ದಿನಕ್ಕೊಂದು ಕಥೆ. 435

*🌻ದಿನಕ್ಕೊಂದು ಕಥೆ🌻                                                  ಈ ಕ್ಷಣ ಶಾಶ್ವತವಲ್ಲ.*

ಒಬ್ಬ ವ್ಯಕ್ತಿ ಜ಼ೆನ್ ಗುರುಗಳಲ್ಲಿಗೆ ಬಂದ. "ಗುರೂಜಿ, ಬದುಕಿನ ಯಾವ ಜಂಜಾಟಗಳೂ ನನ್ನನ್ನು ತಾಕಬಾರದು. ಯಾವ ಖುಷಿಯೂ ನನ್ನ ತಲೆಗೇರಬಾರದು. ಸದಾಕಾಲ ಸಮಚಿತ್ತದಿಂದ ಬದುಕಬೇಕೆಂದರೆ ಏನು ಮಾಡಬೇಕು?" ಎಂದು ಕೇಳಿಕೊಂಡ.

ಆಗ ಜ಼ೆನ್ ಗುರು ಹೇಳಿದ - "ತುಂಬಾ ಸುಲಭ. ಒಂದೇ ಒಂದು ಮಂತ್ರವನ್ನು ನೀನು ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು". "ಸಮಚಿತ್ತ ಗಳಿಸುವುದು ಅಷ್ಟೊಂದು ಸುಲಭವೇ? ಹಾಗಾದರೆ ಆ ಮಂತ್ರವನ್ನು ನನಗೆ ದಯಪಾಲಿಸು".
"ಈ ಕ್ಷಣ ಶಾಶ್ವತವಲ್ಲ" ಎನ್ನುತ್ತಾರೆ ಜ಼ೆನ್ ಗುರು.
"ಹಾಗೆಂದರೆ?"
"ಈ ವಾಕ್ಯಕ್ಕೆ ಎಂಥಾ ಶಕ್ತಿಯಿದೆ ಗೊತ್ತೇ? ಸಂತೋಷದಲ್ಲಿರುವವನಿಗೆ ಎಚ್ಚರಿಕೆಯನ್ನು, ದುಃಖದಲ್ಲಿರುವವನಿಗೆ ಸಮಾಧಾನವನ್ನು ಕೊಡುವ ಏಕೈಕ ವಾಕ್ಯ ಇದು. ನೀನು ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ಈ ವಾಕ್ಯವನ್ನು ಮರೆಯಬೇಡ. ಏಕೆಂದರೆ, ಸಂತೋಷ ಶಾಶ್ವತವಲ್ಲ.  ಹಾಗೆಯೇ ಕಷ್ಟದಲ್ಲಿದ್ದಾಗ ಈ ಮಾತನ್ನು ನೆನಪು ಮಾಡಿಕೊ. ಯಾಕೆ ಗೊತ್ತೇ? ನಿನ್ನ ಕಷ್ಟಗಳೂ ಕ್ಷಣಿಕವಾದವು. ಎಲ್ಲ ಸಮಸ್ಯೆಗೂ ಪರಿಹಾರವಿರುತ್ತದೆ. ಸಮಚಿತ್ತದ ಬದುಕಿಗೆ ಇದಕ್ಕಿಂತ ಬೇರೆ ಪಾಠ ಬೇಕೇ ನಿನಗೆ?" ಬದುಕೇ ಕ್ಷಣಿಕ ಎಂದ ಮೇಲೆ ಕಷ್ಟ-ಸುಖಗಳು ಶಾಶ್ವತವೇ? ಜೀವನ ಸುಖಕರವಾಗಿದ್ದಾಗ ಅದನ್ನು ಅನುಭವಿಸಬೇಕು. ಹಾಗೆಯೇ ಕಷ್ಟಗಳು ಎದುರಾದಾಗ ಭರವಸೆ ಕಳೆದುಕೊಳ್ಳದೆ ಸಮಾಧಾನ ಹೊಂದಬೇಕು.


ಆಧಾರ : ಭೋದಿ ವೃಕ್ಷ.
ಕೃಪೆ :ಕಿಶೋರ್.                               ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059