ದಿನಕ್ಕೊಂದು ಕಥೆ. 97

     💐ದಿನಕ್ಕೊಂದು ಕಥೆ💐                                            ಕಸಾಯಿಖಾನೆಯಲ್ಲಿ ಒಬ್ಬ ಕಟುಕ
ಹಸುವನ್ನು ಕೊಲ್ಲಲು ಬಂದಾಗ
ಹಸುವು ಕಟುಕನನ್ನು ನೋಡಿ ನಗುತ್ತಿತ್ತು…
.
.
.
ಇದನ್ನ ನೋಡಿ ಕಟುಕ ಹೇಳಿದ…
ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು  ತಿಳಿದು ನೀನು   ಏಕೆ ಹೀಗೆ
ನಗುತ್ತಿರುವೆ…?
.
.
.
.
.
ಹಸು ಹೇಳಿತು:
ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ,  ಹಾಗಿದ್ದೂ
ನನ್ನ ಸಾವು ಇಷ್ಟು ಘೋರವಾಗಿದೆ. ತಪ್ಪು ಮಾಡದ ಯಾರಿಗೂ ಕೆಡಕು ಮಾಡದ
ನನ್ನನ್ನು ನೀನು ಕೊಂದು ನನ್ನ
ಮಾಂಸವನ್ನು ತಿನ್ನುವ ನಿನ್ನ
ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ
ನಾನು ನಗುತ್ತಿದ್ದಿನಿ…
ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ
ಮಕ್ಕಳಿಗೂ ಹಾಲು ಕೊಡುತ್ತಿದ್ದ್ದೀನಿ, ಆದರೆ
ನಾನು ತಿನ್ನುತ್ತಿದ್ದದ್ದು ಮಾತ್ರ   ಹುಲ್ಲು,
ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ
ತುಪ್ಪ ಮಾಡಿಕೊಂಡಿರಿ, ಸಗಣಿಯಿಂದ ಬೆರಣಿ
ಮಾಡಿಕೊಂಡಿರಿ, ಸಗಣಿ ಮತ್ತು ಗಂಜಲದಿಂದ
ನಿಮ್ಮ ಜಮೀನಿನ
ಭೂಮಿಯನ್ನು ಹಸನು ಮಾಡಿಕೊಂಡಿರಿ,
ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ, ಆದರೆ ನನಗೆ
ಕೊಡುತ್ತಿದ್ದದ್ದು ಮಾತ್ರ   ಹಾಳಾಗಿ
ಕೊಳೆತು ಹೋದ ತರಕಾರಿಗಳನ್ನ,. ಸಗಣಿಯಿಂದ
ಗೋಬರ್ ಗ್ಯಾಸ್ ತಯಾರಿಸಿ ನಿಮ್ಮ
ಮನೆಯನ್ನು ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ
ಆದರೆ ನನನ್ನೇ ಕುರುಡನಂತೆ
ಕೊಲ್ಲಲು ಬಂದಿರುವೆ, ಹಾಲಿನಿಂದ ಸಿಕ್ಕ
ಶಕ್ತಿಯಿಂದ ನನ್ನನ್ನು ಕೊಲ್ಲಲು ಆಯುಧ
ಎತ್ತಿರುವೆ, ಆ ಆಯುಧವನ್ನು ಹಿಡಿಯುವ ಶಕ್ತಿ ನಿನಗೆ
ಬಂದದ್ದು ನನ್ನಿಂದಲೆ. ನನ್ನಿಂದ ಒಳ್ಳೆಯ
ಆದಾಯವನ್ನು ಮಾಡಿಕೊಂಡು ಮನೆ
ಮಾಡಿಕೊಂಡೆ, ಆದರೆ ನನ್ನನ್ನು ಮಾತ್ರ
ಮನೆಯಿಂದ ಹೊರಗೆ ಒಂದು ಗುಡಿಸಿಲಿನಲ್ಲಿ ಇರಿಸಿದೆ.
ನಿಮ್ಮ ಹೆತ್ತ ತಾಯಿಗಿಂತಲು ನಾನೇ ನಿಮಗೆ
ಹೆಚ್ಚು ಆಸರೆಯಾದೆ, ಶ್ರೀ  ಕೃಷ್ಣನ
ಪ್ರಿಯಳು ನಾನು,  ನನಗೇ ಇಂತಹ ಶಿಕ್ಷೆ ಇರುವಾಗ
ನಿನ್ನ ಗತಿ ಎನಿರಬಹುದು, ನಿನ್ನ
ಭವಿಷ್ಯವನ್ನು ನೆನೆದು ನಾನು ನಗುತ್ತಿರುವೆ..
(ನಿಮಗೆ ಸಾಧ್ಯವಾದಲ್ಲಿ ಇದನ್ನು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಫಾರ್ವರ್ಡ್ ಮಾಡಿ. ಗೋಮಾತೆಯ ಋಣ
ತೀರಿಸಿ…)
"ಜೈ v ಗೋಮಾತೆ.      ಸಂಗ್ರಹ :ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059