ದಿನಕ್ಕೊಂದು ಕಥೆ 932

*🌻ದಿನಕ್ಕೊಂದು ಕಥೆ🌻*
ಒಬ್ಬ ಆಭರಣ ವ್ಯಾಪಾರಿಯ ನಿಧನದ  ನಂತರ ಅವನ ವಿಧವೆ ಹೆಂಡತಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಳು ಮತ್ತು ಅವಳ ಸಂಸಾರವನ್ನು ನಡೆಸಲು ಹಣದ ಅಗತ್ಯವಿತ್ತು. ಅವಳು ತನ್ನ ಮಗನನ್ನು ಅವಳ ಭಾಮೈದನ ಆಭರಣದ ಅಂಗಡಿಗೆ ಕಳುಹಿಸಿ, ಅವಳ ನೀಲಮಣಿ ಹಾರವನ್ನು ತೆಗೆದುಕೊಂಡು ಹಾರಕ್ಕೆ ಬದಲಾಗಿ ಹಣವನ್ನು ಪಡೆದುಕೊಂಡು ಬರಲು  ಕಳುಹಿಸಿದಳು. ಹುಡುಗನ ಚಿಕ್ಕಪ್ಪ ಹಾರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, “ಮಗನೇ, ಈಗ ಮಾರುಕಟ್ಟೆ ಉತ್ತಮವಾಗಿಲ್ಲ. ಈ ಹಾರಕ್ಕೆ  ಉತ್ತಮ ಬೆಲೆ ಬಂದಾಗ  ಅದನ್ನು  ಮಾರಾಟ ಮಾಡಬಹುದು ಎಂದು ನಿನ್ನ ತಾಯಿಗೆ ತಿಳಿಸು ಎಂದು ಹೇಳಿ ಅವನಿಗೆ  ಸ್ವಲ್ಪ ಹಣವನ್ನು ಕೊಟ್ಟು ತನ್ನ ಅಂಗಡಿಯಲ್ಲಿ   ಕೆಲಸ ಮಾಡಿ ವ್ಯಾಪಾರವನ್ನು ಕಲಿಯುವಂತೆ  ಅವನನ್ನು ಒತ್ತಾಯಿಸಿದನು.

ಹೀಗಾಗಿ, ಹುಡುಗ ತನ್ನ ಚಿಕ್ಕಪ್ಪನ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು ಮತ್ತು ಆಭರಣಗಳು ಮತ್ತು ಅಮೂಲ್ಯವಾದ ಕಲ್ಲುಗಳನ್ನು ಪರೀಕ್ಷಿಸುವ ಕಲೆಯನ್ನು ಕಲಿತನು. ಒಂದು ವರ್ಷದ ನಂತರ ಅವನು ಆಭರಣಗಳನ್ನು ಪರೀಕ್ಷಿಸುವಲ್ಲಿ ನಿಜವಾಗಿಯೂ ಉತ್ತಮನಾದನು. ಮತ್ತು ಶೀಘ್ರದಲ್ಲೇ ದೂರದ ಸ್ಥಳಗಳ ಜನರು ತಮ್ಮ ಆಭರಣಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೌಲ್ಯವನ್ನು ತಿಳಿದುಕೊಳ್ಳಲು ಅವನನ್ನು ಸಂಪರ್ಕಿಸಿಸಲು ಪ್ರಾರಂಭಿಸಿದರು. ಒಂದು ದಿನ ಅವನ ಚಿಕ್ಕಪ್ಪ ಅವನಿಗೆ, “ಮಗನೇ, ನಿನ್ನ ತಾಯಿಯ ಬಳಿಗೆ ಹೋಗಿ ಈಗ ಮಾರುಕಟ್ಟೆ ಉತ್ತಮವಾಗಿದೆ ಎಂದು ಹೇಳಿ ಮತ್ತು ಅವಳು ಆ ಹಾರವನ್ನು ಉತ್ತಮ ಮೌಲ್ಯಕ್ಕೆ ಮಾರಾಟ ಮಾಡಬಹುದು” ಎಂದು ಹೇಳಿದನು. ಹುಡುಗ ಮನೆಗೆ ಹೋಗಿ ನೀಲಮಣಿ ಹಾರವನ್ನು ಕೇಳಿದನು. ಆ ಹಾರವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಅವನಿಗೆ  ತಿಳಿದುಬಂದಿತು. ಅವನು ಹಾರವಿಲ್ಲದೆ ಮತ್ತೆ ಅಂಗಡಿಗೆ ಬಂದು ಚಿಕ್ಕಪ್ಪನನ್ನು ಪ್ರಶ್ನಿಸಿದನು, “ಚಿಕ್ಕಪ್ಪ , ಇದು ನಕಲಿ ಎಂದು ನಿಮಗೆ ತಿಳಿದಾಗ, ಅದನ್ನು ಸುರಕ್ಷಿತವಾಗಿಡಲು ಮತ್ತು ಮಾರುಕಟ್ಟೆ ಉತ್ತಮವಾಗಿದ್ದಾಗ ಅದನ್ನು ತರಲು ನೀವು ಯಾಕೆ ಹೇಳಿದ್ದಿರಿ?” ಎಂದು ಕೇಳಿದನು. ಅವರ ಚಿಕ್ಕಪ್ಪ, “ನೀನು ಯಾವಾಗ  ನನ್ನ ಸಹೋದರನ ನಿಧನದ ನಂತರ ಆ ಹಾರವನ್ನು ನನ್ನ ಬಳಿಗೆ ತಂದೆಯೋ,  ನಿಮಗೆ ಜೀವನ ನಡಿಸಲು ಹಣದ ಅಗತ್ಯವಿದೆ ಎಂದು ಗೊತ್ತಾಯಿತು. ಅದು ನಕಲಿ ಎಂದು ನಾನು ಆ ಸಮಯದಲ್ಲಿ ನಿಮಗೆ ಹೇಳಿದ್ದರೆ ನಾನು ಸುಳ್ಳು ಹೇಳುತ್ತೇನೆ ಎಂದು ನೀವು ಭಾವಿಸಿರುವಿರಿ. ಆದ್ದರಿಂದ, ಈ ವ್ಯಾಪಾರದಲ್ಲಿ ನಿಮಗೆ ತರಬೇತಿ ನೀಡುವ ಮೂಲಕ ನಿಮ್ಮ ಕುಟುಂಬಕ್ಕೆ ಸಹಾಯ ಮಾಡಲು ನಾನು ನಿರ್ಧರಿಸಿದೆ. ಈಗ ನಿಮಗೆ ಆಭರಣಗಳ ಬಗ್ಗೆ ಜ್ಞಾನವಿದೆ, ಅದು ನಕಲಿ ಎಂದು ಸಹ ನಿಮಗೆ ತಿಳಿದಿದೆ. ”ಎಂದನು. ಇದರಿಂದ ತಿಳಿದುಬರುವ ಅಂಶವೆಂದರೆ
"ಜ್ಞಾನವು ನಿಜಕ್ಕೂ ಒಂದು ಶಕ್ತಿಯಾಗಿದೆ ಆದರೆ ಬುದ್ಧಿವಂತಿಕೆಯು ಒಂದು ಸದ್ಗುಣವಾಗಿದೆ.

ಕೃಪೆ ಮುಖಪುಸ್ತಕ

ಕಥಾ ಗುಚ್ಚ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059