Posts

Showing posts from November, 2018

ದಿನಕ್ಕೊಂದು ಕಥೆ 898

*🌻ದಿನಕ್ಕೊಂದು ಕಥೆ🌻* *ಇನೋಬ್ಬರಿಗೆ ಕೇಡು ಬಯಸಿದರೆ ಏನಾಗುತ್ತೆ..* ಫಲವತ್ತಾದ ಇಪ್ಪತ್ತೈದು ಎಕರೆ ತೋಟದ ಭೂಮಿಯ ಒಡೆಯನಾಗಿದ್ದ ನಿಂಗಪ್ಪ ಅನಕ್ಷರಸ್ಥನಾಗಿದ್ದ. ಓದಲು ಬರೆಯಲು ಬಾರದೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದೆಂದು ನಿರ್ಧರಿಸಿದ್ದ. ಕಷ್ಟಪಟ್ಟು ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದ. ಆತನ ಹೆಸರು ವಿನಯ. ನಿಜಕ್ಕೂ ವಿನಯವಂತನಾಗಿದ್ದ. ಪಟ್ಟಣದ ಹಾಸ್ಟೆಲ್ನಲ್ಲಿ ಇದ್ದುಕೊಂಡು, ಹಗಲಿರುಳೂ ಓದಿ, ಉನ್ನತ ಶ್ರೇಣಿಯಲ್ಲಿ ಕೃಷಿ ಪದವಿಯನ್ನು ಪಡೆದುಕೊಂಡಿದ್ದ. ಸರ್ಕಾರಿ ನೌಕರಿಯ ಕನಸು ಕಾಣದ ಆತ ದಿನವೂ ಪಂಚೆ ಉಟ್ಟುಕೊಂಡು, ತಲೆಗೆ ಟವಲ್ಲು ಸುತ್ತಿಕೊಂಡು ಅಪ್ಪನೊಡನೆ ಹೊಲದಲ್ಲಿ ಮಣ್ಣಿನ ಮಗನಾಗಿ ಬೆವರು ಸುರಿಸಿ ದುಡಿಯುತ್ತಿದ್ದ. ತಾನು ಕಲಿತ ಕೃಷಿ ಪದವಿಯ ಜ್ಞಾನವನ್ನು ಬಳಸಿಕೊಂಡು ಹೊಸ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ. ತಾತನ ಕಾಲದಿಂದಲೂ ತನ್ನಪ್ಪ ಬೆಳೆಯುತ್ತಿದ್ದ ನಾಟಿ ದ್ರಾಕ್ಷಿ ತೋಟದಲ್ಲಿ ಹೊಸ ತಳಿಯ ಬೀಜರಹಿತ ಕಪ್ಪು ದ್ರಾಕ್ಷಿ ಸಸಿಗಳನ್ನು ವಿನಯ ನಾಟಿ ಮಾಡಿದ. ಅವುಗಳ ಬುಡಕ್ಕೆ ಹನಿ ಹನಿಯಾಗಿ ನೀರು ತೊಟ್ಟಿಕ್ಕುವಂತೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ. ಹಾಗಾಗಿ ಬಹಳ ಬೇಗನೆ ದ್ರಾಕ್ಷಿ ಸಸಿಗಳು ಆಳೆತ್ತರಕ್ಕೆ ಬೆಳೆದುನಿಂತವು. ಮಾರುದ್ದ ಅಂತರದಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು ನಿರ್ಮಿಸಿದ್ದ ಚಪ್ಪರದ ತುಂಬ ಬಳ್ಳಿಯಾಗಿ ಹರಡಿಕೊಂಡವು. ಕೆಲ ತಿಂಗಳುಗಳು ಕಳೆಯುತ್ತಲೇ ದ್ರಾಕ್ಷಿ ಬಳ್ಳಿಗ

ದಿನಕ್ಕೊಂದು ಕಥೆ 897

*🌻ದಿನಕ್ಕೊಂದು ಕಥೆ🌻* *ದೇವರ ನಿಷ್ಕರುಣೆಯ ಹಿಂದೆ ಇರುವ ಕರುಣೆ!* ನೀವು ‘ಟೈಟಾನಿಕ್’ ಚಲನಚಿತ್ರವನ್ನು ನಿಜಜೀವನದ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ತಯಾರಾದ ಚಲನಚಿತ್ರ. ಆ ಚಲನಚಿತ್ರದಲ್ಲಿ ಕಂಡುಬರುವ ಹಡಗು ಅಂದಿನ ಕಾಲದ ಅತ್ಯಂತ ವೈಭವೋಪೇತ ಮತ್ತು ಅತೀ ದೊಡ್ಡ ಹಡಗು! ಅದು ತನ್ನ ಮೊದಲನೆಯ ಪ್ರಯಾಣದಲ್ಲೇ (1912ರ ಏಪ್ರಿಲ್ ನಲ್ಲಿ) ಅಪಘಾತಕ್ಕೆ ಈಡಾಯಿತು. ಅದರಲ್ಲಿದ್ದ ಎರಡೂವರೆ ಸಾವಿರ ಪ್ರಯಾಣಿಕರಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಜಲಸಮಾಧಿಯಾಗಿ ಸಾವನ್ನಪ್ಪಿದರು. ಆ ದುರಂತದಿಂದ ಸ್ವಲ್ಪದರಲ್ಲೇ ಪಾರಾದ ಕುಟುಂಬದ ಒಂದು ಪ್ರಕರಣ ಇಲ್ಲಿದೆ: ಸ್ಕಾಟ್‌ಲೆಂಡ್ ದೇಶದಲ್ಲಿ ಕ್ಲಾರ್ಕ್‌ಸ್ ಎಂಬ ಕುಟುಂಬವಿತ್ತು. ಮತ್ತು ಒಂಬತ್ತು ಮಕ್ಕಳ ಕುಟುಂಬ. ಆರ್ಥಿಕವಾಗಿ ಅನುಕೂಲಸ್ಥರಲ್ಲ. ಆದರೆ ಅವರಿಗೆ ತಮ್ಮ ಮಕ್ಕಳನ್ನು ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯಬೇಕೆಂಬ ಹಂಬಲವಿತ್ತು. ಗಂಡ-ಹೆಂಡತಿ ಇಬ್ಬರೂ ವರ್ಷಾನುಗಟ್ಟಲೆ ದುಡಿದರು. ಅಮೆರಿಕ ಪ್ರವಾಸಕ್ಕೆ ಬೇಕಾಗುವಷ್ಟು ಹಣ ಉಳಿತಾಯ ಮಾಡಿದರು. ಮನೆಯವರಿಗೆಲ್ಲ ಪಾಸ್‌ಪೋರ್ಟ್ ಮಾಡಿಸಿಕೊಂಡರು. ಅವರಿಗೆ ಟೈಟಾನಿಕ್ ಹಡಗು ಅಮೆರಿಕಾಕ್ಕೇ ಹೊರಡಲಿರುವ ವಿಷಯ ಗೊತ್ತಾಯಿತು. ಅದರಲ್ಲಿ ತಮ್ಮ ಇಡೀ ಕುಟುಂಬಕ್ಕೆ ಟಿಕೇಟುಗಳನ್ನು ಕೊಂಡುಕೊಂಡರು. ಇಡೀ ಕುಟುಂಬ ಪ್ರವಾಸದ ದಿನಾಂಕವನ್ನು ಎದುರು ನೋಡುತ್ತಿದ್ದರು. ಎಲ್ಲರಿಗೂ ಉತ್ಸಾಹವೋ ಉತ್ಸಾಹ! ಅದರ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಪರಿಚಯದವರಿ

ದಿನಕ್ಕೊಂದು ಕಥೆ 896

*🌻ದಿನಕ್ಕೊಂದು ಕಥೆ🌻* *ಆಪತ್ತಿಗಾದವನೇ ನೆಂಟ* ಹಸಿರು, ಜಲಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಸುಂದರ ಕಾಡಿನಲ್ಲಿದ್ದ ಫಲ-ಪುಷ್ಪಭರಿತ ಮರವೊಂದು ನೂರಾರು ಪಕ್ಷಿಗಳ ಹೆಮ್ಮೆಯ ಆಶ್ರಯವಾಗಿತ್ತು. ಅಲ್ಲಿ ನೆಲೆಯೂರಿದ್ದ ವಿವಿಧ ಪಕ್ಷಿಗಳು ಯಾವುದಕ್ಕೂ ಕೊರತೆಯಿರದ, ಸ್ವರ್ಗಕ್ಕೇ ಕಿಚ್ಚು ಹಚ್ಚುವಂಥ ಜೀವನವನ್ನು ಸಾಗಿಸುತ್ತಿದ್ದವು. ಆದರೆ, ಕಾಲ ಒಂದೇ ತೆರನಾಗಿರುವುದಿಲ್ಲವಲ್ಲ?! ಭೀಕರ ಬರಗಾಲ ಶುರುವಾಗಿ, ಪ್ರಕೃತಿಯನ್ನು ಶುಷ್ಕತೆ ಆವರಿಸತೊಡಗಿತು. ಸಹಜವಾಗಿಯೇ ಈ ಮರವೂ ಅದಕ್ಕೆ ಬಲಿಯಾಗಿ, ಆಶ್ರಯ ಪಡೆದಿದ್ದ ಪಕ್ಷಿಗಳು ಒಂದೊಂದಾಗಿ ಅದನ್ನು ತೊರೆದು ಬೇರೆಡೆಗೆ ಹೊರಟವು. ಆದರೆ ಒಂದು ಗಿಳಿಮಾತ್ರ ದುಃಖಿಸುತ್ತ ಅಲ್ಲೇ ವಾಸಿಸತೊಡಗಿತು. ಮಿಕ್ಕೆಲ್ಲ ಪಕ್ಷಿಗಳು ಭಯ ಹುಟ್ಟಿಸಿ, ಪ್ರಲೋಭನೆ ತೋರಿದರೂ ಗಿಳಿ ತನ್ನ ನಿರ್ಧಾರದಿಂದಲೂ, ಸ್ಥಾನದಿಂದಲೂ ಕದಲಲಿಲ್ಲ. ‘ತನಗೆ ಸಮೃದ್ಧಿಯಿದ್ದಾಗ ಆಶ್ರಯ, ಹಣ್ಣು-ಹಂಪಲು ನೀಡಿ ನಮಗೆಲ್ಲ ಸುಖಜೀವನವನ್ನೇ ಕಲ್ಪಿಸಿದ ಈ ಮರವನ್ನು ಅದರ ಸಂಕಷ್ಟಕಾಲದಲ್ಲಿ ನಾವು ಹೀಗೆ ಬಿಟ್ಟುಹೋದಲ್ಲಿ ಭಗವಂತ ಮೆಚ್ಚುವನೇ?’ ಎಂಬುದು ಆ ಗಿಳಿಯ ಏಕೈಕ ಕೊರಗಾಗಿತ್ತು. ಮರದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗತೊಡಗಿ ಕಾಂತಿಯನ್ನೂ ಸೌಂದರ್ಯವನ್ನೂ ಕಳೆದುಕೊಳ್ಳಲಾರಂಭಿಸಿತು. ಮೊದಲು ಕಾಯಿಗಳು, ತರುವಾಯ ಎಲೆಗಳು ಉದುರಲಾರಂಭಿಸಿ ಕೊನೆಗೆ ಇಡೀ ಮರ ಬೋಳಾಗಿ ನಿಂತಿತು. ಆದರೆ ಆ ಗಿಳಿ ಆಹಾರವನ್ನರಸಿ ಹೊರಗೆ ಹೋದಾಗಲೆಲ

ದಿನಕ್ಕೊಂದು ಕಥೆ 895

*🌻ದಿನಕ್ಕೊಂದು ಕಥೆ🌻* *ಮಹಾತಾಯಿ-ಸುಧಾ ಮೂರ್ತಿ.*                                                                  ಜೀವನದಲ್ಲಿ ಒಂದು ಸಣ್ಣ ಕಾರಣಕ್ಕಾಗಿ ಹಾಲು ಕುಡಿಯುವುದನ್ನೇ ಬಿಟ್ಟ ಮಾಹಾತಾಯಿ ಈಕೆ.. ನೋಡಿದರೆ ಕಣ್ಣಂಚಲ್ಲಿ ನೀರು ತುಂಬುತ್ತದೆ.. ಇಲ್ಲಿದೆ ನೋಡಿ..* ಸುಧಾ ಮೂರ್ತಿ ಅವರ ಹೆಸರು ಕೇಳಿದ ತಕ್ಷಣವೇ ಮೈ ರೋಮಾಂಚನವಾಗುತ್ತದೆ, ಎಷ್ಟೋ ಜನರಿಗೆ ಸ್ಫೂರ್ತಿ ಈ ಮಹಾತಾಯಿ, ಇಂತವರು ಒಂದು ಸಣ್ಣ ಕಾರಣಕ್ಕಾಗಿ ಹಾಲು ಕುಡಿಯುವುದನ್ನೇ ನಿಲ್ಲಿಸಿಬಿಟ್ಟರು.. ಹೌದು ಆ ಘಟನೆ ತಿಳಿದರೆ ಕಣ್ಣಿನಲ್ಲಿ ನೀರು ತುಂಬುತ್ತದೆ.. ಇಲ್ಲಿದೆ ನೋಡಿ… ಸುಧಾ ಮುರ್ತಿ ಅವರು ಬರೆದಿರುವ ದಿ ಡೇ ಐ ಸ್ಟಾಪಡ್ ಡ್ರಿಂಕಿಂಗ್ ಮಿಲ್ಕ್ ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.. ಸಮಾಜ ಸೇವೆಯ ಕಾರ್ಯ ನಿಮಿತ್ತ ಶಾಲೆಯನ್ನು ಕಟ್ಟಿಸಲು ಓಡಿಸ್ಸಾದ ಕಾಡಿನ ಮಧ್ಯ ಇರುವ ಒಂದು ಪುಟ್ಟ ಗ್ರಾಮಕ್ಕೆ ಹೋದ ಸಂಧರ್ಭದಲ್ಲಿ ಜೋರು ಮಳೆಯಿಂದಾಗಿ ಜೊತೆಗಿದ್ದ ಭಾಷೆ ತರ್ಜುಮೆಯವರ ಸಲಹೆಯಂತೆ ಮಳೆ ನಿಲ್ಲುವವರೆಗೂ ಸಮೀಪದಲ್ಲಿದ್ದ ಒಂದು ಗುಡಿಸಲಿಗೆ ಹೋಗುತ್ತಾರೆ. ಅಲ್ಲಿ ಗುಡಿಸಿಲಿನ ಯಜಮಾನ ಇವರನ್ನು ನಮ್ಮ ಹಳ್ಳಿಗೆ ಶಾಲೆ ಕಟ್ಟಿಸಲು ಬಂದಿರುವ ದೊಡ್ಡ ಮನುಷ್ಯರೆಂದು ಆಹ್ವಾನಿಸಿ ಒಳಗಡೆ ಕೂರಿಸುತ್ತಾನೆ, ಈತ ಕಡುಬಡವನಾಗಿದ್ದರು ಕಾರಿನಲ್ಲಿ ಬಂದ ಶ್ರೀಮಂತ ಅತಿಥಿಗಳನ್ನು ಸತ್ಕರಿಸುವ ಸಲುವಾಗಿ ಹರಕು ಮುರುಕು ಹಿಂದಿಯಲ್ಲಿ ಚಹಾ ಕುಡಿಯುವಂತೆ ವಿನಂತಿಸು

ದಿನಕ್ಕೊಂದು ಕಥೆ 894

*🌻ದಿನಕ್ಕೊಂದು ಕಥೆ🌻* *ನರಕಚತುರ್ದಶಿಯ ಕಥೆ ಭಾಗವತದಲ್ಲಿ ಉಲ್ಲೇಖಗೊಂಡಿದೆ. ಈ ಕಥೆಯನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ಕೇಳುವುದೇ ಒಂದು ಸೊಗಸು.* ಶ್ರೀಕೃಷ್ಣಾವತಾರದ ಸಮಯದಲ್ಲಿ ಜರಾಸಂಧ ಮತ್ತು ನರಕಾಸುರರು ಅತ್ಯಧಿಕ ಸೈನ್ಯವನ್ನು ಕೂಡಿಹಾಕಿಕೊಂಡು ದಾಂಧಲೆ ನಡೆಸುತ್ತಿದ್ದ ಇಬ್ಬರು ಪುಂಡ ರಾಜರು. ಜರಾಸಂಧ ಎಲ್ಲಾ ರಾಜರನ್ನೂ ಸೋಲಿಸಿ ಅವರ ಗಂಡು ಮಕ್ಕಳನ್ನೆಲ್ಲಾ ಸೆರೆಯಾಗಿಸುತ್ತಿದ್ದನಂತೆ. ಆತ ಹೆಣ್ಣು ಮಕ್ಕಳ ತಂಟೆಗೆ ಬರುತ್ತಿರಲಿಲ್ಲ. ಆತನಿಗೆ ಹೆಣ್ಣುಮಕ್ಕಳ ತಂಟೆಗೆ ಹೋಗದ ನಿಯಮ ಪಾಲನೆ ಇತ್ತಂತೆ. ಜರಾಸಂಧ ಮಾಡದೆ ಬಿಟ್ಟಿದ್ದ ಕೆಲಸವನ್ನು ನರಕಾಸುರ ಮಾಡುತ್ತಿದ್ದ. ನರಕಾಸುರನಾದರೋ ಆಗಿನ ಕಾಲದ ರಾಜರ ಈಗ ತಾನೇ ಹರಯಕ್ಕೆ ಕಾಲಿಡುತ್ತಿರುವ ಹೆಣ್ಣುಮಕ್ಕಳನ್ನೆಲ್ಲಾ ತಂದು ತನ್ನ ಸೆರೆಯಾಗಿಸಿ ಕೊಂಡಿದ್ದ. ಬ್ರಿಟಿಷರು ಕೂಡಾ ತಮ್ಮ ಆಡಳಿತಾವಧಿಯಲ್ಲಿ ರಾಜರ ಮಕ್ಕಳನ್ನೆಲ್ಲಾ ಸೆರೆಹಿಡಿದು ಆ ರಾಜ್ಯಗಳಿಗೆ ವಾರಸುದಾರರೇ ಇಲ್ಲದಂತೆ ಮಾಡಿ, ಆ ರಾಜ್ಯಗಳನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳುತ್ತಿದ್ದುದನ್ನು, ಪುರಾಣ ಕಾಲದಲ್ಲೇ ಜರಾಸಂಧ ಮತ್ತು ನರಕಾಸುರರು ಯಶಸ್ವಿಯಾಗಿ ಜಾರಿಗೆ ತಂದಿದ್ದರು. ಹೀಗೆ ಜರಾಸಂಧ ಮತ್ತು ನರಕಾಸುರರು ಅಂದಿನ ಎಲ್ಲಾ ರಾಜ್ಯಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದರು. ನರಕಾಸುರ ಈಗಿನ ಅಸ್ಸಾಂ ಪ್ರಾಂತ್ಯಕ್ಕೆ ಸೇರಿದ ಪ್ರಾಗ್ ಜ್ಯೋತಿಷಪುರದ ರಾಜನಾಗಿದ