Posts

Showing posts from December, 2016

ದಿನಕ್ಕೊಂದು ಕಥೆ. 260

*🌻ದಿನಕ್ಕೊಂದು ಕಥೆ🌻                                                  *ಆಕರ್ಷಣೆಗಳ ಸೆಳೆತ* ಇದು ಬಹುಸುಂದರವಾದ ಜಾನಪದ ಕಥೆ. ಒಂದು ನಗರದಲ್ಲಿ ಆರು ಜನ ತರುಣ ಸ್ನೇಹಿತರಿದ್ದರು. ಅವರೆಲ್ಲ ಸೇರಿ ಒಂದು ವ್ಯಾಪಾರ ಮಾಡಬೇಕೆಂದು ಚಿಂತಿಸು­ತ್ತಿದ್ದರು. ಆದರೆ, ತಮ್ಮ ನಗರದಲ್ಲಿ ಆ ವ್ಯವಹಾರಕ್ಕೆ ಅವಕಾಶವಿದೆಯೇ ಎಂದು ಮಾರ್ಗದರ್ಶನ ಪಡೆಯಲು ಹಿರಿಯ­ರೊಬ್ಬರ ಬಳಿಗೆ ಹೋದರು. ಅವರು, ‘ನಿಮಗೆ ಈ ನಗರಕ್ಕಿಂತ ಇಲ್ಲಿಂದ ಐವತ್ತು ಮೈಲಿ ದೂರದಲ್ಲಿರುವ ಇನ್ನೊಂದು ನಗರ ವ್ಯಾಪಾರಕ್ಕೆ ತುಂಬ ಸೂಕ್ತ. ಅಲ್ಲಿಗೆ ಹೋಗಿ ಯಶಸ್ಸು ಪಡೆಯಿರಿ. ಆದರೆ, ಒಂದು ಎಚ್ಚರಿಕೆ. ಆ ನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಕಾಡು ಇದೆ. ಅಲ್ಲಿ ಯಕ್ಷಿಣಿಯರಿದ್ದಾರೆ. ಅವರು ನಿಮ್ಮನ್ನು ಆಕರ್ಷಣೆ ಮಾಡಲು ಪ್ರಯತ್ನಿಸುತ್ತಾರೆ. ನೀವು ಅವುಗಳನ್ನು ಮೀರದಿದ್ದರೆ ಬದುಕುವುದೇ ಕಷ್ಟ’ ಎಂದರು. ತರುಣರ ನಾಯಕ ಸ್ನೇಹಿತರನ್ನು ಕುರಿತು ಈ ವಿಷಯ ಕೇಳಿದಾಗ ಅವರು, ‘ನಮಗೇನೂ ಚಿಂತೆಯಿಲ್ಲ, ಆಕರ್ಷಣೆಗೆ ನಾವು ಒಳಗಾಗದಿದ್ದರೆ ಸಾಕು’ ಎಂದರು. ನಾಯಕ ಅವರನ್ನೆಲ್ಲ ಕರೆದುಕೊಂಡು ಹೊರಟ. ಕಾಡಿನಲ್ಲಿ ನಡೆಯುತ್ತಿರು­ವಾಗ ಸಂಜೆಯಾಯಿತು. ನಾಯಕ ಹೇಳಿದ, ‘ಇದೇ ಯಕ್ಷಿಣಿಯರು ಇರುವ ಸ್ಥಳ. ಹಗಲಾದರೆ ಅವರ ಶಕ್ತಿ ನಡೆಯುವುದಿಲ್ಲ. ಈ ರಾತ್ರಿ ನಾವು ಏಕಮನಸ್ಕರಾಗಿ ನಡೆಯುತ್ತ ಯಾವ ಆಕರ್ಷಣೆಗಳಿಗೂ ಸಿಕ್ಕುವುದು ಬೇಡ’. ಅವರೂ ಒಪ್ಪಿ ನಡೆಯತೊಡಗಿದರು.  ಸ್ವಲ್ಪ ಮುಂದೆ ಸಾಗಿದಾಗ ರಸ್ತೆಯ ಬದಿಯಲ್ಲ

ದಿನಕ್ಕೊಂದು ಕಥೆ. 259

*🌻ದಿನಕ್ಕೊಂದು ಕಥೆ🌻                             *ಆತ್ಮೀಯತೆಯ ಸ್ನೇಹ-ಭಾವ* ಯಾವುದೇ ಒಂದು ಪ್ರದೇಶದ ಜನಜೀವನವನ್ನು ನಾವು ವಿಶ್ಲೇಷಣೆಗೊಳಪಡಿಸಿದರೆ, ಅಲ್ಲಿ ಎರಡು ಪ್ರಕಾರಗಳನ್ನು ಗುರುತಿಸುತ್ತೇವೆ. ನಗರವಾಸಿಗಳು ಮತ್ತು ಗ್ರಾಮ ವಾಸಿಗಳೆಂಬುದಾಗಿ ಅವರನ್ನು ವಿಂಗಡಿಸುತ್ತೇವೆ. ನಗರಗಳಲ್ಲಿರುವ ಜನರು ಹೆಚ್ಚು ಸುಶಿಕ್ಷಿತರು ಹಾಗೂ ಹೆಚ್ಚು ಸೌಕರ್ಯಗಳಿಂದ ಕೂಡಿದ ಜೀವನವನ್ನು ನಡೆಸುತ್ತಾರೆ. ಆಧುನಿಕ ವಿಜ್ಞಾನದ ಫಲವಾಗಿ ದೊರೆತಂಥ ಸೌಲಭ್ಯಗಳನ್ನು ಬಳಸಿ, ಸುಖಮಯವಾದ ವಾತಾವರಣದಲ್ಲಿ ಬದುಕುವುದಿಲ್ಲದೆ, ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ವಿಶೇಷವಾದ ಅನುಭವ ಮತ್ತು ಜ್ಞಾನವನ್ನೂ ಪಡೆದಿರುತ್ತಾರೆ.  ಆದರೆ ಗ್ರಾಮವಾಸಿಗಳು ಇಂತಹ ಸೌಕರ್ಯಗಳ ಕೊರತೆಯಿಂದಾಗಿ ಬಹಳ ಹಿಂದುಳಿದವರಾಗಿದ್ದು, ಸಾರ್ವತ್ರಿಕವಾಗಿ ತಾತ್ಸಾರಕ್ಕೆ ಗುರಿಯಾಗುತ್ತಾರೆ. ಆದರೆ ಆದರ್ಶಪ್ರಾಯರೂ, ಔದಾರ್ಯವಂತರೂ ಆದ ಜನರು ಹಳ್ಳಿಗರೊಡನೆಯೂ ಹೇಗೆ ವ್ಯವಹರಿಸುತ್ತಾರೆಂಬುದನ್ನು ಅಬ್ರಹಾಂ ಲಿಂಕನ್ನರ ನಿರ್ದಶದಿಂದ ಗುರುತಿಸಬಹುದಾಗಿದೆ.  ಅಮೆರಿಕಾ ದೇಶದ ಜನಪ್ರಿಯ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಅಧ್ಯಕ್ಷರಾಗುವ ಮೊದಲೇ ತಮ್ಮ ಸಾರ್ವಜನಿಕ-ಸಂಪರ್ಕ, ಸಮಾಜಸೇವೆ, ಭಾಷಣ-ಕಲೆ ಮೊದಲಾದ ಗುಣಗಳಿಂದಾಗಿ ಸುಪ್ರಸಿದ್ಧರಾಗಿದ್ದರು. ಅವರನ್ನು ನಗರದ ನಾನಾ ಸಂಘ ಸಂಸ್ಥೆಗಳು ಉಪನ್ಯಾಸಕ್ಕಾಗಿ ಆಹ್ವಾನಿಸುತ್ತಿದ್ದವು ಹಾಗೂ ಅವರ ವಿದ್ವತ್-ಪೂರ್ಣ ಉಪನ್ಯಾಸಗಳನ್ನು ಕೇಳುವುದಕ್ಕ

ದಿನಕ್ಕೊಂದು ಕಥೆ. 258

*🌻ದಿನಕ್ಕೊಂದು ಕಥೆ*🌻                                                *ಪುರಂದರದಾಸರು ವೈರಾಗ್ಯ ತಾಳಿದ ಘಟನ*.                                      ವಿಷ್ಣು ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರ ಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. *ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿ ದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ

ದಿನಕ್ಕೊಂದು ಕಥೆ. 257

*🌻ದಿನಕ್ಕೊಂದು ಕಥೆ*🌻                            *ಹೋರಾಟದ ಪಥದಲ್ಲಿ....* ಈ ಪ್ರಪಂಚದಲ್ಲಿ ಜನರೆಲ್ಲರಿಗೂ ಬದುಕಿನ ಸೂಕ್ತ ದಾರಿಯನ್ನು ತೋರಲೆಂದೇ ಧರ್ಮಗಳ ಸ್ಥಾಪನೆಯಾಯಿತು. ವಿವಿಧ ಧರ್ಗಗಳ ದಾರಿಯಲ್ಲಿ ಭಿನ್ನತೆಯಿದ್ದಿರಬಹುದಾದ ಅಂತಿಮ ಗುರಿಯೊಂದೇ ಆಗಿದೆ. ಈ ಜಗತ್ತಿನ ವಿವಿಧ ಮುಖ ಸಂಕಷ್ಟಗಳನ್ನು ನಿವಾರಿಸಿ ಉತ್ತಮ ಸುಖದ ಕಡೆಗೆ ತಲಪಿಸುವ ಸಾಧನವೇ ಧರ್ಮವಾಗಿದೆ. ಇದನ್ನರಿಯದೆ ಕೆಲವರು ಧರ್ಮದ ಹೆಸರಲ್ಲಿ ಜಗಳಾಡುವವರಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧಾರ್ಮಿಕ ಸಾಮರಸ್ಯ, ಭಾವೈಕ್ಯದ ಆದರ್ಶವನ್ನು ಮೆರೆದ ಸುಭಾಶ್ಚಂದ್ರ ಬೋಸ್ ಅವರ ಅನುಯಾಯಿಗಳ ಆಚರಣೆ ವ್ಯವಹಾರಗಳು ಅನುಕರಣೀಯವಾಗಿದ್ದುದನ್ನು ಗಮನಿಸಬೇಕಾಗಿದೆ. ಬ್ರಿಟಿಷರ ಆಡಳಿತದಿಂದ ಬಿಡುಗಡೆಯನ್ನು ಪಡೆಯುವುದಕ್ಕಾಗಿ ವೀರನೇತಾರ ಸುಭಾಶ್ಚಂದ್ರ ಬೋಸ್ ಅವರು ಸ್ತಾಪಿಸಿದ ಅಝಾದ್ ಹಿಂದ್ ಫೌಜ್‌ಗೆ ಸೇರುವಂತೆ ಭಾರತದಲ್ಲಿರುವ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ ಮೊದಲಾದ ಎಲ್ಲ ಸಂಪ್ರದಾಯದವರಿಗೂ ಕರೆ ನೀಡಿದ್ದರು. ಯಾರ ಹೃದಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸ್ಫೂರ್ತಿಯಿದೆಯೋ ಅವರೆಲ್ಲರೂ ನಮ್ಮ ಸೇವೆಯನ್ನು ಸೇರಿಕೊಳ್ಳಿ ಎಂದಿದ್ದರು. ಹಾಗೆ ಸೇರಿಕೊಂಡವರಲ್ಲಿ ಕ್ಯಾಪ್ಟನ್ ಶಾನವಾಜ್ ಖಾನ್ ಕೂಡಾ ಒಬ್ಬರು. ಒಮ್ಮೆ ಅವರ ಚಟುವಟಿಕೆಗಳಿಂದ ಅಸಮಾಧಾನಗೊಂಡ ಆಂಗ್ಲ ಸರಕಾರ ಅವರ ಮೇಲೆ ಒಂದು ಸುಳ್ಳು ಮೊಕದ್ದಮೆ ಹೂಡಿತು. ಈ ಸಂದರ್ಭದಲ್ಲಿ ಈ ಮೊಕದ್ದಮೆಯಲ್ಲಿ ಕ್ಯಾ.ಶಾನವಾಜ

ದಿನಕ್ಕೊಂದು ಕಥೆ. 256

*🌻ದಿನಕ್ಕೊಂದು ಕಥೆ🌻                                            ಹೆತ್ತ ತಾಯಿಯ ಮುತ್ತೇ ಸ್ಫೂರ್ತಿ!* ಇಲ್ಲಿರುವ ಅಪರೂಪದ ಚಿತ್ರದಲ್ಲಿ ತತ್ತ್ವಜ್ಞಾನಿ ಸಾಕ್ರೆಟಿಸರಿಗೆ ವಿಷಪ್ರಾಶನದಿಂದ ಸಾಯಿಸುವ ಶಿಕ್ಷೆ ಕೊಟ್ಟಾಗಿನ ಮನೋಜ್ಞವಾದ ದೃಶ್ಯವಿದೆ. ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಇದು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆಬಾಳುತ್ತದಂತೆ. ಇದನ್ನು ರಚಿಸಿದವರು ಇಂಗ್ಲೆಂಡಿನಲ್ಲಿ ನೆಲೆಸಿದ್ದ ಬೆಂಜಮಿನ್ ವೆಸ್ಟ್ ಎಂಬ ಚಿತ್ರಕಾರರು. ಇಂಗ್ಲೆಂಡಿನ ರಾಯಲ್ ಅಕ್ಯಾಾಡೆಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು. ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು. ಅವರ ಚಿತ್ರಗಳು ಲಕ್ಷಗಟ್ಟಲೆ ಬೆಲೆಯನ್ನು ಗಳಿಸುತ್ತಿದ್ದವು. ಆಶ್ಚರ್ಯವೇನೆಂದರೆ ಬೆಂಜಮಿನ್ನರು ಯಾವುದೇ ಕಲಾಶಾಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೆ ಯಾರಿಂದಲೂ ಪಾಠ ಹೇಳಿಸಿಕೊಳ್ಳದೆ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಫೂರ್ತಿ ಯಾರೆಂದು ಕೇಳಿದಾಗ ಅವರು ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿಮುತ್ತು ನಾನು ಈ ಮಟ್ಟಕ್ಕೇರಲು ಕಾರಣವಾಯಿತು! ಎಂದರಂತೆ. ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ. ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ. ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋ

ದಿನಕ್ಕೊಂದು ಕಥೆ. 255

🌻 *ದಿನಕ್ಕೊಂದು ಕಥೆ*🌻                    *ದೇಶಪ್ರೇಮಿಗಳ ಆದರ್ಶ ಪಥ* ಮಾನವನ ಜೀವನದಲ್ಲಿ ಅನೇಕ ಬಗೆಯ ಅವಕಾಶಗಳು ದೊರೆಯುತ್ತವೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ನಾನಾ ಬಗೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಾಸ್ತ್ರ, ಗಣಿತ, ವಿಜ್ಞಾನ, ಕ್ರೀಡೆ ಇತ್ಯಾದಿ ಪರಿಚಯದೊಂದಿಗೆ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಸೂಕ್ತ ಅವಕಾಶಗಳು ಒದಗಿಬರುತ್ತವೆ. ಸೂಕ್ತ ಸಂದರ್ಭ ಸನ್ನಿವೇಶಗಳಿಂದ ಪ್ರೇರಣೆ, ಸ್ಪೂರ್ತಿ ದೊರೆತರೆ, ಒಬ್ಬ ವ್ಯಕ್ತಿಯನ್ನು ಕಲಾವಿದನೋ, ಕ್ರೀಡಾಪಟುವೋ, ಕವಿಯೋ, ವಿಜ್ಞಾನಿಯೋ, ವಿದ್ವಾಂಸನೋ ಆಗುವಂತೆ ಮಾಡಲು ಸಾಧ್ಯ. ಆದರೆ, ಒಬ್ಬ ವ್ಯಕ್ತಿಗೊಂದು ಉದ್ದೇಶ, ಗುರಿ, ಲಕ್ಷ್ಯವಿದ್ದಾಗ ಅದಕ್ಕೆ ಅನುಗುಣವಾದ ಹಾಗೂ ತನ್ನ ಅಭಿರುಚಿಗೆ ಹೊಂದಿಕೆಯಾದ ಹವ್ಯಾಸವನ್ನೇ ಅವನು ಆಯ್ದುಕೊಳ್ಳುತ್ತಾನೆ ಎಂಬುದಕ್ಕೆ ಖ್ಯಾತ ವಿದ್ವಾಂಸರಾದ ಶ್ರೀಪಾದ ದಾಮೋದರ ಸಾತವೇಲಕರ್ ಅವರ ಉದಾಹರಣೆಯೇ ಜ್ವಲಂತ ಸಾಕ್ಷಿ. ಮಹಾರಾಷ್ಟ್ರದಲ್ಲಿ ವೈದಿಕ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದ ಶ್ರೀಪಾದ ದಾಮೋದರ ಸಾತವೇಲಕರ್ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ವಿಶೇಷವಾದ ಆಸಕ್ತಿ ಉಳ್ಳವರು ಹಾಗೂ ವೇದ ಶಾಸ್ತ್ರ ಪುರಾಣಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಇದರ ಜತೆಗೇ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಕಲಾವಿದರೂ ಆಗಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ಅವರು ನಿಸರ್ಗದ ಸೌಂದರ್ಯವನ್ನು, ವರ್ಣಚಿತ್ರಗಳಲ್ಲಿ

ದಿನಕ್ಕೊಂದು ಕಥೆ 254

*ದಿನಕ್ಕೊಂದು ನಿದರ್ಶನ* *ಚಿಕ್ಕ ಬದಲಾವಣೆ ದೊಡ್ಡ ವ್ಯತ್ಯಾಸಕ್ಕೆ ಬುನಾದಿ* ಬೆಳಗಿನ ಜಾವ ಒಬ್ಬ ಮುದುಕ ವಾಕಿಂಗ್ ಮಾಡಲು ಸಮುದ್ರದ ಕಿನಾರೆಯ ಬಳಿ ಬಂದಾಗ, ಸಾವಿರಾರು ನಕ್ಷತ್ರ ಮೀನುಗಳು ದಡದಲ್ಲಿರುವುದನ್ನು ನೋಡಿದ. ಮುಂಜಾನೆಯ ಸಮುದ್ರದ ಉಬ್ಬರ-ಇಳಿತದ ರಭಸದಿಂದಾಗಿ ಮೀನುಗಳೆಲ್ಲವು ದಡಕ್ಕೆ ಬಂದು ಸೇರಿದ್ದವು.  ಆಗತಾನೆ ಸೂರ್ಯೊದಯವಾಗುತ್ತಿರುವುದರಿಂದ ಆ ಮೀನುಗಳು ಇನ್ನು ಜೀವಂತವಾಗಿದ್ದವು. ಅವುಗಳು ಇಲ್ಲಿಯೆ ಇದ್ದರೆ ಸೂರ್ಯನ ಬಿಸಿಲಿನಿಂದ ಸತ್ತು ಹೋಗುವುದು. ಹಾಗಾಗಿ ಆ ಮುದುಕ ಅವುಗಳಿಗೆ ಸಹಾಯ ಮಾಡಬೇಕೆಂದು ನಿಶ್ಚಯಿಸಿದ. ಒಂದೊಂದೆ ನಕ್ಷತ್ರ ಮೀನನ್ನು ಹಿಡಿದು ಸಮುದ್ರಕ್ಕೆ ಎಸೆದ. ಹೀಗೆ ಎಸೆಯುದನ್ನು ನೋಡಿದ ಪಕ್ಕದಲ್ಲಿದ್ದ ವ್ಯಕ್ತಿಗೆ ಇವನು ಏನು ಮಾಡುತ್ತಿದ್ದಾನೆಂದು ಅರ್ಥವಾಗದೆ, ಅವನನ್ನು ನಿಲ್ಲಿಸಿ “ಏನು ಮಾಡುತ್ತಿದ್ದಿರಾ? ಇಲ್ಲಿ ಸಾವಿರಾರು ನಕ್ಷತ್ರ ಮೀನುಗಳಿವೆ. ಏಷ್ಟನ್ನು ನೀವು ಒಬ್ಬರೆ ಬದುಕಿಸಲು ಸಾಧ್ಯ? ಇದರಿಂದ ಏನು ದೊಡ್ಡ ವ್ಯತ್ಯಾಸ ಆಗುತ್ತದೆ?” ಆ ಮುದುಕ ಅವನ ಮಾತಿಗೆ ಕಿವಿಗೊಡಲಿಲ್ಲ. ಅವನು ಮತ್ತೆ ಇನ್ನೊಂದು ಮೀನನ್ನು ಹಿಡಿದು ನೀರಿಗೆ ಎಸೆದ ಮತ್ತು ಹೇಳಿದ “ಇದು ಒಂದು ನನಗೆ ವ್ಯತ್ಯಾಸ ಕೊಡುತ್ತದೆ.”  “ನಿಜ, ನಮ್ಮ ಜೀವನದಲ್ಲಿ ಈ ಚಿಕ್ಕ ಚಿಕ್ಕ ಬದಲಾವಣೆಗಳಿಂದಲೇ ಮುಂದೆ ದೊಡ್ಡ ಬದಲಾವಣೆ ಸಾಧ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ. ನಾನೊಬ್ಬನೆ ಏನು ಮಾಡಲು ಸಾಧ್ಯ? ಈ ಮಾತು ಸರ್ವೆ ಸಾಮಾನ್ಯ. ಆದರೆ

ದಿನಕ್ಕೊಂದು ಕಥೆ. 253

*🌻ದಿನಕ್ಕೊಂದು ಕಥೆ*🌻                                   *ಸಹಕಾರ ಪಡೆಯುವ ಉಪಾಯ* ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು, ಸಹಕಾರ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. ಏನೂ ಇಲ್ಲದ ದುರ್ಬಲರನ್ನು, ಅಶಕ್ತರನ್ನು ಎಲ್ಲರೂ ತಿರಸ್ಕಾರದಿಂದ ಕಾಣುತ್ತಾರೆ. ನೀರಿನಲ್ಲಿ ಬೆಳೆಯುವ ತಾವರೆ ಹೂ ಸೂರ್ಯನನ್ನು ಗೆಳೆಯನೆಂದು ಪರಿಗಣಿಸಿದರೂ, ಅದೇ ಸೂರ್ಯನು ನೀರಿಲ್ಲದಾಗ ತಾವರೆ ಹೂವಿಗೆ ನೆರವಾಗುವುದಿಲ್ಲ. ಸೂರ್ಯನ ಬಿಸಿಲಿನ ಉಷ್ಣತೆಗೆ ಆ ತಾವರೆ ಹೂವು ಬಾಡಿ ಹೋಗುತ್ತದೆ ಎಂದು ಕವಿಯೊಬ್ಬ ಎಚ್ಚರಿಸುತ್ತಾನೆ. ಸಹಕಾರವನ್ನು ಪಡೆಯಲು ದಾರಿ ತೋರಿದ ಗೆಳೆಯನೊಬ್ಬನು ಮಾಡಿದ ಉಪಾಯವೊಂದರ ಪ್ರಸಂಗ ತುಂಬಾ ರೋಚಕವಾಗಿದೆ. ಒಂದೂರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಸಾಕಷ್ಟು ಧನ ಸಂಪತ್ತಿದ್ದರೂ, ತನ್ನ ಬಳಿಕ ಈ ಸಂಪತ್ತಿಗಾಗಿ ಮಕ್ಕಳಲ್ಲಿ ಜಗಳವಾಗದಿರಲೆಂದು ಎಲ್ಲ ಧನ ಕನಕಾದಿಗಳನ್ನು ತನ್ನ ಐವರು ಪುತ್ರರಿಗೂ ಪಾಲು ಮಾಡಿ ಹಂಚಿಕೊಟ್ಟನು. ಮಕ್ಕಳು ತಮ್ಮ ತಮ್ಮ ಪಾಲು ತೆಗೆದುಕೊಂಡು ತಮ್ಮದೇ ಆದ ಮನೆಗಳಲ್ಲಿ ಆರಾಮವಾಗಿರುತ್ತಾ, ತಂದೆಯನ್ನು ಮರೆತೇ ಬಿಟ್ಟರು. ತಂದೆ ಕಂಗಾಲಾಗಿ ಬಿಟ್ಟ ಏಕೆಂದರೆ ಅವನ ಪತ್ನಿ ಮೊದಲೇ ತೀರಿ ಹೋಗಿದ್ದಳು. ಆ ವ್ಯಾಪಾರಿಗೊಬ್ಬ ಶ್ರೀಮಂತ ರತ್ನ ವ್ಯಾಪಾರಿ ಗೆಳೆಯನಿದ್ದ. ಅವನು ತನ್ನ ಗೆಳೆಯನನ್ನು ನೋಡಲು ಬಂದಾಗ, ತಂದೆಯ ಸಂಪತ್ತ