Posts

Showing posts from February, 2020

ದಿನಕ್ಕೊಂದು ಕಥೆ 969

*🌻ದಿನಕ್ಕೊಂದು ಕಥೆ🌻* *ಸೋಲು ಬದುಕಿನ ಕೊನೆಯಲ್ಲ, ಅದು ಗೆಲುವಿನ ಮುನ್ನುಡಿ* ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ ಮೂರ್ತಿಯಾಗಬೇಕೆಂದು ಬಯಸುವವರೇ ಜಾಸ್ತಿ. ಏಕೆಂದರೆ ಈ ಜಗತ್ತಿನಲ್ಲಿ ಸಮಸ್ಯೆಗಳೇ ಸಾಧನೆಗೆ ಮೂಲವೆಂಬುದರ ಅರಿವಿದ್ದರೂ ಹಳಹಳಿಸುವವರೇ ಹೆಚ್ಚು. ಸಮಸ್ಯೆ ದೊಡ್ಡದಾದಷ್ಟೂ ಪರಿಹಾರ ದೊಡ್ಡದಿರುತ್ತದೆ. ಪರಿಹಾರ ದೊಡ್ಡದಾದಷ್ಟೂ ನಾವು ಹರಿಸುವ ಬೆವರು, ಪಡುವ ಕಷ್ಟ ಹೆಚ್ಚಾಗಿರುತ್ತದೆ. ಹಿರಿದನ್ನು ಸಾಧಿಸುವ ಬಯಕೆಯಿದ್ದವರು ಏರಿಳಿತಗಳ ದುರ್ಗಮ ಹಾದಿಯಲ್ಲಿ ಸಾಗಲೇಬೇಕು. ಅಂದಾಗ ಮಾತ್ರ ಯಶಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವಿದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆದರೆ ನೆನಪಿರಲಿ, ತೊಂದರೆಗಳನ್ನು, ಕಷ್ಟಗಳನ್ನು ಅವಕಾಶ ಎಂದು ನೋಡಿದವರೇ ಇಂದು ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲಿನ ಧಗೆಗೆ ‘ಅಬ್ಬಾ ದರಿದ್ರ ಬಿಸಿಲು’ ಎನ್ನದವರುಂಟೇ? ಆದರೆ ಕೂಲರ್, ಎಸಿ ಸಂಶೋಧಿಸಿ ಆ ಸಮಸ್ಯೆಗೆ ಯಾರೋ ಪರಿಹಾರ ಕಂಡುಹಿಡಿದರು. ಚಳಿಗಾಲವನ್ನು ಶಪಿಸುವವರು ಶಪಿಸುತ್ತಲೇ ಇದ್ದರು. ಆದರೆ ಯಾರೋ ಒಬ್ಬ ಹೀಟರ್ ಕಂಡುಹಿಡಿದ. ಸೊಳ್ಳೆಗಳು ಯಾರಿಗೆ ಸಮಸ್ಯೆಯಲ್ಲ? ಎಲ್ಲರೂ ಗೊಣಗುತ್ತಲ

ದಿನಕ್ಕೊಂದು ಕಥೆ 968

*ದಿನಕ್ಕೊಂದು ಕಥೆ ಒಂದು ದಿನ ಖ್ಯಾತ ಚಿತ್ರ ಕಲಾವಿದ "ರಾಜಾ ರವಿವರ್ಮ" ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!* *ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆ ಇಂದ ಕಾಪಾಡಲು ಹೇಳಿ ಹೋಗುತ್ತಾನೆ.!!* *ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು.!! ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು...* *ರವಿವರ್ಮರನ್ನು ಭೇಟಿಯಾಗಿ... ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವ

ದಿನಕ್ಕೊಂದು ಕಥೆ 967

*🌻ದಿನಕ್ಕೊಂದು ಕಥೆ🌻* *ಬೆನ್ನು ಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದರು!* ಇಂಥ ಬದುಕಿಗೆ, ಆ ಸ್ಥೈರ್ಯದ ಪರಿಗೆ ನಮೋನಮಃ! ಕನ್ಯಾಡಿ ಅಂದಾಕ್ಷಣ ನಮಗೆಲ್ಲ ಥಟ್ಟನೇ ನೆನಪಾಗೋದು ಶ್ರೀರಾಮನ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟಗ್ರಾಮ ಕನ್ಯಾಡಿ ಶ್ರೀರಾಮನ ಸುಂದರ ದೇಗುಲದಿಂದ ಪ್ರಸಿದ್ಧ. ಅದೇ ಊರಲ್ಲಿ ಶ್ರೀರಾಮನ ಮೌಲ್ಯಗಳು ಸಾಕ್ಷಾತ್ಕಾರಗೊಂಡು, ಸೇವೆಯ ಪುಟ್ಟ ಸಾಮ್ರಾಜ್ಯವೊಂದು ಸ್ಥಾಪಿತವಾಗಿದೆ. ಅದು ಸ್ಥಾಪಿಸಿರುವ ವಿಕಾಸ ಮಾದರಿ ಮತ್ತು ಆದರ್ಶಗಳು ಅನುಕರಣೀಯ. ಗಾಲಿಕುರ್ಚಿಯಲ್ಲೇ ಕೂತು, ಪಾದರಸದಂತೆ ಕಾರ್ಯನಿರ್ವಹಿಸುವ ವಿನಾಯಕ್ ರಾವ್ (ಕರಾವಳಿ ಜನರ ಪಾಲಿಗೆ ಅವರು ವಿನಾಯಕಣ್ಣ ಎಂದೇ ಖ್ಯಾತರು) ಇದರ ಹಿಂದಿನ ಶಕ್ತಿ. ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ, ಸುಸ್ಥಿರ ಅಭಿವೃದ್ಧಿ, ನವೀನ ಕೃಷಿ ಪ್ರಯೋಗ, ಸಂಸ್ಕೃತಿಯ ವೈಶಿಷ್ಟ್ಯ… ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಕನ್ಯಾಡಿ ಸೇರಿ ಬೆಳ್ತಂಗಡಿ ತಾಲೂಕು ಸಾಧಿಸಿರುವ ಅಭಿವೃದ್ಧಿ ರಾಜ್ಯಕ್ಕೇ ದಿಕ್ಸೂಚಿ. ಎರಡು ದಶಕಗಳ ಈ ಬದಲಾವಣೆಯ ಪಯಣ ರೋಚಕವಾದದ್ದು. ಬದುಕೇ ಸಾಕು ಅಂದುಕೊಂಡಿದ್ದ ವ್ಯಕ್ತಿ ತನ್ನ ನೋವು, ಕಷ್ಟವನ್ನು ಮೀರಿ ನಿಲ್ಲಲು ಸಮಾಜಮುಖಿಯಾದಾಗ ಬದಲಾದದ್ದು ಬರೀ ಅವರ ಬದುಕಲ್ಲ, ಸಾವಿರಾರು ಜನರ ಜೀವನ. ಕನ್ಯಾಡಿಯ ಕೃಷಿ ಪರಿವಾರದಲ್ಲಿ ಜನಿಸಿದ ವಿನಾಯಕ್ ರಾವ್​ರದ್ದು ದೊಡ್ಡ ಕುಟುಂಬ. ಎಂಟುಜನ ಮಕ್ಕಳಲ್ಲಿ (ಮೂರು ಜನ ಅಣ್

ದಿನಕ್ಕೊಂದು ಕಥೆ 966

*🌻ದಿನಕ್ಕೊಂದು ಕಥೆ🌻* *ಕಾರ್ಗಿಲ್ ಹೀರೋ, ಕೃತಕ ಕಾಲು ಮತ್ತು ಸಾಲು ಸಾಲು ದಾಖಲೆಗಳು!* *ಸತ್ ಶ್ರೀ ಅಕಾಲ್!* ಬದುಕಿನಲ್ಲಿ ಚಾಲೆಂಜ್ ಅಂತ ತೆಗೆದುಕೊಂಡರೆ ಹೇಗಿರಬೇಕು? ಮೇಜರ್ ದೇವೇಂದ್ರ ಪಾಲ್ ಸಿಂಗ್ ಬದುಕಿನಂತಿರಬೇಕು! ಸೇನೆ ಸೇರಬೇಕೆಂಬ ಕನಸಿಗೆ ನೂರೆಂಟು ಅಡ್ಡಿಗಳು ಬಂದರೂ, ಜತೆಯಲ್ಲಿರುವವರು ‘ಸಾಕಪ್ಪ ಬಿಡು ಎಷ್ಟು ಅಂತ ಪ್ರಯತ್ನ ಪಡ್ತೀಯ’ ಅಂತ ಹೇಳಿದ ಮೇಲೂ ಆ ಎಲ್ಲ ಸವಾಲುಗಳನ್ನು ಗೆದ್ದು ಸೇನೆ ಸೇರಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುವಾಗ ಈ ತರುಣ ಸಿಂಹಕ್ಕೆ ಬರೀ 25 ವರ್ಷ. ಪಾಕಿಸ್ತಾನದ ಕಡೆಯಿಂದ ನಡೆದ ಶೆಲ್ ದಾಳಿಯಲ್ಲಿ ಕಾಲು ಕಳೆದುಕೊಂಡ ಬಳಿಕ ಜೀವನ ಒಮ್ಮೆ ನಿಂತ ನೀರಿನಂತಾದಾಗ ಸಿಂಗ್ ಮಾಡಿದ್ದೇನು ಗೊತ್ತೆ? ‘ಕಮಾನ್, ಕಷ್ಟಗಳೇ ಬನ್ನಿ, ಸವಾಲುಗಳೇ ಬನ್ನಿ, ನಾನು ಕಾಲು ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು, ಯಾವ ಕಷ್ಟ ಬಂದರೂ ಹೀಗೆ ನಗುತ್ತಿರುತ್ತೇನೆ, ಇದು ನನ್ನ ಚಾಲೆಂಜ್…’ ಅಂತ ಹೇಳಿ ‘ಅಭಾವ್ ಕೀ ಜಿಂದಗಿ ಮೇ ಭೀ ಜೋ ರಹೆಂಗೇ ಪ್ರಸನ್ನ, ಸಚ್ಚೆ ಮಾಯ್ನೆ ಮೇ ವೋಹಿ ಸರ್ವಗುಣ ಸಂಪನ್ನ…’ (ಕೊರತೆಗಳ ಬದುಕಿನಲ್ಲಿ ಯಾರು ಪ್ರಸನ್ನ-ಸಂತೋಷವಾಗಿ ಇರುತ್ತಾರೋ ಅವರೇ ನಿಜಾರ್ಥದಲ್ಲಿ ಸರ್ವಗುಣ ಸಂಪನ್ನರು) ಅಂತ ಕರೆ ನೀಡಿದರು. ಮುಂದೇನಾಯಿತು ಗೊತ್ತೆ? ಭಾರತದ ಮೊದಲ ಬ್ಲೇಡ್ ರನ್ನರ್, ‘ಭಾರತದ ಮೊದಲ ಸೋಲೋ ಸ್ಕೈಡ್ರೖೆವರ್’ (ಅಂಗವೈಕಲ್ಯ ಹೊಂದಿದ), ಹಾಫ್ ಮ್ಯಾರಥಾನ್​ನಲ್ಲಿ ನಾಲ್ಕು ಲಿಮ್ಕಾ ದಾಖಲೆಗಳು, ರಾಷ್ಟ್

ದಿನಕ್ಕೊಂದು ಕಥೆ 965

*🌻ದಿನಕ್ಕೊಂದು ಕಥೆ🌻* *ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…* ಸಂನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸಂನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸಂನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು. ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬ

ದಿನಕ್ಕೊಂದು ಕಥೆ 964

*1955 ರಿಂದ 1975 ರ ವರೆಗೆ ನಡೆದ ಸುಧೀರ್ಘ ಯುದ್ಧದಲ್ಲಿ ವಿಯೆಟ್ನಾಂ ಅಮೆರಿಕವನ್ನೇ ಸೋಲಿಸಿತು!* ಯುದ್ಧದ ವಿಜಯದ ನಂತರ ಒಬ್ಬ ಪತ್ರಕರ್ತ ವಿಯೆಟ್ನಾಂ ನ ಅಧ್ಯಕ್ಷನನ್ನು ಒಂದು ಪ್ರಶ್ನೆ ಕೇಳಿದ.... ಅಷ್ಟು ಬಲಶಾಲಿ ರಾಷ್ಟ್ರ ಅಮೆರಿಕವನ್ನು ನೀವು ಹೇಗೆ ಸೋಲಿಸಿದಿರಿ? ಎಂದು ಅದಕ್ಕೆ ವಿಯೆಟ್ನಾಂ ಅಧ್ಯಕ್ಷರ ಉತ್ತರ ಹೀಗಿತ್ತು..... ಅಮೇರಿಕದಂತಹ ದೇಶವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.... ಆದರೂ ನಾವು ಅಮೆರಿಕದ ವಿರುದ್ದ ಜಯಗಳಿಸಲು ಒಬ್ಬ ಮಹಾನ್ ರಾಜನ ಕತೆಯು ನನಗೆ ಯುದ್ಧವನ್ನು ಗೆಲ್ಲುವ ಭರವಸೆಯನ್ನು ಮೂಡಿಸಿತು.... ಯುದ್ಧದ ತಯಾರಿಗೆ ಆ ಮಹಾಪುರುಷನ ಜೀವನ ಚರಿತ್ರೆಯೇ ನಮಗೆ ಪ್ರೋತ್ಸಾಹ ನೀಡಿತು... ಅವರ ಯುದ್ಧದ ಕಲೆಯನ್ನು ನಾವು ಅಳವಡಿಸಿಕೊಂಡೆವು..... ಅಮೆರಿಕದೊಂದಿಗಿನ ಯುದ್ಧವನ್ನು ಗೆದ್ದೆವು..... ಇದನ್ನು ಕೇಳಿದ ಪತ್ರಕರ್ತ, ಕೌತುಕ ತಡೆಯಲಾರದೆ ಕೇಳಿದ "ಯಾರು ಆ ಮಹಾರಾಜ"? ವಿಯೆಟ್ನಾಂ ಅಧ್ಯಕ್ಷರು ಹೇಳಿದರು.... ಅದು ಬೇರೆ ಯಾರು ಅಲ್ಲ.....  *ಭರತ ಖಂಡದಲ್ಲಿ ಸಿಂಹದಂತೆ ಏಕಾಂಗಿಯಾಗಿ ಮೊಘಲ್ ಉಗ್ರರ ವಿರುದ್ದ ಹೋರಾಡಿದ ವೀರ "ಛತ್ರಪತಿ ಶಿವಾಜಿ ಮಹಾರಾಜರು"...... ಅವರಂಥ ಮಹಾರಾಜರನ್ನು ವಿಯೆಟ್ನಾಂ ಏನಾದರೂ ಪಡೆದಿದ್ದರೆ ಇವತ್ತು ನಾವು ಪ್ರಪಂಚವನ್ನೇ ಆಳುತ್ತಿದ್ದೆವು......* ಕೆಲವರ್ಷಗಳ ನಂತರ ವಿಯೆಟ್ನಾಂ ಅಧ್ಯಕ್ಷರು ಮರಣ ಹೊಂದಿದರು.... ಮರಣದ ನಂತರ ಅವರ ಅಪೇಕ್ಷೇಯಂತೆ ಅವರ ಘೋರಿಯ ಮೇಲೆ ಹ

ದಿನಕ್ಕೊಂದು ಕಥೆ 963

ಶಿವಾಜಿಯನ್ನೇ ಅಳಿಸಿಬಿಟ್ಟ ಮಹಾತಾಯಿಯ ಕಥೆ. !  ಅವು ಮರಾಠ ಸಾಮ್ರಾಜ್ಯ ಕುಲತಿಲಕ ಶಿವಾಜಿಯ ಆಡಳಿತದ ದಿನಗಳು.. ಅಂದಮೇಲೆ ಕೇಳಬೇಕೆ ಅರಮನೆಯಂದಣ ಬಾಗಿಲಿನಿಂದ ಹಿಡಿದು ಗಡಿಯವರೆಗಿನ ಸರಹದ್ದಿನ ವರೆಗೂ ಕಾವಲಿನ ಪಹರೆಯಿತ್ತು.. ಸಂಜೆ ಆರರ ನಂತರ ಎಲ್ಲಾ ಕಾವಲು ಗೋಪುರಗಳ ಹಾಗೂ ಕಾವಲು ಬಾಗಿಲುಗಳನ್ನು ಹಾಕಿಬಿಡಬೇಕೆಂಬ ರಾಜಾಜ್ಞೆ ಇತ್ತು. ಆವತ್ತು ಅಂಥದೇ ದಿನವಾಗಿತ್ತು ಮೊಸರು ಮಾರುವವಳಿಗೆ.  ವ್ಯಾಪಾರದಲ್ಲಿ ಮುಳುಗಿ ಹೋದವಳಿಗೆ ಸಂಜೆ ಆರು ಮುಗಿದಿದ್ದೇ ತಿಳಿಯಲಿಲ್ಲ. ಅಷ್ಟರಲ್ಲಿ ಕಾವಲಿನವರು ಇಲ್ಲೇ ಇದ್ದು ಮುಂಜಾನೇ ನೀನು ದಿಡ್ಡಿ ಬಾಗಿಲು ತೆಗೆದ ನಂತರ ಹೋಗಬಹುದೆಂದು ಅಲ್ಲೇ ಕುಳ್ಳಿರಿಸಿ ಪಹರೆ ಕಾಯಲು ಹೋದರು.. ಮೊಸರಿನವಳು ವಿಲವಿಲನೇ ಸಂಕಟಪಡತೊಡಗಿದಳು.. ಮನೆಯಲ್ಲಿ ಒಂಬತ್ತು ತಿಂಗಳ ಹಸುಕಂದ.. ! ಊಟ ಹಾಳಾಗಿ ಹೋಗಲಿ ಎದೆಯಲ್ಲಿ ತುಂಬಿ ಸಾಯುವ ಯಾತನೇ ತರುವ ಹಾಲು! ಮಗುವಿನ ನೆನಪಾದೊಡನೆ ಸಣ್ಣದಾಗಿ ಜಿನುಗತೊಡಗಿ ಕುಪ್ಪಸವೆಲ್ಲಾ ತೊಯ್ದ ಹೊತ್ತದು...!   ಸರಿ. ಬೆಳಕರಿಯಿತು ಸೈನಿಕರು ಬಂದು ನೋಡಲಾಗಿ ಮೊಸರು ಮಾರುವವಳು ಎಲ್ಲಿ?    ಹೆದರಿಕೊಂಡ ಸೈನಿಕರು ಈ ವಿಷಯವನ್ನು ಶಿವಾಜಿಗೆ ತಿಳಿಸಿದರು. ತಕ್ಷಣ ಮೊಸರಿನವಳನ್ನು ಕರೆತರಬೇಕೆಂದು ಆಜ್ಞೆ ಹೋಯಿತು.  ಸ್ವಲ್ಪ ಹೊತ್ತಿನಲ್ಲಿಯೇ ಮೊಸರಿನವಳು ಕಾವಲಿನವರು ಸೈನಿಕರು ಎಲ್ಲಾರೂ ' ರಾತ್ರಿ ಇಲ್ಲೇ ಇರಬೇಕೆಂದು ನಿಯಮ ದಾಟಿ ಅದೇಗೆ ನೀನು ಈ ಸದೃಢ ಕೋಟೆ ದಾಟಿ ಹೋದೆ ' ಎಂದು ಕೇಳಿದರು..  ಶಿವ

ದಿನಕ್ಕೊಂದು ಕಥೆ 962

*🌻ದಿನಕ್ಕೊಂದು ಕಥೆ🌻* *ಇಲ್ಲ’ಗಳ ನಡುವೆಯೇ ‘ಎಲ್ಲ’ವನ್ನೂ ಸಾಧಿಸಿದ.* ‘ನಾನು ರಾಜಸ್ಥಾನದವನು. ಎಂಟು ವರ್ಷದ ಹುಡುಗನಾಗಿದ್ದಾಗ, ಮರ ಹತ್ತುವಾಗ ವಿದ್ಯುತ್ ಆಕಸ್ಮಿಕವೊಂದಕ್ಕೆ ಸಿಲುಕಿದೆ. ಆಸ್ಪತ್ರೆಯಲ್ಲಿ ಕಣ್ಣು ತೆರೆದಾಗ ನನ್ನ ಎಡಗೈ ಕತ್ತರಿಸಲ್ಪಟ್ಟಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಈತ ಗಟ್ಟಿಯಾಗಲಾರ ಎಂದಿದ್ದರು ವೈದ್ಯರು. ಓಡಾಡಿಕೊಂಡಿರಬೇಕಾದ ಬಾಲಕನೊಬ್ಬನ ಕೈ ಹೋದರೆ ಆತನಿಗೆ, ಆತನ ಕುಟುಂಬಕ್ಕೆ ಆಗುವ ಆಘಾತದ ಪ್ರಮಾಣವನ್ನು ನೀವು ಊಹಿಸಬಹುದು. ಅಂತಹುದೇ ಆಘಾತ, ಸಂಕಟ ನಮಗೂ ಆಯಿತು. ಹಳ್ಳಿಗೆ ವಾಪಸಾಗುವಾಗ, ‘ಓರಗೆಯ ಮಕ್ಕಳು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ? ಕೈ ಇಲ್ಲದವನು, ದುರ್ಬಲ ಎಂದು ಹಾಸ್ಯ ಮಾಡಿದರೆ ಏನು ಮಾಡುವುದು?’ ಎಂಬ ಯೋಚನೆಗಳೇ ನನ್ನ ತಲೆಯಲ್ಲಿ ಓಡುತ್ತಿದ್ದವು. ಮಕ್ಕಳ ತಲೆಯಲ್ಲಿ ಹಲವಾರು ವಿಚಾರಗಳು ಓಡುತ್ತಿರುತ್ತವೆ ನೋಡಿ. ಹಾಗೇ ಯೋಚಿಸುತ್ತ ಒಂದು ಸಂಜೆ ಮನೆಯೊಳಗೆ ಕುಳಿತಿದ್ದೆ. ಆಗ ಅಮ್ಮ ನನ್ನನ್ನು ಬಲವಂತವಾಗಿ ಹೊರಗಡೆ ಎಳೆದುಕೊಂಡು ಹೋದಳು. ಮಕ್ಕಳೆಲ್ಲ ಆಡುತ್ತಿರುವಲ್ಲಿ ಬಿಟ್ಟು, ‘ಹೋಗಿ ಅವರೊಂದಿಗೆ ಆಡಿಕೊಂಡು ಬಾ’ ಎಂದು ಹೇಳಿ ತನ್ನ ಕೆಲಸಕ್ಕೆ ಮರಳಿದಳು. ಬಹುಶಃ ಅದು ನನ್ನ ಜೀವನದ ಮಹತ್ವದ ತಿರುವಾಗಿತ್ತು. ಆಡುತ್ತ ಆಡುತ್ತ ನನಗೆ ಆಟದಲ್ಲಿ ಆಸಕ್ತಿ ಇರುವುದು ಗೊತ್ತಾಯಿತು. ಬೇರೆ ಬೇರೆ ಆಟಗಳನ್ನಾಡುತ್ತ ಹತ್ತನೇ ತರಗತಿಗೆ ಬರುವ ವೇಳೆಗೆ ಜಾವಲಿನ್ ಎಸೆತದಲ್ಲಿ ಆಸಕ್ತಿ

ದಿನಕ್ಕೊಂದು ಕಥೆ 961

*🌻ದಿನಕ್ಕೊಂದು ಕಥೆ🌻* *ಕಲಿಕೆಗೆ ಬೇಕು ವಿನಮ್ರತೆ* ಶೂರಸೇನನೆಂಬ ರಾಜ. ಬಹಳ ಚಾಣಾಕ್ಷ ಹಾಗೂ ಪರಾಕ್ರಮಿ. ತನ್ನ ರಾಜ್ಯ, ಕೋಶ, ನ್ಯಾಯನಿಷ್ಠುರತೆ ಬಗ್ಗೆ ಅವನಿಗೇ ಹೆಮ್ಮೆಯಿತ್ತು, ಅಭಿಮಾನವಿತ್ತು. ಒಮ್ಮೆ ಅಧ್ಯಾತ್ಮದ ಬಗ್ಗೆ ಒಲವು ಮೂಡಿಸಿಕೊಂಡ ಅವನು ಅದನ್ನೂ ಕಲಿಯುವ, ಆಳವಾಗಿ ತಿಳಿದುಕೊಳ್ಳುವ ತೀರ್ಮಾನ ಮಾಡಿದ. ಮಂತ್ರಿಗಳನ್ನು ಕರೆದು-‘ಮಂತ್ರಿಗಳೇ ನನಗೆ ಅಧ್ಯಾತ್ಮವನ್ನು ಕಲಿಯಬೇಕೆಂಬ, ಹೆಚ್ಚೆಚ್ಚು ಅರ್ಥಮಾಡಿಕೊಳ್ಳಬೇಕೆಂಬ ಆಸೆಯಾಗಿದೆ. ನನಗಾಗಿ ಸರ್ವಶ್ರೇಷ್ಠ ಗುರುಗಳನ್ನು ಕಂಡು ಅವರನ್ನು ಸತ್ಕರಿಸಿ ನಮ್ಮ ಅರಮನೆಗೆ ಕರೆತನ್ನಿ’ ಎಂದನು. ಮಂತ್ರಿಗಳು ಗುರುಗಳನ್ನು ಹುಡುಕಿ ಕರೆತರುವುದಾಗಿ ಹೇಳಿ ಹೊರಟರು. ಗುರುಗಳನ್ನು ಭೇಟಿಯಾಗಿ ಆಹ್ವಾನಿಸಿದರೆ ಅವರು ‘ಪಾಠ ಹೇಳುವ ಸಲುವಾಗಿ ಅರಮನೆಗೆ ಬರುವುದಿಲ್ಲ’ ಎಂದುಬಿಟ್ಟರು. ಆ ಗುರುಗಳೇ ಸ್ವಾಮಿ ಆತ್ಮಾನಂದರು. ಇನ್ನೊಮ್ಮೆ ಮಂತ್ರಿಗಳು ಸ್ವಾಮಿ ಆತ್ಮಾನಂದರನ್ನು ಭೇಟಿಯಾಗಿ-‘ಶೂರಸೇನ ಮಹಾರಾಜರಿಗೋಸ್ಕರ ಬನ್ನಿ ಗುರುಗಳೇ’ ಎಂದು ಹೇಳಿದರೆ, ‘ನನಗೆ ಅರಮನೆಯ ಅವಶ್ಯಕತೆಯಿಲ್ಲ. ಅಧ್ಯಾತ್ಮದ ಪಾಠ ಬೇಕಾಗಿರುವುದು ನಿಮ್ಮ ಮಹಾರಾಜರಿಗೆ. ಅವರನ್ನೇ ಬರ ಹೇಳಿರಿ’ ಎಂದರು. ವಿಚಾರ ಗೊತ್ತಾದಾಗ ಶೂರಸೇನನು, ‘ವಿದ್ಯೆ ನನ್ನ ಬಯಕೆ. ಹಾಗಾಗಿ ಗುರುಗಳು ಇರುವಲ್ಲಿ ನಾನೇ ಹೋಗುವೆ’ ಎಂದು ತೀರ್ವನಿಸಿ ಆಶ್ರಮಕ್ಕೆ ಹೋದ. ‘ನಾನು ಎಷ್ಟೇ ಆದರೂ ಈ ನಾಡಿನ ಮಹಾರಾಜ! ಸ್ವಾಗತಿಸಲು ಗುರುಗಳು ಬಂದೇ ಬರುತ್ತಾರೆ

ದಿನಕ್ಕೊಂದು ಕಥೆ 960

*🌻ದಿನಕ್ಕೊಂದು ಕಥೆ🌻* *ನೀರು ಮಜ್ಜಿಗೆಯ ಸೇವೆ…! ಚೋಳರ ಕಾಲದ ಒಂದು ಕತೆ…*  ತಂಜಾವೂರಿನಲ್ಲಿ ಚೋಳರ ಅಳ್ವಿಕೆಯ ಕಾಲ. ರಾಜರಾಜಚೋಳನು ಮಹಾದೇವನಿಗೆ ಬೃಹತ್ತಾದ ದೇವಾಲಯವೊಂದನ್ನು ಕಟ್ಟಿಸುತ್ತಿದ್ದ. ಬೃಹದೀಶ್ವರನ ಸೇವೆಗೆ ನಾಮುಂದು-ತಾಮುಂದು ಎಂದು ರಾಜಪುರುಷರು, ಧನಿಕರು, ಸಾಮಾನ್ಯ ಜನರು ಮೊದಲುಗೊಂಡು ಕಾಣಿಕೆಯನ್ನು ಸಲ್ಲಿಸುತ್ತಿದ್ದರು. ದೂರದೂರದಿಂದ ಕಲ್ಲುಗಳನ್ನು ಸಾಗಿಸಿ, ಬೆಟ್ಟದೆತ್ತರಕ್ಕೆ ಏರಿಸಿ ಗೋಪುರಗಳು ಕಟ್ಟಲ್ಪಡುತ್ತಿದ್ದವು. ಸಾವಿರಾರು ಕುಶಲಕಾರ್ವಿುಕರು-ಶಿಲ್ಪಿಗಳು ಕೆಲಸದಲ್ಲಿ ನಿರತರಾಗಿದ್ದರು. ದೇವಾಲಯದ ಪಕ್ಕದಲ್ಲೇ ಅಳಗಿ ಎಂಬ ಬಡಸ್ತ್ರೀ ವಾಸವಾಗಿದ್ದಳು. ಬೃಹದೀಶ್ವರನ ಸೇವೆಗೆ ಸಲ್ಲಿಸಲೊಂದು ಕವಡೆಕಾಸೂ ಇಲ್ಲವಾಗಿ ಬಲು ನೊಂದಿದ್ದಳು. ಒಂದು ಮಧ್ಯಾಹ್ನ ಉರಿಬಿಸಿಲಲ್ಲಿ ಬಳಲಿದ ಶಿಲ್ಪಿಯೊಬ್ಬ ಅಳಗಿಯ ಗುಡಿಸಲಿಗೆ ಬಂದು ಬೊಗಸೆನೀರನ್ನು ಯಾಚಿಸಿದ. ಆಕೆ ಸಂತೋಷದಿಂದ ನೀರು-ಮಜ್ಜಿಗೆಯನ್ನೇ ಮಾಡಿಕೊಟ್ಟಳು. ಆಗ ಅವಳಿಗನ್ನಿಸಿತು. ಎಲ್ಲ ಕೆಲಸಗಾರರಿಗೂ ಪಾಪ ಇದೇ ಸ್ಥಿತಿ ಆಗಿರಬಹುದಲ್ಲವೇ! ಆದಷ್ಟು ಕೆಲಸಗಾರರಿಗೆ ನೀರುಮಜ್ಜಿಗೆಯ ಸೇವೆ ನೀಡಿದರೆ ಪರೋಕ್ಷವಾಗಿಯಾದರೂ ಬೃಹದೀಶ್ವರನ ಸೇವೆ ಆದೀತೆಂದು ಭಾವಿಸಿದಳು! ದಿನೇ-ದಿನೇ ಹೆಚ್ಚು-ಹೆಚ್ಚು ಮಂದಿಗೆ ನೀರುಮಜ್ಜಿಗೆ ವಿತರಿಸಲು ಆರಂಭಿಸಿದಳು. ಇದು ಒಂದು ದಿನಚರಿಯಾಗಿ ಹಲವಾರು ವರ್ಷಗಳು ಮುಂದುವರಿಯಿತು. ದೇವಾಲಯದ ಕಾರ್ಯ ಹತ್ತಿರದಲ್ಲಿ ಮುಗಿಯಲಿತ್ತು. ನೇರವಾಗಿ ತಾನೀ ಮಹತ್

ದಿನಕ್ಕೊಂದು ಕಥೆ 959

*🌻ದಿನಕ್ಕೊಂದು ಕಥೆ🌻* *ಜತೆ ಬೆಳಕಿನಲ್ಲಿ ಬದುಕನ್ನು ಘನವಾಗಿಸುವುದು*   ಹಲವಾರು ಸಂದರ್ಭಗಳಲ್ಲಿ ನಮ್ಮ ವರ್ತನೆಗಳು ಅವಾಸ್ತವಿಕ ಹಾದಿಯಲ್ಲಿರುತ್ತವೆ. ಅನಗತ್ಯವಾದ ಸಂಗತಿಗಳತ್ತಲೇ ಮನಸನ್ನು ಕೇಂದ್ರೀಕರಿಸುತ್ತೇವೆ. ಸಲ್ಲದ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತ ವಾಸ್ತವವಾದುದನ್ನು ಮರೆಯುತ್ತೇವೆ. ಯಾವುದೋ ಜಡವಾದ ಮನೋಭಾವನೆ ಗಳಿಂದ ಹೊರಬರದೆ ಅಲ್ಲಿಯೇ ಸ್ಥಗಿತಗೊಳ್ಳುತ್ತೇವೆ. ಇವುಗಳು ಯುಕ್ತವಲ್ಲದ ನಡುವಳಿಕೆಗಳನ್ನು ಹುಟ್ಟುಹಾಕುತ್ತವೆ. ಮುಂದೊಮ್ಮೆ ಅವುಗಳೇ ನಮ್ಮ ಮನಃಸ್ಥಿತಿಯಾಗಿ ರೂಪಗೊಂಡು ಪ್ರತಿಕ್ರಿಯೆಗಳನ್ನು ನಿರ್ಧರಿಸಿ ಬಿಡುತ್ತವೆ. ಸಂತ ಕಬೀರದಾಸರು ಬದುಕಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ಸಂದರ್ಭ. ಒಂದೆಡೆ ಅವರನ್ನು ಕಳೆದುಕೊಳ್ಳುವ ನೋವು, ಸಂಕಟ ಶಿಷ್ಯರನ್ನೆಲ್ಲ ಕಾಡುತ್ತಿದ್ದರೂ, ಮತ್ತೊಂದೆಡೆ ಅವರ ಅಂತಿಮ ಉಪದೇಶ ಕೇಳಲು ಕಾತುರತೆ. ಶಿಷ್ಯರನ್ನು ಉದ್ದೇಶಿಸಿ ಕಬೀರರು ಕ್ಷೀಣದನಿಯಲ್ಲಿ, ‘ನಾನು ದಿನವೂ ಕುಳಿತುಕೊಂಡು ಉಪದೇಶಿಸುತ್ತಿದ್ದ ಖರ್ಜೂರದ ಮರವನ್ನು ಮೊದಲು ಕಡಿದು ಹಾಕಿ, ನಾನು ಆ ಮರ ತುಂಡಾಗುವುದನ್ನು ನೋಡಬೇಕು’ ಎಂದರು. ಕಬೀರರ ಈ ಮಾತು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಬಹಳಷ್ಟು ವರ್ಷಗಳ ಕಾಲ ಖರ್ಜೂರದ ಮರದ ಕೆಳಗೆ ಕುಳಿತು ಕಬೀರರು ಉಪದೇಶ ಮಾಡಿದ್ದರಿಂದ, ಆ ಮರ ಭಕ್ತರಿಗೆಲ್ಲ ಪವಿತ್ರವಾಗಿತ್ತು. ಯಾರೊಬ್ಬರೂ ಅಲ್ಲಿನ ಮರವನ್ನು ಕಡಿಯಲು ಮನಸ್ಸು ಮಾಡಲಿಲ್ಲ. ಮುಂದಾಗಲಿಲ್ಲ. ಕಬೀರರು ಮತ್ತೆ ಮ

ದಿನಕ್ಕೊಂದು ಕಥೆ 958

*🌻ದಿನಕ್ಕೊಂದು ಕಥೆ🌻* *ನೆಮ್ಮದಿಯ ಗುಟ್ಟು*  ಕೃಪೆ:ಗೀತಾ ವಿ. ಹೆಗಡೆ ಸಂಗ್ರಹ:ವೀರೇಶ್ ಅರಸಿಕೆರೆ. ಅಲ್ಲೊಂದು ಪುಟ್ಟ ಗುಡಿಸಲು. ಆರೆಂಟು ಜನರ ಸಂಸಾರ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ, ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ, ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು. ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳುಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು, ನಂತರ ಅವರನ್ನು ಕರೆಯುವುದನ್ನು ನಿಲ್ಲಿಸಿ, ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದ

ದಿನಕ್ಕೊಂದು ಕಥೆ 957

*🌻ದಿನಕ್ಕೊಂದು ಕಥೆ🌻* *ಹಕ್ಕಿಗಳು ಬರುವುದು ಕಡಿಮೆಯಾಯಿತೆಂದು 35 ವರ್ಷದಲ್ಲಿ ಬರಡು ಭೂಮಿಯನ್ನು ದಟ್ಟ ಅರಣ್ಯವಾಗಿ ಮಾಡಿದ ಮಜುಲಿ* ಅದು ನದಿಯ ಮಧ್ಯದಲ್ಲಿರುವ ವಿಶ್ವದ ಅತೀ ದೊಡ್ಡ ದ್ವೀಪ. ಹೆಸರು ಮಜುಲಿ. ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮಧ್ಯದಲ್ಲಿದೆ. ಸುಮಾರು 136 ಚದರ ಮೈಲಿ ವಿಸ್ತೀರ್ಣವನ್ನು ಹೊಂದಿರುವ ಈ ದ್ವೀಪ 1969 ರಲ್ಲಿ ಭೀಕರ ಪ್ರವಾಹಕ್ಕೆ ಗುರಿಯಾಯಿತು. ಪ್ರವಾಹ ಕಳೆದಾಗ ಬರಡು ನೆಲ ಮಾತ್ರ ಉಳಿದಿತ್ತು. ಬೇಸಿಗೆ ಬಂದಾಗ ನೂರಾರು ಹಾವುಗಳ ಬಿಸಿಲಿನ ತಾಪ ತಾಳಲಾರದೆ ಸತ್ತು ಹೋದವು. ವಿಜ್ಞಾನಿಗಳು ಮಜುಲಿಯ ಕತೆ ಮುಗಿಯಿತು, ಇದು ಇನ್ನೊಂದು ಮರುಭೂಮಿ ಎಂದು ಷರಾ ಬರೆದರು. ಆದರೆ, ಮಜುಲಿ ಹಾಗಾಗಲಿಲ್ಲ. ಇವತ್ತು ಅದೇ ಮಜುಲಿಯಲ್ಲಿ ಆನೆ, ಸಿಂಹಗಳು ಓಡಾಡುತ್ತಿವೆ. ಇಲ್ಲಿ ದಟ್ಟ ಕಾಡಿದೆ. ವಿಜ್ಞಾನಿಗಳ ಮಾತು ಯಾಕೆ ಸುಳ್ಳಾಯಿತು? ಮರುಭೂಮಿಯಾಗಬೇಕಿದ್ದ ಮುಜುಲಿ ಹಸಿರಿನಿಂದ ಕಂಗೊಳಿಸುತ್ತಿರುವುದು ಯಾಕೆ ಎಂದು ಹುಡುಕುತ್ತಾ ಹೊರಟರೆ ಎದುರಾಗುತ್ತಾರೆ ಜಾದವ್ ಪಯಾಂಗ್.  ಜಾದವ್ ಪಯಾಂಗ್ ಇದೇ ಪ್ರವಾಹಕ್ಕೆ ಗುರಿಯಾಗಿದ್ದ ನಜುಲಿಯವರು. ಮಿಶಿಂಗ್‌ ಎಂಬ ಸಣ್ಣ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಇವರು. ಪ್ರವಾಹ ಬಂದ ಹೊತ್ತಲ್ಲಿ ಪಯಾಂಗ್‌ ಇದ್ದ ಜಾಗಕ್ಕೆ ಹಕ್ಕಿಗಳು ಬರುವುದು ಕಡಿಮೆಯಾಯಿತು. ಪ್ರಾಣಿಗಳು ಅಪರೂಪವಾದವು. ಆಗ ಊರಿನ ಕಥೆ ಮುಗಿಯಿತು ಎಂದು ಮಾತನಾಡಿಕೊಂಡರು ಅಲ್ಲಿದ್ದ ಹಿರಿಯರು. ಇದು ಪಯಾಂಗ್‌ಗೆ ಬೇಸರ ತರಿಸಿತು. ಇದಕ್ಕೇನು ಮ