Posts

Showing posts from October, 2020

ದಿನಕ್ಕೊಂದು ಕಥೆ 996

ದಿನಕ್ಕೊಂದು ಕಥೆ ಕೃಪೆ:ಕನ್ನಡ_ಸಂಪದ ದಯಾನಂದ ಸರಸ್ವತಿ  ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಸಂಸ್ಥಾಪಕರಾಗಿ ಮತ್ತು ಭಾರತೀಯ ಸಮಾಜದ ಧಾರ್ಮಿಕ ಸುಧಾರಕರಾಗಿ, ಹಿಂದೂ ಧರ್ಮದ ಪುನರುತ್ಥಾರಕರಾಗಿ ಅವರು  ಸ್ಮರಣೀಯರಾಗಿದ್ದಾರೆ.  ಇಂದು ಅವರ ಸಂಸ್ಮರಣಾ ದಿನ. ದಯಾನಂದ ಸರಸ್ವತಿ  ಗುಜರಾತಿನ ಟಂಕಾರಾ ಎಂಬ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದು. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ.  ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು ಆರಿಸಿ ತಿನ್ನುತ್ತಿದ್ದ ಇಲಿ, ಪ್ರೀತಿಯ ಚಿಕ್ಕಪ್ಪ ಮತ್ತು ತಂಗಿಯ ಅಕಾಲಮೃತ್ಯು ಈ ಘಟನೆಗಳಿಂದ ಮೂಲಶಂಕರನ ಹೃದಯದಲ್ಲಿ ಬಗೆಬಗೆಯ ಪ್ರಶ್ನೆಗಳು ಎದ್ದುವು. ಜೀವಿತದಲ್ಲಿ ಇವಕ್ಕೆ ಉತ್ತರ ಪಡಯಲೇಬೇಕೆಂದು ಬಾಲಕ ದೃಡಸಂಕಲ್ಪ ಮಾಡಿದ. ಅದಕ್ಕಾಗಿ ತಂದೆ ತಾಯಿ ಸಂಪತ್ತು ಎಲ್ಲವನ್ನೂ ತೊರೆದ. ದುರ್ಗಮ ಅರಣ್ಯಗಳಲ್ಲಿ ಅಲೆದು ಯೋಗಿಗಳಿಂದ ಯೋಗ್ಯವಿದ್ಯೆಯ ಅನೇಕ ರಹಸ್ಯಗಳನ್ನರಿತ. 1848 ರಲ್ಲಿ ಪೂರ್ಣಾನಂದ ಸರಸ್ವತಿಗಳು ಈ ಬ್ರಹ್ಮಚಾರಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು. 1858 ರಲ್ಲಿ ದಯಾನಂದರು ಮಥುರೆಗೆ ಬಂದು ವಿರಜಾನಂದ ಸರಸ್ವತಿಗಳಲ್ಲಿ ವೇದವೇದಾಂಗಗಳನ್ನು ಅಧ್ಯಯನ ಮಾಡಿದರ

ದಿನಕ್ಕೊಂದು ಕಥೆ 995

ದಿನಕ್ಕೊಂದು ಕಥೆ ಆಧುನಿಕ ಪಕ್ಷಿ ಪ್ರೇಮಿ. ಬದುಕು ಯಾವಾಗ ಬೇಕಾದರೂ ಬದಲಾಗಬಹದು. ಕೆಲವೊಮ್ಮೆ ಸಣ್ಣ ಘಟನೆಗಳು ಕೂಡ ಬದುಕುವ ರೀತಿಯನ್ನ ಬದಲಾಯಿಸಿ ಬಿಡುತ್ತವೆ. ಜೋಸೆಫ್ ಶೇಖರ್ ವಿಷಯದಲ್ಲೂ ಇಂತಹ ಒಂದು ಘಟನೆ ನಡೆಯುತ್ತದೆ. ೨೭ ಡಿಸೆಂಬರ್ ೨೦೦೪ ರ ಬೆಳಿಗ್ಗೆ ಶೇಖರ್ ಮನೆಯ ಮಹಡಿಯ ಮೇಲೆ ನಾಲ್ಕು ಗಿಣಿಗಳು ನೆಲದಲ್ಲಿ ಬಿದ್ದಿದ್ದ ಅಕ್ಕಿ ಯನ್ನ ಹೆಕ್ಕಿ ತಿನ್ನಲು ಪ್ರಯತ್ನಿಸುತ್ತಿರುತ್ತವೆ. ಈ ವೇಳೆಗಾಗಲೇ ಸುನಾಮಿ ಹೊಡೆತಕ್ಕೆ ಚೆನ್ನೈ ಸಿಕ್ಕಿರುತ್ತದೆ. ಲಕ್ಷಾಂತರ ಜನರ ಬದುಕು ಮೂರಾಬಟ್ಟೆ ಆಗಿರುತ್ತದೆ. ಇಂತಹ ಸಮಯದಲ್ಲಿ ಹಕ್ಕಿ -ಪಕ್ಷಿಗಳ ಕೇಳುವರಾರು?  ಶೇಖರ್ ಮನೆಯ ತಾರಸಿಯ ಮೇಲೆ ಒಂದಷ್ಟು ಕಾಳು ಮತ್ತು ನೀರು ಇಡುವುದನ್ನ ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುತ್ತಾರೆ. ಸುನಾಮಿ ನಂತರ ಅಯ್ಯೋ ಈ ಪಕ್ಷಿಗಳ ಕಥೆಯೇನು? ಎನ್ನುವ ಪ್ರಶ್ನೆ ಅವರಲ್ಲಿ ಮೂಡುತ್ತದೆ. ನಿತ್ಯವೂ ನೆನೆಸಿದ ಅಕ್ಕಿಯನ್ನ ತಂದು ಮಹಡಿಯ ಮೇಲೆ ಹರಡಲು ಶುರು ಮಾಡುತ್ತಾರೆ. ಅದು ನಿತ್ಯ ಕಾಯಕವಾಗುತ್ತದೆ. ಕಳೆದ ೧೬ ವರ್ಷದಿಂದ ಇದನ್ನ ಮಾಡುತ್ತಾ ಬಂದಿದ್ದಾರೆ. ಅವರ ಬದುಕಿನಲ್ಲಿ ಇಷ್ಟು ಸಮಯದಲ್ಲಿ ಹಲವಾರು ಏಳು ಬೀಳುಗಳನ್ನ ಕಂಡಿದ್ದಾರೆ. ಬದಲಾಗದೆ ಅಚಲವಾಗಿ ಉಳಿದಿರುವುದು ಅವರ ಮನೆಗೆ ಬರುವ ಗಿಣಿಗಳಿಗೆ ಆಹಾರ ನೀಡುವ ಕಾರ್ಯ.  ಪ್ರಾರಂಭದಲ್ಲಿ ಹತ್ತಿಪ್ಪತ್ತು ಬರುತ್ತಿದ್ದ ಗಿಣಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿ ಯಾವಾಗ  ಸಾವಿರಾರು ಸಂಖ್ಯೆಗೆ ಏರಿತು ಎನ್ನುವುದು ತಿಳಿಯಲೇ ಇ

ದಿನಕ್ಕೊಂದು ಕಥೆ 994

ದಿನಕ್ಕೊಂದು ಕಥೆ ನಳನ ಕಥೆ ಜೂಜಾಟದಲ್ಲಿ ದುರ್ಯೋಧನನಿಂದ ಸೋತುಹೋದ ಧರ್ಮರಾಯನು ಚಿಂತೆಯಲ್ಲಿ ಮಗ್ನನಾಗಿದ್ದನು. ತನ್ನಂತೆ ನೊಂದವರು ಯಾರೂ ಈ ಭೂಮಿಯಲ್ಲೇ ಇಲ್ಲ ಎಂದು ತಿಳಿದು ಬೇಸರಗೊಂಡಿದ್ದನು. ಆಗ ಬೃಹದೇಶ್ವರನೆಂಬ ಮುನಿ ಅಲ್ಲಿಗೆ ಬಂದರು. ಅವರು ಧರ್ಮರಾಯನಿಗೆ ಸಾಂತ್ವನ ಹೇಳುವ ಬಗೆಯಲ್ಲಿ ನಳದಮಯಂತಿಯರು ಪಟ್ಟ ಕಷ್ಟದ ಕಥೆಯನ್ನು ಹೇಳಿದರು. “ನಿಷದ ದೇಶದ ರಾಜನಾದ ವೀರಸೇನನು ಚೆನ್ನಾಗಿ ರಾಜ್ಯವಾಳುತ್ತಿದ್ದನು. ಅವನಿಗೆ ನಳನೆಂಬ ಮಗ ಇದ್ದನು. ಸೌಂದರ್ಯವೇ ಮೂರ್ತಿವೆತ್ತ ನಳನು ವಿದ್ಯೆಯಲ್ಲೂ ಅರಿವಿನಲ್ಲೂ ಶೌರ್ಯದಲ್ಲೂ ಶ್ರೇಷ್ಠನಾಗಿ ಬೆಳಗಿದನು. ಸದ್ಗುಣಗಳನ್ನು ಪಡೆದ ಅವನು ಕುದುರೆ ಸವಾರಿಯಲ್ಲಿಯೂ ನಿಪುಣನಾಗಿದ್ದನು. ಅದೇ ಸಮಯದಲ್ಲಿ ವಿದರ್ಭ ದೇಶವನ್ನು ಭೀಮನೆಂಬ ರಾಜನು ಆಳುತ್ತಿದ್ದನು. ಅವನಿಗೆ ದಮಯಂತಿ ಎಂಬ ಮಗಳಿದ್ದಳು. ಅವಳು ಅರಿವಿನಿಂದಲೂ, ಕಲೆಗಳಲ್ಲಿಯೂ ಶ್ರೇಷ್ಠಳಾಗಿದ್ದಳು. ಅವಳ ಸೌಂದರ್ಯ ಲಾವಣ್ಯಗಳ ಕೀರ್ತಿಯನ್ನು ಹಲವರು ವರ್ಣಿಸಿದ್ದನ್ನು ಕೇಳಿ ನಳನು ಅವಳನ್ನು ಕಾಣದೇ ಇದ್ದರೂ ಮನಸ್ಸಿನಲ್ಲೇ ಅವಳನ್ನು ಪ್ರೀತಿಸತೊಡಗಿದನು. ಅವನಂತೆಯೇ ದಮಯಂತಿಯೂ ಸಹ ನಳನ ಬಗ್ಗೆ ಕೇಳಿ ತಿಳಿದು ಅವನನ್ನು ಪ್ರೀತಿಸತೊಡಗಿದಳು. ಒಬ್ಬರನ್ನೊಬ್ಬರು ನೋಡದೆಯೇ ನಳದಮಯಂತಿಯರ ಪ್ರೇಮ ಬೆಳೆಯಿತು. ಒಂದು ದಿನ ನಳನು ಅರಮನೆಯ ಹತ್ತಿರದ ತೋಟದಲ್ಲಿ ಒಬ್ಬನೇ ಇದ್ದನು. ಆಗ ಸುಂದರವಾದ ಹಂಸಗಳು ಅಲ್ಲಿಗೆ ಬಂದವು. ಅವುಗಳಲ್ಲಿ ಒಂದು ಅವನ ಬಳಿಗೆ ಬಂದು “ಸುಂದರನಾದ ರ

ದಿನಕ್ಕೊಂದು ಕಥೆ 993

ದಿನಕ್ಕೊಂದು ಕಥೆ ಟೈಟಾನಿಕ್ ಹಡಗು ಮುಳುಗುತ್ತಾ ಇದ್ದಾಗ ಅದರ ಆಸುಪಾಸು ಒಟ್ಟು ಮೂರು ಬೇರೆ ಹಡಗುಗಳಿದ್ದವು ಹಾಗೂ ಇವು ಮನಸ್ಸು ಮಾಡಿದ್ದರೆ 1500 ಜನರನ್ನು ಬದುಕಿಸಬಹುದಿತ್ತು. ತೀರಾ ಹತ್ತಿರ ಇದ್ದ ಹಡಗಿನ ಹೆಸರು 'ಸ್ಯಾಮ್ಸನ್'ಇದು ಕೇವಲ ಏಳು ಮೈಲಿ ದೂರದಲ್ಲಿತ್ತು. ಅಷ್ಟೇ ಅಲ್ಲ ಟೈಟಾನಿಕ್ ಹಡಗಿನ ಕ್ಯಾಪ್ಟನ್ ಮಾಡಿದ್ದ ಎಮರ್ಜೆನ್ಸಿ ಸಿಗ್ನಲ್  ಹಾಗೂ ಟೈಟಾನಿಕ್ ಹಡಗಿನಲ್ಲಿದ್ದ ಜನರ ಚೀತ್ಕಾರ ಸಹ ಕೇಳುತ್ತಿತ್ತು.ಆದರೆ ಒಂದೇ ಕಾರಣಕ್ಕೆ ಈ ಕ್ಯಾಪ್ಟನ್ ಮನಸು ಮಾಡಲಿಲ್ಲ ಯಾಕೆ ಅಂದರೆ  ಈ ಹಡಗಿನಲ್ಲಿದ್ದವರು ಕಾನೂನು ಬಾಹಿರವಾಗಿ ಸಮುದ್ರ ಜೀವಿಗಳನ್ನು ಬೇಟೆ ಮಾಡುತ್ತಿದ್ದರು. ಹಾಗಾಗಿ ತನ್ನ ಹಡಗಿನ ದಿಕ್ಕನ್ನು ಬದಲಾಯಿಸಿದ್ದ ಸ್ಯಾಮ್ಸನ್ ಹಡಗಿನ ಕ್ಯಾಪ್ಟನ್. ಇದು ಹೇಗಿದೆ ಅಂದರೆ ನಮ್ಮಲ್ಲಿ ಕೆಲವು ಜನ ತಮ್ಮ ಪಾಪಭರಿತ ಜೀವನದಲ್ಲಿ ಮಗ್ನರಾಗಿ ಮಾನವೀಯತೆಯನ್ನೇ ಮರೆತುಬಿಡುವವರ ಹಾಗಿದೆ. ಎರಡನೇ ಹತ್ತಿರವಿದ್ದ ಹಡಗಿನ ಹೆಸರು 'ಕ್ಯಾಲಿಫೋರ್ನಿಯನ್'ಇದು ಟೈಟಾನಿಕ್ ಹಡಗಿನಿಂದ 14 ಮೈಲಿ ದೂರದಲ್ಲಿ ಇತ್ತು.ಈ ಹಡಗಿನ ಕ್ಯಾಪ್ಟನ್ ಗು ಟೈಟಾನಿಕ್ ನ ಎಮರ್ಜೆನ್ಸಿ ಸಿಗ್ನಲ್ ಸಿಕ್ಕಿತ್ತು. ಆದರೆ ಈ ಹಡಗು ಟೈಟಾನಿಕ್ ಯಾವ ಮಂಜುಗಡ್ಡೆಯ ಪರ್ವತಕ್ಕೆ ಡಿಕ್ಕಿ ಹೊಡೆದಿತ್ತೋ ಅದನ್ನು ಸುತ್ತಿಕೊಂಡು ಹೋಗಬೇಕಿತ್ತು.ಹಾಗಾಗಿ ಈ ಕ್ಯಾಪ್ಟನ್  ಬೆಳಕು ಹರಿಯಲಿ ನೋಡೋಣ ಅಂತ ಕಾಯ್ತಾ ಇದ್ದ.ಆದರೆ ಅವನು ಮರುದಿನ ಅಲ್ಲಿಗೆ  ಹೋಗುವಷ್ಟೊತ್ತಿಗೆ ಟೈಟ

ದಿನಕ್ಕೊಂದು ಕಥೆ 992

ದಿನಕ್ಕೊಂದು ಕಥೆ ಒಂದು ಸ್ಥಳದಲ್ಲಿ ಪೋಲೀಸರು ಒಂದು ಫಲಕವನ್ನು ಸ್ಥಾಪಿಸಿದರು- "ನೋ ಪಾರ್ಕಿಂಗ್ ಜೋನ್ ಪೆನಾಲ್ಟಿ 250 ರೂಪಾಯಿ ಗಳು (No Parking Zone.  Penalty Rs. 250) ಪ್ರಸ್ತುತ ಆಜ್ಞೆಯನ್ನು ಯಾರೂ ಕೂಡ ಪಾಲನೆ  ಮಾಡುತ್ತಿರಲಿಲ್ಲ. ಜನರು ಫಲಕದ ಕೆಳಗಡೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದರು. ಕೆಲವು ದಿನಗಳ ನಂತರ ಅಧ್ಯಾಪಕರೊಬ್ಬರು ಆ ದಾರಿಯ ಮೂಲಕ ಹಾದು ಹೋಗುತ್ತಿದ್ದರು. ಅವರು ಆ ಫಲಕ ಮತ್ತು ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಫಲಕದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದರು. ಫಲಕದಿಂದ "ನೋ" ಮತ್ತು "ಪೆನಾಲ್ಟಿ" ಇವೆರಡನ್ನು ಉಜ್ಜಿ ತೆಗೆದರು. ಈಗ ಅದು ಹೀಗಾಯಿತು :  "ಪಾರ್ಕಿಂಗ್ ಜೋನ್ 250 ರೂಪಾಯಿಗಳು". ಆ ನಂತರ ಅಲ್ಲಿ ಯಾರೂ ಕೂಡ ವಾಹನಗಳನ್ನು ನಿಲ್ಲಿಸುತ್ತಿರಲಿಲ್ಲ.!!! ಪೋಲೀಸರು ಈಗ ಆ ಅಧ್ಯಾಪಕರನ್ನು ಹುಡುಕುತ್ತಿದ್ದಾರೆ, ಅವರಿಂದ ಹೆಚ್ಚು ತಂತ್ರ (trick)ಗಳನ್ನು ಕಲಿಯುವುದಕ್ಕಾಗಿ..... ಶಿಕ್ಷೆಯಿಂದ ಎಲ್ಲರನ್ನೂ ಸರಿದಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಸರಿಯಾಗಿ ಬಲ್ಲವರು ನಿಜವಾದ ಅಧ್ಯಾಪಕರಾಗುತ್ತಾರೆ. ಇಲ್ಲಿ ಆಗಿದ್ದೂ ಕೂಡ ಅದೇ.  ಕೃಪೆ: ವಾಟ್ಸ್ ಆ್ಯಪ್ ಗ್ರೂಪ್ ಸಂಗ್ರಹ:ವೀರೇಶ್ ಅರಸಿಕೆರೆ

ದಿನಕ್ಕೊಂದು ಕಥೆ 991

ದಿನಕ್ಕೊಂದು ಕಥೆ ಭಿಕ್ಷುಕನೋರ್ವˌ ಒಂದು ಮನೆಗೆ ಯಾಚಿಸುತ್ತಾ ಹೋಗುತ್ತಾನೆ... ಆತ ಆ ಮನೆಯನ್ನು ನೋಡುತ್ತಾನೆ  ಅದು ಮನೆ ಅಲ್ಲˌ ಅರಮನೆ..... ನೋಡಿ ಮುಗಿಸಲು ಎರಡು ಕಣ್ಣು ಸಾಲದು...... ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ.... ಕೊಟ್ಟಾರದ ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ.... ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ...... ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ....... ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ "ಓ ಯಜಮಾನಾರೇ.... ಓ ಯಜಮಾನರೇ...... ನೀವೆಷ್ಟು ಭಾಗ್ಯವಂತರುˌ ದೇವರು ನಿಮಗೆ ಎಷ್ಟು ಅನುಗ್ರಹ ನೀಡಿದ್ದಾನೆ. ನಿಜಕ್ಕೂ ನೀವು ಭಾಗ್ಯವಂತ... ನಿಮಗೆ ದೇವರು ಅರಮನೆ ನೀಡದಿದ್ದಾನಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ. ನಿಮಗೆ ದೇವರು ಐಶಾರಾಮಿ ಕಾರು ನೀಡಿದ್ದಾನಲ್ಲವೇ...?ನನಗೆ ಸರಿಯಾದ ಚಪ್ಪಲಿಯೂ ಇಲ್ಲ... ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ. ನಿಜಕ್ಕೂ ನೀವು ಭಾಗ್ಯವಂತರು... ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ -  *"ದೇವರು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹವನ್ನ ನಿನಗೆ ನೀಡಿದ್ದಾನೆ"* ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ. ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ

ದಿನಕ್ಕೊಂದು ಕಥೆ 990

ದಿನಕ್ಕೊಂದು ಕಥೆ 😷😷ಮಾನಸಿಕ ಒತ್ತಡ😷😷    ಮತಾಜುರ ಎನ್ನುವ ಯುವಕನು ಕತ್ತಿವರಸೆಯಲ್ಲಿ ನೈಪುಣ್ಯವನ್ನು ಸಂಪಾದಿಸಬೇಕೆಂದುಕೊಂಡನು. ಬಂಜೋ ಎನ್ನುವ ಗುರುಗಳ ಬಳಿಗೆ ಅವನು ಹೋದ. "ನಾನು ನಿಮ್ಮ ಬಳಿ ಶಿಷ್ಯತ್ವವನ್ನು ಸ್ವೀಕರಿಸಿ ಕತ್ತಿಯುದ್ಧವನ್ನು ಕಲಿತುಕೊಳ್ಳಬೇಕೆಂದುಕೊಂಡಿದ್ದೇನೆ. ಇದಕ್ಕೆ ಎಷ್ಟು ಸಮಯ ಹಿಡಿಯಬಹುದು" ಎಂದು ಕೇಳಿದ. "ಹತ್ತು ವರ್ಷಗಳು" ಎಂದು ಗುರುಗಳು ಹೇಳಿದರು. "ಹೋಗಲಿ ನಿಮ್ಮ ಬಳಿ ಎರಡರಷ್ಟು ಸಮಯ ವಿದ್ಯೆಯನ್ನು ಕಲಿತರೆ ಎಷ್ಟು ಕಾಲದಲ್ಲಿ ಕಲಿತುಕೊಳ್ಳಬಹುದೋ ಹೇಳಿ ಗುರುಗಳೇ" ಎಂದು ಕೇಳಿದ ಮತಾಜುರ. ಗುರುಗಳು ಸಣ್ಣದಾಗಿ ತಲೆಯಾಡಿಸಿ, "ಇಪ್ಪತ್ತು ವರ್ಷ ಹಿಡಿಯಬಹುದು" ಎಂದು ಹೇಳಿದರು. ಆಶ್ಚರ್ಯಗೊಂಡ ಮತಾಜುರ, "ಅನ್ನಪಾನಾದಿಗಳನ್ನು ಕೈಬಿಟ್ಟು ನಿಮ್ಮ ಹತ್ತಿರ ಹಗಲಿರುಳೂ ಕಲಿತುಕೊಂಡರೆ ನಾನು ಎಷ್ಟು ವರ್ಷಗಳಲ್ಲಿ ಕತ್ತಿವರಸೆಯಲ್ಲಿ ನಿಪುಣನಾಗಬಹುದು" ಎಂದು ಕೇಳಿದ. ಗುರುಗಳು ಮತ್ತಷ್ಟು ದೊಡ್ಡದಾಗಿ ನಕ್ಕು, "ಎಪ್ಪತ್ತು ವರ್ಷ" ಎಂದು ಹೇಳಿದರು. ಮತಾಜುರನಿಗೆ ಇದರಿಂದ ಸಿಟ್ಟು ಬಂತು, "ಏನು? ನೀವು ನನ್ನೊಂದಿಗೆ ಆಟವಾಡುತ್ತಿದ್ದೀರಾ? ನಾನು ಎಷ್ಟು ಹೆಚ್ಚು ಕಾಲ ಕಲಿತುಕೊಳ್ಳುತ್ತೇನೆಂದರೆ ಅಷ್ಟು ಹೆಚ್ಚು ಸಮಯ ಹಿಡಿಯುತ್ತದೆ ಎಂದು ನೀವು ಹೇಳುತ್ತಿದ್ದೀರಿ" ಎಂದು ಗಟ್ಟಿಯಾಗಿ ಹೇಳಿದ.   ಗುರುಗಳಾದ ಬಂಜೋ ಶಿಷ್ಯನಾದ ಮತಾಜರನ ತಲೆಯನ