Posts

Showing posts from September, 2020

ದಿನಕ್ಕೊಂದು ಕಥೆ 989

ದಿನಕ್ಕೊಂದು ಕಥೆ  ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ.          ಭಾರತರತ್ನ ಪ್ರಶಸ್ತಿಯನ್ನು ಹೆಮ್ಮೆಯಿಂದ ಪಡೆದ ಕನ್ನಡಿಗ  ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿ ಕೊಡುವುದು ತುಂಬಾ ಕಷ್ಟ. ಮೈಸೂರು ಸಂಸ್ಥಾನದ ದಿವಾನರಾಗಿ ಹಾಗೂ ಮುಖ್ಯ ಇಂಜಿನಿಯರ್ ಆಗಿ ಅವರು ಹುಟ್ಟು ಹಾಕಿದ ಸಂಸ್ಥೆಗಳು ಅಸಂಖ್ಯ! ಅವರ ಬದುಕೇ ಒಂದು ಅದ್ಭುತ ಯಶೋಗಾಥೆ.        ಅವರು ಮೊದಲು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು. ಅದರ ನಂತರ ಪೂನಾ ಇಂಜಿನಿಯರಿಂಗ್ ಕಾಲೇಜಿನಿಂದ BE ( civil) ಪದವಿ. ಮೊದಲು ಸೇವೆ ಸಲ್ಲಿಸಿದ್ದು ಮಹಾರಾಷ್ಟ್ರ ಸರಕಾರದ PWD  ಇಲಾಖೆಯಲ್ಲಿ. ಈ ಅವಧಿಯಲ್ಲಿ ಮುಂಬೈ ಮಹಾನಗರದ ನೀರು ಸರಬರಾಜು, ಒಳಚರಂಡಿ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಮುಂದೆ ಹೈದರಾಬಾದ ಸರಕಾರವು ಅವರ ಸೇವೆಯನ್ನು ಪಡೆಯುವಲ್ಲಿ ಯಶಸ್ವಿ ಆಯಿತು. ಅಲ್ಲಿ ಪ್ರವಾಹದಿಂದ ನಗರದ ಕೆರೆಗಳು ತುಂಬಿ ಹರಿದು ಇಡೀ ನಗರವೇ ಕೊಚ್ಚಿಕೊಂಡು ಹೋಗುವ ಸಮಸ್ಯೆ ಇತ್ತು. ಅಲ್ಲಿನ ಕೆರೆಗಳ ಸಂರಕ್ಷಣೆ, ಒಳಚರಂಡಿ ಯೋಜನೆಯ ಯಶಸ್ವೀ ನಿರೂಪಣೆಯಿಂದ ಮತ್ತೆ ಹೈದರಾಬಾದ ನಗರದಲ್ಲಿ ನೆರೆ ಬರಲಿಲ್ಲ!          ಅವರ ಕೀರ್ತಿ ಎಲ್ಲೆಡೆ ಹರಡಿದಂತೆ ಮೈಸೂರಿನ  ಮಹಾರಾಜರು ಅವರನ್ನು ತುಂಬು ಗೌರವದಿಂದ ಮೈಸೂರು ಸಂಸ್ಥಾನದ ಸೇವೆಗೆ  1909ರಲ್ಲೀ ಆಮಂತ್ರಿಸಿದರು. ಸರ್ ಎಂವಿ ಅವರು  ಸಂತೋಷದಿಂದ ಒಪ್ಪಿಕೊಂಡು ಮೈಸೂರ

ದಿನಕ್ಕೊಂದು ಕಥೆ 988

ದಿನಕ್ಕೊಂದು ಕಥೆ ಕಣ್ಣೀರನ್ನು ಕಾಣದ ನಗೆ:~ (ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿ)🐍🐍 ಒಂದು ಊರಿನ ಹೊರಗಡೆ ಒಂದು ಸಂಸಾರ ವಾಸವಾಗಿತ್ತು. ಅವರ ಮನೆಯ ಪಕ್ಕದಲ್ಲೇ ಸ್ಮಶಾನ. ಈ ಮನೆಯಲ್ಲಿದ್ದವರು ಮೂವರೇ ಜನ. ತಂದೆ, ತಾಯಿ ಮತ್ತು ಪುಟ್ಟ ಮಗಳು. ಅವಳಿಗೆ ಸುಮಾರು ಆರು ವರ್ಷ ವಯಸ್ಸು. ಮನೆಯಲ್ಲಿ ಕಡು ಬಡತನ.🐍🐍 ಮನೆಯೊಳಗೆ ತಿನ್ನಲು ಆಹಾರವಿಲ್ಲ. ಹೊರಗಡೆ ತಿರುಗಾಡುವುದು ಸಾಧ್ಯವಿಲ್ಲದಷ್ಟು ಹಿಮಪಾತ.🐍🐍 ಅಪ್ಪನ ಕೆಲಸವೇ ವಿಚಿತ್ರ. ಸ್ಮಶಾನಕ್ಕೆ ಯಾವುದಾದರೂ ಹೆಣ ಬಂದರೆ ಮಾತ್ರ ಅವನ ಕೆಲಸ ಪ್ರಾರಂಭ. ಆತ ಮಾಡುವುದು ಹೆಣದ ಅಲಂಕಾರ. ಆ ದೇಶಗಳಲ್ಲಿ ಹೆಣವನ್ನು ಚೆನ್ನಾಗಿ ಅಲಂಕಾರ ಮಾಡಿ, ಮರದ ಪೆಟ್ಟಿಗೆಯೊಳಗಿರಿಸಿ ನಂತರ ನೆಲದಲ್ಲಿ ಹೂಳುತ್ತಾರೆ.🐍🐍 ಈತ ಹೆಣದ ಅಲಂಕಾರದಲ್ಲಿ ಪರಿಣಿತ. ಅದಕ್ಕೇ ಜನ ಮೃತದೇಹಗಳನ್ನು ಅಲ್ಲಿಗೆ ತಂದು ಒಪ್ಪಿಸುತ್ತಿದ್ದರು. ಈತ ಹೆಣವನ್ನು ಶುದ್ಧವಾಗಿ ತೊಳೆದು, ಮುಲಾಮು ಸವರಿ ನಂತರ ಅವುಗಳಿಗೆ ಒಳ್ಳೆಯ ಪೋಷಾಕು ತೊಡಿಸುತ್ತಿದ್ದ. ಮುಖಕ್ಕೆ ವಿಶೇಷವಾದ ಅಲಂಕಾರ ಮಾಡಿ ದೇಹವನ್ನು ಮತ್ತಷ್ಟು ಅಲಂಕಾರ ಮಾಡಿದ ಮರದ ಪೆಟ್ಟಿಗೆಯಲ್ಲಿಟ್ಟು ಸಂಬಂಧಿಕರಿಗೆ ಒಪ್ಪಿಸುತ್ತಿದ್ದ.🐍🐍🐍 ಈ ಕೆಲಸಕ್ಕೆ ಅವನಿಗೆ ಸುಮಾರು ಮೂರರಿಂದ ನಾಲ್ಕು ತಾಸು ಸಮಯ ತಗಲುತ್ತಿತ್ತು. ಅದಕ್ಕಾಗಿ ಅವನಿಗೆ ಒಂದಷ್ಟು ಹಣ ದೊರಕುತ್ತಿತ್ತು. ಅದರಿಂದ ಕೆಲವು ದಿನ ಜೀವನ ಸಾಗುತ್ತಿತ್ತು.🐍🐍🐍🐍 ಹೆಣಗಳು ಬಾರದಿದ್ದ ದಿನ ಬದುಕು ದುರ್ಭರವಾಗುತ್ತಿತ

ದಿನಕ್ಕೊಂದು ಕಥೆ 987

ದಿನಕ್ಕೊಂದು ಕಥೆ ಸಣ್ಣ ವಿಷಯ ,ಮನಸು ಹಗುರ....... (ಶಿಕ್ಷಕ ಮಿತ್ರರಿಗಾಗಿ) ಕೃಪೆ:ವಾಟ್ಸ್ ಆ್ಯಪ್ ಗ್ರೂಪ್. ಇಂದು ಮದ್ಯಾನ್ಹ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಕುಳಿತು ವಿದ್ಯಾಗಮಕ್ಕೆ ಸಂಬಂಧಿಸಿದ ದಾಖಲೆ,ಮಾಹಿತಿಗಳನ್ನು ಬರೆಯುತ್ತಾ ಕುಳಿತಿದ್ದೆ  ತುಂಬಾ ಸೋತಿದ್ದಂತಿದ್ದ ಒಬ್ಬರು ಹೆಂಗಸು,HM ಕೊಠಡಿಯ ಒಳಕ್ಕೆ ಬಂದು ನಮಸ್ಕಾರ ಸರ್ ಅಂದರು. ನಮ್ಮ ತಾಯಿಯ ವಯಸ್ಸಿನವರು,ನೋಡಲು ನನ್ನ ತಾಯಿಯಂತೆ ಇದ್ದರು ,ಅವರು ಸರ್ ಅಂದಾಗಲೇ ಅಷ್ಟು ಹಿರಿಯ ಜೀವದ ಬಾಯಿಂದ  ಸೋತ ದ್ವನಿಯಲ್ಲಿ ಸರ್ ಎನ್ನುವ ಮಾತು ಕೇಳಲು ಯಾಕೊ ಸಂಕೊಚ ,ಮುಜುಗರವು ಆಯಿತು ,ಬನ್ನಿ ಅಮ್ಮ ಕುಳಿತುಕೊಳ್ಳಿ‌ ಏನಾಗಬೇಕು ಅಂದೆ ಪಾಪ ಬಿಸಲ ಜಗಳದಲ್ಲಿ ಬೆವೆತಿದ್ದ ಮೂಖವನ್ನು ತಾನು ತೊಟ್ಟಿದ್ದ ಹಳೆಯ ಸೀರೆಯೊಂದರ ಸೆರಗಿನಿಂದ ಒರೆಸಿಕೊಳ್ಳುತ್ತಾ ,ಈ ಕರೋನಾ ಹರಡುತ್ತಿರುವ ಸಮಯದಲ್ಲಿಯೂ ನೆಡದೂ ನೆಡೆದು ಸೋತಂತೆ ಬಾಯಿಗೆ ಹಾಕಿದ್ದ ಮಾಸ್ಕ್ ಸರಿಸಿ .....,ನಾನು ಈ ಶಾಲೆಯಲ್ಲಿ ಒಂದನೆ ಕ್ದಾಸಿಗೆ ಸೇರಿ ,ಎರಡನೇ ಕ್ಲಾಸಿನವರೆಗೆ ಶಾಲೆಗೆ ಬಂದಿದ್ದೆ ,ನನಗೆ ಈಗ 63_64 ವರ್ಷ ವಯಸ್ಸು ,ಆದರೆ ಆಧಾರ್ ಕಾರ್ಡ್ ನಲ್ಲಿ ವಯಸ್ಸು ತಪ್ಪಾಗಿ ,ನನಗಿನ್ನು ಅರವತ್ತು ತುಂಬಿಲ್ಲ,ಅದಕ್ಕಾಗಿ,ವೃದ್ದಾಪ್ಯ ವೇತನ ಮಾಡಿಸಲು ಆಗುತ್ತಿಲ್ಲ, ಎಲ್ಲಾ ಕಡೆ ಅಲೆದಾಡುತ್ತಿದ್ದೇನೆ ನನಗೆ  ನೋಡಿಕೊಳ್ಳುವವರು ಯಾರು ಇಲ್ಲ, ಕೂಲಿ ಮಾಡಿ ಸೋತು ಸೊರಗಿದ್ದೇನೆ,ದಯಮಾಡಿ ನಾನು ಶಾಲೆಗೆ ಸೇರಿದ ವರ್ಷದಲ್ಲಿ ಹುಟ್ಟಿದ ದಿ

ದಿನಕ್ಕೊಂದು ಕಥೆ 986

*ದಿನಕ್ಕೊಂದು ಕಥೆ ಬೆರಗಿನ ಬೆಳಕು* *ಡಾ.ಗುರುರಾಜ ಕರ್ಜಗಿ* *ಸಂಗ್ರಹ : ಪ್ರಜಾವಾಣಿ ಪತ್ರಿಕೆ* *ಬುದ್ಧನ ಜಾತಕ ಕಥೆಗಳು* *ಪುಣ್ಯದ ನಿಧಿ*    ಹಿಂದೆ ರಾಜಗೃಹದಲ್ಲಿ ಮಗಧರಾಜ ಆಳುತ್ತಿದ್ದಾಗ, ನಗರದ ಪೂರ್ವದಲ್ಲಿ ಮಗಧದ ಹೊಲಗಳಿದ್ದವು. ಅಲ್ಲಿ ಒಬ್ಬ ಬ್ರಾಹ್ಮಣ ಸಾವಿರ ಎಕರೆ ಜಮೀನನ್ನು ತೆಗೆದುಕೊಂಡು, ಐದುನೂರನ್ನು ತಾನೇ ಇಟ್ಟುಕೊಂಡು, ಉಳಿದ ಐದುನೂರು ಎಕರೆಯನ್ನು ಕೂಲಿಯ ಮೇಲೆ ನಡೆಸುವಂತೆ ಮತ್ತೊಬ್ಬನಿಗೆ ಕೊಟ್ಟುಬಿಟ್ಟಿದ್ದ. ಆತ ಅಲ್ಲಿಯೇ ಗುಡಿಸಲು ಹಾಕಿಕೊಂಡಿದ್ದ. ಹೊಲದಲ್ಲಿ ಬತ್ತವನ್ನು ಬಿತ್ತಿದ್ದ. ಕಾಳುಗಳು ರಸ ತುಂಬಿಕೊಳ್ಳುತ್ತಿದ್ದವು. ಅವನ ಹೊಲದ ಮಧ್ಯದಲ್ಲಿ ಒಂದು ಅರಳಿಮರವಿತ್ತು. ಅದರಲ್ಲಿ ಸಹಸ್ರಾರು ಗಿಳಿಗಳಿದ್ದವು. ಬೋಧಿಸತ್ವ ಈ ಗಿಳಿಗಳ ರಾಜನಾಗಿ ಹುಟ್ಟಿದ್ದ. ಅವನ ಹೆಸರು ಶುಕರಾಜ. ಅವನ ತಂದೆತಾಯಿಗಳಿಗೆ ವಯಸ್ಸಾಯಿತು. ಶುಕರಾಜ ಅವರನ್ನು ಗೂಡಿನಲ್ಲಿಯೇ ಬಿಟ್ಟು ತಾನೇ ದಿನಾಲು ಆಹಾರ ತಂದು ಕೊಡುತ್ತಿದ್ದ.    ಪ್ರತಿದಿನ ಹಿಂಡುಹಿಂಡಾಗಿ ಗಿಳಿಗಳು ಬತ್ತದ ಹೊಲದಲ್ಲಿ ಇಳಿದು ಹೊಟ್ಟೆ ತುಂಬ ಕಾಳು ತಿನ್ನುತ್ತಿದ್ದವು. ಆದರೆ ಶುಕರಾಜ ಮಾತ್ರ ಹೊಟ್ಟೆ ತುಂಬ ತಿಂದು, ಅತ್ಯಂತ ಒಳ್ಳೆಯ, ಹದವಾದ ಕಾಳುಗಳ ತೆನೆಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಹಾರುತ್ತಿತ್ತು. ಈ ಹಕ್ಕಿಗಳ ಹಾವಳಿಗಳನ್ನು ತಡೆಯಲಾರದೆ ರೈತ ಬ್ರಾಹ್ಮಣನ ಕಡೆಗೆ ಹೋಗಿ ಕಷ್ಟ ಹೇಳಿಕೊಂಡ, ‘ಸ್ವಾಮಿ, ಉಳಿದ ಗಿಳಿಗಳು ಹೊಟ್ಟೆತುಂಬ ತಿಂದರೆ ಒಂದು ದೊಡ್ಡ ಗಿಳಿ ಮಾತ್ರ ತಿ

ದಿನಕ್ಕೊಂದು ಕಥೆ 985

ದಿನಕ್ಕೊಂದು ಕಥೆ *Very heart touching story* ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ ಹಿಡಿದು ಕೊಂಡಿದ್ದರು. ಅವರನ್ನು ಗಮನಿಸಿದರೆ, ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವ ಹಾಗನಿಸಿತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, *"ಇದು ಆನಂದ್ ಅವರ ಮನೇನಾ, ಯೋಗಾನಂದ ರಸ್ತೇನಾ"* ಅಂತ ಕೇಳಿದರು.  "ಹೌದು ನಾನೇ ಆನಂದ್, ಇದೇ ನೀವು ಹುಡುಕುತ್ತಿರುವ ವಿಳಾಸ", ತಾವು ಯಾರು ಎಂದು ಬಡಬಡಿಸಿದೆ. ಅವರ ಕೈಗಳು ನಡುಗುತ್ತಾ ಇದ್ದವು, ತುಟಿ ಒಣಗಿತ್ತು, ನಾಲಿಗೆಯಿಂದ ತುಟಿ ಸವರುತ್ತಾ, ಅವರು ಒಂದು ಪತ್ರವನ್ನು ನನಗೆ ಕೊಡುತ್ತಾ ಹೀಗೆಂದರು: "ನಾನು ನಿಮ್ಮ ತಂದೆಯ ಸ್ನೇಹಿತ. ನಿಮ್ಮ ಹಳ್ಳಿಯಿಂದ ಬರುತ್ತಿದ್ದೇನೆ. ನಿಮ್ಮ ತಂದೆಯವರು ಈ ಪತ್ರವನ್ನು ನಿಮಗೆ ತಲುಪಿಸಿ, ನನ್ನ ಮಗ ನಿಮಗೆ ಸಹಾಯ ಮಾಡುತ್ತಾನೆ" ಎಂದು ತಿಳಿಸಿದರು.  *ನಾನು ಆಶ್ಚರ್ಯದಿಂದ "ತಂದೆಯವರ"* ಎಂದು ಕೇಳಿದೆ. ನಾನು ಪತ್ರವನ್ನು ಓದಿದೆ. " ಪ್ರೀತಿಯ ಆನಂದ,  ನಿನಗೆ ಆಶೀರ್ವಾದಗಳು.  ಈ ಪತ್ರವನ್ನು ನಿನಗೆ ಕೊಡುತ್ತಾ ಇರುವವರು ನನ್ನ ಸ್ನೇಹಿತರು. ಇವರ ಹೆಸರು ರಾಮಯ್ಯ. ಬಹಳ ಪ್ರಾಮಾಣಿಕ ವ್ಯಕ್ತಿ