Posts

Showing posts from September, 2016

ದಿನಕ್ಕೊಂದು ಕಥೆ. 157

🌻🌻 *ದಿನಕ್ಕೊಂದು ಕಥೆ*🌻🌻 ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ  . ಮಾರ್ಗ ಮದ್ಯೆ ರಾಜ ಎಡವಿ ಬೀಳ್ತಾನೆ .ಎಡಗಾಲಿನ ಹೆಬ್ಬೆರಳ ಉಗುರು ಕಿತ್ತು ರಕ್ತ ಸುರಿಯೋಕೆ ಶುರುವಾಗುತ್ತೆ . ರಾಜ ಮಂತ್ರಿಯನ್ನು ಕರೆದು ನೋವಿನಿಂದ ತೋರಿಸುತ್ತಾನೆ ತನಗಾದ ಸ್ಥಿತಿಯನ್ನು .   ಮಂತ್ರಿ ಏನು ಆಗಿಯೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸುತ್ತ ಬನ್ನಿ  ಪ್ರಭುಗಳೇ  ಆಗೋದೆಲ್ಲ ಒಳ್ಳೆಯದಕ್ಕೆ ಅಂತ ಹೇಳ್ತಾನೆ .ರಾಜ ಕೆಂಡಮಂಡಲನಾಗಿ ...ನಕ್ಕನ್ ನಾನು ರಾಜ ನನ್ನ ಕಾಲು  ಕಿತ್ತು ರಕ್ತ ಸುರಿದರೆ ಒಳ್ಳೆಯದಕ್ಕೆ ಅಂತಿಯ ನನ್ನ ಅನ್ನ  ತಿಂದು  ನಿನ್ನಂತ ಮಂತ್ರಿಯ ಅವಶ್ಯಕತೆ ನನಗಿಲ್ಲ ಎಂದು ಅಲ್ಲೇ ಪಕ್ಕದಲ್ಲ್ಲಿದ್ದ ಹಾಳು ಬಾವಿಗೆ  ಆತನನ್ನು ತಳ್ಳಿ ಮುಂದಕ್ಕೆ ಸಾಗುತ್ತಾನೆ  . ಕೆಲವೇ ಪರ್ಲಾಂಗು ತಲುಪುವಷ್ಟರಲ್ಲಿ ಕಾಡಿನ ಜನರ ಗುಂಪೊಂದು  ರಾಜನನ್ನು  ಸುತ್ತುವರೆದು ಹೊತ್ತೊಯ್ಯುತ್ತಾರೆ.ಆ ದಿನ ಕಾಡಿನ ದೇವಿಯ ಉತ್ಸವ ಇದ್ದು ದೇವಿಗೆ ನರಬಲಿ ಕೊಡಲು ಮನುಷ್ಯರನ್ನು ಹುಡುಕಿಕೊಂಡು ಬಂದಿದ್ದ ಕಾಡಿನ ಜನಗಳ ಕೈಗೆ ಒಂಟಿಯಾಗಿದ್ದ ರಾಜ ಅನಾಯಾಸವಾಗಿ ಸಿಕ್ಕಿ ಬಿಟ್ಟಿದ್ದ . ಸರಿ ಬಲಿ ಪೂಜೆ ಮಾಡಿ ಇನ್ನೇನು ರಾಜನನ್ನು ಕಡಿಯಬೇಕು ಕತ್ತಿ  ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ  ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್

ದಿನಕ್ಕೊಂದು ಕಥೆ. 156

🌻🌻 *ದಿನಕ್ಕೊಂದು ಕಥೆ* 🌻🌻                                        *ತಕ್ಷಣದ ಪ್ರತಿಕ್ರಿಯೆ* ಅದೊಂದು ಸುಂದರವಾದ ಕೊಳ­ವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದು­ಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು. ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯ­ಮಾನಗಳ ಬಗ್ಗೆ ಮಾಹಿತಿ ಪಡೆಯು­ತ್ತಿತ್ತು.  ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿ­ಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು. ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು.  ಅದಕ್ಕೆ ಕೋಪ ತಡೆದುಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾ­ದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು. ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕ

ದಿನಕ್ಕೊಂದು ಕಥೆ. 155

ಪೂರ್ತಿ ಓದಿ ಬ್ಯೂಟಿಫುಲ್ ಮನಸುಗಳಿಗೆ ಹಂಚಿಕೊಳ್ಳಿ.. 50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು. ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ. 5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು. 4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿ

ದಿನಕ್ಕೊಂದು ಕಥೆ. 154

🌻🌻 *ದಿನಕ್ಕೊಂದು ಕಥೆ*🌻🌻                                    💐 *ನಾಣ್ಯದ ಎರಡು ಮುಖಗಳು*💐 ಇದು ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಗವರ್ನರ ಅಗಿದ್ದ ಮಾರ್ಕ ವೈಟ್ ಅವರ ಬದುಕಿನಲ್ಲಿ ಆದದ್ದು ಎಂದು ಹೇಳುತ್ತಾರೆ. ಅದು ಸತ್ಯ ಹೌದೋ, ಅಲ್ಲವೋ ಎನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ. ಆದರೂ ಕಥೆಯಾಗಿಯೂ ಈ ಘಟನೆ ಚೆನ್ನಾಗಿದೆ. ಮಾರ್ಕ ವೈಟ್‌ ಅವರ ಜವಾಬ್ದಾರಿ ದೊಡ್ಡದು. ಸಾರ್ವಜನಿಕ ಕೆಲಸಗಳಲ್ಲಿ ತೊಡಗಿದ್ದ ಅವರಿಗೆ ಮನೆಯಲ್ಲಿ ವಿರಾಮವಾಗಿ ಕುಳಿತು ಮಾತನಾಡಲು ಸಮಯವೇ ದೊರಕುತ್ತಿರಲಿಲ್ಲ. ಅವರ ಹೆಂಡತಿ ಒಂದು ದಿನವಾದರೂ ಸ್ವಲ್ಪ ಬಿಡುಗಡೆ ಪಡೆದು ಮನೆಯಲ್ಲಿ ಆರಾಮ­ವಾಗಿರುವಂತೆ ಒತ್ತಾಯಿ­ಸುತ್ತಿದ್ದರು. ಅಂತೂ ಒಂದು ದಿನ ಕಚೇರಿಗೆ ಹೋಗದೇ ಇಡೀ ದಿನ ಹೆಂಡತಿಯ ಜೊತೆಗೆ ಸಮಯ ಕಳೆಯು­ವುದಾಗಿ ತೀರ್ಮಾನಿಸಿದರು. ಅಂದು ಮನೆಯಲ್ಲೇ ಉಳಿದು ಹೆಂಡತಿಯ ಜೊತೆಗೆ ಊಟ ಮಾಡಿದರು. ವೈಟ್ ಒಂದು ವಿಚಾರ ಮಾಡಿದರು.  ಸಂಜೆಯ ಹೊತ್ತಿಗೆ ಹೆಂಡತಿಯನ್ನು ಕರೆದುಕೊಂಡು ಕಾರಿ­ನಲ್ಲಿ ಹೊರಟರು. ಡ್ರೈವರ್‌ನಿಗೆ ಬೇಡ­ವೆಂದು ಹೇಳಿ ತಾವೇ ಕಾರು ನಡೆಸಿದರು. ಗಂಡ-ಹೆಂಡತಿ ಇಬ್ಬರೇ ಹರಟೆ ಹೊಡೆಯುತ್ತ, ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುತ್ತ ನಿಧಾನ­ವಾಗಿ ಸಾಗಿ­ದರು. ಯಾವ ವಿಶೇಷವಾದ ಕೆಲಸ­ವಿಲ್ಲದ್ದರಿಂದ ನಗರ ಪ್ರದೇಶ­ವನ್ನು ದಾಟಿ ಪಕ್ಕದ ಊರಿನ ಕಡೆಗೆ ನಡೆದರು. ಸ್ವಲ್ಪ ದೂರ ಸಾಗಿದಾಗ ಅವರ ಹೆಂಡತಿಯ ಕಣ್ಣುಗಳು ಅಗಲವಾದವು, ಅವುಗಳಲ್ಲಿ ಕಾಂತಿ ತುಂಬಿತು. ಮ

ದಿನಕ್ಕೊಂದು ಕಥೆ. 153

🌻🌻 *ದಿನಕ್ಕೊಂದು ಕಥೆ*🌻🌻                                         💐 *ಕಾಣದ ಕಣ್ಣು*💐 ರಾಜಪ್ಪನಿಗೆ ಆಗಲೇ ಸುಮಾರು ಎಪ್ಪತ್ತು ವರ್ಷ. ಹೆಂಡತಿ ತೀರಿ­ಹೋಗಿ­ದ್ದಾಳೆ.  ಮಗ, ಸೊಸೆ ಬೇರೆ ಊರಿನಲ್ಲಿ ನೆಲೆಯಾಗಿದ್ದಾರೆ. ಈತ ಒಬ್ಬನೇ ತನ್ನೂರಿನ ದೊಡ್ಡ ಮನೆಯಲ್ಲಿ ಉಳಿದಿ­ದ್ದಾನೆ. ಯಾರೋ ಬಂದು ದಿನವೂ ಅಡುಗೆ ಮಾಡಿಕೊಟ್ಟು ಹೋಗುತ್ತಾರೆ, ಮನೆಯಲ್ಲಿ ಆಳುಗಳಿದ್ದಾರೆ. ಈತ­­ನದು ಭಾರಿ ಶ್ರೀಮಂತರ ಮನೆತನ. ಹೊಲದ ಉತ್ಪನ್ನ ತುಂಬ ದೊಡ್ಡದು. ಅದ­ಕ್ಕೆಂದೇ ಆತನಿಗೆ ಊರು ಬಿಟ್ಟು ಹೋಗಲು ಮನಸ್ಸಿಲ್ಲ. ಈ ಸಂದರ್ಭದಲ್ಲಿ ರಾಜಪ್ಪನ ಕಣ್ಣು ಮಂದವಾಗತೊಡಗಿದವು.  ಯಾವುದೂ ಸ್ಪಷ್ಟವಾಗಿ ಕಾಣು­ತ್ತಿಲ್ಲ. ಹೀಗೆಯೇ ಮುಂದುವರೆದರೆ ಆರು ತಿಂಗಳಲ್ಲಿ ತಾನು ಪೂರ್ತಿ ಅಂಧನೇ ಆಗಿ­ಬಿಡು­ತ್ತೇನೆಂಬ ಭಯ ಕಾಡತೊ­ಡಗಿತು.  ಕಂಡವರನ್ನೆಲ್ಲ ಪರಿಹಾರಕ್ಕಾಗಿ ಕೇಳಿದ.  ಆಗ ಯಾರೋ ಒಬ್ಬರು ದಿನಕರ ಪಂಡಿತನ ಬಗ್ಗೆ ಹೇಳಿದರು. ಅವನು ಕಣ್ಣಿನ ದೋಷ­ವನ್ನು ಖಂಡಿತ­ವಾಗಿಯೂ ಪರಿಹರಿಸುತ್ತಾನೆ.  ಆದರೆ ಅವನ ಫೀಸು ಬಹಳ ಹೆಚ್ಚು ಎಂದರು. ರಾಜಪ್ಪ ದಿನಕರ ಪಂಡಿತನನ್ನು ಕರೆಸಿ ಮಾತ­ನಾಡಿದ. ಆತನೂ ಅವನು ಕಣ್ಣಿನ ಪರೀಕ್ಷೆ ಮಾಡಿ ಆರು ತಿಂಗಳಿನಲ್ಲಿ ಸಂಪೂರ್ಣ ಗುಣ­ವಾಗುವ ಭರವಸೆ­ನೀಡಿದ.  ನಿರೀಕ್ಷಿಸಿದಂತೆ ಅವನ ಫೀಸೂ ಭಾರಿಯಾಗಿಯೇ ಇತ್ತು. ಕಣ್ಣು ಮುಖ್ಯ­ವಲ್ಲವೇ? ರಾಜಪ್ಪ ಫೀಸನ್ನು ಒಪ್ಪಿದ. ದಿನಕರ ಪಂಡಿತ ಹೇಳಿದ, ‘ನನಗೆ ಮೊದಲು ಇಪ್ಪತ್ತು ಸಾವಿರ ರೂಪಾಯಿ ಕೊಡಬೇಕು. ಆ

ದಿನಕ್ಕೊಂದು ಕಥೆ. 152

ಒಂದು ಸಣ್ಣ ಕಥೆ : ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು.. ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... ಮಂತ್ರಿ ಹೇಳಿದ 'ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬ

ದಿನಕ್ಕೊಂದು ಕಥೆ. 151

🌻🌻 *ದಿನಕ್ಕೊಂದು ಕಥೆ🌻🌻                                            💐ಚೈತನ್ಯರ ತ್ಯಾಗ*💐 ಚೈತನ್ಯ ಮಹಾಪ್ರಭು ಬಂಗಾಳ ಹಾಗೂ ನಮ್ಮ ದೇಶ ಕಂಡ ಮಹಾನ್ ಸಂತ, ಭಕ್ತಿಪಂಥದ ಬಹುದೊಡ್ಡ ಪ್ರಚಾರಕ, ಪರಮ ದೈವಭಕ್ತ ಮತ್ತು ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ವಿದ್ವಾಂಸ.  ಒಂದು ದಿನ ಬೇರೆ ಊರಿಗೆ ಪ್ರವಾಸ ಹೊರಟಿದ್ದ ಚೈತನ್ಯರು ನದಿಯನ್ನು ದಾಟಬೇಕಿತ್ತು. ಅಂಬಿಗ ನಾವೆಯನ್ನು ದಂಡೆಗೆ ತಂದೊಡನೆ ಚೈತನ್ಯರು ಏರಿ ಕುಳಿತರು. ಸ್ವಲ್ಪ ಸಮಯದಲ್ಲಿ ನಾವೆ ಭರ್ತಿ­ಯಾಯಿತು. ನಾವೆ ಹೊರಟಿತು. ಅಂಬಿಗನಿಗೆ ನಾವೆಯಲ್ಲಿದ್ದ ಬಹುತೇಕ ಜನ ಪರಿಚತರೇ. ಅವನು ಅವರೊಂದಿಗೆ ತಮಾಷೆ ಮಾಡುತ್ತ ಹರಟೆ ಹೊಡೆ­ಯುತ್ತಿದ್ದ. ಆಗ ಯಾರೋ ಚೈತನ್ಯರ ಹೆಗಲಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಅಲ್ಲಿ ಗದಾಧರ ನಿಂತಿದ್ದಾನೆ. ಗದಾಧರ ಚೈತನ್ಯರ ಬಾಲ್ಯಸ್ನೇಹಿತ. ಇಬ್ಬರೂ ಜೊತೆಗೆ ಶಾಲೆಗೆ ಹೋದವರು, ಆಟ ಆಡಿದ­ವರು. ಈಗ ಅವನನ್ನು ಎಷ್ಟೋ ವರ್ಷಗಳ ನಂತರ ಕಾಣುತ್ತಿದ್ದಾರೆ. ಒಬ್ಬರನೊಬ್ಬರು ಅಪ್ಪಿಕೊಂಡರು, ಹಳೆಯ ನೆನಪುಗಳನ್ನು ತಾಜಾ ಮಾಡಿ­ಕೊಂಡರು. ಗದಾಧರ ಕೇಳಿದ, ‘ಚೈತನ್ಯ ಈಗ ಏನು ಮಾಡುತ್ತಿದ್ದೀ? ನಾವು ಗುರು­ಕುಲಕ್ಕೆ ಹೋಗುತ್ತಿದ್ದಾಗ ನೀನು ಅತ್ಯಂತ ಬುದ್ಧಿವಂತನಾಗಿದ್ದಿ. ನ್ಯಾಯಶಾಸ್ತ್ರದ ಮೇಲೊಂದು ಗ್ರಂಥ ರಚನೆ­ಮಾಡು­ತ್ತೇನೆಂದು ಹೇಳುತ್ತಿದ್ದಿ. ಗುರುಗಳು ಕೂಡ ನಿನಗೆ ಆಶೀರ್ವಾದ ಮಾಡಿ­ದ್ದರಲ್ಲ. ಆ ಗ್ರಂಥ ರಚನೆಯಾಯಿತೇ?’ ಚೈತನ್ಯರು ಮುಗುಳ