Posts

Showing posts from April, 2017

ದಿನಕ್ಕೊಂದು ಕಥೆ. 403

*🌻ದಿನಕ್ಕೊಂದು ಕಥೆ🌻                                                    ಮನೆ ಚಿಕ್ಕದು! ಮನಸ್ಸು ದೊಡ್ಡದು!* ಮನೆಗೂ ಮನಸ್ಸಿಗೂ ವಿಚಿತ್ರವಾದ, ಇದು ಹೀಗೆಯೇ ಎಂದು ಹೇಳಲಾಗದ ಸಂಬಂಧವಿದೆಯಂತೆ! ದೊಡ್ಡ ಮನೆಯಲ್ಲಿರುವವರ ಮನಸ್ಸು ದೊಡ್ಡದಿಲ್ಲದಿರಬಹುದು. ಚಿಕ್ಕ ಮನೆಯಲ್ಲಿರುವವರ ಮನಸ್ಸು ಚಿಕ್ಕದಾಗಿರದೆ ದೊಡ್ಡದಾಗಿ ಇರಬಹುದು. ಅದನ್ನು ನಿರೂಪಿಸುವ ಪುಟ್ಟ ಕತೆಯೊಂದು ಇಲ್ಲಿದೆ. ಒಂದು ದಟ್ಟಡವಿ. ಅಲ್ಲೊಂದು ಪುಟ್ಟ ಗುಡಿಸಲು. ಗುಡಿಸಲಿನಲ್ಲಿದ್ದವರು ಒಬ್ಬ ಬಡ ಸೌದೆಗಾರರು ಮತ್ತವರ ಹೆಂಡತಿ. ಸೌದೆಗಾರ ಪ್ರತಿದಿನ ಅಡವಿಯಲ್ಲಿ ಸೌದೆ ಕಡಿಯುತ್ತಿದ್ದರು. ಅದನ್ನು ತಮ್ಮ ಸೊಣಕಲು ಕತ್ತೆಯ ಮೇಲೆ ಹೇರಿಕೊಂಡು ನಗರಕ್ಕೆ ಹೋಗಿ, ಸೌದೆ ಮಾರುತ್ತಿದ್ದರು. ಬಂದ ಹಣದಲ್ಲಿ ಗಂಡ-ಹೆಂಡತಿಗೆ ಎರಡು ಹೊತ್ತು ಊಟಕ್ಕಾಗುವಷ್ಟು ಹಿಟ್ಟು-ಸೊಪ್ಪು ತರುತ್ತಿದ್ದರು.  ಹೀಗೆಯೇ ಅವರ ಬದುಕು ಸಾಗುತ್ತಿತ್ತು. ಒಂದು ಮಳೆಗಾಲದ ರಾತ್ರಿ. ಧಾರಾಕಾರ ಮಳೆ ಸುರಿಯುತ್ತಿತ್ತು. ಗಂಡ ಹೆಂಡತಿ ಇಬ್ಬರೂ ಗುಡಿಸಲಿನಲ್ಲಿ ಮಲಗಿದ್ದರು. ಮಧ್ಯರಾತ್ರಿ ಗುಡಿಸಲಿನ ಬಾಗಿಲನ್ನು ಯಾರೋ ಬಡಿದು ‘ಮಳೆಯಲ್ಲಿ ನೆನೆಯುತ್ತಿದ್ದೇನೆ. ಕಷ್ಟವಾಗುತ್ತಿದೆ. ಈ ರಾತ್ರಿ ನಿಮ್ಮ ಗುಡಿಸಲಿನಲ್ಲಿ ಕಳೆಯಬಹುದೇ?’ಎಂದು ಗೋಗರೆದರು. ಸೌದೆಗಾರ ಬಾಗಿಲು ತೆಗೆಯಲು ಎದ್ದು ನಿಂತಾಗ, ಹೆಂಡತಿ ‘ನಮ್ಮದು ಪುಟ್ಟ ಗುಡಿಸಲು ನಮ್ಮಿಬ್ಬರಿಗೆ ಮಲಗುವಷ್ಟು ಮಾತ್ರ ಸ್ಥಳವಕಾಶವಿದೆ. ಮತ್ತೊಬ್ಬರು ಬಂದರೆ ನಾವ

ದಿನಕ್ಕೊಂದು ಕಥೆ. 402

*🌻ದಿನಕ್ಕೊಂದು ಕಥೆ 402🌻                                                                ಅಶಾಂತಿ ಇದ್ದರೆ ಅರಮನೆಯೂ ಸೆರೆಮನೆ.* ಜೀವನವನ್ನು ಅಮೂಲ್ಯವಾಗಿಸುವ ಸಾಧನವೇ ಧ್ಯಾನ. ಈ ಧ್ಯಾನವನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಮಾಡಬೇಕು ಎನ್ನವುದನ್ನು ಋಷಿ ಮುನಿಗಳು ತಮ್ಮ ಉಪನಿಷತ್ತಿನಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ. ಇದು ಔಪನಿಷಧಿಕ ಧ್ಯಾನವೆಂದೇ ಪ್ರಚಲಿತವಾಗಿದೆ. ಧ್ಯಾನದಿಂದ ನಮ್ಮ ಮನಸ್ಸು ಶಾಂತವಾಗುತ್ತದೆ. ಸ್ವಚ್ಛತೆ ಮತ್ತು ಶಾಂತಿಯೇ ಬದುಕಿನ ಗುರಿ ಅದರಿಂದ ನಮ್ಮ ಬದುಕು ಸಮೃದ್ಧವೂ, ಸಂತೃಪ್ತವೂ ಆಗುತ್ತದೆ. ಒಂದು ಮನೆಯಲ್ಲಿ ಸ್ವಚ್ಛತೆ ಮತ್ತು ಶಾಂತಿ ನೆಲೆಸಿದ್ದರೆ ಅದರ ಸೌಂದರ್ಯವು ಹೆಚ್ಚುತ್ತದೆ. ಹಗಲು ರಾತ್ರಿ ಮನೆಯವರು ಜಗಳವಾಡುತ್ತಿದ್ದರೆ, ಮನೆಯ ಮೂಲೆ ಮೂಲೆಯಲ್ಲಿ ಕಸ ತುಂಬಿಕೊಂಡಿದ್ದರೆ, ಅದು ಅರಮನೆಯಾಗಿದ್ದರೂ ಸೆರೆಮನೆಯೇ ಸರಿ. ಭವ್ಯವಾದ ಕಟ್ಟಡದಿಂದ ಮನೆಯ ಸೌಂದರ್ಯ ವರ್ಧಿಸುವದಿಲ್ಲ. ಸ್ವಚ್ಛತೆ ಮತ್ತು ಶಾಂತಿಯಿಂದ ಮನೆಯ ಸೌಂದರ್ಯ ಅಭಿವರ್ಧಿಸುತ್ತದೆ. ಸುಕರಾತನು ಶ್ರೇಷ್ಠ ತತ್ತ್ವಜ್ಞಾನಿ, ಸಂತ. ಕಲ್ಲು ಮತ್ತು ಕಟ್ಟಿಗೆಯಲ್ಲಿ ಕೆತ್ತನೆಯ ಕೆಲಸ ಮಾಡಿಕೊಂಡಿದ್ದ. ಒರಟು ಒರಟಾದ ದೇಹ. ಅವನು ಅಷ್ಟೇನು ಸುಂದರನಲ್ಲ. ಆದರೆ ಆತನ ಹೃದಯದಲ್ಲಿದ್ದ ಭಾವನಗೆಳ ತಲೆಯೊಳಗಿದ್ದ ವಿಚಾರಗಳ ಸೌಂದರ್ಯ ಅಪ್ರತಿಮ. ಸಾವಿರಾರು ಜನ ಸಿರಿವಂತ ಯುವಕರು ಅವನ ಶಿಷ್ಯರು. ಸುಕರಾತನ ಹೆಂಡತಿ ಝಾಂತಿಪೆಗೆ ಮಾತ್ರ ಜಗಳವೆಂದರೆ ಪಂ

ದಿನಕ್ಕೊಂದು ಕಥೆ. 401

*🌻ದಿನಕ್ಕೊಂದು ಕಥೆ🌻                                        ಭಯಾನಕ ಮುಖವಾಡದ ಹಿಂದೆ ನೆಚ್ಚಿನ ಗೆಳೆಯ!* ಭಯಾನಕ ಮುಖವಾಡವನ್ನು ಕಂಡು ಗಾಬರಿಯಾದ, ಆದರೆ ಆನಂತರ ಅಸಾಮಾನ್ಯ ಎನಿಸಬಹುದಾದ ಪಾಠವೊಂದನ್ನು ಕಲಿತ ಒಂದು ನಿಜಜೀವನದ ಘಟನೆಯೊಂದು ಇಲ್ಲಿದೆ. ನಮ್ಮ ಸ್ವಾಮಿ ಪೂಜ್ಯ ದಾದಾ ಜೆ.ಪಿ. ವಾಸ್ವಾನಿ ಯವರು ಹೇಳಿದ ಘಟನೆ. 1925ರಲ್ಲಿ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದೆ. ನನ್ನ ಇಂಗ್ಲಿಷ್ ಉಪಾಧ್ಯಾಯರು ಕತೆ ಪುಸ್ತಕಗಳನ್ನು ಓದುವುದರಿಂದ ಭಾಷೆಯನ್ನು ಬೇಗ ಕಲಿಯಬಹುದು ಎಂದು ನಮಗೆ ತಿಳಿಸಿದರು. ನಾನು ಅಂತಹ ಪುಸ್ತಕವೊಂದನ್ನು ಹುಡುಕತೊಡಗಿದೆ. ನನಗೆ ಗೋವಿಂದ ಎಂಬ ಹೆಸರಿನ ಗೆಳೆಯನಿದ್ದ. ನಾನು ಆತನನ್ನು ಯಾವುದಾದರೂ ಇಂಗ್ಲಿಷ್ ಭಾಷೆಯ ಸಣ್ಣ ಕತೆಗಳ ಪುಸ್ತಕಗಳಿದ್ದರೆ ನನಗೆ ಕೊಡಬೇಕೆಂದು ಕೇಳಿಕೊಂಡೆ. ಆತ ಆಯಿತು. ನಮ್ಮ ಮನೆಯಲ್ಲಿ ಒಂದು ಪುಸ್ತಕ ಇರಬಹುದು. ಅದನ್ನು ಹುಡುಕಿ, ಹೋಳಿ ಹಬ್ಬದ ರಜಾ ದಿನದಂದು ತಂದು ಕೊಡುತ್ತೇನೆ ಎಂದು ವಾಗ್ದಾನ ಮಾಡಿದ. ನಾನು ಹೋಳಿ ಹಬ್ಬದ ದಿನವನ್ನೇ ಸಡಗರ-ಸಂಭ್ರಮಗಳಿಂದ ನಿರೀಕ್ಷಿಸುತ್ತಿದ್ದೆ. ಅಂದು ನಮ್ಮ ಮನೆಯ ಮುಂಬಾಗಿಲನ್ನು ತಟ್ಟಿದ ಶಬ್ದವಾಯಿತು. ನನ್ನ ಸ್ನೇಹಿತನೇ ಬಂದಿರಬೇಕೆಂಬ ಕಾತುರತೆಯಿಂದ ನಾನು ಬಾಗಿಲು ತೆರೆದೆ. ಆದರೆ ಹೊರಗೆ ಕಂಡ ದೃಶ್ಯವನ್ನು ಕಂಡು ನಾನು ಕಿಟಾರನೆ ಕಿರುಚಿಕೊಂಡೆ. ಏಕೆಂದರೆ ಭಯಂಕರವಾದ ಸಿಂಹದ ಮುಖವಾಡ ಧರಿಸಿದ್ದವರೊಬ್ಬರು ನನಗೆ ಕಂಡರು. ನಾನು ಭಯದಿಂದ

ದಿನಕ್ಕೊಂದು ಕಥೆ. 400

*🌻ದಿನಕ್ಕೊಂದು ಕಥೆ🌻                                      ಗುಡಿಸಲಲ್ಲಿ ಬೇಡುವವನೂ ಅವನೇ! ಗುಡಿಯಲ್ಲಿ ನೀಡುವವನೂ ಅವನೇ!* ಗುಡಿಯಲ್ಲಿ ನಿಂತು ನಾವು ಬೇಡಿದುದನ್ನು ನೀಡುವವನೂ ಅವನೇ! ಗುಡಿಸಲ ಮುಂದೆ ನಿಂತು ಬೇಡುವವನೂ ಅವನೇ! ಆ ಇಬ್ಬರೂ ಒಂದೇ ಎಂದು ದೃಢವಾಗಿ ನಂಬಿದ್ದ ಸಂತರೊಬ್ಬರ ಬದುಕಿನ ಘಟನೆ ಇಲ್ಲಿದೆ. ಹದಿನೇಳನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಆಗಿಹೋದ ಸಂತ ತುಕಾರಾಮರಿಗೆ ವಿಠೋಬನಲ್ಲಿ ಅನನ್ಯ ಭಕ್ತಿ. ಆದರೆ ಬದುಕಿನಲ್ಲಿ ಕಡುಬಡವರಾಗಿದ್ದ ಅವರ ಹೆಂಡತಿ ಜೀಜಾಬಾಯಿಯವರ ಬಳಿ ಎರಡೇ ಎರಡು ಹಳೆಯ ಸೀರೆಗಳಿದ್ದವು. ಅವೂ ಅಲ್ಲಲ್ಲಿ ಹರಿದು ಹೋಗಿದ್ದವು. ಹೊಸ ಸೀರೆ ಕೊಳ್ಳುವ ಆರ್ಥಿಕ ಶಕ್ತಿ ಅವರಿಗಿರಲಿಲ್ಲ. ಒಮ್ಮೆ ಜೀಜಾಬಾಯಿಯವರು ಎಲ್ಲೋ ಹೊರಗೆ ಹೋಗಿದ್ದರು. ತುಕಾರಾಮರೊಬ್ಬರೇ ಮನೆಯಲ್ಲಿದ್ದರು. ಆಗ ಅಜ್ಜಿಯೊಬ್ಬರು ಭಿಕ್ಷೆ ಬೇಡುತ್ತ ಬಂದರು. ಹರಿದ ಸೀರೆಯನ್ನುಟ್ಟಿದ್ದ, ಚಳಿಗೆ ನಡುಗುತ್ತಿದ್ದ, ಅಜ್ಜಿಯ ದುಸ್ಥಿತಿ ನೋಡಿ ತುಕಾರಾಮರ ಮನಸ್ಸು ಕರಗಿತು. ಅವರು ಮನೆಯೊಳಕ್ಕೆ ಹೋಗಿ ಅಲ್ಲಿದ್ದ ಹೆಂಡತಿಯ ಸೀರೆ ತಂದು ಅಜ್ಜಿಗೆ ದಾನ ಮಾಡಿಬಿಟ್ಟರು. ಅಜ್ಜಿಯು ಬಾಯ್ತುಂಬ ಕೃತಜ್ಞತೆ ಹೇಳಿ ಹೊರಟು ಹೋದರು. ಕೊಂಚ ಸಮಯದ ನಂತರ ಜೀಜಾಬಾಯಿಯವರು ಮನೆಯೊಳಕ್ಕೆ ಬಂದರು. ಅವರಿಗೆ ಮನೆಯಲ್ಲಿ ನೇತು ಹಾಕಿದ್ದ ಸೀರೆ ಕಾಣಿಸಲಿಲ್ಲ. ಆಕೆ ತುಕಾರಾಮರನ್ನು ವಿಚಾರಿಸಿದಾಗ, ಅವರು ‘ಹರಕು ಸೀರೆಯುಟ್ಟು, ಚಳಿಗೆ ನಡುಗುತ್ತ ಭಿಕ್ಷೆ ಬೇಡುತ್ತ ಬಂದಿದ್

ದಿನಕ್ಕೊಂದು ಕಥೆ. 399

*🌻ದಿನಕ್ಕೊಂದು ಕಥೆ🌻                                         ವಿಮಾನ ಪ್ರಯಾಣದಲ್ಲಿ ಊಟ.* ವಿಮಾನದಲ್ಲಿ ನನ್ನ ಜಾಗದಲ್ಲಿ ಕುಳಿತೆ. ಡೆಲ್ಲಿ ತಲುಪಲು ಐದಾರು ಗಂಟೆಗಳ ಪ್ರಯಾಣ. ಒಂದು ಉತ್ತಮವಾದ ಪುಸ್ತಕ ಓದುವುದು, ಒಂದು ಗಂಟೆ ನಿದ್ರೆ ನನ್ನ ಪ್ರಯಾಣದ ಕಾರ್ಯಕ್ರಮ. ವಿಮಾನ ಹೊರಡುವುದಕ್ಕೆ ಐದು ನಿಮಿಷಗಳ ಮುಂಚೆ ನನ್ನ ಅಕ್ಕ ಪಕ್ಷದ ಸೀಟುಗಳಲ್ಲಿ ಹತ್ತು ಜನ ಯೋಧರು ಕುಳಿತು ಕೊಂಡಿದ್ದರು. ವಿಮಾನ ತುಬಿತ್ತು. ಕಾಲಕ್ಷೇಪಕ್ಕೆ ನನ್ನ ಪಕ್ಕದಲ್ಲಿ ಕುಳಿತ ಯೋಧನನ್ನು "ಎಲ್ಲಗೆ ಪ್ರಯಾಣ" ಎಂದು ವಿಚಾರಿಸಿದೆ. ",ಆಗ್ರಾಗೆ ಸಾರ್, ಅಲ್ಲಿ ಏರಡುವಾರ ಶಿಕ್ಷಣ, ನಂತರ  ಆಪರೇಷನ್ಗೆ ಕಳಿಸುತ್ತಾರೆ"ಎಂದನು. ಒಂದು ಗಂಟೆ ಕಳೆಯಿತು..ಅನೌಸಮೆಂಟ್ "ಬೇಕಾದವರು ಹಣ ಕೊಟ್ಟು ಊಟ ಪಡೆಯ ಬಹುದು" ಎಂದು. ಸರಿ ತುಂಬಾ ಸಮಯವಿದೆ ಊಟಮುಗಿಸಿದರೆ  ಒಂದು ಕೆಲಸವಾಗುತ್ತದೆ ಎಂದು ನನ್ನ ಪರ್ಸ ತೆಗೆದು ಊಟ ಖರೀದಿಸಲು ಮುಂದಾದಾಗ ಈ ಮಾತುಗಳು ನನ್ನ ಕಿವಿಗೆ ಬಿದ್ದವು" ನಾವು ಸಹಾ ಊಟಮಾಡೋಣವೇ? ಎಂದು ಒಬ್ಬ ಮತ್ತೋಬ್ಬನನ್ನು ಕೇಳುತ್ತಾನೆ....ಅದಕ್ಕೆ ಆತನು "ಬೇಡ..ಇಲ್ಲಿ ಊಟ ದುಬಾರಿ... ವಿಮಾನದಿಂದ ಇಳಿದ ತಕ್ಷಣ ಯಾವುದಾದರೂ ಸಾಧಾರಣವಾದ ಕಡೆ ಊಟಮಾಡೋಣ "  ಎಂದನು. ಅದಕ್ಕೆ ಆ ಮೂದಲಿನ ಯೋಧ "ಸರಿ"ಎಂದು ಸುಮ್ಮನಾದನು. ನಾನು ವಿಮಾನದ ಪರಿಚಾಲಕಿಯ ಬಳಿ ಹೋಗಿ "ದಯವಿಟ್ಟು ನೀವು ಆ ಯೋಧರೆಲ್

ದಿನಕ್ಕೊಂದು ಕಥೆ. 398

*🌻ದಿನಕ್ಕೊಂದು ಕಥೆ🌻                                    ಮನೆಗೋ? ಮಸಣಕೋ? ಪೋಗೆಂದ ಕಡೆಗೆ ಓಡಿಸುವುದು ಮನಸ್ಸು!* ಅದ್ಭುತವಾದ ಶಕ್ತಿಯು ನಮ್ಮೆಲ್ಲರ ಮನಸ್ಸಿನಲ್ಲಿದೆ! ಅದನ್ನು ವಿವರಿಸುವ ನಿಜಜೀವನದ ಪುಟ್ಟ ಘಟನೆಯೊಂದು ಇಲ್ಲಿದೆ! 1957ರಲ್ಲಿ ಅಮೆರಿಕದಲ್ಲಿ ನಡೆದ ಘಟನೆ. ಅಲ್ಲೊಬ್ಬ ಕ್ಯಾನ್ಸರ್ ಪೀಡಿತರಿದ್ದರು. ಅವರು ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನ ಅವರ ವೈದ್ಯರು ‘ಕ್ಯಾನ್ಸರನ್ನು ಗುಣ ಪಡಿಸುವ ‘ಕ್ರೆಬಿಯೋಜೆನ್’ಎಂಬ ಹೊಸ ಮದ್ದು ಕಂಡು ಹಿಡಿಯಲಾಗಿದೆ. ಇಂದಿನಿಂದ ನಿಮಗೆ ಹೊಸ ಮದ್ದನ್ನು ನೀಡಲಾಗುವುದು’ಎಂದು  ಹೇಳಿದರು. ಅದನ್ನು ರೋಗಿಗೆ ನೀಡಲಾರಂಭಿಸಿದರು. ರೋಗಿಗೆ ವೈದ್ಯರ ಮಾತಿನಲ್ಲಿ ಅಪಾರ ನಂಬಿಕೆಯಿತ್ತು. ಅವರಿಗೆ ಆ ಹೊಸ ಮದ್ದಿನಲ್ಲೂ ನಂಬಿಕೆ ಉಂಟಾಯಿತು. ಅವರು ಸಕಾರಾತ್ಮಕವಾಗಿ ಚಿಂತಿಸಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಅವರ ಕ್ಯಾನ್ಸರ್ ಬಹುತೇಕ ವಾಸಿಯಾಗಿಬಿಟ್ಟಿತ್ತು! ಅವರು ಆಸ್ಪತ್ರೆಯಿಂದ ಮನೆಗೆ ಹೋದರು. ಆರೋಗ್ಯಕರ ಜೀವನವನ್ನಾರಂಭಿಸಿದರು. ಒಂದು ದಿನ, (ಅವರ ಪಾಲಿನ ದುರ್ದಿನ!) ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದರಲ್ಲಿ ಕ್ಯಾನ್ಸರನ್ನು ಗುಣ ಪಡಿಸುತ್ತದೆಂದು ಹೇಳಲಾಗುವ ‘ಕ್ರೆಬಿಯೋಜೆನ್’ಮದ್ದು ಅಂಥ ಪರಿಣಾಮಕಾರಿಯಾದ ಫಲಿತಾಂಶಗಳನ್ನು ಕೊಟ್ಟಿಲ್ಲ ಎಂದು ಬರೆದಿತ್ತು. ಅದನ್ನು ಓದಿದ ಅವರು ಸುದ್ದಿ ನಿಜವಿರಬಹುದೇ ಎಂದು ಚಿಂತಾಕ್ರಾಂತರಾದರು. ಅದೇ ಚಿಂತೆಯಲ್ಲಿ ಮುಳುಗಿದ ಅವರ ಆರೋಗ್ಯ ಒ