Posts

Showing posts from March, 2017

ದಿನಕ್ಕೊಂದು ಕಥೆ. 372

*🌻ದಿನಕ್ಕೊಂದು ಕಥೆ🌻                                         ಸಾಲಗಾರರು! ಸಾರ್, ನಾವೆಲ್ಲಾ ಸಾಲಗಾರರು!* ನಾವು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದಿರಬಹುದು. ಆದರೆ ನಾವೆಲ್ಲಾ ಸಾಲಗಾರರೇ! ಸಾಲ ಎಂದರೆ ಹಣದ ಸಾಲವೇ ಇರಬೇಕೆಂದಿಲ್ಲ ಅಲ್ಲವೇ? ನಾವು ಯಾರಿಂದಲಾದರೂ, ಏನಾದರೂ ಸಹಾಯ ಪಡೆದಿದ್ದರೆ, ಅದೂ ಒಂದು ಬಗೆಯ ಸಾಲವೇ ಅಲ್ಲವೇ? ಅಂಥ ಸಾಲವನ್ನೂ ನಾವು ತೀರಿಸಲೇ ಬೇಕಲ್ಲವೇ? ಆಗಿಂದಾಗಲೇ ಅಲ್ಲದಿದ್ದರೂ, ಒಂದಲ್ಲಾ ಒಂದು ದಿನ ಆ ಸಾಲವನ್ನು ತೀರಿಸಬೇಕು! ಹೀಗೆ ಎಂದೋ ಪಡೆದಿದ್ದ ಸಹಾಯದ ಸಾಲವನ್ನು ಮುಂದೆಂದೋ ಒಂದು ದಿನ ತೀರಿಸಿ ಋಣಮುಕ್ತರಾದವರ ಕುತೂಹಲಕಾರಿ ಪ್ರಸಂಗವೊಂದು ಇಲ್ಲಿದೆ. ಒಮ್ಮೆ ವಿದೇಶವೊಂದರಲ್ಲಿ ರಕ್ತಕ್ರಾಾಂತಿಯಾಯಿತಂತೆ. ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಹತ್ತಾರು ಸಾವಿರ ಜನ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ಪ್ರಾಣ ಉಳಿದರೆ ಸಾಕೆಂದುಕೊಂಡವರು ಸ್ವದೇಶ ತೊರೆದು ಪರದೇಶಗಳಿಗೆ ಹೋಗಿ ಬದುಕುವ ದಾರಿಗಳನ್ನು ಹುಡುಕತೊಡಗಿದರು. ಅಂಥ ನಿರಾಶ್ರಿತರಲ್ಲಿ ಒಬ್ಬರು ಪರದೇಶದಲ್ಲಿ ಹೋಟೆಲೊಂದರ ಮ್ಯಾನೇಜರ್‌ರನ್ನು ಭೇಟಿಯಾಗಿ ತಮ್ಮ ದುಸ್ಥಿತಿ ವಿವರಿಸಿ ‘ಕಸ ಗುಡಿಸುವುದೋ, ಪಾತ್ರೆ ತೊಳೆಯುವುದೋ, ಯಾವ ಕೆಲಸವಾದರೂ ಚಿಂತೆಯಿಲ್ಲ. ಕೆಲಸ ಕೊಡಿ! ಉಪವಾಸವಿರುವ ಮಡದಿ-ಮಕ್ಕಳಿಗೆ ಎರಡು ತುತ್ತು ಊಟ ಸಿಕ್ಕರೆ ಸಾಕು’ಎಂದು ಕೇಳಿಕೊಂಡರು. ಮ್ಯಾನೇಜರು ಆತನನ್ನು ದಿಟ್ಟಿಸಿ ನೋಡಿ ‘ನಿಮ್ಮನ್ನು ಎಲ್ಲೋ ನೋಡಿದ

ದಿನಕ್ಕೊಂದು ಕಥೆ. 371

*🌻ದಿನಕ್ಕೊಂದು ಕಥೆ🌻                                                 *ಸಂಗೀತ ನುಡಿಸುವಾಗ ನಾನೂ ದೇವತೆಯೇ! ನೀನೂ ದೇವತೆಯೇ!* ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಈ ಮಾತುಗಳನ್ನು ಹೇಳಿದವರು ಕಳೆದ ಶತಮಾನದ ವಿಶ್ವವಿಖ್ಯಾತ ಪಿಯಾನೋ ವಾದಕರಾದ ಇಗ್ನೇಸ್ ಪಡೆರೇವೆಸ್ಕಿಯವರು! ಅವರಿಂದ ಹಾಗೆ ಹೇಳಿಸಿಕೊಂಡವರು ಮಹಾನ್ ಸಂಗೀತಗಾರರೇನಲ್ಲ. ಆತ ಒಬ್ಬ ಹತ್ತು ವರ್ಷ ವಯಸ್ಸಿನ ಬಾಲಕ! ಆ ಘಟನೆ ಹೀಗಿದೆ. ಇಗ್ನೇಸರು ವಿಶ್ವವಿಖ್ಯಾತ ಪಿಯಾನೋ ವಾದಕರು. ಬಾಲ್ಯದಿಂದಲೇ ಪಿಯಾನೋ ನುಡಿಸುವುದನ್ನು ತಪಸ್ಸಿನಂತೆ ಅಭ್ಯಾಸ ಮಾಡಿದವರು. ಪಿಯಾನೋವನ್ನು ಗೌರವದಿಂದ ನುಡಿಸುತ್ತಿದ್ದರು. ಶ್ರೋತೃಗಳಿಂದಲೂ ಇದೇ ಗೌರವವನ್ನು ನಿರೀಕ್ಷಿಸುತ್ತಿದ್ದರು. ಸಂಗೀತ ಕಾರ್ಯಕ್ರಮ ನಡೆಯುವಾಗ, ಸಭಿಕರಲ್ಲಿ ಯಾರಾದರೂ ತಮ್ಮತಮ್ಮಲ್ಲೇ ಮಾತಾಡುವುದನ್ನು ಕಂಡರೆ ಅವರು ‘ನಾನು ಪಿಯಾನೋ ನುಡಿಸುವುದರಿಂದ ನಿಮ್ಮ ಮಾತುಕತೆಗೆ ತೊಂದರೆಯಾಗುವುದಾದರೆ, ನಾನು ನುಡಿಸುವುದನ್ನು ನಿಲ್ಲಿಸುತ್ತೇನೆ. ನಿಮ್ಮ ಮಾತುಕತೆ ಮುಗಿದ ನಂತರ ನಾನು ಮುಂದುವರಿಸುತ್ತೇನೆ’ ಎಂದು ಹೇಳಿ ನಿಂತುಬಿಡುತ್ತಿದ್ದರು. ಮಾತಿನಲ್ಲಿ ತೊಡಗಿದ್ದವರು ಪಶ್ಚಾತ್ತಾಪ ವ್ಯಕ್ತಪಡಿಸಿ, ಕ್ಷಮೆ ಕೇಳಿದರೆ ಮಾತ್ರ ಕಾರ್ಯಕ್ರಮ ಮುಂದುವರಿಯುತ್ತಿತ್ತು. ಹೀಗಾಗಿ ಅವರ ಸಂಗೀತ ಕಾರ್ಯಕ್ರಮಗಳು ತುಂಬ ಶಿಸ್ತುಬದ್ಧವಾಗಿ ನಡೆಯುತ್ತಿದ್ದವು.  ಒಂದೂರಿನಲ್ಲಿ ಪಡೆರೇವೆಸ್ಕಿಯವರ ಪಿಯಾನೋ ಕಾರ್ಯಕ್ರಮ ಏರ್ಪಾಡಾಗಿತ್ತು. ಒಬ್ಬ ತಾಯಿ

ದಿನಕ್ಕೊಂದು ಕಥೆ. 370

*🌻ದಿನಕ್ಕೊಂದು ಕಥೆ🌻                                                     ಸ್ವತಂತ್ರದ ಬಗ್ಗೆ ಭಾಷಣ ! ಪಂಜರದಲ್ಲಿ ಸುಖಾಸನ!* ಕುತೂಹಲಕಾರಿಯಾದ ಕತೆಯೊಂದನ್ನು ಕಳೆದ ಶತಮಾನದಲ್ಲಿ ಆಗಿಹೋದ ಮಹಾನ್ ತತ್ತ್ವಜ್ಞಾನಿ ಮತ್ತು ಅಧ್ಯಾತ್ಮ ಗುರುಗಳಾದ ಪೂಜ್ಯ ಓಶೋರವರು ತಮ್ಮ ಉಪನ್ಯಾಸವೊಂದರಲ್ಲಿ ಹೇಳಿದ್ದರು. ಕತೆಯಲ್ಲಿ ಓಶೋ ವಿಶೇಷವಾದ ಗಿಣಿಯೊಂದರ ಬಗ್ಗೆ ಹೇಳಿದ್ದರು. ಆ ವಿಶೇಷವಾದ ಗಿಣಿಯು ಮಹಾರಾಜಬ್ಬರ ಅರಮನೆಯ ಹಜಾರದಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿತ್ತು. ಅದು ಚೆನ್ನಾಗಿ ಮಾತನಾಡುತ್ತಿತ್ತು. ಒಮ್ಮೆ ಸ್ವಾತಂತ್ರ್ಯ ಹೋರಾಟಗಾರ ಸಜ್ಜನರೊಬ್ಬರು ಮಹಾರಾಜರ ಅತಿಥಿಯಾಗಿ ಅರಮನೆಯಲ್ಲಿ ತಂಗಿದ್ದರು. ಆ ಗಿಣಿಯು ಯಾರಾದರೂ ಪಂಜರದ ಬಳಿ ಬಂದಾಗ ‘ಸ್ವತಂತ್ರ ಬೇಕು. ಎಲ್ಲರಿಗೂ ಸ್ವತಂತ್ರ ಬೇಕು’ ಎಂದು ಕಿರುಚುತ್ತಿತ್ತು. ಗಿಣಿಯ ಬಾಯಲ್ಲೂ ಸ್ವತಂತ್ರದ ಮಾತು ಕೇಳಿ ಸಜ್ಜನರಿಗೆ ಸಹಜವಾಗಿಯೇ ರೋಮಾಂಚನ ವಾಯಿತು. ಅಂದು ರಾತ್ರಿ ಅವರು ಏನೋ ಓದುತ್ತಾ ನಡು ರಾತ್ರಿಯವರೆಗೂ ಎಚ್ಚರವಾಗಿದ್ದರು. ನಡುರಾತ್ರಿಯಲ್ಲಿ ಅವರು ತಮ್ಮ ಕೋಣೆಯಿಂದ ಹಜಾರಕ್ಕೆ ನಡೆದು ಬಂದರು. ಹಜಾರ ನಿರ್ಜನವಾಗಿತ್ತು. ಪಂಜರದಲ್ಲಿದ್ದ ಗಿಣಿಯೂ ಎಚ್ಚರವಾಗಿತ್ತು. ಅದು ಸಜ್ಜನರನ್ನು ಕಂಡಾಕ್ಷಣ ‘ಸ್ವತಂತ್ರ ಬೇಕು, ಎಲ್ಲರಿಗೂ ಸ್ವತಂತ್ರ ಬೇಕು’ ಎಂದು ಕಿರುಚಿತು. ಸಜ್ಜನರು ನೇರವಾಗಿ ಪಂಜರದ ಬಳಿ ಹೋದರು. ಪಂಜರದ ಬಾಗಿಲನ್ನು ತೆಗೆದು ‘ಓ ಗಿಣಿಯೇ, ಮಹಾರಾಜರು ನನ್ನನ್ನು ದೂಷ

ದಿನಕ್ಕೊಂದು ಕಥೆ. 369

*🌻ದಿನಕ್ಕೊಂದು ಕಥೆ*🌻                                                           *_ಕರ್ತವ್ಯ ನಿಭಾಯಿಸುವ ಉದ್ದೇಶ_* ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದ ನಂತರ ಒಂದು ಸನ್ನಿವೇಶ ಬರುತ್ತದೆ. ಯುದ್ದದಲ್ಲಿ ಕೌರವರೆಲ್ಲಾ ಸತ್ತು ಹೋದ ನಂತರ ಹಸ್ತಿನಾಪುರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಗಾಂಧಾರಿಯಂತೂ ದುಃಖದ ಮಡುವಿನಲ್ಲಿ ಮುಳುಗಿದ್ದಳು. ಆ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಲು ಶ್ರೀ ಕೃಷ್ಣ ಮತ್ತು ಧರ್ಮರಾಯನು ಹೋಗುತ್ತಾರೆ. ಶ್ರೀ ಕೃಷ್ಣನನ್ನು ನೋಡಿದಾಕ್ಷಣ ಸಿಟ್ಟುಗೊಂಡು ಗಾಂಧಾರಿ ಹೇಳುತ್ತಾಳೆ- "ನನ್ನ ಮಕ್ಕಳ ಸಾವಿಗೆ ನೀನೇ ಕಾರಣ. ನೀನು ಮನಸ್ಸು ಮಾಡಿದ್ದರೆ ಈ ಯುದ್ದ ತಡೆಯಬಹುದಿತ್ತು. ಮಾತುಕತೆಯ ಮೂಲಕ ಸಂಧಾನ ಮಾಡಿಸಬಹುದಿತ್ತು. ಅದಲ್ಲದೆಯೂ ನೀನು ಕೌರವರಿಗೆ ಒಳ್ಳೆಯ ಬುದ್ದಿಯನ್ನು ಕೊಡಬಹುದಿತ್ತು. ಆದರೆ ನೀನೇನನ್ನೂ ಮಾಡದೆ ನನ್ನ ಎಲ್ಲಾ ಮಕ್ಕಳನ್ನು ಸಾಯಲು ಬಿಟ್ಟುಬಿಟ್ಟೆ". ಅದಕ್ಕೆ ಶ್ರೀ ಕೃಷ್ಣ ಪರಮಾತ್ಮನು ಶಾಂತಿಯಿಂದ ಉತ್ತರಿಸುತ್ತಾನೆ- "ಗಾಂಧಾರಿ, ಒಮ್ಮೆ ಶಾಂತಚಿತ್ತದಿಂದ ಯೋಚಿಸು. ನಿನಗೆ ನಾನು ಆರೋಗ್ಯ ಕೊಟ್ಟೆ. ನಿನ್ನ ಪತಿ ಧೃತರಾಷ್ಟ್ರ ಕುರುಡ ಅಂದ ಕಾರಣಕ್ಕೆ ನೀನೂ ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿನ್ನ ಪತಿಯ ಸೇವೆಯನ್ನು ಮಾಡುವುದರಿಂದ ವಂಚಿಸಿಕೊಂಡೆ. ಅಷ್ಟೇ ಅಲ್ಲದೆ ಕೌರವರು ಹುಟ್ಟಿದ ಮೇಲೆ ಕೂಡಾ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡದ್ದರಿಂದ, ಅವರನ್ನು ಸಾಕ

ದಿನಕ್ಕೊಂದು ಕಥೆ. 368

*🌻ದಿನಕ್ಕೊಂದು ಕಥೆ🌻                                    *ಖಂಡಿತವಾಗಿಯೂ ಕಾಪಾಡಿ! ಆದರೆ ಕಾಪಾಡಿದೆವೆಂದು ಕಾಡಬೇಡಿ !* ಕಾಪಾಡುವುದು ಎಂದರೆ ಅರ್ಥವಾಗುತ್ತದೆ. ಯಾರೋ ಅಪಾಯದಲ್ಲಿದ್ದಾಗ, ಪ್ರಾಣ ಕಳೆದುಕೊಳ್ಳುವಂಥ ಆಪತ್ತಿನಲ್ಲಿದ್ದಾಗ, ಅವರ ಸಹಾಯಕ್ಕೆ ಹೋಗುವುದೂ, ಅವರ ಪ್ರಾಣ ಉಳಿಸುವುದೂ ಕಾಪಾಡುವುದು ಎನಿಸಿಕೊಳ್ಳುತ್ತದೆ ಅಲ್ಲವೇ? ಆದರೆ ಕಾಪಾಡಿದೆವೆಂದು ಕಾಡುವುದು ಎಂದರೇನು ಎಂಬುದು ಅರ್ಥವಾಗುವುದಿಲ್ಲ ಅಲ್ಲವೇ? ಇದನ್ನು ವಿವರಿಸುವ ಮುಲ್ಲಾ ನಸರುದ್ದೀನರ ಬದುಕಿನ ಘಟನೆಯೊಂದು ಇಲ್ಲಿದೆ. ಒಮ್ಮೆ ನಸರುದ್ದೀನರು ಸರೋವರದ ಮೆಟ್ಟಿಲುಗಳ ಮೇಲೆ ನಿಂತು ಕೈ ಕಾಲು ತೊಳೆದುಕೊಳ್ಳುತ್ತಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಕ್ಕೆ ಬಿದ್ದುಬಿಟ್ಟರು. ನೀರಿಗೆ ಬಿದ್ದಾಗ ಗಾಬರಿಗೊಂಡ ಅವರು ತಮಗೆ ಈಜು ಬರುತ್ತದೆಂಬುದನ್ನೂ ಮರೆತು ಬಿಟ್ಟರು. ‘ಕಾಪಾಡಿ! ಕಾಪಾಡಿ!’ ಎಂದು ಕೂಗಿಕೊಂಡರು. ಆಗ ಅಲ್ಲಿಯೇ ನಡೆದು ಹೋಗುತ್ತಿದ್ದ ಒಬ್ಬ ಪಂಡಿತರಿಗೆ ಇವರ ಕಿರುಚಾಟ ಕೇಳಿಸಿತು. ಅವರು ಧಾವಿಸಿ ಬಂದು ತಮ್ಮ ಕೈ ಚಾಚಿದರು. ನಸರುದ್ದೀನರಿಗೆ ನೀರಿನಿಂದ ಹೊರಕ್ಕೆ ಬರಲು ಸಹಾಯ ಮಾಡಿದರು. ಆನಂತರ ಪಂಡಿತರಿಗೆ ತಾವು ಸಹಾಯ ಮಾಡಿ ಕಾಪಾಡಿದ್ದು ಊರಿನವರಿಗೆಲ್ಲ ಪರಿಚಿತರಾದ ನಸರುದ್ದೀನರನ್ನು ಎಂಬುದರ ಅರಿವಾಯಿತು. ಅವರ ಮತ್ತು ನಸರುದ್ದೀನರ ನಡುವೆ ಅಂಥ ಮಧುರ ಬಾಂಧವ್ಯವೇನೂ ಇರಲಿಲ್ಲ. ಏಕೆಂದರೆ ಪಂಡಿತ- ಪಂಡಿತರ ನಡುವೆ ಇರಬಹುದಾದಂಥ ಅಹಮ್ಮಿನ ಶೀತಲ ಸಮ

ದಿನಕ್ಕೊಂದು ಕಥೆ. 367

🌻 *ದಿನಕ್ಕೊಂದು ಕಥೆ🌻* ನಾವಿಂದು ವಸ್ತುವಿಗೆ ಬೆಲೆ ಕೊಟ್ಟಿದ್ದೇವೆ, ಆದರೆ ಬದುಕಿಗೆ ಬೆಲೆ ಕೊಟ್ಟಿಲ್ಲ. ವಸ್ತುವೇ ಬದುಕು ಅಂದುಕೊಂಡಿದ್ದೇವೆ. ಒಬ್ಬ ಯುವಕ ಹೊಸ ಬೂಟು ತಂದಾನೆ, ಏನು ಚಂದ ಇವೆ. ಬೆಲೆ ಲಕ್ಷ ರೂಪಾಯಿ, ಮಾವ ಮದುವೆಗೆ ಕೊಡಿಸಿದ್ದು. Made in Italy. ಆದರೆ ಅವು ಕಾಲಿಗೆ ತೊಡಾವು, ಕಾಲಿಗೆ ಬೂಟು ಸರಿಯಾಗಿ ಹೊಂದಾಕೆ ಒಲ್ಲವು. ಆದರೆ ಇವನೇ ಬೂಟಿಗೆ ಕಾಲು ಹೊಂದಿಸ್ಯಾನ, ಬೂಟು ಕಾಲಿಗೆ ಚುಚ್ಚುತಾವೆ, ನಡೆಯೋಕೆ ತ್ರಾಸ್ ಆಗ್ಯಾವ, ಆದ್ರೂ ಇವನು ಬೂಟು ಕಳಚಂಗಿಲ್ಲ. ಏಕೆಂದರೆ ಅವುಗಳ ಬೆಲೆ ಲಕ್ಷ! Made in Italy. ಕಾಲು ಹೇಳ್ತದೆ: "ತಗೆ ಬೂಟನ್ನ ನಾನು ಮುಖ್ಯಾನೋs, ಬೂಟು ಮುಖ್ಯಾನೋs. ಕಾಲು ಇರೋದಿಕ್ಕೆ ಬೂಟು ಇದ್ದಾವೆ, ಬೂಟು ಇರೋದಿಕ್ಕೆ ಕಾಲಿಲ್ಲ ಇದನ್ನು ತಿಳಕೋ" ಬೂಟು ಹೋದಾವು ಮತ್ತೆ ಬಂದಾವು. ಆದರೆ ಕಾಲೇ ಹೋದರೆ? ಕಾಲಿಗೆ ಇರೋ ಬುದ್ಧಿ ತೆಲೆಗೆ ಇಲ್ಲ. ಯಾವುದು ಮುಖ್ಯ ಅಂತ ತಿಳಿದಿಲ್ಲ. ಜೀವನದಲ್ಲಿ ವಸ್ತುಗಳೇ ಮುಖ್ಯ ಅಂದುಕೊಂಡಿದ್ದೇವೆ. ವಸ್ತುಗಳೇ ಜೀವನ ಅಂದುಕೊಂಡಿದ್ದೇವೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು              ಸಂಗ್ರಹ: ವೀರೇಶ್ ಅರಸಿಕೆರೆ.                                                                        ***********************************ನಿನ್ನೆ ಮೊನ್ನೆಯಷ್ಟೇ ನಡೆಯಲು ಕಲಿಯುತ್ತಿದ್ದ ಮಕ್ಕಳು ಅದ್ಹೇಗೆ ಬೆಳೆದು ದೊಡ್ಡವರಾದರೆಂದೇ ಗೊತ್ತಾಗುವು