Posts

Showing posts from April, 2024

ದಿನಕ್ಕೊಂದು ಕಥೆ 1112

*🌻ದಿನಕ್ಕೊಂದು ಕಥೆ🌻*        *ಆತ್ಮದ ಅರಿವು* ಒಬ್ಬ ರಾಜನಿಗೆ, ಬಾಲ್ಯದಲ್ಲಿ ಒಬ್ಬ ಮಿತ್ರನಿದ್ದ. ಅವರಿಬ್ಬರೂ ಒಟ್ಟಿಗೆ ಗುರುಕುಲದಲ್ಲಿ ಓದುತ್ತಿದ್ದರು. ಕಾಲಾಂತರದಲ್ಲಿ  ಎಲ್ಲವನ್ನು ಬಿಟ್ಟು ಆ ಮಿತ್ರ ಸನ್ಯಾಸಿಯಾದ.  ಯುವ ರಾಜನಾಗಿದ್ದವನು, ಸಿಂಹಾಸನವನ್ನು ಏರಿದ.     ರಾಜ ,ದೂರ ದೂರದ ರಾಜ್ಯಗಳನೆಲ್ಲ ಗೆದ್ದು ,ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಹೊಸ ರಾಜಧಾನಿಯನ್ನು ನಿರ್ಮಿಸಿದ. ಎಲ್ಲಾ ಕಡೆಗಳಲ್ಲಿ ಈ ರಾಜನ ಕೀರ್ತಿ ವೈಭವ ಹರಡಿತು.     ಒಂದು ದಿನ ಈ ರಾಜನ ಹಳೆಯ ಮಿತ್ರ, ಸನ್ಯಾಸಿ ,ಇವನ ರಾಜಧಾನಿಯನ್ನು ಸಮೀಪಿಸಿದ. ರಾಜನಿಗೆ ಎಲ್ಲವನ್ನು ತೊರೆದು ಸಂನ್ಯಾಸಿಯಾದ, ತನ್ನ  ಆಪ್ತ ಮಿತ್ರ ಬಂದಿದ್ದಾನೆಂದು‌ತಿಳಿದು, ಅವನನ್ನು ನೋಡಬೇಕೆಂದೆನಿಸಿತು. ಆತ ಸಿಗುವುದೇ ಬಹಳ ಅಪರೂಪ, ನಾನು ಆತನನ್ನು ಸ್ವಾಗತಿಸಿ ಸನ್ಮಾನಿಸಬೇಕೆಂದುಕೊಂಡು ,ತನ್ನ ಇಡೀ  ನಗರವನ್ನು  ಅಲಂಕರಿಸಿ ಸಜ್ಜುಗೊಳಿಸಿದ.      ಯಾವ ಸಂಜೆ ಆತನ ಮಿತ್ರ ನಗರವನ್ನು ಪ್ರವೇಶಿಸಬೇಕಾಗಿತ್ತೊ, ಅಂದು ಇಡೀ ನಗರವೂ ದೀಪಾವಳಿಯನ್ನು ಆಚರಿಸುತ್ತಿತ್ತು.ಎಲ್ಲಾ ಮನೆ ಮನೆಗಳಲ್ಲಿ ‌ದೀಪಬೆಳಗಿಸಿದ್ದರು.ಸನ್ಯಾಸಿ ನಗರವನ್ನು ಪ್ರವೇಶಿಸುವ ದ್ವಾರದಲ್ಲಿ ರತ್ನಗಂಬಳಿಯನ್ನು ಹಾಸಲಾಗಿತ್ತು. ಸ್ವತಃ ಮಹಾರಾಜನೇ ದ್ವಾರದ ಬಳಿಗೆ ಬಂದು ನಿಂತು ಆತನನ್ನು ಎದುರುಗೊಳ್ಳಲು ಸಿದ್ದನಾಗಿದ್ದ.       ಈ ಎಲ್ಲಾ ಸ್ವಾಗತದ ಸಿದ್ಧತೆ ನಡೆಯುತ್ತಿರುವಾಗಲೇ, ಒಬ್ಬ ಮನುಷ್ಯ, ಸನ್ಯಾಸಿಯ ಬಳಿಗೆ ಬಂದು, ರ

ದಿನಕ್ಕೊಂದು ಕಥೆ 1111

*🌻ದಿನಕ್ಕೊಂದು ಕಥೆ🌻*     *ಕಲ್ಲುಕುಟಿಕ ನ ಕನಸು* ಒಬ್ಬ ಕಲ್ಲು ಕುಟಿಕ ಕಲ್ಲುಬಂಡೆಗಳನ್ನು ಒಡೆಯುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಈ ಜೀವನ ಎಷ್ಟು ಕಷ್ಟ. ನಾನು ರಾಜನಾಗಿದ್ದರೆ ಹೇಗೆ ಇರಬಹುದು ಎಂದು ಕಲ್ಪಿಸಿಕೊಂಡ ಅಷ್ಟೇ, ಹಾಗಂದಿದ್ದೆ ತಡ ರಾಜನಾಗಿಬಿಟ್ಟ. ಜರತಾರಿ ಪೋಷಾಕು, ಜರಿಯ ಪೇಟಾ, ಆಭರಣಗಳನ್ನು  ಧರಿಸಿ ಅಂಗರಕ್ಷಕರ ಜೊತೆಯಲ್ಲಿ ಆನೆಯ ಅಂಬಾರಿ ಮೇಲೆ ಕುಳಿತು ಸವಾರಿ ಹೋಗುತ್ತಿದ್ದ. ಆಹಾ ಎಂಥಾ ಸುಖ ಜೀವನ ಎಂದುಕೊಂಡ. ಹೀಗೆ ಹೋಗುವಾಗ ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಬಂದ. ರಾಜನಿಗೆ ವಿಪರೀತ ಸೆಕೆ, ಮೈಯೆಲ್ಲ ಬೆವರಿತು. ಆನೆ ಮೇಲೆ ಕುಳಿತಿದ್ದ ರಾಜನಿಗೆ ಅನಿಸಿತು ರಾಜನೇ ದೊಡ್ಡವನು ಎಂದುಕೊಂಡಿದ್ದ ಅವನಿಗೆ ರಾಜನಿಗಿಂತ ಸೂರ್ಯ ಶ್ರೇಷ್ಠ ಎನಿಸಿತು.  ಅವನ ಬಯಕೆಯಂತೆ ಸೂರ್ಯನಾಗಿ ಇಡೀ ಜಗತ್ತಿಗೆ ಬೆಳಕು ಕೊಡಲು ಶುರು ಮಾಡಿದ. ಅವನ ಸಂಭ್ರಮ ಹೇಳತೀರದು ವಾವ್ ಜೀವನ ಅಂದರೆ ಇದು ಎಂದುಕೊಂಡ. ಆ ಹೊತ್ತಿಗೆ ಎಲ್ಲಿಂದಲೋ ಒಂದು ಮೋಡ ಬಂದು ಸೂರ್ಯನನ್ನು ಮುಚ್ಚಿ ಬಿಟ್ಟಿತು. ಅವನಿಗನ್ನಿಸಿತು ಓಹೋ ಸೂರ್ಯನಿಗಿಂತ ಮೋಡದ ಶಕ್ತಿ ಹೆಚ್ಚು. ನಾನು ಮೋಡ ಆಗಬೇಕು ಎಂದುಕೊಂಡ. ಅವನ ಅಪೇಕ್ಷೆಯಂತೆ ಮೋಡವಾದ. ಮೋಡ ಮುಂದೆ ಮುಂದೆ ಸಾಗುತ್ತಿತ್ತು. ಆದರೆ ಎಲ್ಲಿಂದಲೋ ಬೀಸಿ ಬಂದ  ಗಾಳಿ  ಮೋಡ ವನ್ನು ಹಾರಿಸಿಕೊಂಡು ಹೋಯಿತು. ಈಗ ಅವನಿಗೆ ಮತ್ತೆ ಸಿಟ್ಟು ಬಂತು. ಎಲ್ಲಕ್ಕಿಂತ ಗಾಳಿಯೇ ಹೆಚ್ಚು, ನಾನು ಗಾಳಿಯಾಗಬೇಕು ಎಂದುಕೊಂಡ, ಗಾಳಿಯಾಗಿ ಜೋರಾಗಿ

ದಿನಕ್ಕೊಂದು ಕಥೆ 1110

ದಿನಕ್ಕೊಂದು ಕಥೆ 1109

*🌻ದಿನಕ್ಕೊಂದು ಕಥೆ🌻* ಪಾಂಡುರಂಗನ ಪರಮ ಭಕ್ತನಾದ ಸಂತ ತುಕಾರಾಮರು ನಿರಂತರವಾಗಿ ಪಾಂಡುರಂಗನ ನಾಮಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಒಂದು ಸಲ ಅವರ ತಂದೆಯ ಶ್ರಾಧ್ಧ ಇತ್ತು. ಶ್ರಾದ್ಧದಲ್ಲಿ ಅರ್ಥ ಮೃತ್ಯು ಹೊಂದಿದ ವ್ಯಕ್ತಿಗಳ ಪುಣ್ಯತಿಥಿ. ಶ್ರಾದ್ಧದಲ್ಲಿ ಇಬ್ಬರು ಬ್ರಾಹ್ಮಣರಿಗೆ ಕರೆದು ಅವರಿಗೆ ಫಲ ಮತ್ತು ದಕ್ಷಿಣೆ ಕೊಟ್ಟ ಮೇಲೆಯೇ ಮನೆಯ ಸದಸ್ಯರೆಲ್ಲರೂ ಭೋಜನ ಮಾಡಬೇಕಿತ್ತು. ಅವರ ಪತ್ನಿ ಜೀಜಾಯಿ ಅಗತ್ಯವಿರುವ ಸಾಮಾನು ಬೇಗನೆ ತರಲು ಹೇಳಿದಳು. ತುಕಾರಾಮರು ಮನೆಯಿಂದ ಹೊರಟರು. ಮಾರ್ಗದಲ್ಲಿ ಅವರು ಪಾಂಡುರಂಗನ ನಾಮಸ್ಮರಣೆ ಮಾಡುತ್ತಿದ್ದರು. ಅವರು ಊರನ್ನು ದಾಟಿದ ಮೇಲೆ ಒಂದು ಹೊಲದಲ್ಲಿ (ಗದ್ದೆ) ಫಸಲು ತೆಗೆಯುತ್ತಿದ್ದನ್ನು ನೋಡಿದರು. ತುಕರಾಮನನ್ನು ನೋಡಿ ರೈತನು ’ಎನು ಕೆಲಸ ಮಾಡುವೆ? ಕೆಲಸ ಮಾಡಿದರೆ ದುಡ್ಡು ಮತ್ತು ಅದರ ಜೊತೆಗೆ ದಿನಸಿ ಕೂಡಾ ಕೊಡುವೆ" ಎಂದನು.#ಆಧ್ಯಾತ್ಮಿಕ_ಕಥೆಗಳು ತುಕಾರಾಮರು ಹೊಲದಲ್ಲಿ ಹೋಗಿ ಫಸಲು ಕಡೆಯುತ್ತ ಮನೆಯ ಕೆಲಸವನ್ನು ಮರೆತುಬಿಟ್ಟರು. ಮಧ್ಯಾಹ್ನ ಸಮೀಪಿಸುತ್ತಿತ್ತು. ಜೀಜಾಯಿಗೆ ಎನು ಮಾಡಬೇಕು ಎಂದು ತಿಳಿಯದಾಯಿತು. ಸ್ವಲ್ಪ ಸಮಯದ ನಂತರ ತುಕರಾಮರು ಮನಗೆ ಹಿಂತಿರುಗಿದರು. ಜೀಜಾಯಿ ಹೇಳಿದ ಸಾಮಾನುಗಳನೆಲ್ಲ ತಂದಿದ್ದರು. ಜೀಜಾಯಿ ಬೇಗನೆ ತಯಾರಿ ಮಾಡುತ್ತಿದ್ದರು. ತುಕರಾಮರು ನದಿಗೆ ಹೋಗಿ ಸ್ನಾನ ಮಾಡಿ ಬಂದರು. ಅಷ್ಟರಲ್ಲೆ ಬ್ರಹ್ಮಣರು ಮನೆಗೆ ಬಂದರು. ತುಕರಾಮರು ಅವರಿಗೆ ಹಣ್ಣು ಮತ್ತು ಹಾ

ದಿನಕ್ಕೊಂದು ಕಥೆ 1108

*🌻ದಿನಕ್ಕೊಂದು ಕಥೆ🌻* *ಬೇವಿನ ಮರ ನುಡಿದ ಸಾಕ್ಷಿ* ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಸಿದ್ದಪ್ಪ ಹೊಸಮನಿ ಎಂಬ ಒಬ್ಬ ವಕೀಲರಿದ್ದರು.  ಅನ್ಯಾಯದ ವಿರುದ್ದ ಸಿಡಿದೇಳುತ್ತಿದ್ದ ಅವರು ಬಡವರ ಬಗೆಗೆ, ಶೋಷಣೆಗೆ ಒಳಗಾದವರ ಬಗೆಗೆ, ಅನುಕಂಪ ಮೃದು ಭಾವನೆಗಳನ್ನು ಹೊಂದಿದ್ದರು.  ತುಳಿತಕ್ಕೆ ಒಳಗಾದವರ ನೆರವಿಗೆ ಅವರು ಧಾವಿಸುತ್ತಿದ್ದರು. ಒಂದು ಸಲ ಹೀಗಾಯಿತು.  ಒಬ್ಬ ಬಡ ರೈತನು ಮಾರವಾಡಿಯೊಬ್ಬನ ಬಳಿ ಸಾಲ ತಂದಿದ್ದನು.  ತಾನು ಪಡೆದ ಸಾಲವನ್ನು ಅವನು ಆ ಮಾರವಾಡಿಗೆ ಕೊಟ್ಟು ಮುಟ್ಟಿಸಿದ್ದನು.  ಆದರೆ ಆ ಮಾರವಾಡಿ ಸಾಲ ಮರುಪಾವತಿ ಆದ ಬಗೆಗೆ, ರೈತನಿಗೆ ದಾಖಲೆ ಏನನ್ನೂ ನೀಡಿರಲಿಲ್ಲ.  ತನ್ನ ಲೆಕ್ಕದ ಪುಸ್ತಕದಲ್ಲಿ ಸಾಲದ ಬಾಕಿ ಹಾಗೆಯೇ ಇದೆಯೆಂದು ತೋರಿಸಿ ಸಾಲ ವಸೂಲಿಯ ಬಗೆಗೆ, ಆ ರೈತನ ವಿರುದ್ಧ ದಾವಾ ಹೂಡಿದ್ದನು.   ಆ ಬಡ ರೈತ, ವಕೀಲರ ಸಂಘಕ್ಕೆ ಬಂದು ತನ್ನ ಪರವಾಗಿ ವಕಾಲತ್ತು ವಹಿಸಬೇಕೆಂದು ಅನೇಕರನ್ನು ಅಂಗಲಾಚಿ ಬೇಡಿಕೊಂಡ.  “ನೀನು ಸಾಲವನ್ನು ಹಿಂತಿರುಗಿಸಿದ ಬಗೆಗೆ ನಿನ್ನ ಬಳಿ ಸಾಕ್ಷಿ ಪುರಾವೆಗಳು ಏನಾದರೂ ಇವೆಯೇ?” ಎಂದು ಅವರೆಲ್ಲರೂ ಅವನನ್ನು ಕೇಳಿದ್ದರು.  “ನಾನು ದೇವರ ಪ್ರಮಾಣ ಮಾಡಿ ಹೇಳುತ್ತೇನೆ.  ನಮ್ಮ ಹೊಲದ ಸಮೀಪದಲ್ಲಿ ಇರುವ ಬೇವಿನ ಮರದ ಕೆಳಗೆ, ಎಲ್ಲ ಸಾಲ ಚುಕ್ತಾ ಮಾಡಿದ್ದೇನೆ” ಎಂದು ಹೇಳಿದಾಗ, ಅವರೆಲ್ಲರೂ ನಕ್ಕು, “ಹುಚ್ಚಪ್ಪ, ಕೋರ್ಟು, ನಿನ್ನ ದೇವರನ್ನೂ ಕೇಳುವುದಿಲ್ಲ, ನಿನ್ನ ಬೇವಿ