ದಿನಕ್ಕೊಂದು ಕಥೆ. 05

🌻🌻ದಿನಕ್ಕೋಂದು ಕಥೆ🌻🌻                                   ಒಂದು ನಿರ್ದಿಷ್ಟವಾದ ಪ್ರಾಣಿಯು ಭೂಮಿಯ ಮೇಲೆ ಒಂದು ನಿರ್ದಿಷ್ಟವಾದ ಕಂಪನವನ್ನು ತರುತ್ತದೆ. ಒಂದು ಪ್ರಾಣಿಯು ಈ ಭೂಮಿಯ ಮೇಲೆ ಇಲ್ಲವಾದರೆ ಆಗ ಜಗತ್ತಿನಲ್ಲಿ ಬದಲಾವಣೆಗಳಾಗುತ್ತವೆ. ಒಂದು ನಿರ್ದಿಷ್ಟ ಸಂಖ್ಯೆ ಇಲ್ಲವಾದರೆ ಈ ವಿಶ್ವವೇ ಇರುವುದಿಲ್ಲ. ಇದೇ ಸ್ಟ್ರಿಂಗ್ ಸಿದ್ಧಾಂತ. ಈ ವಿಶ್ವದಲ್ಲಿ ಒಂದು ನಿರ್ದಿಷ್ಟ ವಸ್ತುವು ಇಲ್ಲವಾದರೆ ಅದು ಮುಗಿದು ಹೋಗುತ್ತದೆ. ಒಂದು ಇರುವೆಯಿಲ್ಲದೆಯೂ ಈ ಜಗತ್ತು ಇರಲು ಸಾಧ್ಯವಿಲ್ಲ.

ಪ್ರತಿಯೊಂದು ಪ್ರಾಣಿಯೂ ಭೂಮಿಯ ಮೇಲೆ ಒಂದು ನಿರ್ದಿಷ್ಟ ಶಕ್ತಿಯನ್ನು ತರುತ್ತದೆ. ಪ್ರತಿಯೊಂದು ಗ್ರಹಕ್ಕೂ ಸ್ಪಂದಿಸುವ ಒಂದು ನಿರ್ದಿಷ್ಟವಾದ ಪ್ರಾಣಿಯಿದೆ ಮತ್ತು ಆ ಪ್ರಾಣಿಯು ಆ ಗ್ರಹದ ತರಂಗಗಳನ್ನು ಹೊರಸೂಸುತ್ತಿರುತ್ತದೆ. ಅದೇ ರೀತಿಯಾಗಿ ಒಂದು ನಿರ್ದಿಷ್ಟ ಗ್ರಹವು ದೇಹದ ಒಂದು ನಿರ್ದಿಷ್ಟ ಭಾಗದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ, ಒಂದು ಗಿಡ, ಒಂದು ಗ್ರಹ, ದೇಹದ ಒಂದು ಭಾಗ, ಒಂದು ಪ್ರಾಣಿ, ಒಂದು ಕಾಳು, ಒಂದು ಹೂವು, ಎಲ್ಲವೂ ಸಂಬಂಧಪಟ್ಟಿವೆ. ಪ್ರತಿಯೊಂದಕ್ಕೂ ಒಂದು ದೇವತೆಯಿದೆ. ಎಷ್ಟೊಂದು ರೀತಿಯ ದೇವತೆಗಳಿದ್ದಾರೆ ಮತ್ತು ಎಲ್ಲವೂ ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಎನ್ನುವುದು ಒಂದು ಅದ್ಭುತವಾದ ವಿಜ್ಞಾನ. ಉದಾಹರಣೆಗೆ ಶನಿ ಗ್ರಹವು ಕಾಗೆಗೆ, ಎಳ್ಳಿಗೆ, ನಿಮ್ಮ ಹಲ್ಲಿಗೆ ಮತ್ತು ದವಡೆಗಳಿಗೆ ಸಂಬಂಧಪಟ್ಟಿದೆ. ಪ್ರತಿಯೊಂದು ಗ್ರಹಕ್ಕೂ ಒಂದು ನಿರ್ದಿಷ್ಟವಾದ ಮಂತ್ರ ಮತ್ತು ಒಂದು ನಿರ್ದಿಷ್ಟವಾದ ದೇವತೆಯಿದೆ. ಈ ಕ್ಷೇತ್ರದಲ್ಲಿ ಹಿಂದೆ ಒಳ್ಳೆಯ ತಜ್ಞರಿದ್ದರು. ಆದರೆ ಈಗ ಈ ವಿಜ್ಞಾನವು ಕ್ಷೀಣಿಸಿ ಹೋಗುತ್ತಿದೆ. ಈ ವಿಜ್ಞಾನವನ್ನು ಯಜ್ಞ ಎಂದು ಕರೆಯುತ್ತಾರೆ. ಯಜ್ಞದಲ್ಲಿ ಒಂದು ಆಕಾರವನ್ನು ಬರೆದು ಅದನ್ನು ಮಂಡಲ ಎನ್ನುತ್ತಾರೆ. ಮಂಡಲದೊಳಗೆ ವಿವಿಧ ಧಾನ್ಯಗಳನ್ನು ಇಡುತ್ತಾರೆ. ಆಳವಾದ ಧಾನ್ಯದ ಅರಿವಿನಿಂದ ಆ ಧಾನ್ಯಕ್ಕೆ ನಿರ್ದಿಷ್ಟವಾದ ಶಕ್ತಿಯನ್ನು ಆಹ್ವಾನಿಸಲು ನಿರ್ದಿಷ್ಟವಾದ ಮಂತ್ರಗಳನ್ನು ಉಚ್ಚರಿಸುತ್ತಾರೆ. ಯಜ್ಞಗಳ ಪೂರ್ಣ ಫಲ ನಿಮಗೆ ಸಿಗಬೇಕೆಂದರೆ ಯಜ್ಞಗಳನ್ನು ಮಾಡುವವರು ಪ್ರಾಣಾಯಾಮ ಮತ್ತು ಧಾನ್ಯವನ್ನು ಅಭ್ಯಾಸ ಮಾಡಬೇಕು. ಪ್ರಾಣಾಯಾಮವಿಲ್ಲದೆ, ಧ್ಯಾನವಿಲ್ಲದೆ ಅದರ ಫಲವು ಬಹಳ ಕಡಿಮೆಯಾಗಿ ಸಿಗುತ್ತದೆ.

ಒಂದು ಮೊಬೈಲಿನೊಳಗೆ ಸಿಮ್‌ಕಾರ್ಡ್ ಇಲ್ಲದೆಯೇ ಡಯಲ್ ಮಾಡಿದಂತೆಯೇ ಇದು. ರೇಂಜ್ ಇಲ್ಲದೆ ಡಯಲ್ ಮಾಡಿದರೂ ಸಹ ಯಾವ ಪ್ರಯೋಜನವೂ ಇಲ್ಲ, ಕೇವಲ ತುರ್ತುಸೇವೆಗಳು ಮಾತ್ರ ಲಭ್ಯವಾಗಿರುತ್ತದೆ ಆಗ. ಆದ್ದರಿಂದ ಒಂದು ನಿರ್ದಿಷ್ಟ ಮೂಲಿಕೆ, ಹೂವು, ಗ್ರಹ, ಧಾನ್ಯ, ಪ್ರಾಣಿ ಎಲ್ಲವೂ ಭೂಮಿಗೆ ಬರುತ್ತಿರುವ ನಿರ್ದಿಷ್ಟ ಕಂಪನವನ್ನು ಸೂಚಿಸುತ್ತವೆ. ಅದೇ ರೀತಿಯಾಗಿ ನಮ್ಮ ಮುಖದ ವಿವಿಧ ಭಾಗಗಳು ವಿವಿಧ ಗ್ರಹಗಳಿಗೆ ಸಂಬಂಧಪಟ್ಟಿವೆ. ಮೂಗು ಗುರುವಿಗೆ ಸಂಬಂಧಪಟ್ಟಿದೆ. ಹಣೆಯು ಬುಧ ಗ್ರಹಕ್ಕೆ ಸಂಬಂಧಪಟ್ಟಿದೆ. ಕೆನ್ನೆಗಳು ಶುಕ್ರ ಗ್ರಹಕ್ಕೆ ಸಂಬಂಧಪಟ್ಟಿವೆ. ನಿಮ್ಮ ಮುಖವನ್ನು ನೋಡಿಯೇ ನಿಮ್ಮ ಜಾತಕವನ್ನು ಹೇಳಬಲ್ಲತಕ್ಕಂತಹ ಪಂಡಿತರಿದ್ದರು. ನಿಮ್ಮನ್ನು ನೋಡಿಯೇ ನೀವು ಯಾವಾಗ ಜನಿಸಿದರಿ ಎಂದು ನಿಖರವಾಗಿ ಹೇಳಿ ಬಿಡುತ್ತಿದ್ದರು. ಇಡೀ ಪ್ರಕತಿಯು ಈ ಕಂಪನಗಳಿಂದ ಜೀವಂತವಾಗಿದೆ. ನಾಗರಹಾವು ಶಿವನಿಗೆ ಸಂಬಂಧಪಟ್ಟಿದೆ. ನವಿಲು ಕಾರ್ತಿಕೇಯನಿಗೆ ಸಂಬಂಧಪಟ್ಟಿದೆ. ಹುಲಿ ಮತ್ತು ಸಿಂಹದ ಮೂಲಕ ದಿವ್ಯಮಾತೆಯ ಶಕ್ತಿಯು ಈ ಭೂಮಿಗೆ ಬರುತ್ತದೆ. ಪ್ರತಿಯೊಂದು ಪ್ರಾಣಿಯೂ ಸಹ ಅಗೋಚರವಾದ ಚೈತನ್ಯವನ್ನು, ಆ ಕಂಪನವನ್ನು ಈ ಭೂಮಿಗೆ ತರುತ್ತದೆ. ಅವುಗಳು ವಾಹನಗಳು. ಅವ್ಯಕ್ತವಾದ ಶಕ್ತಿಯನ್ನು ವ್ಯಕ್ತವಾಗಿರುವ ಈ ಪ್ರಪಂಚಕ್ಕೆ ತರುವ ವಾಹನಗಳೇ ಈ ಪ್ರಾಣಿಗಳು. * ಶ್ರೀ ಶ್ರೀ ರವಿಶಂಕರ ಗುರೂಜಿ.                                           ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059