ದಿನಕ್ಕೊಂದು ಕಥೆ. 193

*🌻🌻ದಿನಕ್ಕೊಂದು ಕಥೆ*🌻🌻
*ಶುಚಿ_ರುಚಿ*
  ಒಂದು ಚಿಕ್ಕಗ್ರಾಮ ಇತ್ತು. ಆ ಗ್ರಾಮದ ಮಧ್ಯದಲ್ಲಿ ಒಂದು ಪ್ರಮುಖ ದಾರಿ ಇತ್ತು. ಆ ದಾರಿಯ ಮಧ್ಯದಲ್ಲಿ ಬಹಳ ದಿನಗಳಿಂದ ಒಂದು ದೊಡ್ಡ ಬಂಡೆಗಲ್ಲು ಬಿದ್ದಿತ್ತು. ಹೋಗ ಬರುವುದಕ್ಕೆ ಅದು ತುಂಬಾ ಅಡಚಣೆಯಾಗಿತ್ತು. ಜನರೆಲ್ಲ ಅದರ ಬದಿಯಿಂದ ಹೋಗುತ್ತಿದ್ದರೇ ವಿನಾ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ.
  ಒಂದು ದಿನ ಒಬ್ಬ ಪ್ರಾಮಾಣಿಕ ಬಡಮನುಷ್ಯನು ತುಂಬಾ ಪ್ರಯಾಸದಿಂದ ಆ ಬಂಡೆಗಲ್ಲನ್ನು ತೆಗೆದು ಬದಿಗಿಟ್ಟು ದಾರಿಯನ್ನು ಸ್ವಚ್ಛಗೊಳಿಸಿದ. ಅಷ್ಟರಲ್ಲಿ ಅವನಿಗೆ ಆ ಬಂಡೆಗಲ್ಲಿನ ಕೆಳಗಿದ್ದ ಒಂದು ಪೆಟ್ಟಿಗೆ ಕಂಡಿತು. ಅದನ್ನು ಆ ಗ್ರಾಮದ ರಾಜನಿಗೆ ಒಪ್ಪಿಸಿದ. ರಾಜನು ಅದನ್ನು ಒಡೆದು ನೋಡಿದ, ಅದರಲ್ಲಿ ನೂರು ಚಿನ್ನದ ನಾಣ್ಯಗಳ ನಿಧಿ ಜೊತೆಗೊಂದು ಪತ್ರ ಇತ್ತು! ಕುತೂಹಲದಿಂದ ರಾಜನು ಪತ್ರವನ್ನು ಓದಿದ. ಅದರಲ್ಲಿ ಹೀಗೆ ಬರೆದಿತ್ತು. “ಯಾರು ಈ ಬಂಡೆಗಲ್ಲನ್ನು ತೆಗೆದು ದಾರಿಯನ್ನು ಶುಚಿಗೊಳಿಸುವರೋ ಅವರೇ ಈ ನಿಧಿಯ ಒಡೆಯರು!” ನಂತರ ರಾಜನು ಆ ನಿಧಿಯನ್ನು ಬಡವನಿಗೆ ಒಪ್ಪಿಸಿದ. ಆ ನಂತರ ಆ ಗ್ರಾಮದ ಸುತ್ತಮುತ್ತಲಿನ ರಸ್ತೆಗಳೆಲ್ಲ ತಮಗೆ ತಾವೇ ನಿರ್ಮಲವಾದವು! ಜನಜೀವನವು ಸುಗಮವಾಗಿತ್ತು. ಹಿಂದಿನ ರಾಜನು ಪ್ರಜೆಗಳಿಗೆ ಬಾಹ್ಯಶುಚಿಯನ್ನು ಕಲಿಸುವುದಕ್ಕೆ ಮಾಡಿದ ಉಪಾಯ ಅದಾಗಿತ್ತು!!

ಕೃಪೆ:ಶ್ರೀ_ಸಿದ್ಧೇಶ್ವರ_ಸ್ವಾಮೀಜಿ, ವಿಜಯಪುರ.                                    ಸಂಗ್ರಹ :ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059