರಿ ಮನೆ. ಅಜ್ಜಿಗೆ ಮೊಮ್ಮಕ್ಕಳೂ ಬಂದದ್ದು ಬಹಳ ಸಂತೋಷ. ಶಾಲೆಯ ರಜೆ ಮುಗಿಯುವವರೆಗೆ ಮಕ್ಕಳು ಅಲ್ಲಿಯೇ ಇರುತ್ತಾರೆ. ಮಕ್ಕಳಿಗೂ ಪಟ್ಟಣದ ಬಿಗಿ ವಾತಾವರಣದಿಂದ ಬಿಡುಗಡೆ ದೊರೆತು ಹಳ್ಳಿಯ ಶುದ್ಧ ಪರಿಸರ ದೊರೆಯುತ್ತದೆ. ಮಕ್ಕಳು ಅಜ್ಜಿ ಮಾಡಿದ ರುಚಿ ರುಚಿ ಅಡುಗೆ ಊಟಮಾಡುತ್ತ, ಮನಬಂದಾಗ, ಮನಬಂದಲ್ಲಿ ತಿರುಗಾಡುತ್ತ, ಶಾಲೆಯ, ಮನೆಗೆಲಸದ ಯಾವ ಒತ್ತಡವೂ ಇಲ್ಲದೇ ಹಾಯಾಗಿದ್ದರು. ಒಂದು ದಿನ ಪಕ್ಕದ ಮನೆಯ ಹುಡುಗ ಮಂಜ ಕಿಟ್ಟಣ್ಣನಿಗೊಂದು ಬಿದಿರಿನ ಬಿಲ್ಲು ಮತ್ತಷ್ಟು ಬಾಣಗಳನ್ನು ಮಾಡಿಕೊಟ್ಟ. ಅದು ದಪ್ಪವಾದ, ಮಜಬೂತಾದ ಬಿಲ್ಲು. ಬಿದಿರಿನ ಬಾಣಗಳೂ ಅಷ್ಟೇ. ಅವುಗಳನ್ನು ಕಲ್ಲಿಗೆ ಉಜ್ಜಿ ಉಜ್ಜಿ ತುದಿಗಳನ್ನು ಚೂಪಾಗಿ ಮಾಡಿದ್ದ. ಅವುಗಳನ್ನು ಸರಿಯಾಗಿ ಬಳಸಬೇಕೆಂದು ಎಚ್ಚರಿಕೆಯನ್ನೂ ಕೊಟ್ಟಿದ್ದ. ಅವು ಯಾರಿಗಾದರೂ ತಗುಲಿದರೆ ಅಪಾಯ ಕಟ್ಟಿಟ್ಟಿದ್ದು ಎಂದೂ ಹೇಳಿದ್ದ. ಕಿಟ್ಟಣ್ಣನಿಗೆ ಉತ್ಸಾಹ ಹೆಚ್ಚು. ಬಿಲ್ಲು ಬಾಣಗಳನ್ನು ಸದಾ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಹಾರಾಡುವ ಪಕ್ಷಿಗಳ ಮೇಲೆ ಪ್ರಯೋಗ ಮಾಡಿ ನೋಡಿದ. ಇವನ ಗುರಿ ಸರಿಯಾಗಲೇ ಇಲ್ಲ. ಹೀಗೊಂದು ದಿನ ಮನೆಗೆ ಬರುತ್ತಿದ್ದಾಗ ಮನೆಯ ಹಿತ್ತಲಲ್ಲಿ ಅಜ್ಜಿ ಸಾಕಿದ್ದ ಬಾತುಕೋಳ

ದಿನಕ್ಕೊಂದು ಕಥೆ. 195

🌻🌻 *ದಿನಕ್ಕೊಂದು ಕಥೆ*🌻🌻                                   *ಸರ್ವಧರ್ಮ ಸಮನ್ವಯದ ಬಾಬಾ ಫರೀದ್* ಮುಲ್ತಾನ್ ಬಳಿಯ ಕೊತ್ವಾಲ್‍ದಲ್ಲಿ 1173 ರಲ್ಲಿ ಜನಿಸಿದ ಬಾಬಾ ಶೇಖ್ ಫರೀದ್ ಸಂತತ್ವಕ್ಕೆ ಆದರ್ಶಪ್ರಾಯವಾಗಿ ಬದುಕಿದವರು. ಆತ ಸಂತರಾಗಿ, ಕವಿ­ಯಾಗಿ ತಮ್ಮ ತೊಂಬತ್ತೈದು ವರ್ಷದ ತುಂಬು ಜೀವನದಲ್ಲಿ ಪ್ರಪಂಚಕ್ಕೆ ಹಂಚಿದ್ದು ಕೇವಲ ಪ್ರೀತಿ, ಶಾಂತಿ ಹಾಗೂ ಸಮಾನತೆಗಳನ್ನು. ಬಾಲ್ಯದಲ್ಲಿ ತಾಯಿಯ ಪ್ರಭಾವ ಹೆಚ್ಚಾಗಿತ್ತು. ಮಗ ತಪ್ಪದೇ ನಮಾಜಿಗೆ ಹೋಗಲಿ ಎಂದು ನಮಾಜಿನ ಚಾಪೆಯ ಕೆಳಗೆ ಪುಟ್ಟ ಸಕ್ಕರೆಯ ಪೊಟ್ಟಣವನ್ನು ಇಡುತ್ತಿ­ದ್ದರಂತೆ. ನಿಯಮಿತವಾಗಿ ಪ್ರಾರ್ಥನೆ ಮಾಡುವವರಿಗೆ ಭಗವಂತ ಸಕ್ಕರೆಯನ್ನು ಕೊಡುತ್ತಾನೆ ಎಂದು ಹೇಳುತ್ತಿದ್ದರಂತೆ. ಬಾಲ್ಯದಲ್ಲೇ ಅಭ್ಯಾಸವಾದ ಭಕ್ತಿಯ ಅನುಷ್ಠಾನ ಅವರ ಬದುಕಿನ ಒಂದು ಉದ್ದೇಶವೇ ಆಗಿ ಹೋಯಿತು. ಧ್ಯಾನ­ದಲ್ಲಿ ಕುಳಿತರೆ ಎಚ್ಚರವೇ ಇರುತ್ತಿರಲಿ­ಲ್ಲವಂತೆ. ಒಂದು ಬಾರಿಯಂತೂ ನಲವತ್ತು ದಿನ ನಿದ್ರೆ, ಆಹಾರವಿಲ್ಲದೆ ಧ್ಯಾನದಲ್ಲಿ ಮೈಮರೆತರಂತೆ. ಅವರ ಸಾಧನೆಯ, ಪವಾಡಗಳ ರಮ್ಯ ಕಥೆಗಳೇ ಇವೆ.  ಒಮ್ಮೆ ಪ್ರಾರ್ಥನೆ ಮಾಡುತ್ತ ದಿನಗಳು ಕಳೆದ ಮೇಲೆ ಎಚ್ಚರವಾದಾಗ ಹಸಿವೆ ಎನ್ನಿಸಿತಂತೆ. ತಕ್ಷಣ ತಮ್ಮ ಸುತ್ತಮುತ್ತ ಬಿದ್ದಿದ್ದ ಸಣ್ಣ ಕಲ್ಲುಗಳನ್ನು ಬಾಯಿಗೆ ಹಾಕಿಕೊಂಡಾಗ ಅವು ಕಲ್ಲುಸಕ್ಕರೆ ಹರಳುಗಳಾಗಿದ್ದವಂತೆ. ಭಕ್ತಿಯ ಪಾರಮ್ಯದಲ್ಲಿ ಮಿಂದವರಿಗೆ ಕಲ್ಲು, ಸಕ್ಕರೆಯಂತೆ ತೋರಿದ್ದು ಆಶ್ಚ­ರ್ಯ­ವೇನಲ್ಲ. ಮತ್

ದಿನಕ್ಕೊಂದು ಕಥೆ. 194

🌻🌻 *ದಿನಕ್ಕೊಂದು ಕಥೆ*🌻🌻                          *ಯಜಮಾನರನ್ನೇ ಸುಡುವ ಬೆಂಕಿ* ಕೆಲವರಿಗೆ ಒಂದು ರೋಗವಿರುತ್ತದೆ. ತಾವು ಎಷ್ಟೇ ದೊಡ್ಡವರಾಗಿದ್ದರೂ, ಬಹಳ ಶ್ರೇಷ್ಠ ಸ್ಥಾನದಲ್ಲಿದ್ದರೂ ಮತ್ತೊಬ್ಬರ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದರೆ ಹೊಟ್ಟೆ ಉರಿದು ಹೋಗುತ್ತದೆ, ತಳಮಳವಾ­ಗುತ್ತದೆ, ಅದನ್ನು ತಡೆದು­ಕೊಳ್ಳು­ವು­ದು ಆಗುವುದಿಲ್ಲ. ಹೀಗೆ ಇರುವವರ ಬದುಕು ಹೇಗಾ­ಗು­ತ್ತದೆ ಎಂದು ಹೇಳುವ ಸುಂದರವಾದ ಕಥೆಯನ್ನು ನೇಪಾಳದಲ್ಲಿ ಜನ ಹೇಳುತ್ತಾರೆ. ದೇಶದ ರಾಜನಿಗೆ ಯಾರೋ ಪರದೇಶದವರು ವಿಶೇಷ ಲಕ್ಷಣದ ಆನೆಮ­ರಿ­ಯನ್ನು ಕಾಣಿಕೆಯಾಗಿ ಕೊಟ್ಟರು. ಅದು ಬೆಳೆದಂತೆಲ್ಲ ಮತ್ತಷ್ಟು ವಿಶೇಷವಾಗಿ ಕಾಣ­­­­­ತೊಡಗಿತು. ಅದರ ಮೈಕಾಂತಿ ಅಪರೂಪವಾಗಿತ್ತು. ಅದರ ದೊಡ್ಡ ಗಾತ್ರ, ಗಂಭೀರ­­­ವಾದ ನಡೆ, ಸೌಮ್ಯ ವರ್ತನೆ ಎಲ್ಲರಿಗೂ ಪ್ರಿಯ­ವಾಗಿತ್ತು. ಅದನ್ನು ನೋಡಿ­­ಕೊ­­ಳ್ಳುತ್ತಿದ್ದ ಮಾವುತನಿಗೂ ಅದು ತುಂಬ ವಿಶೇಷ ಎನ್ನಿಸಿತು. ಅವನು ಮೆಲು­ವಾಗಿ ಏನು ಹೇಳಿದರೂ ತಕ್ಷಣವೇ ಮಾಡಿಬಿ­ಡುತ್ತಿತ್ತು. ರಾಜನಿಗೆ ಅದರ ಮೇಲೆ ಬಲು ಪ್ರೀತಿ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿ ಅದರ ಮೇಲೆ ಅಂಬಾರಿ­ಯನ್ನು ಬಿಗಿಸಿ ತಾನು ಅದರಲ್ಲಿ ಕುಳಿತು ನಗರ ಪ್ರದಕ್ಷಿಣೆಗೆ ಹೋಗು­ತ್ತಿದ್ದ. ನಗರದ ಜನರಿಗೆ ಇದೊಂದು ಸುಂದರ ದೃಶ್ಯ. ಒಂದು ತಿಂಗಳು ಈ ರೀತಿ ಮೆರವಣಿಗೆ­ಯಾದ ಮೇಲೆ ಅವ­­ನಿಗೆ ಜನರು ಮಾತನಾಡಿಕೊಳ್ಳುವುದು ಕಿವಿಗೆ ಬಿತ್ತು. ಅವರು ಸುಂದರವಾದ ಅನೆ­­ಯನ್ನು ಹೊ

ದಿನಕ್ಕೊಂದು ಕಥೆ. 193

*🌻🌻ದಿನಕ್ಕೊಂದು ಕಥೆ*🌻🌻 *ಶುಚಿ_ರುಚಿ*   ಒಂದು ಚಿಕ್ಕಗ್ರಾಮ ಇತ್ತು. ಆ ಗ್ರಾಮದ ಮಧ್ಯದಲ್ಲಿ ಒಂದು ಪ್ರಮುಖ ದಾರಿ ಇತ್ತು. ಆ ದಾರಿಯ ಮಧ್ಯದಲ್ಲಿ ಬಹಳ ದಿನಗಳಿಂದ ಒಂದು ದೊಡ್ಡ ಬಂಡೆಗಲ್ಲು ಬಿದ್ದಿತ್ತು. ಹೋಗ ಬರುವುದಕ್ಕೆ ಅದು ತುಂಬಾ ಅಡಚಣೆಯಾಗಿತ್ತು. ಜನರೆಲ್ಲ ಅದರ ಬದಿಯಿಂದ ಹೋಗುತ್ತಿದ್ದರೇ ವಿನಾ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ.   ಒಂದು ದಿನ ಒಬ್ಬ ಪ್ರಾಮಾಣಿಕ ಬಡಮನುಷ್ಯನು ತುಂಬಾ ಪ್ರಯಾಸದಿಂದ ಆ ಬಂಡೆಗಲ್ಲನ್ನು ತೆಗೆದು ಬದಿಗಿಟ್ಟು ದಾರಿಯನ್ನು ಸ್ವಚ್ಛಗೊಳಿಸಿದ. ಅಷ್ಟರಲ್ಲಿ ಅವನಿಗೆ ಆ ಬಂಡೆಗಲ್ಲಿನ ಕೆಳಗಿದ್ದ ಒಂದು ಪೆಟ್ಟಿಗೆ ಕಂಡಿತು. ಅದನ್ನು ಆ ಗ್ರಾಮದ ರಾಜನಿಗೆ ಒಪ್ಪಿಸಿದ. ರಾಜನು ಅದನ್ನು ಒಡೆದು ನೋಡಿದ, ಅದರಲ್ಲಿ ನೂರು ಚಿನ್ನದ ನಾಣ್ಯಗಳ ನಿಧಿ ಜೊತೆಗೊಂದು ಪತ್ರ ಇತ್ತು! ಕುತೂಹಲದಿಂದ ರಾಜನು ಪತ್ರವನ್ನು ಓದಿದ. ಅದರಲ್ಲಿ ಹೀಗೆ ಬರೆದಿತ್ತು. “ಯಾರು ಈ ಬಂಡೆಗಲ್ಲನ್ನು ತೆಗೆದು ದಾರಿಯನ್ನು ಶುಚಿಗೊಳಿಸುವರೋ ಅವರೇ ಈ ನಿಧಿಯ ಒಡೆಯರು!” ನಂತರ ರಾಜನು ಆ ನಿಧಿಯನ್ನು ಬಡವನಿಗೆ ಒಪ್ಪಿಸಿದ. ಆ ನಂತರ ಆ ಗ್ರಾಮದ ಸುತ್ತಮುತ್ತಲಿನ ರಸ್ತೆಗಳೆಲ್ಲ ತಮಗೆ ತಾವೇ ನಿರ್ಮಲವಾದವು! ಜನಜೀವನವು ಸುಗಮವಾಗಿತ್ತು. ಹಿಂದಿನ ರಾಜನು ಪ್ರಜೆಗಳಿಗೆ ಬಾಹ್ಯಶುಚಿಯನ್ನು ಕಲಿಸುವುದಕ್ಕೆ ಮಾಡಿದ ಉಪಾಯ ಅದಾಗಿತ್ತು!! ಕೃಪೆ:ಶ್ರೀ_ಸಿದ್ಧೇಶ್ವರ_ಸ್ವಾಮೀಜಿ, ವಿಜಯಪುರ.                                    ಸಂಗ್ರಹ :ವೀರೇಶ್ ಅ

ದಿನಕ್ಕೊಂದು ಕಥೆ. 192

*🌻🌻ದಿನಕ್ಕೊಂದು ಕಥೆ*🌻🌻                              *ಅಪ್ರಿಯವಾದ ಸತ್ಯ* ನಮ್ಮ ಗುಂಡಣ್ಣ ಬಹುದೊಡ್ಡ ಕಂಪನಿಯ ಪುಟ್ಟ ಕೆಲಸದಲ್ಲಿದ್ದ. ಅವನ ಕಾರ್ಯ­ವೆಂದರೆ ದಿನನಿತ್ಯ ಆಡಳಿತ ವಿಭಾಗದ ಕಚೇರಿಯ ಕಿಟಕಿಯ ಗಾಜು­ಗಳನ್ನು ಒರೆಸಿ ಶುದ್ಧವಾಗಿ­ಡುವುದು, ಮೇಜುಗಳನ್ನು ಸ್ವಚ್ಛವಾಗಿಡುವುದು ಮತ್ತು ಕೆಲಸಗಾರರಿಗೆ ಆಗಾಗ ಚಹಾ, ಕಾಫಿ ತಂದುಕೊಡುವುದು. ಒಂದು ದಿನ ಎತ್ತರದ ಕಿಟಕಿಯ ಗಾಜನ್ನು ಒರೆಸಲು ಏಣಿ ಹತ್ತಿ ನಿಂತಿದ್ದ. ಬಾಗಿ ಮೇಲಿನ ಗಾಜನ್ನು ಒರೆ­ಸು­ವಾಗ ಏಣಿ ಜಾರಿತು. ಗುಂಡಣ್ಣ ಮುಂದೆ ಗಾಜಿನ ಮೇಲೆ ಬಿದ್ದ. ಬೀಳುವಾಗ ಗಾಜು ಒಡೆದು ತಲೆ­ಯೊಳಗೆ ತೂರಿತು. ಸುಮಾರು ಇಪ್ಪತ್ತು ಅಡಿ ಎತ್ತರದಿಂದ ನೆಲಕ್ಕೆ ದೊಪ್ಪನೇ ಬಿದ್ದ. ಅವನನ್ನು ಆಸ್ಪತ್ರೆಗೆ ಸೇರಿಸಿದರು. ಬಲಗಾಲು ಮುರಿ­ದಿತ್ತು ಆದರೆ ಜೀವ ಉಳಿಯಿತು. ಅವನಿಗೆ ಎಚ್ಚರವಾದಾಗ ತಲೆ ತುಂಬ ಬ್ಯಾಂಡೇಜು. ನನ್ನ ತಲೆಗೇನಾಗಿದೆ ಎಂದು ಕೇಳಿದ. ಅವನ ಹೆಂಡತಿ ಹೋ ಎಂದು ಅಳುತ್ತ, ‘ಪುಣ್ಯಕ್ಕೆ ಜೀವ ಉಳಿಯಿತು. ಕಿವಿ ಹೋದರೆ ಹೋಗಲಿ ಬಿಡಿ’ ಎಂದು ಮೂಗು ಒರೆಸಿಕೊಂಡಳು. ‘ಕಿವಿ ಹೋಯಿತು ಎಂದರೆ ಏನರ್ಥ?’ ಕೇಳಿದ ಗಾಬರಿ­ಯಾದ ಗುಂಡಣ್ಣ. ಮತ್ತೆರಡು ಬಕೆಟ್ ಕಣ್ಣೀರು ಸುರಿಸಿ ಆಕೆ ಹೇಳಿದಳು, ‘ನೀವು ಗಾಜಿನ ಮೂಲಕ ಬೀಳುವಾಗ ನಿಮ್ಮ ಎರಡೂ ಕಿವಿಗಳು ಪೂರ್ತಿ ಕತ್ತರಿಸಿ ಹೋಗಿವೆ’. ಗುಂಡಣ್ಣನಿಗೆ ಕಿವಿಗಳಿಲ್ಲದ ತನ್ನ ಮುಖವನ್ನು ಕಲ್ಪ್ಪಿಸಿಕೊಳ್ಳಲೂ ಅಸಹ್ಯ­ವೆನಿಸಿತು. ಆದರೆ ಏನು ಮಾಡುವುದು? ಗುಂಡಣ್

ದಿನಕ್ಕೊಂದು ಕಥೆ 191

ಮನೋನಿಗ್ರಹ ಸುಲಭವಲ್ಲ ಹಿಂದೆ ವಾರಾಣಸಿಯಲ್ಲಿ ಬೋಧಿಸತ್ವ ಒಬ್ಬ ಶ್ರೀಮಂತ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಬೆಳೆದು ಸಕಲ ವಿದ್ಯೆಗಳಲ್ಲಿ ಪಾರಂಗತನಾದ. ತಾನು ಎಲ್ಲ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ ವಿರಾಗಿಯಾಗಬೇಕೆಂದು ನಿರ್ಧರಿಸಿ ಮನೆಬಿಟ್ಟು ಹೊರಟ. ಹಿಮಾಲಯ ಸೇರಿ ಯೋಗಾಭ್ಯಾಸ ಮಾಡಿ, ಮನಸ್ಸನ್ನು ನಿಗ್ರಹಿಸಿ ಧ್ಯಾನದಿಂದ ಅಲ್ಲೇ ಉಳಿದ. ಕೆಲ ವರ್ಷಗಳ ನಂತರ ಪ್ರಪಂಚ ಸುತ್ತಿ ಬರಬೇಕೆಂದು ತೀರ್ಮಾ­ನಿಸಿ ಎಲ್ಲೆಡೆ ತಿರುಗಾಡಿ ಕೊನೆಗೆ ವಾರಾಣಸಿಗೆ ಬಂದ. ಅರಮನೆಯ ರಾಜೋದ್ಯಾನದಲ್ಲಿ ಮರದ ಕೆಳಗೆ ನೆಲೆಸಿದ. ಬೆಳಿಗ್ಗೆ ಸ್ನಾನ ಮಾಡಿ ವಲ್ಕಲಗಳನ್ನು ಧರಿಸಿ, ಭಿಕ್ಷಾಪಾತ್ರೆ ಹಿಡಿದು, ನಗರದಲ್ಲಿ ಭಿಕ್ಷೆ ಬೇಡಲು ಹೋದ. ಅರಮನೆಯ ಮುಂದೆ ಹೋದಾಗ ಇವನ ಚಹರೆ, ಮುಖದಲ್ಲಿದ್ದ ಶಾಂತಿಗಳನ್ನು ಕಂಡು ರಾಜ ಬ್ರಹ್ಮದತ್ತ ಇವನನ್ನು ಒಳಗೆ ಕರೆದು ಅಗ್ರಪೀಠದಲ್ಲಿ ಕುಳ್ಳಿರಿಸಿ ಸತ್ಕರಿ­ಸಿದ. ರುಚಿರುಚಿಯಾದ ಭೋಜನದಿಂದ ತೃಪ್ತಿಪಡಿಸಿದ. ರಾಜನ ಅಪೇಕ್ಷೆಯಂತೆ ಬೋಧಿಸತ್ವ ಈ ಅರಮನೆಯ ರಾಜೋ­ದ್ಯಾನ­ದಲ್ಲೇ ಉಳಿದ. ಒಮ್ಮೆ ಗಡಿನಾಡಿ­ನಲ್ಲಿ ಉಂಟಾದ ಅಶಾಂತಿಯನ್ನು ನಿವಾರಿಸಲೆಂದು ರಾಜ ಪ್ರವಾಸ ಮಾಡ­ಬೇಕಾ­ಯಿತು. ಆತ ತನ್ನ ಹಿರಿಯ ಹೆಂಡತಿ ಮೃದುಲಕ್ಷಣೆಯನ್ನು ಕರೆದು ಯಾವ ಕಾರ­ಣಕ್ಕೂ ಸನ್ಯಾಸಿ ಬೋಧಿ­ಸತ್ವನ ಆರೈಕೆಯಲ್ಲಿ ಕಡಿಮೆಯಾಗದಂತೆ ನೋಡಿಕೊ­ಳ್ಳಲು ತಿಳಿಸಿದ. ಬೋಧಿಸತ್ವ ತನಗೆ ಬೇಕಾದ ಸಮಯಕ್ಕೆ ರಾಜಭವ­ನಕ್ಕೆ ಬಂದು ಭಿಕ್ಷೆ ಪಡೆದುಕೊಂಡು ಹೋಗುತ್ತಿದ್ದ. ಒಂದು ದಿನ ಮ

ದಿನಕ್ಕೊಂದು ಕಥೆ. 190

🌻🌻 *ದಿನಕ್ಕೊಂದು ಕಥೆ*🌻🌻                                  *ತಪ್ಪಿನಿಂದಾದ ಮಹೋನ್ನತ ಆವಿಷ್ಕಾರ* ಒಂದು ಸಾಧನೆಯೆಡೆಗೆ ಎಡೆಬಿಡದೆ ಪ್ರಯತ್ನಿಸಿದಾಗ ನಡೆದ ಅಚಾ­ತುರ್ಯ ಕೂಡ ಹೇಗೆ ಮತ್ತೊಂದು ಅನಿರೀಕ್ಷಿ­ತವಾದ ವಿಶೇಷ ಸಾಧನೆಯ ಕಡೆಗೆ ಕರೆದೊಯ್ಯಬಹುದೆಂಬುದಕ್ಕೆ ಅಲೆಗ್ಸಾಂಡರ್ ಬೆಲ್‌ನ ಜೀವ­ನವೇ ಸಾಕ್ಷಿ. ಅಲೆಗ್ಸಾಂಡರ್ ಗ್ರಹಾಂ ಬೆಲ್ ಹುಟ್ಟಿದ್ದು ಸ್ಕಾಟ್‍ಲಂಡ್‌ನ ಎಡಿನ್‌­ಬರೋ­ದಲ್ಲಿ. ಈತನ ತಂದೆ ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಮಾತ­ನಾ­ಡುವ, ಧ್ವನಿಯನ್ನು ಬಳಸುವ ಕಲೆಯನ್ನು ಕಲಿಸುತ್ತಿದ್ದರು. ಮಗ ಗ್ರಹಾಂ ಬೆಲ್ ವಿಜ್ಞಾನದಲ್ಲಿ ಅಸಕ್ತಿ ತೋರಿಸಿದರೂ ಶಾಲೆಯ ಕಲಿಕೆಯಲ್ಲಿ ಉತ್ಸಾಹ ತೋರ­ಲಿಲ್ಲ. ಆದರೆ, ಸದಾ ಕಾಲ ಹೊಸ ಅನ್ವೇಷಣೆಯಲ್ಲಿ ಅವನ ಮನಸ್ಸು ವ್ಯಸ್ತವಾಗಿ­ರು­ತ್ತಿತ್ತು. ಆತ ತನ್ನ ಹನ್ನೆರ­ಡನೇ ವಯಸ್ಸಿಗೆ ಹಿಟ್ಟಿನ ಗಿರಣಿಯನ್ನು ಕಂಡುಹಿಡಿ­ದಿದ್ದ. ಅದು ಎಷ್ಟೋ ವರ್ಷ ನಡೆಯಿತು. ಅವನ ಇಬ್ಬರು ಅಣ್ಣಂ­ದಿರು ಕ್ಷಯ­ರೋಗ­ದಿಂದ ಸಾವ­ನ್ನಪ್ಪಿದ ಮೇಲೆ ಆತನ ಆರೋಗ್ಯವೂ ಹದ­ಗೆಟ್ಟಿತ್ತು. ಅನಾ­ರೋಗ್ಯ­ದಿಂದ ಬಳಲುತ್ತಿದ್ದರೂ ಆತ ಕೆನಡಾಕ್ಕೆ ತೆರಳಿದೆ. ಅಲ್ಲಿ ಅವನ ಅರೋಗ್ಯ ಸುಧಾ­ರಿಸಿತು. ಅಷ್ಟು ಹೊತ್ತಿಗೆ ಅವನ ತಾಯಿಯ ಕಿವಿ ಸಂಪೂರ್ಣವಾಗಿ ಕೇಳದಂತಾ­­ದವು. ಆಗ ಅವನ ತಂದೆ ಕಿವುಡರಿಗೆ ಮಾತನಾಡುವ ರೀತಿಯನ್ನು ಕಲಿಸಿಕೊಡುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಗ್ರಹಾಂ ಅದನ್ನೇ ಮುಂದುವರೆಸಿದ. ಕಿವುಡರಿಗೆ ಮಾತು ಕಲಿಸುವ ಸ