ದಿನಕ್ಕೊಂದು ಕಥೆ 1132
*🌻ದಿನಕ್ಕೊಂದು ಕಥೆ🌻* *" ಸಹಾಯ"* ಮನೆಯ ಎಲ್ಲ ಸದಸ್ಯರು ಊಟ ಮಾಡುತ್ತ ಕುಳಿತಿದ್ದರು.ಪದ್ಮಾ ಅವರಿಗೆಲ್ಲ ಬಡಿಸುತ್ತಿದ್ದಳು.ಊಟ ಮಾಡುತ್ತಿದ್ದ ಉಮೇಶ್ ತನ್ನ ತಾಯಿಗೆ -"ಅಮ್ಮಾ.. ನೀನೂ ಬಾ ಮ್ಮಾ.. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡೋಣ"ಎಂದ. ಅದಕ್ಕೆ ಆತನ ತಾಯಿ ಪದ್ಮಾ -"ಪರವಾಗಿಲ್ಲಾ.. ನೀವೆಲ್ಲಾ ಮುಗಿಸಿ.. ನಂತರ ನಾ ಮಾಡ್ತೇನೆ" ಎಂದಳು. ಪುನಃ ಉಮೇಶ್ -" ನೀ ಯಾವಾಗಲೂ ಹೀಗೇ ಹೇಳ್ತಿ.. ಎಲ್ಲರ ಊಟ ಮುಗಿದ ಮೇಲೆ ಏನು ಉಳಿದಿರುತ್ತದೆ ಅದನ್ನೇ ತಿಂದು ಆಯ್ತು ಎನ್ನುತ್ತಿ" ಎನ್ನುತ್ತಾನೆ. ಆತನ ಮಾತು ಆಲಿಸಿದ ಉಳಿದವರೆಲ್ಲ ಆತನನ್ನೇ ನೋಡಲು ಆರಂಭಿಸಿದಾಗ, ಆತನ ತಂದೆ ಶ್ರೀಧರ್ -" ಉಳಿಕೆ ಎಂದರೆ ಏನೋ ನಿನ್ನ ಅರ್ಥ್?"ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉಮೇಶ್ -"ಅಪ್ಪಾ... ನಾನು ಸಾಕಷ್ಟು ಸಲ ನೋಡಿದ್ದೇನೆ..ಈ ಅಮ್ಮ ಪಲ್ಯ.. ಸಾಂಬಾರು, ಇಲ್ಲದೇ ಅನ್ನಕ್ಕೆ ಬರೀ ಚಟ್ನಿ ಪುಡಿ ಹಾಗೂ ಚಪಾತೀನ್ನ ಹಾಗೇ ತಿನ್ನೋದು ನೋಡಿದ್ದೀನಿ, ನಿನ್ನೆ ಮಾವಿನ ಹಣ್ಣಿನ ಸೀಕರಣೆ.. ಆಲೂ ಪಲ್ಯ ಮಾಡಿದ್ದಾಗ ಅದು ರುಚಿ ಇದೆ ಅಂತ ಎರಡು ಮೂರು ಸಲಾ ಹಾಕಿಸಿಕೊಂಡು ಎಲ್ಲಾ ಖಾಲಿ ಮಾಡಿದ್ದೆವು..."ಎಂದು ಹೇಳುತ್ತಿದ್ದವನನ್ನು ತಡೆದ ಆತನ ತಂದೆ-" ಸ್ವಲ್ಪ ಹೆಚ್ಚಿಗೆನೇ ಮಾಡಬೇಕಿತ್ತು ಯಾರು ಬೇಡಾ ಅಂದಿದ್ರಾ? ಎಂದು ತುಸು ಕೋಪದಿಂದ ಎಂದಾಗ ಉಮೇಶ್ ನ ಅಜ್ಜಿ -" ಮಗೂ ಹೆಂಗಸರ ಧ...