Posts

Showing posts from July, 2018

ದಿನಕ್ಕೊಂದು ಕಥೆ 849

*🌻ದಿನಕ್ಕೊಂದು ಕಥೆ🌻                                            ಕ್ಷಮಾಗುಣದ ಮಹತ್ವ* ಸಂತ ಸಮರ್ಥ ರಾಮದಾಸರು ಒಮ್ಮೆ ಪ್ರಿಯಶಿಷ್ಯ ಶಿವಾಜಿಯ ಕುಶಲ ವಿಚಾರಿಸಲು ಶಿಷ್ಯರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಬೇಸಿಗೆಯ ಪ್ರಖರ ಬಿಸಿಲು ಸುಡುತ್ತಿತ್ತು. ಜತೆಗೆ ಬಾಯಾರಿಕೆಯಿಂದ ಬಸವಳಿದು ಬೆಂಡಾದ ಶಿಷ್ಯರಿಗೆ ಹಾದಿಯ ಅಕ್ಕಪಕ್ಕ ಸಮೃದ್ಧವಾಗಿ ಬೆಳೆದಿದ್ದ ಕಬ್ಬಿನ ಗದ್ದೆ ಕಂಡಿತು. ನಿಧಿಯೇ ಸಿಕ್ಕಂತಾಗಿ ಗದ್ದೆಗೆ ನುಗ್ಗಿ ಸಾಕಷ್ಟು ಕಬ್ಬು ಕಿತ್ತು ರಸ ಹೀರಿದರು. ಇನ್ನೇನು ಅಲ್ಲಿಂದ ಕಾಲ್ತೆಗೆಯಬೇಕು ಎನ್ನುವಾಗ, ಕಬ್ಬಿನ ಗದ್ದೆಯ ಮಾಲೀಕ ಆಗಮಿಸಿದ. ಅಪ್ಪಣೆಯಿಲ್ಲದೆ ನುಗ್ಗಿದ್ದು ಮಾತ್ರವಲ್ಲದೆ ಕಬ್ಬನ್ನು ಮನಸೋಇಚ್ಛೆ ಕಿತ್ತಿದ್ದಕ್ಕಾಗಿ ರಾಮದಾಸರೂ ಸೇರಿದಂತೆ ಎಲ್ಲ ಶಿಷ್ಯರಿಗೂ ತನ್ನ ಆಳುಗಳ ಮೂಲಕ ಥಳಿಸಿದ. ಕೆಲ ಹೊತ್ತಿನ ನಂತರ ಅವರೆಲ್ಲ ಶಿವಾಜಿಯ ಅರಮನೆ ತಲುಪಿದರು. ಎಲ್ಲರನ್ನೂ ಸ್ವಾಗತಿಸಿದ ಶಿವಾಜಿ, ಸಮರ್ಥ ರಾಮದಾಸರಿಗೆ ಸ್ವತಃ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಲು ಮುಂದಾದಾಗ, ಅವರ ಮೈಮೇಲಿನ ಬಾಸುಂಡೆಗಳನ್ನು ಕಂಡು ದಿಗ್ಭŠಮೆಗೊಂಡ. ಶಿಷ್ಯರಿಂದ ವಿಷಯ ತಿಳಿದು ಕಬ್ಬಿನ ಗದ್ದೆಯ ಮಾಲೀಕನನ್ನು ಆಸ್ಥಾನಕ್ಕೆ ಕರೆಸಿದ. ತನ್ನಿಂದ ಥಳಿತಕ್ಕೊಳಗಾದ ಸ್ವಾಮೀಜಿ ಮತ್ತು ಶಿಷ್ಯರು ಶಿವಾಜಿಯಿಂದ ಗೌರವಿಸಲ್ಪಡುತ್ತಿರುವುದನ್ನು ಕಂಡು ಕಂಗಾಲಾದ ಆತ, ತನ್ನ ತಪ್ಪನ್ನು ಕ್ಷಮಿಸುವಂತೆ ರಾಮದಾಸರಲ್ಲಿ, ಶಿವಾಜಿಯಲ್ಲಿ ಮೊರೆಯಿಟ್ಟ.

ದಿನಕ್ಕೊಂದು ಕಥೆ 848

*🌻ದಿನಕ್ಕೊಂದು ಕಥೆ🌻                                                         ಅರ್ಥಪೂರ್ಣವಾಗಿ ಬದುಕೋಣ* ಒಮ್ಮೆ ಸಂತರೊಬ್ಬರು ನದೀತೀರಕ್ಕೆ ತೆರಳಿ ಜರಡಿಯಿಂದ ನೀರನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದರು. ಅವರು ಹಲವಾರು ಬಾರಿ ಈ ರೀತಿ ಯತ್ನಿಸಿದರೂ, ಕೆಲವೇ ಹನಿಗಳಷ್ಟು ನೀರು ಮಾತ್ರವೇ ಉಳಿದು, ಮಿಕ್ಕ ನೀರೆಲ್ಲ ಜರಡಿಯಿಂದ ಹಾಗೇ ಸೋರಿಹೋಗುತ್ತಿತ್ತು. ಸಂತರ ಜತೆಗಿದ್ದ ಶಿಷ್ಯರಲ್ಲೊಬ್ಬ ‘ಇದೇನು ಗುರುಗಳೇ, ಜರಡಿಯಿಂದ ನೀರನ್ನು ಸಂಗ್ರಹಿಸಲು ಸಾಧ್ಯವೇ? ನೀವೇಕೆ ವೃಥಾ ಶ್ರಮಪಡುತ್ತಿದ್ದೀರೋ ನನಗರ್ಥವಾಗುತ್ತಿಲ್ಲ’ ಎಂದ. ಅದಕ್ಕೆ ಸಂತರು, ‘ನನ್ನ ಈ ವರ್ತನೆಯ ಹಿಂದಿರುವ ಉದ್ದೇಶವೇ ಬೇರೆ. ಇದರ ಮೂಲಕ ನಿನಗೊಂದು ತತ್ತ್ವವನ್ನು ತಿಳಿಸಲಿಕ್ಕಿದೆ. ‘ತತ್ತ್ವಶಾಸ್ತ್ರವನ್ನು ಎಷ್ಟೇ ಓದಿದರೂ ಅರ್ಥವೇ ಆಗುತ್ತಿಲ್ಲ’ ಎಂದು ನೀನು ಯಾವಾಗಲೂ ಹೇಳುತ್ತಿದ್ದೆ, ಆಗ ನಾನು, ‘ಅದನ್ನು ಮತ್ತೆಮತ್ತೆ ಓದಿ ತಿಳಿದುಕೋ’ ಎನ್ನುತ್ತಿದ್ದೆ. ಈಗ ಗಮನವಿಟ್ಟು ಕೇಳು-‘ನಾನು ಜರಡಿಯನ್ನು ಹೀಗೆ ನದಿಯಲ್ಲಿ ಅದ್ದಿ ತೆಗೆಯುತ್ತಿರುವುದು ನೀರನ್ನು ಸಂಗ್ರಹಿಸುವುದಕ್ಕಲ್ಲ; ಬದಲಿಗೆ, ಅದರಲ್ಲಿ ಕಟ್ಟಿಕೊಂಡಿರುವ ಕೊಳೆ, ಜಿಡ್ಡನ್ನು ತೊಡೆಯುವುದಕ್ಕಾಗಿ. ಜರಡಿಯನ್ನು ಹಲವಾರು ಬಾರಿ ನೀರಿನಲ್ಲಿ ಮುಳುಗಿಸಿ ಮೇಲಕ್ಕೆತ್ತಿದರೆ ಕಲ್ಮಷ ಕಳೆದು ಅದು ಶುದ್ಧವಾಗುತ್ತದೆ. ಇದೇ ರೀತಿಯಲ್ಲಿ, ವಿಭಿನ್ನ ಪ್ರಲೋಭನೆಗಳಿಗೆ, ದುರಾಲೋಚನೆಗಳಿಗೆ ಸಿಲುಕ

ದಿನಕ್ಕೊಂದು ಕಥೆ 847

*🌻ದಿನಕ್ಕೊಂದು ಕಥೆ🌻*                                                                                                           ಕವಿ ಕಾಳಿದಾಸನಿಗೆ ತಾನು ಜ್ಞಾನಿಯಾಗಿರುವುದರ ಅರಿವು ಕೊಂಚ ಹೆಚ್ಚೆ ಆಗಿತ್ತು. ಒಂದು ಬಾರಿ ಪರ್ಯಟನೆ ಮಾಡುತ್ತ ಒಂದು ಊರಿನ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ಒಬ್ಬ ವೃದ್ಧ ಸ್ತ್ರೀ ನೀರು ಸೇದುತ್ತಿದ್ದಳು. ಕಾಳಿದಾಸ ಸ್ತ್ರೀಯ ಬಳಿಸಾರಿ, ತಾಯೆ ನನ್ನ ದಾಹ ಅಡಗಿಸಲು ಕೊಂಚ ನೀರು ಕೊಡುವ ಕೃಪೆ ಮಾಡುತ್ತೀರಾ?? ಎಂದು ಕೇಳಿದ.  ವೃದ್ಧ ಸ್ತ್ರೀ, ನನಗೆ ನಿನ್ನ ಪರಿಚಯವಿಲ್ಲವಲ್ಲ ಮಗೂ, ನೀನು ನಿನ್ನ ಪರಿಚಯ ಹೇಳು, ನಾನು ನೀರು ಕೊಡುತ್ತೇನೆ ಎಂದಳು. ಆಗ ಕಾಳಿದಾಸ ತನ್ನ ಪರಿಚಯ ನೀಡಲು ಪ್ರಾರಂಭಿಸಿದ. ಕಾ -  ನಾನೊಬ್ಬ ಪ್ರವಾಸಿ ಸ್ತ್ರೀ - ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ. ಕಾ - ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ? ಸ್ತ್ರೀ - ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ. ನಿಜ ಹೇಳು, ನೀನು ಯಾರು? ಕಾ - ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ? ಸ್ತ್ರೀ - ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೊಂದು ವೃಕ್ಷ.  ಭೂಮಿ ಪುಣ್ಯವಂತರೊಡನೆ ಪಾಪಿಷ್ಟರನ್ನೂ ಸಹಿಸುತ್ತ

ದಿನಕ್ಕೊಂದು ಕಥೆ 846

*🌻ದಿನಕ್ಕೊಂದು ಕಥೆ🌻                                         ಅಹಂಕಾರ ಸಲ್ಲ* ರಾಜಸೂಯ ಯಾಗ ಆಗಷ್ಟೇ ಸಂಪನ್ನಗೊಂಡಿತ್ತು. ‘ಇಂಥ ಯಾಗವನ್ನು ಹಿಂದೆ ಯಾರೂ ಮಾಡಿಲ್ಲ, ಭವಿಷ್ಯದಲ್ಲೂ ಇದು ಶಕ್ಯವಿಲ್ಲ’ ಎಂಬ ಅಹಂಕಾರ ಅರ್ಜುನನ ತಲೆಗೇರಿತ್ತು. ಇದೇ ಗ್ರಹಿಕೆಯಲ್ಲಿ ಆತ ಹಸ್ತಿನಾವತಿಯಿಂದ ತೆರಳುತ್ತಿದ್ದಾಗ, ಬೆಂಕಿ ಅದಾಗಲೇ ಶಮನಗೊಂಡಿದ್ದ ಯಜ್ಞಕುಂಡದ ಮೇಲೆ ಮುಂಗುಸಿಯೊಂದು ಹೊರಳಾಡುತ್ತ, ‘ಇದೇನು ಮಹಾಯಜ್ಞವೋ…!’ ಎಂದು ಜರಿಯುತ್ತಿತ್ತು. ಅಚ್ಚರಿಗೊಂಡ ಅರ್ಜುನ, ‘ಇದಕ್ಕಿಂತ ದೊಡ್ಡ ಯಜ್ಞವನ್ನು ಹಿಂದೆ ನೋಡಿದ್ದೆಯಾ?’ ಎಂದು ಕೇಳಿದಾಗ ಆ ಮುಂಗುಸಿ, ‘ನೋಡಿದ್ದೆ; ಆದರೆ ಅದನ್ನು ಮಾಡಿದ್ದು ರಾಜನಲ್ಲ, ಓರ್ವ ಬಡವ’ ಎನ್ನುತ್ತ, ಆ ಕತೆ ಹೇಳಲು ಮುಂದಾಯಿತು- ‘ಬಡವನೊಬ್ಬ ಬೆವರು ಸುರಿಸಿ ದುಡಿದು ತಂದಿದ್ದ ಸ್ವಲ್ಪವೇ ಅಕ್ಕಿಯಿಂದ ಅನ್ನ ಮಾಡಿ ಇನ್ನೇನು ಕುಟುಂಬಿಕರೊಡನೆ ಉಣ್ಣಬೇಕೆನ್ನುವಷ್ಟರಲ್ಲಿ, ಅತಿಥಿಯೊಬ್ಬ ಬಂದು ‘ಉಪವಾಸದಿಂದ ಕಂಗೆಟ್ಟಿದ್ದೇನೆ, ಹಸಿವುನೀಗಿ’ ಎಂದು ಬೇಡಿಕೊಂಡ. ಆಗ ಬಡವನ ಮನ ಕರಗಿ, ತನ್ನ ಪಾಲಿನ ಅನ್ನವನ್ನು ನೀಡಿದ. ಆದರೆ ಅತಿಥಿಗೆ ಅಷ್ಟು ಸಾಕಾಗಲಿಲ್ಲವಾದ್ದರಿಂದ, ಅವನ ಹೆಂಡತಿ, ಮಕ್ಕಳು ಕೂಡ ತಮ್ಮ ಪಾಲಿನ ಅನ್ನವನ್ನು ಅತಿಥಿಗೆ ನೀಡಿ ಸತ್ಕರಿಸಿದರು. ಉಂಡು ಸಂತೃಪ್ತನಾದ ಅತಿಥಿ, ಮನಸಾರೆ ಹರಸಿದ. ಬಡವನ ಪ್ರಾಮಾಣಿಕ ದುಡಿಮೆಯ ಫಲದ ಜತೆಗೆ ಅತಿಥಿಯ ಹರಕೆಯ ಫಲವೂ ಸೇರಿಕೊಂಡಿದ್ದಕ್ಕೋ ಏನೋ, ಈ ಕುಟುಂಬದಲ್ಲಿ

ದಿನಕ್ಕೊಂದು ಕಥೆ 845

*🌻ದಿನಕ್ಕೊಂದು ಕಥೆ🌻* *💐ಸಾರ್ಥಕ_ಬದುಕು💐*   *ಒಬ್ಬ ದೊಡ್ಡ ಸಿರಿವಂತನು ಗುರುಗಳ ಹತ್ತಿರ ಹೋಗಿ ನಮಸ್ಕರಿಸಿ ಕುಳಿತುಕೊಂಡ. ಗುರುಗಳು ಅವನನ್ನು ಆದರದಿಂದ ಸ್ವಾಗತಿಸಿದರು. ಸ್ವಲ್ಪ ಸಮಯದ ನಂತರ “ಬಂದ ಕಾರಣವೇನು?” ಎಂದು ಗುರುಗಳು ಕೇಳಿದರು. “ಪ್ಪೋಜ್ಯರೇ, ಬದುಕಿನ ಸಾರ್ಥಕತೆಯ ದಾರಿ ಯಾವುದು?” ಎಂದು ಧನಿಕ ಕೇಳಿದ. ಗುರುಗಳು ಹೇಳಿದರು- “ಒಳ್ಳೆಯ ಪ್ರಶ್ನೆ, ನಮ್ಮ ಜೀವನವು ಸುಗಂಧಪೂರ್ಣ ಗುಲಾಬಿ ಹೂವಿನಂತಾಗಬೇಕು. ನಮಗೂ ನಮ್ಮ ಸುತ್ತಲಿನವರಿಗೂ, ಅದು ಸಂತಸದ ಸುಗಂಧ ನೀಡಬೇಕು. ಅದು ಸಾರ್ಥಕ ಜೀವನ!” “ಆದರೆ ಗುರುಗಳೇ, ನನ್ನ ಬದುಕು ಮುಳ್ಳು ಕಂಟಿಯಿಂದ ಕೂಡಿದ ಕಾಡಿನಂತಾಗಿದೆಯಲ್ಲ” ಎಂದು ಧನಿಕ ತನ್ನ ವ್ಯಥೆಯನ್ನು ತೋಡಿಕೊಂಡ. ಗುರುಗಳು ಹೇಳಿದರು “ಚಿಂತೆಯಿಲ್ಲ, ಶಾಂತ ಸಂತರ, ಅರುಹಿನ ಮಹಂತರ ಸತ್ಸಂಗ, ಸತ್ಯ ಶ್ರವಣಮಾಡು. ನಿನ್ನ ಜೀವನ ಪಾವನ ತಪೋವನವಾಗುತ್ತದೆ. ಸುಂದರ ಹೂಬನವಾಗುತ್ತದೆ”. ಗುರುಗಳ ಈ ಸುಮಧುರ ನುಡಿಗಳ ಕೇಳುತ್ತಲೇ ಸಿರಿವಂತನಿಗೆ ಸಾರ್ಥಕ ಬದುಕಿನ ದರ್ಶನವಾಗಿತ್ತು!.*          *ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ*                          ಸಂಗ್ರಹ: ವೀರೇಶ್ ಅರಸಿಕೆರೆ.        *********************************************** *🌻ದಿನಕ್ಕೊಂದು ಕಥೆ🌻* *ಒಬ್ಬ 80 ವರ್ಷದ ಮುದುಕನಿಗೆ   ಹೃದಯದ ಆಪರೇಷನ್ ಆಯಿತು. ಆಸ್ಪತ್ರೆ ಬಿಲ್ಲು*  *8 ಲಕ್ಷ... ಬಿಲ್ಲು ನೋಡಿ ಮುದುಕ ಕಣ್ಣಿರು  ಹಾಕಿದ..

ದಿನಕ್ಕೊಂದು ಕಥೆ 844

*🌻ದಿನಕ್ಕೊಂದು ಕಥೆ🌻                                               ನೆಲದ ನಿವೃತ್ತಿಯ ನಂತರವೂ ವೃತ್ತಿ ಪ್ರೇಮ ಮೆರೆಯುತ್ತಿರುವ ಶಿವಮೂರ್ತಿಯವರ ವಿದ್ಯಾದಾನದ ಕಥೆಯಿದು* ಕೆಲವರು ತಮಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎಂದು ಹಪಹಪಿಸುತ್ತಾರೆ. ಸಿಕ್ಕ ಮೇಲೆ ಹಲವರೋ ನೌಕರಿಯ ಅವಧಿ ಯಾವಾಗ ಮುಗಿಯತ್ತದೋ ಎಂದು ದಿನಗಳನ್ನು ಎಣಿಸುತ್ತಾ ಕಾಲ ದೂಡುತ್ತಾರೆ. ಕೆಲವರಿಗೋ ನೌಕರಿ ಎಂಬುದೊಂದು ಕೇವಲ ಹೊಟ್ಟೆಪಾಡಿನ ಕಾಯಕ. ಈ ಎಲ್ಲದರ ನಡುವೆ ನಿವೃತ್ತಿಯ ನಂತರವೂ ಮತ್ತೇ ತಮ್ಮ ಕಾಯಕವನ್ನು ಮುಂದುವರೆಸಬೇಕು, ತಮ್ಮ ನಿವೃತ್ತಿಯ ಸಮಯ ವ್ಯರ್ಥವಾಗಿ ಹರಣವಾಗದೆ ಯಾರಿಗಾದರೂ ಪ್ರಯೋಜನವಾಗಬೇಕು ಎಂಬ ಸತ್ ಚಿಂತನೆ – ಸದ್ಭಾವದೊಂದಿಗೆ ಮತ್ತೇ ಉತ್ಸಾಹದಿಂದ ಕ್ರೀಯಾಶೀಲರಾಗಿ ವೃತ್ತಿಪ್ರೇಮ ಮೆರೆಯುವವರೂ ಸಹ ಇದ್ದಾರೆ ಎಂದರೆ ಅಚ್ಚರಿಯಾಗದೆ ಇದ್ದೀತೆ !?. ಈ ಅಚ್ಚರಿಯ ಪ್ರಶ್ನೆಗೆ ಉತ್ತರವೆಂಬಂತಿದ್ದರೂ, ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿವೃತ್ತಿಯ ನಂತರವೂ ಕಾಯಕದಲ್ಲಿ ತೊಡಗಿದ್ದಾರೆ ದಾವಣಗೆರೆಯ ನಿವೃತ್ತ ಗಣಿತ ಮೇಷ್ಟ್ರು ಶ್ರೀಯುತ ಹೆಚ್.ಎಸ್.ಶಿವಮೂರ್ತಿಯವರು. *ನಿಸ್ವಾರ್ಥ ಸೇವೆ* ಎಲ್ಲರಿಗೂ ಗೊತ್ತಿರುವಂತೆ ದುಡ್ಡಿದ್ದರೆ ದುನಿಯಾ ಎಂಬ ಕಾಲವಿದು. ಹಾಗಾಗಿ ಎಲ್ಲರೂ ದುಡ್ಡಿನ ದುಡಿಮೆಗಾಗಿಯೇ ಹೆಚ್ಚೆಚ್ಚು ಸಂಬಳ ಕೊಡುವ ನೌಕರಿಯ ತಲಾಶಿನಲ್ಲಿರುತ್ತೇವೆ. ಅದರಲ್ಲೂ ಗಣಿತ ವಿಷಯ ಓದಿಕೊಂಡಿರುವ ಈ ಮೇಷ್ಟ್ರು ಮನಸ್ಸು ಮಾಡಿದ್