Posts

Showing posts from April, 2020

ದಿನಕ್ಕೊಂದು ಕಥೆ 980

*🌻ದಿನಕ್ಕೊಂದು ಕಥೆ🌻* *ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?*    ಗೂಡಿನಂತಹಾ ಕಗ್ಗತ್ತಲ ಕೊಠಡಿ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಕೈಗಳಿಗೆ ಬೇಡಿ ಹಾಕುತ್ತಿದ್ದರು. ಸೊಂಟದ ಸುತ್ತ ಬಿಗಿದು ಬರುವ ಎರಡು ಎಳೆಗಳನ್ನು ಪಾದಗಳೆರಡಕ್ಕೂ ಬಿಗಿದು ಹಾಕುವ ಕಂಬಿ ಬೇಡಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಕಾಲನ್ನು ಕಿಂಚಿತ್ತೂ ಮಡಿಸದೆ ತಿಂಗಳುಗಟ್ಟಲೆ ಇರಬೇಕಿತ್ತು! ಕೈಗಳನ್ನು ಹಿಂದಕ್ಕೆ ಸರಿಸಿ ಬೇಡಿ ಹಾಕುವುದು ಇನ್ನೊಂದು. ಮಗದೊಂದು ಅಡ್ಡಕಂಬಿ ಬೇಡಿ - ಎರಡೂ ಕಾಲುಗಳನ್ನು ಒಂದಡಿಗಿಂತಲೂ ಹೆಚ್ಚು ದೂರದಲ್ಲಿರಿಸಿ ಹಾಕಲಾಗುತ್ತಿತ್ತು. ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಊಟ, ನಿದ್ರೆ, ವಿಸರ್ಜನೆ, ಓಡಾಟ, ಕೆಲಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಬೇಕು. ಕೇಳಿದರೆ ಮೈಜುಮ್ಮೆನಿಸುವ ಶಿಕ್ಷೆ. ಇದು  ಯಾರು ಕಾಣದ, ಅನುಭವಿಸದ ಶಿಕ್ಷೆ. ಇದು ಅಂಡಮಾನಿನಲ್ಲಿ ಹನ್ನೊಂದು ವರ್ಷ ವೀರ ಸಾವರ್ಕರ್ ಅನುಭವಿಸಿದ, ನರಕಯಾತನೆ ಪಟ್ಟ ಕರಿನೀರ ಶಿಕ್ಷೆ!  ಮಾರ್ಸೆಲ್ಸಿನಲ್ಲಿ ಮೊರಿಯಾ ಹಡಗಿನ ಶೌಚ ಕೊಠಡಿಯ ಕಿರು ಗವಾಕ್ಷದಿಂದ ಯೋಗಶಕ್ತಿಯಿಂದ ದೇಹವನ್ನು ಸಂಕುಚಿಸಿ ಸಮುದ್ರಕ್ಕೆ ಹಾರಿ ಈಜಿದಂತೆ ಅಂಡಮಾನಿಗೆ ಹೊರಟ ಮಹಾರಾಜ ಹಡಗಿನಿಂದ ತಪ್ಪಿಸಿಕೊಳ್ಳಲು ವೀರ ಸಾವರ್ಕರರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಕೈಕಾಲುಗಳೆಲ್ಲದಕ್ಕೂ ಬೇಡಿ ಹಾಕಲಾಗಿತ್ತು. ಮಾತ್ರವಲ್ಲ

ದಿನಕ್ಕೊಂದು ಕಥೆ 979

ದಿನಕ್ಕೊಂದು ಕಥೆ ನೂರೆಂಟು ಮಾತು: ವಿಶ್ವೇಶ್ವರ ಭಟ್ ಚೀನಾದ  ಜೈಲಿನಲ್ಲಿ 33 ವರ್ಷ ಘನಘೋರ ಚಿತ್ರಹಿಂಸೆ ಅನುಭವಿಸಿದವನ ಮುಂದೆ ಲಾಕ್ಡೌನ್ ಯಾವ ಲೆಕ್ಕ ?  - ವಿಶ್ವೇಶ್ವರ ಭಟ್  ಪಾಲ್ಡೆನ್ ಗ್ಯಾತ್ಸೋ !  ನನಗೇಕೆ ಈ ಸಮಯದಲ್ಲಿ ಈತನ ನೆನಪಾಯಿತು ಎಂದು ತುಸು ಆಶ್ಚರ್ಯವಾಯಿತು. ನಾನು ಇವನನ್ನು ಮರೆತೇ ಬಿಟ್ಟಿದ್ದೆ. ಆದರೆ ಈ ಲಾಕ್ ಡೌನ್ ಕಾಲದಲ್ಲಿ ಮೊನ್ನೆ ದಕ್ಷಿಣ ಆಫ್ರಿಕಾದ ’ಮಹಾತ್ಮಾ ಗಾಂಧಿ’ ಎಂದೇ ಪ್ರಸಿದ್ಧರಾದ ನೆಲ್ಸನ್ ಮಂಡೇಲಾ ಅವರನ್ನು ನೆನಪಿಸಿಕೊಳ್ಳುವಾಗ, ಈ ಪಾಲ್ಡೆನ್ ಗ್ಯಾತ್ಸೋ ಅಚಾನಕ್ ಆಗಿ ನೆನಪಾದ.  ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಗೆ ನಾವು ಪಡಬಾರದ ಹಿಂಸೆ ಅನುಭವಿಸುತ್ತಿದ್ದೇವೆ, ಆದರೆ ವರ್ಣಭೇದ ನೀತಿ ವಿರುದ್ಧ ಹೋರಾಡಿದ ಮಂಡೇಲಾ ಸತತ ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದರು. ಆರಡಿ ಎಂಟಡಿ ಜೈಲು ಕೋಣೆಯಲ್ಲಿ ತಮ್ಮ ಯೌವನದ ಬಹುಮುಖ್ಯ ಅವಧಿಯನ್ನು ಕಳೆದರು. ಅಲ್ಲಿ ಒಂದು ಫೋನ್, ಫ್ಯಾನ್, ಪುಸ್ತಕ, ಪೆನ್ನು, ರೇಡಿಯೋ, ಟಿವಿ ಏನೇನೂ ಇರಲಿಲ್ಲ. ಅಂಥ ಭಯಾನಕ ಜೈಲು ಕೋಣೆಯಲ್ಲಿ  ಅವರು ಇಪ್ಪತ್ತೇಳು ವರ್ಷಗಳನ್ನು ಕಳೆದರು. ಆ ಜೈಲಾದರೂ ಎಲ್ಲಿತ್ತು ? ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಿಂದ ಏಳು ಕಿಮಿ ದೂರದ ಒಂದು ದ್ವೀಪದಲ್ಲಿ. ಬೋಟಿನಲ್ಲಿಯೇ ಹೋಗಬೇಕು. ಅದು ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುವವರನ್ನು ಪ್ರತ್ಯೇಕವಾಗಿ ಕೂಡಿಡುವ ಐಸೋಲೇಷನ್ ಕ್ಯಾಂಪ್. ಜೈಲಿಂದ ಹೊರಬಂದರೂ ತಪ್ಪಿಸಿಕೊಂಡು, ಓಡಿ ಹೋಗಲು ಸಾ

ದಿನಕ್ಕೊಂದು ಕಥೆ 978

ದಿನಕ್ಕೊಂದು ಕಥೆ *"ನಮ್ಮನ್ನು ವಿನಾಕಾರಣ ದ್ವೇಷಿಸುವವರನ್ನು, ಹಲ್ಲೆ ಮಾಡುವವರನ್ನು ಉದಾಸೀನ ಮಾಡಿದಷ್ಟು ಅವರ ಶಕ್ತಿ ಕಡಿಮೆಯಾಗುತ್ತದೆ. ಮಹತ್ವ ಕೊಟ್ಟಷ್ಟು ದೊಡ್ಡವರಾಗುತ್ತಾರೆ"* _ಕೃಷ್ಣ, ಬಲರಾಮ ಮತ್ತು ಸಾತ್ಯಕಿ ಒಮ್ಮೆ ಕಾಡಿನಲ್ಲಿ ನಡೆದು ಹೋಗುತ್ತಿದ್ದರು.‌ ಕತ್ತಲು ಆವರಿಸಿದ್ದರಿಂದ ಒಂದು ಮರದ ಕೆಳಗೆ ವಿರಮಿಸಿದರು.‌ ಅವರಲ್ಲಿಯೇ ಒಂದು ವ್ಯವಸ್ಥೆ ರೂಪಿಸಿಕೊಂಡರು. ಒಂದೊಂದು ಜಾವ ಒಬ್ಬೊಬ್ಬರು‌ ಎದ್ದು ಕಾವಲು ಕಾಯುವುದು ಎಂದು._ _ಮೊದಲು ಬಲರಾಮನ ಸರದಿ. ಇನ್ನಿಬ್ಬರು ಮಲಗಿದರು. ಸ್ವಲ್ಪ ಹೊತ್ತಾದ‌ ಮೇಲೆ ಓರ್ವ ಬ್ರಹ್ಮರಾಕ್ಷಸ ಮರದ ಮೇಲಿಂದ ಜಿಗಿದ. ಬಲರಾಮನಿಗೋ ತನ್ನ ಭುಜಬಲದ ಬಗ್ಗೆ ಅತೀವ ವಿಶ್ವಾಸ. ಸರಿ. ಕಾಳಗ ಪ್ರಾರಂಭವಾಯಿತು. ಬಲರಾಮ ಬ್ರಹ್ಮರಾಕ್ಷಸನಿಗೆ ಹೊಡೆಯಲು ಪ್ರಾರಂಭಿಸಿದ. ಊಹೂ. ಬ್ರಹ್ಮರಾಕ್ಷಸನಿಗೆ ಏನೂ ಆಗಲಿಲ್ಲ. ಬದಲಿಗೆ ಬಲರಾಮನ ಒಂದೊಂದು ಹೊಡೆತಕ್ಕೆ ಆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಕೊನೆಗೆ ಬಲರಾಮ ಹಣ್ಣುಗಾಯಿ-ನೀರುಗಾಯಿಯಾಗಿ ಸುಸ್ತಾಗಿ ಕೆಳಗೆ ಬಿದ್ದ._ _ಮುಂದಿನದು ಸಾತ್ಯಕಿಯ ಸರದಿ.‌ ಇವನಿಗೂ ತನ್ನ ಪರಾಕ್ರಮದ ಬಗ್ಗೆ ಅತೀವ ವಿಶ್ವಾಸ. ಸರಿ. ಬಲರಾಮ ಮಾಡಿದ್ದನ್ನೇ ಈ ಸಾತ್ಯಕಿಯೂ ಮಾಡಿದ. ಮತ್ತೆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಬಲರಾಮನಿಗೆ ಆದದ್ದೇ ಸಾತ್ಯಕಿಗೂ ಆಗಿ ಅವನೂ ಸುಸ್ತಾಗಿ ಬಿದ್ದ._ _ಮುಂದಿನದು ಕೃಷ್ಣನ ಸರದಿ..._ _ಕೃಷ್ಣ ಆ ಬ್ರಹ್ಮರಾಕ್ಷಸನನ್ನು ಎದುರಿಸಿದ ರೀತಿಯೇ ವಿಭಿನ್