Posts

Showing posts from May, 2017

ದಿನಕ್ಕೊಂದು ಕಥೆ. 436

*🌻ದಿನಕ್ಕೊಂದು ಕಥೆ🌻                                           ಮಾತೃ ದಿವಸ - ತಂದೆಯೂ ಅಮ್ಮನ ಪಾತ್ರವನ್ನು ವಹಿಸಬಲ್ಲನೇ? - ಒಂದು ಹೃದಯಸ್ಪರ್ಶಿ ಪ್ರಸಂಗ* ಅಂತರ ರಾಷ್ಟ್ರೀಯ ಶಾಲೆಯೊಂದರಲ್ಲಿ ಅದರ ತೋಟದ ಮಾಲಿ -  ಗಂಗಾದಾಸನು ಬಿಸಿಲಿನ ಝಳವನ್ನು ಲೆಕ್ಕಿಸದೇ ಗಿಡಗಳನ್ನು ಒಪ್ಪ ಮಾಡುತ್ತಿದ್ದನು. "ಗಂಗಾದಾಸ್, ತಕ್ಷಣವೇ ನಿನ್ನನ್ನು ಪ್ರಿನ್ಸಿಪಾಲ್ ಮೇಡಂ ಬರಲು ತಿಳಿಸಿದ್ದಾರೆ", ಎಂಬ ಜೋರಿನ ಧ್ವನಿಯನ್ನು ಕೇಳಿ ಗಂಗಾದಾಸ್ ಕಂಗಾಲಾದ. ಕೂಡಲೇ ಎದ್ದು ತನ್ನ ಕೈಗಳನ್ನು ತೊಳೆದುಕೊಂಡು ಪ್ರಾಂಶುಪಾಲರ ಕೊಠಡಿಯ ಕಡೆಗೆ ಅವರು ತನ್ನನ್ನು ಏತಕ್ಕೆ ಕರೆದಿರಬಹುದು, ತಾನು ಏನು ತಪ್ಪನ್ನು ಮಾಡಿರಬಹುದು ಎಂದು ಏರುತ್ತಿರುವ ಹೃದಯ ಬಡಿತವನ್ನೂ ಲೆಕ್ಕಿಸದೇ ಧಾವಿಸಿದನು. "ಮೇಡಂ, ನೀವು ನನ್ನನ್ನು ಕರೆದಿರಂತೆ?" "ಒಳಗೆ ಬಾ" ಎಂಬ ಅಧಿಕಾರಯುತ ಹಾಗೂ ಕರ್ಕಶ ಧ್ವನಿಯು ಗಂಗಾದಾಸನನ್ನು ಮತ್ತಷ್ಟು ಅಸ್ಥಿರನನ್ನಾಗಿ ಮಾಡಿತು. ಪ್ರಾಂಶುಪಾಲರು ಮೇಜಿನ ಮೇಲೆ ಇದ್ದ ಒಂದು ಕಾಗದದೆಡೆಗೆ ಕೈ ತೋರಿಸುತ್ತಾ, "ಅದರಲ್ಲಿರುವುದನ್ನು ಓದು" ಎಂದರು. "ಮೇಡಂ, ನಾನು ಅನಕ್ಷರಸ್ತ, ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ. ಮೇಡಂ, ನಾನೇನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಮುಂದೆ ನಾನು ತಪ್ಪು ಮಾಡುವುದಿಲ್ಲ, ನನಗೆ ಮತ್ತೊಂದು ಅವಕಾಶವನ್ನು ನೀಡಿ..... ನನ್ನ ಮಗಳು ಈ ಶಾಲೆಯಲ್ಲಿ

ದಿನಕ್ಕೊಂದು ಕಥೆ. 435

*🌻ದಿನಕ್ಕೊಂದು ಕಥೆ🌻                                                  ಈ ಕ್ಷಣ ಶಾಶ್ವತವಲ್ಲ.* ಒಬ್ಬ ವ್ಯಕ್ತಿ ಜ಼ೆನ್ ಗುರುಗಳಲ್ಲಿಗೆ ಬಂದ. "ಗುರೂಜಿ, ಬದುಕಿನ ಯಾವ ಜಂಜಾಟಗಳೂ ನನ್ನನ್ನು ತಾಕಬಾರದು. ಯಾವ ಖುಷಿಯೂ ನನ್ನ ತಲೆಗೇರಬಾರದು. ಸದಾಕಾಲ ಸಮಚಿತ್ತದಿಂದ ಬದುಕಬೇಕೆಂದರೆ ಏನು ಮಾಡಬೇಕು?" ಎಂದು ಕೇಳಿಕೊಂಡ. ಆಗ ಜ಼ೆನ್ ಗುರು ಹೇಳಿದ - "ತುಂಬಾ ಸುಲಭ. ಒಂದೇ ಒಂದು ಮಂತ್ರವನ್ನು ನೀನು ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು". "ಸಮಚಿತ್ತ ಗಳಿಸುವುದು ಅಷ್ಟೊಂದು ಸುಲಭವೇ? ಹಾಗಾದರೆ ಆ ಮಂತ್ರವನ್ನು ನನಗೆ ದಯಪಾಲಿಸು". "ಈ ಕ್ಷಣ ಶಾಶ್ವತವಲ್ಲ" ಎನ್ನುತ್ತಾರೆ ಜ಼ೆನ್ ಗುರು. "ಹಾಗೆಂದರೆ?" "ಈ ವಾಕ್ಯಕ್ಕೆ ಎಂಥಾ ಶಕ್ತಿಯಿದೆ ಗೊತ್ತೇ? ಸಂತೋಷದಲ್ಲಿರುವವನಿಗೆ ಎಚ್ಚರಿಕೆಯನ್ನು, ದುಃಖದಲ್ಲಿರುವವನಿಗೆ ಸಮಾಧಾನವನ್ನು ಕೊಡುವ ಏಕೈಕ ವಾಕ್ಯ ಇದು. ನೀನು ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ಈ ವಾಕ್ಯವನ್ನು ಮರೆಯಬೇಡ. ಏಕೆಂದರೆ, ಸಂತೋಷ ಶಾಶ್ವತವಲ್ಲ.  ಹಾಗೆಯೇ ಕಷ್ಟದಲ್ಲಿದ್ದಾಗ ಈ ಮಾತನ್ನು ನೆನಪು ಮಾಡಿಕೊ. ಯಾಕೆ ಗೊತ್ತೇ? ನಿನ್ನ ಕಷ್ಟಗಳೂ ಕ್ಷಣಿಕವಾದವು. ಎಲ್ಲ ಸಮಸ್ಯೆಗೂ ಪರಿಹಾರವಿರುತ್ತದೆ. ಸಮಚಿತ್ತದ ಬದುಕಿಗೆ ಇದಕ್ಕಿಂತ ಬೇರೆ ಪಾಠ ಬೇಕೇ ನಿನಗೆ?" ಬದುಕೇ ಕ್ಷಣಿಕ ಎಂದ ಮೇಲೆ ಕಷ್ಟ-ಸುಖಗಳು ಶಾಶ್ವತವೇ? ಜೀವನ ಸುಖಕರವಾಗಿದ್ದಾಗ ಅದನ್ನು ಅನುಭ

ದಿನಕ್ಕೊಂದು ಕಥೆ. 434

*🌻ದಿನಕ್ಕೊಂದು ಕಥೆ🌻                                           ಬದುಕಿನ ಆಟ ಬದಲಾಯಿಸಿದ ಒಂದು ಪುಟ್ಟ ಕಾದಾಟ!* ಒಂದು ಪುಟ್ಟ ಕಾದಾಟವೇ ಬದುಕಿನ ಆಟ ಬದಲಾಗಲು ಕಾರಣವಾಯಿತು! ಸಾಮಾನ್ಯ ಬಾಲಕನೊಬ್ಬ ಮಹಾನುಭಾವನಾಗಲು ಕಾರಣವಾಯಿತು! ಅದು ಹೀಗಿದೆ. ಕಳೆದ ಶತಮಾನದಲ್ಲಿ ಜರ್ಮನಿಯ ಪುಟ್ಟ ಪಟ್ಟಣವೊಂದರ ಬೀದಿಯಲ್ಲಿ ಇಬ್ಬರು ಬಾಲಕರು ಆಟವಾಡುತ್ತಿದ್ದರು. ಒಬ್ಬಾತ ಶ್ರೀಮಂತರ ಮನೆಯವನು. ಅಮೂಲ್ಯವಾದ ಉಡುಗೆ- ತೊಡುಗೆಗಳನ್ನು ಧರಿಸಿದ್ದ. ಮೊದಲಿನಿಂದಲೂ ಪುಷ್ಟಿಕರವಾದ ಆಹಾರ ಸೇವಿಸುತ್ತಾ ಬಂದವನಾದುದರಿಂದ ಗಟ್ಟಿಮುಟ್ಟಾದ ಮೈಕಟ್ಟು ಹೊಂದಿದವನಾಗಿದ್ದ. ಆದರೆ ಮತ್ತೊಬ್ಬ ಬಾಲಕ ಬಡವರ ಮನೆಯವನು. ಹರಕಲು ಬಟ್ಟೆ, ಬಡಕಲು ದೇಹ. ನಗು-ನಗುತ್ತಾ ಆಡಿಕೊಂಡಿದ್ದ ಅವರಿಬ್ಬರ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಮನಸ್ತಾಪ ಉಂಟಾಯಿತು. ಇಬ್ಬರೂ ಒರಟೊರಟಾಗಿ ಮಾತನಾಡಿಕೊಂಡರು. ಕೊಂಚ ಹೊತ್ತಿನಲ್ಲಿ ಬಾಯಿ ಮಾತಿನಲ್ಲಿದ್ದ ಸಿಟ್ಟು ಸೆಡವುಗಳು ಮೈ-ಕೈಗಳಿಗೆ ಬಂದವು. ಇಬ್ಬರೂ ಹೊಡೆದಾಡಿಕೊಳ್ಳತೊಡಗಿದರು. ಇಬ್ಬರೂ ಆವೇಶದಲ್ಲಿದ್ದರು. ಮುಷ್ಠಿ ಕಾಳಗವು ಜಟ್ಟಿ ಕಾಳಗವಾಗಿ ಬದಲಾಯಿತು. ವೀರಾವೇಶದಿಂದಲೇ ಹೊಡೆದಾಡಿದರು. ಆದರೆ ಸಿರಿವಂತ ಬಾಲಕ ದೃಢಕಾಯನಾದುದರಿಂದ ಕಾಳಗದಲ್ಲಿ ಆತನ ಕೈ ಮೇಲಾಯಿತು. ಆತ ಮತ್ತೊಬ್ಬನನ್ನು ಚೆನ್ನಾಗಿಯೇ ಹೊಡೆದುರುಳಿಸಿದ. ಕೆಳಗೆ ಬೀಳಿಸಿದ. ‘ನನ್ನ ತಂಟೆಗೆ ಬಂದರೆ ಹುಶಾರ್! ನಿನ್ನನ್ನು ಹುಡಿ-ಹುಡಿ ಮಾಡುತ್ತೇನೆ’ಎಂದು ಅಬ್ಬರಿಸಿ ನಿಂತುಕ

ದಿನಕ್ಕೊಂದು ಕಥೆ. 433

*🌻ದಿನಕ್ಕೊಂದು ಕಥೆ🌻                 ಹೊಗಳುವುದನ್ನು ಕಲಿತವರು ತಂಗಳನ್ನ ತಿನ್ನಬೇಕಾಗಿಲ್ಲ !* ಇದೇನಿದು? ಹೊಗಳುವಿಕೆಗೂ ತಂಗಳನ್ನಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎನಿಸುತ್ತದೆಯೇ? ಕ್ರಿ.ಪೂ. 4ನೆಯ ಶತಮಾನದಲ್ಲಿ ನಡೆದ ಒಂದು ಪ್ರಸಂಗವು ಮೇಲಿನ ಮಾತುಗಳನ್ನು ಎತ್ತಿ ತೋರಿಸುತ್ತದೆ. ಆಗ ಗ್ರೀಸ್‌ನಲ್ಲಿ ಡಯೋಜಿನಿಸ್ ಎಂಬ ತತ್ತ್ವಜ್ಞಾನಿ ಇದ್ದರು. ಸರಳ ಜೀವನದ ಉದಾತ್ತ ಚಿಂತನೆಯ ಡಯೋಜಿನಿಸ್ ಆಗಿನ ಕಾಲದ ಸಾಧಕರಿಗೆ ಮಾರ್ಗದರ್ಶಿಯಾಗಿದ್ದರು. ಅಧಿಕಾರದಲ್ಲಿರುವವರಿಂದ ಎಂದೂ ಏನನ್ನೂ ಅಪೇಕ್ಷಿಸದ ಅವರು ಅಧಿಕಾರದಲ್ಲಿರುವವರನ್ನು ಟೀಕಿಸಲು, ಅವರ ತಪ್ಪುಗಳನ್ನು ತಿದ್ದಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಆದರೆ ಡಯೋಜಿನಿಸ್‌ರ ಕಟುಟೀಕೆಗಳು ಕುರ್ಚಿಯಲ್ಲಿ ಕುಳಿತವರಿಗೆ ಹಿಡಿಸುತ್ತಿರಲಿಲ್ಲ. ಹಾಗಾಗಿ ಅಧಿಕಾರಸ್ಥರು ಡಯೋಜಿನಿಸ್‌ರಿಂದ ದೂರವೇ ಉಳಿಯುತ್ತಿದ್ದರು. ಅದೇ ಸಮಯದಲ್ಲಿ ಅರಿಸ್ಟಿಪ್ಪಸ್ ಎಂಬ ಮತ್ತೊಬ್ಬ ತತ್ತ್ವಜ್ಞಾನಿ ವಿದ್ವಾಂಸರು ಇದ್ದರು. ಅವರು ತತ್ತ್ವಜ್ಞಾನಕ್ಕಿಂತ ಹೆಚ್ಚಾಗಿ ಕುರ್ಚಿಯಲ್ಲಿ ಕುಳಿತಿರುವವರ ಮರ್ಜಿಯನ್ನನುಸರಿಸಿ ನಡೆಯುವವರಾಗಿದ್ದರು. ಅಧಿಕಾರದಲ್ಲಿದ್ದವರನ್ನು ‘ನೀನೇ ಇಂದ್ರ, ನೀನೇ ಚಂದ್ರ’ಎಂದೆಲ್ಲ ಹೊಗಳುತ್ತಿದ್ದರು. ಹಾಗೆ ಮಾಡಿ ಸಾಕಷ್ಟು ಹಣ ಗಳಿಸಿಕೊಳ್ಳುತ್ತಿದ್ದರು. ಸಿರಿವಂತ ಜೀವನ ನಡೆಸುತ್ತಿದ್ದರು. ಸಾರ್ವಜನಿಕ ಚರ್ಚೆಗಳಲ್ಲಿ ಅರಿಸ್ಟಿಪ್ಪಸ್‌ರು ಹಾಜರಾಗುತ್ತಿದ್ದರು. ರಾಜರ ಪರವಾಗಿ ವಾದಿಸುತ್ತಿದ್ದರು. ತ

ದಿನಕ್ಕೊಂದು ಕಥೆ. 432

*🌻ದಿನಕ್ಕೊಂದು ಕಥೆ🌻                               ಸಾವರ್ಕರ್ ಎಂಬ ಸ್ಪೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!* ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. ‘ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್‌ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ ‘ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. ‘ಅಮ್ಮಾ? ಛಾಫೇಕರ್ ಸಹೋದರರು ಮಾಡಿದ್ದು ‘ಕೊಲೆ’ಯೋ, ‘ಸಂಹಾರ’ವೋ, ನಾವು ‘ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್ ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್‌ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?’ ಒಂ